<p><strong>ಸವದತ್ತಿ:</strong> ಸವದತ್ತಿಯಿಂದ ಮುನವಳ್ಳಿಯ ಮಾರ್ಗ ಮಧ್ಯದಲ್ಲಿನ ಇಳಿಜಾರು ಪ್ರದೇಶದಲ್ಲಿ ಸೀತಾರಾಮ್ ಕ್ರಾಸ್ ಬಳಿ ಗುರುವಾರ ಸಂಜೆ ಇಂಧನ ತುಂಬಿದ ಟ್ಯಾಂಕರ್ ಅಪಘಾತಕ್ಕೀಡಾಗಿ ಉರುಳಿ ಬಿದ್ದಿದೆ.</p>.<p>ಟ್ಯಾಂಕರ್ನಲ್ಲಿದ್ದ 8 ಸಾವಿರ ಲೀ ಡೀಸೆಲ್ ಮತ್ತು 4 ಸಾವಿರ ಲೀ ಪೆಟ್ರೋಲ್ ಪೈಕಿ ಅರ್ಧಕ್ಕಿಂತ ಹೆಚ್ಚು ಇಂಧನ ಸೋರಿಕೆಯಾಗಿದೆ.</p><p><br>ಟ್ಯಾಂಕರ್ ನಡೆಸುವಾಗ ರಸ್ತೆಯಲ್ಲಿ ಅಡ್ಡಲಾಗಿ ಬಂದ ಕಾರನ್ನು ರಕ್ಷಿಸಲು ಹೋಗಿ ಈ ಅವಘಡ ಸಂಭವಿಸಿದೆ ಎಂದು ಟ್ಯಾಂಕರ್ ಚಾಲಕ ತಿಳಿಸಿದ್ದಾಗಿ ಪೋಲಿಸ್ ಮತ್ತು ಅಗ್ನಿ ಶಾಮಕ ಇಲಾಖೆ ತಿಳಿಸಿವೆ.</p>.<p>ಹುಬ್ಬಳ್ಳಿಯ ರಾಯಾಪೂರದಿಂದ ಮುಧೋಳಗೆ ಸಾಗಿಸುವ ವೇಳೆ ಈ ಘಟನೆ ನಡೆದಿದ್ದು, ರಸ್ತೆಯ ಎಡಬದಿ ತಗ್ಗಿನಲ್ಲಿ ವಾಹನ ನೆಲಕ್ಕುರುಳಿ ಪಲ್ಟಿಯಾಗಿದೆ.</p>.<p>ಪಲ್ಟಿಯಾದ ಟ್ಯಾಂಕರ್ನಲ್ಲಿ ಸಿಲುಕಿದ ಚಾಲಕ ಮತ್ತು ಕ್ಲೀನರ್ ಇಬ್ಬರನ್ನೂ ರಕ್ಷಿಸಲಾಗಿದ್ದು, ಇಬ್ಬರಿಗೂ ಗಂಭೀರ ಗಾಯಗಳಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.</p>.<p>ಇಲ್ಲಿನ ಪೊಲೀಸ್ ಇಲಾಖೆ ರಸ್ತೆ ಸಂಚಾರ ದಟ್ಟನೆ ನಿಯಂತ್ರಿಸಿ ಇಂಧನ ಸೋರಿಕೆಯಿಂದ ಆಗುವ ಹೆಚ್ಚಿನ ಅನಹುತವನ್ನು ತಪ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಅಪಘಾತ ಸಂಭವಿಸಿದ ತಕ್ಷಣ ಟ್ಯಾಂಕರ್ ಅನ್ನು ಮತ್ತೆ ಮುನವಳ್ಳಿ ಬಂಕ್ ಒಂದಕ್ಕೆ ಸಾಗಿಸಲಾಗಿದೆ. ಈ ಕುರಿತು ಸವದತ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸವದತ್ತಿ:</strong> ಸವದತ್ತಿಯಿಂದ ಮುನವಳ್ಳಿಯ ಮಾರ್ಗ ಮಧ್ಯದಲ್ಲಿನ ಇಳಿಜಾರು ಪ್ರದೇಶದಲ್ಲಿ ಸೀತಾರಾಮ್ ಕ್ರಾಸ್ ಬಳಿ ಗುರುವಾರ ಸಂಜೆ ಇಂಧನ ತುಂಬಿದ ಟ್ಯಾಂಕರ್ ಅಪಘಾತಕ್ಕೀಡಾಗಿ ಉರುಳಿ ಬಿದ್ದಿದೆ.</p>.<p>ಟ್ಯಾಂಕರ್ನಲ್ಲಿದ್ದ 8 ಸಾವಿರ ಲೀ ಡೀಸೆಲ್ ಮತ್ತು 4 ಸಾವಿರ ಲೀ ಪೆಟ್ರೋಲ್ ಪೈಕಿ ಅರ್ಧಕ್ಕಿಂತ ಹೆಚ್ಚು ಇಂಧನ ಸೋರಿಕೆಯಾಗಿದೆ.</p><p><br>ಟ್ಯಾಂಕರ್ ನಡೆಸುವಾಗ ರಸ್ತೆಯಲ್ಲಿ ಅಡ್ಡಲಾಗಿ ಬಂದ ಕಾರನ್ನು ರಕ್ಷಿಸಲು ಹೋಗಿ ಈ ಅವಘಡ ಸಂಭವಿಸಿದೆ ಎಂದು ಟ್ಯಾಂಕರ್ ಚಾಲಕ ತಿಳಿಸಿದ್ದಾಗಿ ಪೋಲಿಸ್ ಮತ್ತು ಅಗ್ನಿ ಶಾಮಕ ಇಲಾಖೆ ತಿಳಿಸಿವೆ.</p>.<p>ಹುಬ್ಬಳ್ಳಿಯ ರಾಯಾಪೂರದಿಂದ ಮುಧೋಳಗೆ ಸಾಗಿಸುವ ವೇಳೆ ಈ ಘಟನೆ ನಡೆದಿದ್ದು, ರಸ್ತೆಯ ಎಡಬದಿ ತಗ್ಗಿನಲ್ಲಿ ವಾಹನ ನೆಲಕ್ಕುರುಳಿ ಪಲ್ಟಿಯಾಗಿದೆ.</p>.<p>ಪಲ್ಟಿಯಾದ ಟ್ಯಾಂಕರ್ನಲ್ಲಿ ಸಿಲುಕಿದ ಚಾಲಕ ಮತ್ತು ಕ್ಲೀನರ್ ಇಬ್ಬರನ್ನೂ ರಕ್ಷಿಸಲಾಗಿದ್ದು, ಇಬ್ಬರಿಗೂ ಗಂಭೀರ ಗಾಯಗಳಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.</p>.<p>ಇಲ್ಲಿನ ಪೊಲೀಸ್ ಇಲಾಖೆ ರಸ್ತೆ ಸಂಚಾರ ದಟ್ಟನೆ ನಿಯಂತ್ರಿಸಿ ಇಂಧನ ಸೋರಿಕೆಯಿಂದ ಆಗುವ ಹೆಚ್ಚಿನ ಅನಹುತವನ್ನು ತಪ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಅಪಘಾತ ಸಂಭವಿಸಿದ ತಕ್ಷಣ ಟ್ಯಾಂಕರ್ ಅನ್ನು ಮತ್ತೆ ಮುನವಳ್ಳಿ ಬಂಕ್ ಒಂದಕ್ಕೆ ಸಾಗಿಸಲಾಗಿದೆ. ಈ ಕುರಿತು ಸವದತ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>