ಅಂಬೋಲಿ ದೂಧಸಾಗರ ಜಲಪಾತ ನೋಡಲು ಬೆಳಗಾವಿ ಮೂಲಕವೇ ಹೋಗಬೇಕು. ಆದರೆ ಸರಿಯಾದ ವಾಹನ ವ್ಯವಸ್ಥೆ ಇಲ್ಲ. ಸರ್ಕಾರ ಕೂಡಲೇ ಗಮನ ಹರಿಸಬೇಕು
–ಉಮಾಶ್ರೀ ದೇವಾಂಗಮಠ ಪ್ರವಾಸಿ ಮಹಿಳೆ
ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಕುರಿತು ಮಾಹಿತಿ ನೀಡುವ ಫಲಕ ಚಿತ್ರಗಳನ್ನು ಬಸ್ನಿಲ್ದಾಣ ರೈಲು ನಿಲ್ದಾಣ ನಗರದ ಮುಖ್ಯ ವೃತ್ತಗಳಲ್ಲಿ ಅಳವಡಿಸಿದರೆ ಅನುಕೂಲ
–ಪಾಯಲ್ ಡಿ. ಪ್ರವಾಸಿ ಮಹಿಳೆ ಗೋವಾ
ಗೋಕಾಕ ಪ್ರವಾಸಿ ತಾಣಗಳಲ್ಲಿ ಹೋಟೆಲ್ಗಳಲ್ಲಿ ಶುಚಿಯಾದ ಊಟ ಸಿಗುವುದಿಲ್ಲ. ಮಾರ್ಗದರ್ಶಿಗಳೂ ಇಲ್ಲ. ಗೊತ್ತಿಲ್ಲದೇ ಕೆಲವರು ಅಪಾಯಕ್ಕೆ ಒಳಗಾಗಿದ್ದಾರೆ.
–ಚನ್ನವೀರ ಖಾನಾಪುರ ಗೋಕಾಕ ನಿವಾಸಿ
ಜಲಪಾತಗಳ ತಾಲ್ಲೂಕು
ಖಾನಾಪುರ: ತಾಲ್ಲೂಕಿನಲ್ಲಿ ಪ್ರವಾಸಿ ತಾಣಗಳು ಹೇರಳವಾಗಿವೆ. ಆದರೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಕೊರತೆಯ ಕಾರಣ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ. ಮಲಪ್ರಭಾ ನದಿಯ ಉಗಮಸ್ಥಾನ ಕಣಕುಂಬಿ ಮೂರು ರಾಜ್ಯಗಳು ಸಂಗಮಿಸುವ ಹಿಲ್ ಸ್ಟೇಷನ್ ಚಿಗುಳೆ ಪಾರವಾಡ ಜಲಪಾತ ಮಹದಾಯಿ ನದಿಯ ವಜ್ರಾ ಜಲಪಾತ ಜಾಂಬೋಟಿ ಬಳಿಯ ಭಟವಾಡಾ ಜಲಪಾತ ಭೀಮಗಡ ಅರಣ್ಯದ ಬಾರಾಪೇಟ ಗುಹೆಗಳು ತಳುಕು ಬಳುಕಿನಿಂದ ಹರಿಯುವ ಪಣಸೂರಿ ಹಳ್ಳ ಕೃಷ್ಣಾಪುರ ಬಳಿಯ ಭೀಮಗಡ ಕೋಟೆ ಸಡಾ ಗ್ರಾಮದ ಪುರಾತನ ಕಾಲದ ಕೋಟೆ ನಂದಗಡದ ಸಂಗೊಳ್ಳಿ ರಾಯಣ್ಣ ಸಮಾಧಿ ಆತನನ್ನು ಗಲ್ಲಿಗೇರಿಸಿದ ಸ್ಥಳ ನಂದಗಡದ ದುರ್ಗಾಡಿ ಬೆಟ್ಟ ನಂದಗಡ ಡ್ಯಾಮ್ ಹೆಬ್ಬಾಳ ಡ್ಯಾಮ್ ಹಲಸಿ ಭೂ ವರಾಹ ನರಸಿಂಹ ದೇವಾಲಯ ಹಲಸಿಯ ರಾಮತೀರ್ಥ ನಾಗರಗಾಳಿಯ ಜಲಪಾತ ಹಂಡಿಭಡಂಗನಾಥ ಬೆಟ್ಟ ಜನಪ್ರಿಯ ಪ್ರವಾಸಿ ತಾಣಗಳಾಗಿವೆ. ಈ ಪ್ರವಾಸಿ ತಾಣಗಳ ಪೈಕಿ ಬಹುತೇಕ ತಾಣಗಳಿಗೆ ಹೋಗಿಬರಲು ಸರಿಯಾದ ರಸ್ತೆ ಸಂಪರ್ಕ ಇಲ್ಲ. ಮಾಹಿತಿ ಫಲಕಗಳಿಲ್ಲ. ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ ಎಂಬುದು ಜನರ ದೂರು.