<p>ಮೂಡಲಗಿ: ‘12ನೇ ಶತಮಾನದಲ್ಲಿಯ ಶಿವಶರಣೆಯರು ತಾತ್ವಿಕ ಚಿಂತನೆಯ ಜೊತೆಗೆ ವೈಯಕ್ತಿಕ ನೆಲೆಯಲ್ಲಿ ಮತ್ತು ಸಮುದಾಯದ ಧ್ವನಿಯಾಗಿ ಲೌಕಿಕದೊಂದಿಗೆ ಪರದೈವದಲ್ಲಿ ಅಂತರಗತವಾಗುವ ಒಲವು ಮತ್ತು ನಿಲುವು ಆಗಿತ್ತು’ ಎಂದು ಜಾನಪದ ವಿದ್ವಾಂಸ ಸಿ.ಕೆ. ನಾವಲಗಿ ಹೇಳಿದರು.</p>.<p>ತಾಲ್ಲೂಕಿನ ಅರಭಾವಿಯ ದುರದುಂಡೀಶ್ವರ ಪುಣ್ಯಾರಣ್ಯ ಮಠದಲ್ಲಿ ಏರ್ಪಡಿಸಿದ್ದ ಶಿವಾನುಭವ ಚಿಂತನ ಗೋಷ್ಠಿಯಲ್ಲಿ ‘ಶಿವಶರಣೆಯರ ಒಲವು– ನಿಲುವು’ ವಿಷಯ ಕುರಿತು ಮಾತನಾಡಿದರು.</p>.<p>‘ಶಿವಶರಣೆಯರಾದ ರಾಯಮ್ಮ, ಅಕ್ಕಮ್ಮ, ಸತ್ಯಕ್ಕ, ಸಂಕವ್ವೆ, ಕಾಳವ್ವೆಯರಂಥ ಕೆಳವರ್ಗದ ಶರಣೆಯರು ಸಮಾಜವನ್ನು ಮುಖಾಮುಖಿಯಾಗಿ ಎದುರಿಸಿದರು. ಕಾಯಕ, ದಾಸೋಹ ತತ್ವಕ್ಕೆ ವ್ರತನಿಷ್ಠರಾಗಿ ಅನುಭಾವ, ಸಮಾನತೆಗೆ ಆದ್ಯತೆ ನೀಡಿ ಅದಕ್ಕೆ ಬದ್ಧರಾಗಿ ಹೋರಾಟ ಮತ್ತು ಬಂಡಾಯದ ಧ್ವನಿಯಾಗಿ ಸಾಮಾಜಿಕ ಕಳಕಳಿಯನ್ನು ಹೊಂದಿದ್ದರು’ ಎಂದರು.</p>.<p>33 ಶರಣೆಯರು 1,104 ವಚನಗಳನ್ನು ರಚಿಸಿ ಕನ್ನಡ ಸಾಹಿತ್ಯ ಮತ್ತು ಸಮಾಜಕ್ಕೆ ಬಹದೊಡ್ಡ ಕಾಣಿಕೆಯನ್ನು ನೀಡಿದ್ದಾರೆ ಎಂದರು.</p>.<p>ಸಾನ್ನಿಧ್ಯ ವಹಿಸಿದ್ದ ಮಠದ ಪೀಠಾಧಿಪತಿ ಗುರುಬಸವಲಿಂಗ ಸ್ವಾಮೀಜಿ ಮಾತನಾಡಿ, ‘12ನೇ ಶತಮಾನದ ಶಿವಶರಣೆಯರು ವೈರಾಗ್ಯದ ನಿಲುವು ಹೊಂದಿದ್ದು, ಆತ್ಮಸಾಕ್ಷಾತ್ಕಾರ ಹೊಂದುವುದು ಅವರ ಜೀವನದ ಧ್ಯೇಯವಾಗಿತ್ತು’ ಎಂದರು.</p>.<p>ಸವದತ್ತಿ ವಲಯ ಅರಣ್ಯ ಅಧಿಕಾರಿ ಶಂಕರ ಅಂತರಗಟ್ಟಿ, ಭಾರತೀಯ ಸೇನೆಯ ಸುಭೇದಾರ ರಾಯಪ್ಪ ಬಡಾಯಿ ಮತ್ತು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.</p>.<p>ಅಪ್ಪಾಸಾಹೇಬ ಕುರುಬರ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ದುರದುಂಡಿಯ ದುರದುಂಡೀಶ್ವರ ತೋಟದ ಭಕ್ತರು ದಾಸೋಹ ಸೇವೆ ಮಾಡಿದರು. ವಿ.