<p><strong>ಬೆಳಗಾವಿ:</strong> ‘ಸಹಕಾರ ಕ್ಷೇತ್ರದಲ್ಲಿ ಗ್ರಾಹಕರ ವಿಶ್ವಾಸ ಗಳಿಸಿದರೆ ಮಾತ್ರ ಒಂದು ಸಹಕಾರ ಸಂಸ್ಥೆ ಪ್ರಗತಿಯತ್ತ ಹೆಜ್ಜೆಹಾಕಲು ಸಾಧ್ಯ’ ಎಂದು ಸೋಂದಾ ಮಠದ ಭಟ್ಟಾರಕ ಭಟ್ಟಾಕಲಂಕ ಸ್ವಾಮೀಜಿ ಹೇಳಿದರು.</p>.<p>ಇಲ್ಲಿನ ಮಹಾವೀರ ಭವನದಲ್ಲಿ ಆಯೋಜಿಸಿದ್ದ ಮಹಾವೀರ ಕೋ-ಆಪರೇಟಿವ್ ಬ್ಯಾಂಕಿನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಿದ ಹಿನ್ನೆಲೆಯಲ್ಲಿ ಈ ಬ್ಯಾಂಕ್ ಇಂದು ಸಂಭ್ರಮದಿಂದ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ’ ಎಂದರು.<br><br>ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಸದಸ್ಯ ಡಿ.ಜೆ.ಗುಂಡೆ, ‘ಪ್ರಸ್ತುತ ಕಾಲಘಟ್ಟದಲ್ಲಿ 50 ವರ್ಷಗಳವರೆಗೆ ಒಂದು ಬ್ಯಾಂಕ್ ನಡೆಸುವುದು ಸುಲಭದ ಮಾತಲ್ಲ. ಬ್ಯಾಂಕಿನ ಆಡಳಿತ ಮಂಡಳಿಯೊಂದಿಗೆ ಸಿಬ್ಬಂದಿಯೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದರಿಂದ ಇದು ಯಶಸ್ಸು ಕಾಣಲು ಸಾಧ್ಯವಾಗಿದೆ’ ಎಂದರು.</p><p><br>ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ಸಹಕಾರ ಇಲಾಖೆ ಜಂಟಿನಿರ್ದೇಶಕ ಸುರೇಶಗೌಡ ಮಾತನಾಡಿದರು.</p>.<p>ಬ್ಯಾಂಕಿನ ಅಧ್ಯಕ್ಷ ಪಿ.ಎಂ.ಲೆಂಗಡೆ, ವಿನೋದಾ ಗುಂಡೆ, ಅಜಿತ ಪಾಟೀಲ, ತುಷಾರ ಪಾಟೀಲ, ಅನಿಲ ಪಾಟೀಲ, ಹೀರಾಚಂದ ಕಲಮನಿ, ಶ್ರೀಪಾಲ ಖೇಮಲಾಪುರೆ, ಎಸ್.ಬಿ.ನಿಲಜಗಿ, ಯು.ಟಿ.ಕೊಲ್ಲಾಪುರೆ, ಬಿ.ಬಿ.ಪೂಜಾರ ಇತರರಿದ್ದರು. ಭೂಷಣ ಮಿರ್ಜಿ ಸ್ವಾಗತಿಸಿದರು. ಶೀಲಾ ಮಿರ್ಜಿ ವಂದಿಸಿದರು. ಸೂರಜ ಮತ್ತು ಅಶ್ವಿನಿ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ‘ಸಹಕಾರ ಕ್ಷೇತ್ರದಲ್ಲಿ ಗ್ರಾಹಕರ ವಿಶ್ವಾಸ ಗಳಿಸಿದರೆ ಮಾತ್ರ ಒಂದು ಸಹಕಾರ ಸಂಸ್ಥೆ ಪ್ರಗತಿಯತ್ತ ಹೆಜ್ಜೆಹಾಕಲು ಸಾಧ್ಯ’ ಎಂದು ಸೋಂದಾ ಮಠದ ಭಟ್ಟಾರಕ ಭಟ್ಟಾಕಲಂಕ ಸ್ವಾಮೀಜಿ ಹೇಳಿದರು.</p>.<p>ಇಲ್ಲಿನ ಮಹಾವೀರ ಭವನದಲ್ಲಿ ಆಯೋಜಿಸಿದ್ದ ಮಹಾವೀರ ಕೋ-ಆಪರೇಟಿವ್ ಬ್ಯಾಂಕಿನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಿದ ಹಿನ್ನೆಲೆಯಲ್ಲಿ ಈ ಬ್ಯಾಂಕ್ ಇಂದು ಸಂಭ್ರಮದಿಂದ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ’ ಎಂದರು.<br><br>ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಸದಸ್ಯ ಡಿ.ಜೆ.ಗುಂಡೆ, ‘ಪ್ರಸ್ತುತ ಕಾಲಘಟ್ಟದಲ್ಲಿ 50 ವರ್ಷಗಳವರೆಗೆ ಒಂದು ಬ್ಯಾಂಕ್ ನಡೆಸುವುದು ಸುಲಭದ ಮಾತಲ್ಲ. ಬ್ಯಾಂಕಿನ ಆಡಳಿತ ಮಂಡಳಿಯೊಂದಿಗೆ ಸಿಬ್ಬಂದಿಯೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದರಿಂದ ಇದು ಯಶಸ್ಸು ಕಾಣಲು ಸಾಧ್ಯವಾಗಿದೆ’ ಎಂದರು.</p><p><br>ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ಸಹಕಾರ ಇಲಾಖೆ ಜಂಟಿನಿರ್ದೇಶಕ ಸುರೇಶಗೌಡ ಮಾತನಾಡಿದರು.</p>.<p>ಬ್ಯಾಂಕಿನ ಅಧ್ಯಕ್ಷ ಪಿ.ಎಂ.ಲೆಂಗಡೆ, ವಿನೋದಾ ಗುಂಡೆ, ಅಜಿತ ಪಾಟೀಲ, ತುಷಾರ ಪಾಟೀಲ, ಅನಿಲ ಪಾಟೀಲ, ಹೀರಾಚಂದ ಕಲಮನಿ, ಶ್ರೀಪಾಲ ಖೇಮಲಾಪುರೆ, ಎಸ್.ಬಿ.ನಿಲಜಗಿ, ಯು.ಟಿ.ಕೊಲ್ಲಾಪುರೆ, ಬಿ.ಬಿ.ಪೂಜಾರ ಇತರರಿದ್ದರು. ಭೂಷಣ ಮಿರ್ಜಿ ಸ್ವಾಗತಿಸಿದರು. ಶೀಲಾ ಮಿರ್ಜಿ ವಂದಿಸಿದರು. ಸೂರಜ ಮತ್ತು ಅಶ್ವಿನಿ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>