<p><strong>ಬೆಂಗಳೂರು:</strong> ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿಗೆ (ಡಿಎಚ್ಒ) ಮುಖ್ಯಮಂತ್ರಿಯವರ ಜಂಟಿ ಕಾರ್ಯದರ್ಶಿ ಹೆಸರಿನಲ್ಲಿ ಕರೆ ಮಾಡಿ, ವಂಚಿಸಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ಧಾರೆ.</p>.<p>ಮೈಸೂರಿನ ಸುರೇಶ್ (40) ಬಂಧಿತ ಆರೋಪಿ. ಆತನಿಂದ ₹3.50 ಲಕ್ಷ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಆರೋಪಿ ₹7 ಲಕ್ಷ ವಂಚಿಸಿದ್ದಾನೆ ಎಂದು ಜುಲೈ 8ರಂದು ಡಿಎಚ್ಒ ಜಯಶ್ರೀ ಎಮ್ಮಿ ಅವರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.</p>.<p>‘ವಂಚನೆಯೇ ಆರೋಪಿ ವೃತ್ತಿ. ಈತನ, ವಿರುದ್ಧ ವಿವಿಧ ಠಾಣೆಗಳಲ್ಲಿ ಎಂಟು ಪ್ರಕರಣಗಳಿವೆ. ಅಧಿಕಾರಿಗಳನ್ನೇ ಗುರಿಯಾಗಿಸಿ ವಂಚನೆ ನಡೆಸಲಾಗುತ್ತಿತ್ತು’ ಎಂದು ಸಿಸಿಬಿ ಪೊಲೀಸರು ಹೇಳಿದರು.</p>.<p>‘ಆರೋಪಿ ಪತ್ನಿ, ತನ್ನ ಹೆಸರಿನಲ್ಲಿ ಸಿಮ್ ಖರೀದಿಸಿದ್ದ. ಟ್ರೂ ಕಾಲರ್ನಲ್ಲಿ ಪತ್ನಿ ಹೆಸರಿನ ನಂಬರ್ ಅನ್ನು ಅಂಡರ್ ಸೆಕ್ರೆಟರಿ ಎಂದು ಹಾಕಿಕೊಂಡಿದ್ದ. ವಾಟ್ಸ್ಆ್ಯಪ್ ಡಿ.ಪಿಯಲ್ಲಿ ವಿಧಾನಸೌಧದ ಫೋಟೊ ಹಾಕಿದ್ದ. ಕರೆ ಮಾಡಿದವರು ಈತ ಅಧಿಕಾರಿಯೇ ಇರಬಹುದು ಎಂದು ಭಾವಿಸುತ್ತಿದ್ದರು’ ಎಂದು ಹೇಳಿದರು.</p>.<p>‘ಬಾಗಲಕೋಟೆ ಡಿಎಚ್ಒ ಆಗಿದ್ದ ಜಯಶ್ರೀ ಎಮ್ಮಿ ಅವರಿಗೆ ಸಿ.ಎಂ ಜಂಟಿ ಕಾರ್ಯದರ್ಶಿ ರಾಮಯ್ಯ ಅವರ ಹೆಸರಿನಲ್ಲಿ ಸುರೇಶ್ ವಂಚಿಸಿದ್ದ. ಹಣ ನೀಡಿದರೆ ಅದೇ ಸ್ಥಳದಲ್ಲಿ ಡಿಎಚ್ಒ ಹುದ್ದೆಯಲ್ಲೇ ಮುಂದುವರೆಯುವಂತೆ ಮಾಡುವುದಾಗಿ ಹೇಳಿ, ₹7 ಲಕ್ಷ ಪಡೆದುಕೊಂಡಿದ್ದ’ ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿಗೆ (ಡಿಎಚ್ಒ) ಮುಖ್ಯಮಂತ್ರಿಯವರ ಜಂಟಿ ಕಾರ್ಯದರ್ಶಿ ಹೆಸರಿನಲ್ಲಿ ಕರೆ ಮಾಡಿ, ವಂಚಿಸಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ಧಾರೆ.</p>.<p>ಮೈಸೂರಿನ ಸುರೇಶ್ (40) ಬಂಧಿತ ಆರೋಪಿ. ಆತನಿಂದ ₹3.50 ಲಕ್ಷ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಆರೋಪಿ ₹7 ಲಕ್ಷ ವಂಚಿಸಿದ್ದಾನೆ ಎಂದು ಜುಲೈ 8ರಂದು ಡಿಎಚ್ಒ ಜಯಶ್ರೀ ಎಮ್ಮಿ ಅವರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.</p>.<p>‘ವಂಚನೆಯೇ ಆರೋಪಿ ವೃತ್ತಿ. ಈತನ, ವಿರುದ್ಧ ವಿವಿಧ ಠಾಣೆಗಳಲ್ಲಿ ಎಂಟು ಪ್ರಕರಣಗಳಿವೆ. ಅಧಿಕಾರಿಗಳನ್ನೇ ಗುರಿಯಾಗಿಸಿ ವಂಚನೆ ನಡೆಸಲಾಗುತ್ತಿತ್ತು’ ಎಂದು ಸಿಸಿಬಿ ಪೊಲೀಸರು ಹೇಳಿದರು.</p>.<p>‘ಆರೋಪಿ ಪತ್ನಿ, ತನ್ನ ಹೆಸರಿನಲ್ಲಿ ಸಿಮ್ ಖರೀದಿಸಿದ್ದ. ಟ್ರೂ ಕಾಲರ್ನಲ್ಲಿ ಪತ್ನಿ ಹೆಸರಿನ ನಂಬರ್ ಅನ್ನು ಅಂಡರ್ ಸೆಕ್ರೆಟರಿ ಎಂದು ಹಾಕಿಕೊಂಡಿದ್ದ. ವಾಟ್ಸ್ಆ್ಯಪ್ ಡಿ.ಪಿಯಲ್ಲಿ ವಿಧಾನಸೌಧದ ಫೋಟೊ ಹಾಕಿದ್ದ. ಕರೆ ಮಾಡಿದವರು ಈತ ಅಧಿಕಾರಿಯೇ ಇರಬಹುದು ಎಂದು ಭಾವಿಸುತ್ತಿದ್ದರು’ ಎಂದು ಹೇಳಿದರು.</p>.<p>‘ಬಾಗಲಕೋಟೆ ಡಿಎಚ್ಒ ಆಗಿದ್ದ ಜಯಶ್ರೀ ಎಮ್ಮಿ ಅವರಿಗೆ ಸಿ.ಎಂ ಜಂಟಿ ಕಾರ್ಯದರ್ಶಿ ರಾಮಯ್ಯ ಅವರ ಹೆಸರಿನಲ್ಲಿ ಸುರೇಶ್ ವಂಚಿಸಿದ್ದ. ಹಣ ನೀಡಿದರೆ ಅದೇ ಸ್ಥಳದಲ್ಲಿ ಡಿಎಚ್ಒ ಹುದ್ದೆಯಲ್ಲೇ ಮುಂದುವರೆಯುವಂತೆ ಮಾಡುವುದಾಗಿ ಹೇಳಿ, ₹7 ಲಕ್ಷ ಪಡೆದುಕೊಂಡಿದ್ದ’ ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>