ಕೆ. ನಾಯಿಕ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೂಡಲಗಿ: ‘12ನೇ ಶತಮಾನದಲ್ಲಿಯ ಶಿವಶರಣೆಯರು ತಾತ್ವಿಕ ಚಿಂತನೆಯ ಜೊತೆಗೆ ವೈಯಕ್ತಿಕ ನೆಲೆಯಲ್ಲಿ ಮತ್ತು ಸಮುದಾಯದ ಧ್ವನಿಯಾಗಿ ಲೌಕಿಕದೊಂದಿಗೆ ಪರದೈವದಲ್ಲಿ ಅಂತರಗತವಾಗುವ ಒಲವು ಮತ್ತು ನಿಲುವು ಆಗಿತ್ತು’ ಎಂದು ಜಾನಪದ ವಿದ್ವಾಂಸ ಸಿ.ಕೆ. ನಾವಲಗಿ ಹೇಳಿದರು.</p>.<p>ತಾಲ್ಲೂಕಿನ ಅರಭಾವಿಯ ದುರದುಂಡೀಶ್ವರ ಪುಣ್ಯಾರಣ್ಯ ಮಠದಲ್ಲಿ ಏರ್ಪಡಿಸಿದ್ದ ಶಿವಾನುಭವ ಚಿಂತನ ಗೋಷ್ಠಿಯಲ್ಲಿ ‘ಶಿವಶರಣೆಯರ ಒಲವು– ನಿಲುವು’ ವಿಷಯ ಕುರಿತು ಮಾತನಾಡಿದರು.</p>.<p>‘ಶಿವಶರಣೆಯರಾದ ರಾಯಮ್ಮ, ಅಕ್ಕಮ್ಮ, ಸತ್ಯಕ್ಕ, ಸಂಕವ್ವೆ, ಕಾಳವ್ವೆಯರಂಥ ಕೆಳವರ್ಗದ ಶರಣೆಯರು ಸಮಾಜವನ್ನು ಮುಖಾಮುಖಿಯಾಗಿ ಎದುರಿಸಿದರು. ಕಾಯಕ, ದಾಸೋಹ ತತ್ವಕ್ಕೆ ವ್ರತನಿಷ್ಠರಾಗಿ ಅನುಭಾವ, ಸಮಾನತೆಗೆ ಆದ್ಯತೆ ನೀಡಿ ಅದಕ್ಕೆ ಬದ್ಧರಾಗಿ ಹೋರಾಟ ಮತ್ತು ಬಂಡಾಯದ ಧ್ವನಿಯಾಗಿ ಸಾಮಾಜಿಕ ಕಳಕಳಿಯನ್ನು ಹೊಂದಿದ್ದರು’ ಎಂದರು.</p>.<p>33 ಶರಣೆಯರು 1,104 ವಚನಗಳನ್ನು ರಚಿಸಿ ಕನ್ನಡ ಸಾಹಿತ್ಯ ಮತ್ತು ಸಮಾಜಕ್ಕೆ ಬಹದೊಡ್ಡ ಕಾಣಿಕೆಯನ್ನು ನೀಡಿದ್ದಾರೆ ಎಂದರು.</p>.<p>ಸಾನ್ನಿಧ್ಯ ವಹಿಸಿದ್ದ ಮಠದ ಪೀಠಾಧಿಪತಿ ಗುರುಬಸವಲಿಂಗ ಸ್ವಾಮೀಜಿ ಮಾತನಾಡಿ, ‘12ನೇ ಶತಮಾನದ ಶಿವಶರಣೆಯರು ವೈರಾಗ್ಯದ ನಿಲುವು ಹೊಂದಿದ್ದು, ಆತ್ಮಸಾಕ್ಷಾತ್ಕಾರ ಹೊಂದುವುದು ಅವರ ಜೀವನದ ಧ್ಯೇಯವಾಗಿತ್ತು’ ಎಂದರು.</p>.<p>ಸವದತ್ತಿ ವಲಯ ಅರಣ್ಯ ಅಧಿಕಾರಿ ಶಂಕರ ಅಂತರಗಟ್ಟಿ, ಭಾರತೀಯ ಸೇನೆಯ ಸುಭೇದಾರ ರಾಯಪ್ಪ ಬಡಾಯಿ ಮತ್ತು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.</p>.<p>ಅಪ್ಪಾಸಾಹೇಬ ಕುರುಬರ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ದುರದುಂಡಿಯ ದುರದುಂಡೀಶ್ವರ ತೋಟದ ಭಕ್ತರು ದಾಸೋಹ ಸೇವೆ ಮಾಡಿದರು. ವಿ.ಕೆ. ನಾಯಿಕ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>