<p><strong>ಬೆಂಗಳೂರು</strong>: ಬೈಕ್ ಕೀ ವಿಚಾರವಾಗಿ ತಿಲಕ್ ಎನ್ನುವವರನ್ನು ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿರುವ ಆರೋಪಿ ಸಿದ್ದರಾಜು ಗಿರಿನಗರ ಠಾಣೆಗೆ ಶರಣಾಗಿದ್ದಾರೆ.</p>.<p>‘ನೇಪಾಳದ ತಿಲಕ್, ಹೊಸಕೆರೆಹಳ್ಳಿಯಲ್ಲಿರುವ ಕೋಳಿ ಮಾಂಸ ಮಾರಾಟ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದರು. ಮಂಡ್ಯದ ಸಿದ್ದರಾಜು ಸಹ ಅದೇ ಮಳಿಗೆಯಲ್ಲಿ ಕೆಲಸಕ್ಕಿದ್ದ. ಇಬ್ಬರೂ ಒಂದೇ ಕೊಠಡಿಯಲ್ಲಿ ವಾಸವಿದ್ದರು’ ಎಂದು ಪೊಲೀಸರು ಹೇಳಿದರು.</p>.<p>‘ಮಳಿಗೆ ಕೆಲಸಕ್ಕೆ ಸುತ್ತಾಡಲು ಒಂದೇ ಬೈಕ್ ಇತ್ತು. ತಿಲಕ್ ಹಾಗೂ ಸಿದ್ದರಾಜು, ಪ್ರತ್ಯೇಕವಾಗಿ ಆಗಾಗ ಬೈಕ್ ತೆಗೆದುಕೊಂಡು ಓಡಾಡುತ್ತಿದ್ದರು. ಬೈಕ್ ವಿಚಾರವಾಗಿ ಆಗಾಗ ಜಗಳವಾಡುತ್ತಿದ್ದರು’ ಎಂದರು.</p>.<p>ಮದ್ಯದ ಅಮಲಿನಲ್ಲಿ ಜಗಳ: ‘ತಿಲಕ್ ಹಾಗೂ ಸಿದ್ದರಾಜು ನಡುವೆ ಬೈಕ್ ಕೀ ವಿಚಾರವಾಗಿ ಭಾನುವಾರ ಮಳಿಗೆಯಲ್ಲಿ ಗಲಾಟೆ ಆಗಿತ್ತು. ಮಳಿಗೆಯಲ್ಲಿದ್ದ ಇತರರು, ಜಗಳ ಬಿಡಿಸಿದ್ದರು. ಇಬ್ಬರೂ ರಾತ್ರಿ ಕೊಠಡಿಗೆ ಬಂದು ಮದ್ಯ ಕುಡಿದಿದ್ದರು’ ಎಂದು ಪೊಲೀಸರು ಹೇಳಿದರು.</p>.<p>‘ಮದ್ಯದ ಅಮಲಿನಲ್ಲಿದ್ದ ಇಬ್ಬರೂ ಬೈಕ್ ಕೀ ವಿಚಾರವಾಗಿ ಪರಸ್ಪರ ಬೈದಾಡಿಕೊಂಡಿದ್ದರು. ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಅದೇ ಸಂದರ್ಭದಲ್ಲಿ ಆರೋಪಿ ಸಿದ್ದರಾಜು, ಚಾಕುವಿನಿಂದ ತಿಲಕ್ಗೆ ಇರಿದಿದ್ದ. ತೀವ್ರ ರಕ್ತಸ್ರಾವದಿಂದ ತಿಲಕ್ ಸ್ಥಳದಲ್ಲೇ ಮೃತಪಟ್ಟಿದ್ದರು’ ಎಂದರು.</p>.