<p><strong>ಕಾಗವಾಡ:</strong> ‘ತಾಲ್ಲೂಕಿನ ನದಿ ತೀರದ ಜುಗೂಳ, ಶಹಾಪೂರ ಮತ್ತು ಮಂಗಾವತಿ ಸೇರಿದಂತೆ ಪ್ರವಾಹ ಬಾಧಿತ ಪ್ರದೇಶಗಳ ಜನರ ಪುನರ್ವಸತಿಗೆ ಹಣ ನೀಡುವ ಚಿಂತನೆ ಸರ್ಕಾರದ್ದಾಗಿದೆ’ ಎಂದು ಶಾಸಕ ರಾಜು ಕಾಗೆ ಹೇಳಿದರು.</p>.<p>ತಾಲ್ಲೂಕಿನ ಕೃಷ್ಣಾ ಕಿತ್ತೂರ, ಬಣಜವಾಡ, ಕಾತ್ರಾಳ, ಮಂಗಾವತಿ, ಶಹಾಪೂರ ಗ್ರಾಮಗಳ ಕಾಳಜಿ ಕೇಂದ್ರಗಳಲ್ಲಿರುವ ಸಂತ್ರಸ್ತರಿಗೆ ಅಗತ್ಯ ವಸ್ತು ವಿತರಿಸಿ, ಜುಗೂಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅನುಕೂಲ ಇರುವೆಡೆ ಸ್ಥಳಾಂತರವಾಗಬಹುದು’ ಎಂದರು.</p>.<p>‘ನದಿ ತೀರದ ಗ್ರಾಮಗಳಿಗೆ ಮುಲಸೌಕರ್ಯ ಒದಗಿಸಲು ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಸಚಿವರಿಗೆ ಮನವಿ ಮಾಡಲಾಗುವುದು’ ಎಂದರು.</p>.<p>ತಹಶೀಲ್ದಾರ್ ರಾಜೇಶ ಬುರ್ಲಿ, ನೋಡಲ್ ಅಧಿಕಾರಿ ಎಂ.ಆರ್. ಮುಂಜೆ, ಉಪತಹಶೀಲ್ದಾರ್ ಅಣ್ಣಾಸಾಬ್ ಕೋರೆ, ಮುಖಂಡರಾದ ಅಣ್ಣಾಸಾಬ್ ಪಾಟೀಲ, ಕಾಕಾಸಾಬ್ ಪಾಟೀಲ, ಉಮೇಶ ಪಾಟೀಲ ಇದ್ದರು.</p>.<p>ಪ್ರವಾಹ ಪೀಡಿತ ಗ್ರಾಮಗಳಿಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಬರುತ್ತಾರೆಂದು ಕಾದು ಕುಳಿತಿದ್ದ ಸಂತ್ರಸ್ತರು, ಬೇಸರದಿಂದ ಹಿಂದಿರುಗಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಗವಾಡ:</strong> ‘ತಾಲ್ಲೂಕಿನ ನದಿ ತೀರದ ಜುಗೂಳ, ಶಹಾಪೂರ ಮತ್ತು ಮಂಗಾವತಿ ಸೇರಿದಂತೆ ಪ್ರವಾಹ ಬಾಧಿತ ಪ್ರದೇಶಗಳ ಜನರ ಪುನರ್ವಸತಿಗೆ ಹಣ ನೀಡುವ ಚಿಂತನೆ ಸರ್ಕಾರದ್ದಾಗಿದೆ’ ಎಂದು ಶಾಸಕ ರಾಜು ಕಾಗೆ ಹೇಳಿದರು.</p>.<p>ತಾಲ್ಲೂಕಿನ ಕೃಷ್ಣಾ ಕಿತ್ತೂರ, ಬಣಜವಾಡ, ಕಾತ್ರಾಳ, ಮಂಗಾವತಿ, ಶಹಾಪೂರ ಗ್ರಾಮಗಳ ಕಾಳಜಿ ಕೇಂದ್ರಗಳಲ್ಲಿರುವ ಸಂತ್ರಸ್ತರಿಗೆ ಅಗತ್ಯ ವಸ್ತು ವಿತರಿಸಿ, ಜುಗೂಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅನುಕೂಲ ಇರುವೆಡೆ ಸ್ಥಳಾಂತರವಾಗಬಹುದು’ ಎಂದರು.</p>.<p>‘ನದಿ ತೀರದ ಗ್ರಾಮಗಳಿಗೆ ಮುಲಸೌಕರ್ಯ ಒದಗಿಸಲು ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಸಚಿವರಿಗೆ ಮನವಿ ಮಾಡಲಾಗುವುದು’ ಎಂದರು.</p>.<p>ತಹಶೀಲ್ದಾರ್ ರಾಜೇಶ ಬುರ್ಲಿ, ನೋಡಲ್ ಅಧಿಕಾರಿ ಎಂ.ಆರ್. ಮುಂಜೆ, ಉಪತಹಶೀಲ್ದಾರ್ ಅಣ್ಣಾಸಾಬ್ ಕೋರೆ, ಮುಖಂಡರಾದ ಅಣ್ಣಾಸಾಬ್ ಪಾಟೀಲ, ಕಾಕಾಸಾಬ್ ಪಾಟೀಲ, ಉಮೇಶ ಪಾಟೀಲ ಇದ್ದರು.</p>.<p>ಪ್ರವಾಹ ಪೀಡಿತ ಗ್ರಾಮಗಳಿಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಬರುತ್ತಾರೆಂದು ಕಾದು ಕುಳಿತಿದ್ದ ಸಂತ್ರಸ್ತರು, ಬೇಸರದಿಂದ ಹಿಂದಿರುಗಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>