<p><strong>ಉಗರಗೋಳ:</strong> ಸಮಿಪದ ಯಲ್ಲಮ್ಮ ಗುಡ್ಡದ ಯಲ್ಲಮ್ಮ ದೇವಸ್ಥಾನದಲ್ಲಿ ಬುಧವಾರ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿತು. ಏಪ್ರಿಲ್ 1ರಿಂದ ಮೇ 20ರ ಅವಧಿಯಲ್ಲಿ ಭಕ್ತರು ಹಾಕಿದ ₹1.96 ಕೋಟಿ ಮೊತ್ತದ ಕಾಣಿಕೆಗಳು ಸಂಗ್ರಹವಾಗಿವೆ.</p>.<p>₹1.71 ಕೋಟಿ ನಗದು, ₹20.44 ಲಕ್ಷ ಮೌಲ್ಯದ ಚಿನ್ನಾಭರಣ, ₹4.44 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಇದರಲ್ಲಿ ಸೇರಿವೆ. ಈ ಬಾರಿ ಕೂಡ ದೇಶದ ಬೇರೆಬೇರೆ ಭಾಗಗಳಿಂದ ಬಂದ ಅಪಾರ ಸಂಖ್ಯೆಯ ಜನ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಕಾಣಿಕೆ ಹಾಕಿದ್ದಾರೆ.</p>.<p>ಪ್ರತಿ ವರ್ಷ ಈ ಅವಧಿಯಲ್ಲಿ ₹1 ಕೋಟಿಯಿಂದ ₹1.5 ಕೋಟಿ ಕಾಣಿಕೆ ಸಂಗ್ರಹವಾಗುತ್ತಿತ್ತು. ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾತಿಗೊಳಿಸಿದ್ದರಿಂದ ಗುಡ್ಡಕ್ಕೆ ಬರುವ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಿದೆ. ಹೀಗಾಗಿ, ಕಾಣಿಕೆ ಪ್ರಮಾಣವೂ ಹೆಚ್ಚಾಗಿದೆ ಎಂದು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್ಪಿಬಿ ಮಹೇಶ ತಿಳಿಸಿದ್ದಾರೆ.</p>.<p>ದೇವಸ್ಥಾನ ಅಧೀಕ್ಷಕಿ ನಾಗರತ್ನಾ ಚೋಳಿನ, ವೈ.ವೈ. ಕಾಳಪ್ಪನವರ, ಕೊಳ್ಳಪ್ಪಗೌಡ ಗಂದಿಗವಾಡ, ಬಾಳೇಶ ಅಬ್ಬಾಯಿ, ಬೆಳಗಾವಿ ಧಾರ್ಮಿಧತ್ತಿ ಇಲಾಖೆ ಶೀಲಾ, ಎಂ.ಎಸ್. ಯಲಿಗಾರ, ಎಂ.ಪಿ. ದ್ಯಾಮನಗೌಡ್ರ, ಹವಾಲ್ದಾರ್, ಆನಂದ ಗೋರವನಕೋಳ್ಳ, ಡಿ.ಡಿ. ನಾಗನಗೌಡ್ರ ಹಾಗೂ ಹುಂಡಿ ಎಣಿಕೆಯಲ್ಲಿ ದೇವಸ್ಥಾನ ಸಿಬ್ಬಂದಿ, ಯಲ್ಲಮ್ಮನಗುಡ್ಡದ ಕೆನರಾ ಬ್ಯಾಂಕ್ ಮತ್ತು ದೇವಸ್ಥಾನದ ಹೋಂ ಗಾರ್ಡ್ಸ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಗರಗೋಳ:</strong> ಸಮಿಪದ ಯಲ್ಲಮ್ಮ ಗುಡ್ಡದ ಯಲ್ಲಮ್ಮ ದೇವಸ್ಥಾನದಲ್ಲಿ ಬುಧವಾರ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿತು. ಏಪ್ರಿಲ್ 1ರಿಂದ ಮೇ 20ರ ಅವಧಿಯಲ್ಲಿ ಭಕ್ತರು ಹಾಕಿದ ₹1.96 ಕೋಟಿ ಮೊತ್ತದ ಕಾಣಿಕೆಗಳು ಸಂಗ್ರಹವಾಗಿವೆ.</p>.<p>₹1.71 ಕೋಟಿ ನಗದು, ₹20.44 ಲಕ್ಷ ಮೌಲ್ಯದ ಚಿನ್ನಾಭರಣ, ₹4.44 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಇದರಲ್ಲಿ ಸೇರಿವೆ. ಈ ಬಾರಿ ಕೂಡ ದೇಶದ ಬೇರೆಬೇರೆ ಭಾಗಗಳಿಂದ ಬಂದ ಅಪಾರ ಸಂಖ್ಯೆಯ ಜನ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಕಾಣಿಕೆ ಹಾಕಿದ್ದಾರೆ.</p>.<p>ಪ್ರತಿ ವರ್ಷ ಈ ಅವಧಿಯಲ್ಲಿ ₹1 ಕೋಟಿಯಿಂದ ₹1.5 ಕೋಟಿ ಕಾಣಿಕೆ ಸಂಗ್ರಹವಾಗುತ್ತಿತ್ತು. ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾತಿಗೊಳಿಸಿದ್ದರಿಂದ ಗುಡ್ಡಕ್ಕೆ ಬರುವ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಿದೆ. ಹೀಗಾಗಿ, ಕಾಣಿಕೆ ಪ್ರಮಾಣವೂ ಹೆಚ್ಚಾಗಿದೆ ಎಂದು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್ಪಿಬಿ ಮಹೇಶ ತಿಳಿಸಿದ್ದಾರೆ.</p>.<p>ದೇವಸ್ಥಾನ ಅಧೀಕ್ಷಕಿ ನಾಗರತ್ನಾ ಚೋಳಿನ, ವೈ.ವೈ. ಕಾಳಪ್ಪನವರ, ಕೊಳ್ಳಪ್ಪಗೌಡ ಗಂದಿಗವಾಡ, ಬಾಳೇಶ ಅಬ್ಬಾಯಿ, ಬೆಳಗಾವಿ ಧಾರ್ಮಿಧತ್ತಿ ಇಲಾಖೆ ಶೀಲಾ, ಎಂ.ಎಸ್. ಯಲಿಗಾರ, ಎಂ.ಪಿ. ದ್ಯಾಮನಗೌಡ್ರ, ಹವಾಲ್ದಾರ್, ಆನಂದ ಗೋರವನಕೋಳ್ಳ, ಡಿ.ಡಿ. ನಾಗನಗೌಡ್ರ ಹಾಗೂ ಹುಂಡಿ ಎಣಿಕೆಯಲ್ಲಿ ದೇವಸ್ಥಾನ ಸಿಬ್ಬಂದಿ, ಯಲ್ಲಮ್ಮನಗುಡ್ಡದ ಕೆನರಾ ಬ್ಯಾಂಕ್ ಮತ್ತು ದೇವಸ್ಥಾನದ ಹೋಂ ಗಾರ್ಡ್ಸ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>