<p><strong>ಬೆಂಗಳೂರು</strong>: ‘ಬಳಕೆಯಲ್ಲಿರುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು (ಎ.ಐ) ನಿರ್ದಿಷ್ಟ ‘ಪ್ರೋಗ್ರಾಮ್’ ಆಧರಿಸಿರುವುದರಿಂದ ಉದ್ಯೋಗಾವಕಾಶಗಳ ನಷ್ಟದ ಭಯ ಪಡಬೇಕಾಗಿಲ್ಲ. ಶಿಕ್ಷಣ ಮತ್ತು ಉದ್ಯಮದ ನಡುವಿನ ಅಂತರದಿಂದಾಗಿ ಕೆಲವರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ’ ಎಂದು ವಿಜ್ಞಾನ ಲೇಖಕ ಉದಯ ಶಂಕರ ಪುರಾಣಿಕ್ ತಿಳಿಸಿದರು. </p>.<p>ಇನ್ಸ್ಟಿಟ್ಯೂಟ್ ಆಫ್ ಮೀಡಿಯಾ ಸ್ಟಡೀಸ್ ಆ್ಯಂಡ್ ರಿಸರ್ಚ್ (ಐಎಂಎಸ್ಆರ್) ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಪ್ರಜಾವಾಣಿ’ಯ ಚಿಕ್ಕಮಗಳೂರು ಜಿಲ್ಲಾ ವರದಿಗಾರ ಎಸ್.ಕೆ.ವಿಜಯಕುಮಾರ್ ಅವರಿಗೆ ‘ಬಿ.ಆರ್. ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ’ ಪ್ರದಾನ ಮಾಡಲಾಯಿತು.</p>.<p>ಈ ವೇಳೆ ಮಾತನಾಡಿದ ಉದಯ ಶಂಕರ ಪುರಾಣಿಕ್ ಅವರು, ‘ಎ.ಐ ತಂತ್ರಜ್ಞಾನದ ಬಳಕೆಯಿಂದ ಉದ್ಯೋಗ ಕಳೆದುಕೊಳ್ಳುವ ಆತಂಕ ಕೆಲವರಲ್ಲಿದೆ. ವಾಸ್ತವದಲ್ಲಿ ಈ ತಂತ್ರಜ್ಞಾನವು ಉದ್ಯೋಗ ನಷ್ಟಕ್ಕೆ ಕಾರಣವಾಗುವುದಿಲ್ಲ. ಈಗ ಬಳಕೆಯಲ್ಲಿರುವ ಎ.ಐ ತಂತ್ರಜ್ಞಾನವು ‘ಪ್ರೋಗ್ರಾಮ್’ಗೆ ಅನುಗುಣವಾಗಿ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಶಿಕ್ಷಣ ಸಂಸ್ಥೆಗಳು ಉದ್ಯಮದಲ್ಲಿ ಕಾರ್ಯನಿರ್ವಹಿಸಲು ಅಗತ್ಯವಿರುವ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ವೃದ್ಧಿಸಬೇಕು’ ಎಂದು ಹೇಳಿದರು. </p>.<p>ಕಾಡುತ್ತಿದೆ ಹಸಿವು, ಬಡತನ: ಪತ್ರಕರ್ತ ಹಾಗೂ ರಾಜಕೀಯ ವಿಶ್ಲೇಷಕ ಕೆ.ಪಿ.ಕೃಷ್ಣಪ್ರಸಾದ್ ಅವರು, ‘ದೇಶವನ್ನು ಹಸಿವು, ಬಡತನ, ಅಸಮಾನತೆಯಂತಹ ಸಮಸ್ಯೆಗಳು ಕಾಡುತ್ತಿವೆ ಎಂದು ಅಭಿಪ್ರಾಯಪಟ್ಟರು.</p>.<p>’ದೇಶದ ಜಿಡಿಪಿ ಶೇ 8.2ರಷ್ಟು ತಲುಪಿದೆಯೆಂದು ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ, ನಮ್ಮ ತಲಾ ಆದಾಯ ಕೇವಲ ₹ 2 ಲಕ್ಷ ಮಾತ್ರ. ಚೀನಾದ ತಲಾ ಆದಾಯ ಇದಕ್ಕಿಂತ ಆರು ಪಟ್ಟು ಹೆಚ್ಚಿದೆ. ನಮ್ಮ ದೇಶದಲ್ಲಿ 85 ಕೋಟಿ ಜನರಿಗೆ ಪಡಿತರ ಸಿಗುತ್ತಿದೆ. ಇದು ದೇಶದ ಹಸಿವು ಮತ್ತು ಬಡತನವನ್ನು ತೋರಿಸುತ್ತದೆ’ ಎಂದು ಹೇಳಿದರು. </p>.<p>ಪ್ರಶಸ್ತಿ ಪುರಸ್ಕೃತ ಎಸ್.ಕೆ.ವಿಜಯಕುಮಾರ್ ಅವರು ತಮ್ಮ ಹಳೆಯ ದಿನಗಳನ್ನು ಸ್ಮರಿಸಿಕೊಂಸರು. ಪ್ರಶಸ್ತಿಯ ನಗದು ₹ 5 ಸಾವಿರವನ್ನು ಸಂಸ್ಥೆಗೇ ಮರಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಬಳಕೆಯಲ್ಲಿರುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು (ಎ.