‘ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ ಆರೋಪಿ, ಹನುಮಂತನಗರದ 50 ಅಡಿ ರಸ್ತೆಯ ಬೇಕರಿಯಲ್ಲಿ ಕೆಲಸಕ್ಕಿದ್ದ. ಹಣಕಾಸು ವಿಚಾರಕ್ಕಾಗಿ ಮಾಲೀಕರ ಜೊತೆ ಜಗಳ ಮಾಡಲಾರಂಭಿಸಿದ್ದ. ಮಾಲೀಕರು ಕೆಲಸ ಬಿಡಿಸಿದ್ದರು. ಇದರಿಂದ ಸಿಟ್ಟಾದ ಆರೋಪಿ, 2005ರ ಜನವರಿ 13ರಂದು ರಾತ್ರಿ ಮಾಲೀಕನ ಮನೆಗೆ ನುಗ್ಗಿದ್ದ. ಮಾಲೀಕರ ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ’ ಎಂದರು.