ಐ) ನಿರ್ದಿಷ್ಟ ‘ಪ್ರೋಗ್ರಾಮ್’ ಆಧರಿಸಿರುವುದರಿಂದ ಉದ್ಯೋಗಾವಕಾಶಗಳ ನಷ್ಟದ ಭಯ ಪಡಬೇಕಾಗಿಲ್ಲ. ಶಿಕ್ಷಣ ಮತ್ತು ಉದ್ಯಮದ ನಡುವಿನ ಅಂತರದಿಂದಾಗಿ ಕೆಲವರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ’ ಎಂದು ವಿಜ್ಞಾನ ಲೇಖಕ ಉದಯ ಶಂಕರ ಪುರಾಣಿಕ್ ತಿಳಿಸಿದರು. </p>.<p>ಇನ್ಸ್ಟಿಟ್ಯೂಟ್ ಆಫ್ ಮೀಡಿಯಾ ಸ್ಟಡೀಸ್ ಆ್ಯಂಡ್ ರಿಸರ್ಚ್ (ಐಎಂಎಸ್ಆರ್) ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಪ್ರಜಾವಾಣಿ’ಯ ಚಿಕ್ಕಮಗಳೂರು ಜಿಲ್ಲಾ ವರದಿಗಾರ ಎಸ್.ಕೆ.ವಿಜಯಕುಮಾರ್ ಅವರಿಗೆ ‘ಬಿ.ಆರ್. ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ’ ಪ್ರದಾನ ಮಾಡಲಾಯಿತು.</p>.<p>ಈ ವೇಳೆ ಮಾತನಾಡಿದ ಉದಯ ಶಂಕರ ಪುರಾಣಿಕ್ ಅವರು, ‘ಎ.ಐ ತಂತ್ರಜ್ಞಾನದ ಬಳಕೆಯಿಂದ ಉದ್ಯೋಗ ಕಳೆದುಕೊಳ್ಳುವ ಆತಂಕ ಕೆಲವರಲ್ಲಿದೆ. ವಾಸ್ತವದಲ್ಲಿ ಈ ತಂತ್ರಜ್ಞಾನವು ಉದ್ಯೋಗ ನಷ್ಟಕ್ಕೆ ಕಾರಣವಾಗುವುದಿಲ್ಲ. ಈಗ ಬಳಕೆಯಲ್ಲಿರುವ ಎ.ಐ ತಂತ್ರಜ್ಞಾನವು ‘ಪ್ರೋಗ್ರಾಮ್’ಗೆ ಅನುಗುಣವಾಗಿ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಶಿಕ್ಷಣ ಸಂಸ್ಥೆಗಳು ಉದ್ಯಮದಲ್ಲಿ ಕಾರ್ಯನಿರ್ವಹಿಸಲು ಅಗತ್ಯವಿರುವ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ವೃದ್ಧಿಸಬೇಕು’ ಎಂದು ಹೇಳಿದರು. </p>.<p>ಕಾಡುತ್ತಿದೆ ಹಸಿವು, ಬಡತನ: ಪತ್ರಕರ್ತ ಹಾಗೂ ರಾಜಕೀಯ ವಿಶ್ಲೇಷಕ ಕೆ.ಪಿ.ಕೃಷ್ಣಪ್ರಸಾದ್ ಅವರು, ‘ದೇಶವನ್ನು ಹಸಿವು, ಬಡತನ, ಅಸಮಾನತೆಯಂತಹ ಸಮಸ್ಯೆಗಳು ಕಾಡುತ್ತಿವೆ ಎಂದು ಅಭಿಪ್ರಾಯಪಟ್ಟರು.</p>.<p>’ದೇಶದ ಜಿಡಿಪಿ ಶೇ 8.2ರಷ್ಟು ತಲುಪಿದೆಯೆಂದು ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ, ನಮ್ಮ ತಲಾ ಆದಾಯ ಕೇವಲ ₹ 2 ಲಕ್ಷ ಮಾತ್ರ. ಚೀನಾದ ತಲಾ ಆದಾಯ ಇದಕ್ಕಿಂತ ಆರು ಪಟ್ಟು ಹೆಚ್ಚಿದೆ. ನಮ್ಮ ದೇಶದಲ್ಲಿ 85 ಕೋಟಿ ಜನರಿಗೆ ಪಡಿತರ ಸಿಗುತ್ತಿದೆ. ಇದು ದೇಶದ ಹಸಿವು ಮತ್ತು ಬಡತನವನ್ನು ತೋರಿಸುತ್ತದೆ’ ಎಂದು ಹೇಳಿದರು. </p>.<p>ಪ್ರಶಸ್ತಿ ಪುರಸ್ಕೃತ ಎಸ್.ಕೆ.ವಿಜಯಕುಮಾರ್ ಅವರು ತಮ್ಮ ಹಳೆಯ ದಿನಗಳನ್ನು ಸ್ಮರಿಸಿಕೊಂಸರು. ಪ್ರಶಸ್ತಿಯ ನಗದು ₹ 5 ಸಾವಿರವನ್ನು ಸಂಸ್ಥೆಗೇ ಮರಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>