<p>‘ಕೃತ್ಯದ ಬಳಿಕ ಠಾಣೆಗೆ ಬಂದಿದ್ದ ಸಿದ್ದರಾಜು, ‘ನನ್ನ ಸ್ನೇಹಿತನನ್ನು ಕೊಂದಿದ್ದೇನೆ. ಬಂಧಿಸಿ’ ಎಂದಿದ್ದ. ಸ್ಥಳಕ್ಕೆ ಹೋದ ಸಿಬ್ಬಂದಿ, ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದರು. ನಂತರ, ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಆರೋಪಿಯನ್ನು ಬಂಧಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಬೈಕ್ ಕೀ ವಿಚಾರವಾಗಿ ತಿಲಕ್ ಎನ್ನುವವರನ್ನು ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿರುವ ಆರೋಪಿ ಸಿದ್ದರಾಜು ಗಿರಿನಗರ ಠಾಣೆಗೆ ಶರಣಾಗಿದ್ದಾರೆ.</p>.<p>‘ನೇಪಾಳದ ತಿಲಕ್, ಹೊಸಕೆರೆಹಳ್ಳಿಯಲ್ಲಿರುವ ಕೋಳಿ ಮಾಂಸ ಮಾರಾಟ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದರು. ಮಂಡ್ಯದ ಸಿದ್ದರಾಜು ಸಹ ಅದೇ ಮಳಿಗೆಯಲ್ಲಿ ಕೆಲಸಕ್ಕಿದ್ದ. ಇಬ್ಬರೂ ಒಂದೇ ಕೊಠಡಿಯಲ್ಲಿ ವಾಸವಿದ್ದರು’ ಎಂದು ಪೊಲೀಸರು ಹೇಳಿದರು.</p>.<p>‘ಮಳಿಗೆ ಕೆಲಸಕ್ಕೆ ಸುತ್ತಾಡಲು ಒಂದೇ ಬೈಕ್ ಇತ್ತು. ತಿಲಕ್ ಹಾಗೂ ಸಿದ್ದರಾಜು, ಪ್ರತ್ಯೇಕವಾಗಿ ಆಗಾಗ ಬೈಕ್ ತೆಗೆದುಕೊಂಡು ಓಡಾಡುತ್ತಿದ್ದರು. ಬೈಕ್ ವಿಚಾರವಾಗಿ ಆಗಾಗ ಜಗಳವಾಡುತ್ತಿದ್ದರು’ ಎಂದರು.</p>.<p>ಮದ್ಯದ ಅಮಲಿನಲ್ಲಿ ಜಗಳ: ‘ತಿಲಕ್ ಹಾಗೂ ಸಿದ್ದರಾಜು ನಡುವೆ ಬೈಕ್ ಕೀ ವಿಚಾರವಾಗಿ ಭಾನುವಾರ ಮಳಿಗೆಯಲ್ಲಿ ಗಲಾಟೆ ಆಗಿತ್ತು. ಮಳಿಗೆಯಲ್ಲಿದ್ದ ಇತರರು, ಜಗಳ ಬಿಡಿಸಿದ್ದರು. ಇಬ್ಬರೂ ರಾತ್ರಿ ಕೊಠಡಿಗೆ ಬಂದು ಮದ್ಯ ಕುಡಿದಿದ್ದರು’ ಎಂದು ಪೊಲೀಸರು ಹೇಳಿದರು.</p>.<p>‘ಮದ್ಯದ ಅಮಲಿನಲ್ಲಿದ್ದ ಇಬ್ಬರೂ ಬೈಕ್ ಕೀ ವಿಚಾರವಾಗಿ ಪರಸ್ಪರ ಬೈದಾಡಿಕೊಂಡಿದ್ದರು. ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಅದೇ ಸಂದರ್ಭದಲ್ಲಿ ಆರೋಪಿ ಸಿದ್ದರಾಜು, ಚಾಕುವಿನಿಂದ ತಿಲಕ್ಗೆ ಇರಿದಿದ್ದ. ತೀವ್ರ ರಕ್ತಸ್ರಾವದಿಂದ ತಿಲಕ್ ಸ್ಥಳದಲ್ಲೇ ಮೃತಪಟ್ಟಿದ್ದರು’ ಎಂದರು.</p>.<p>‘ಕೃತ್ಯದ ಬಳಿಕ ಠಾಣೆಗೆ ಬಂದಿದ್ದ ಸಿದ್ದರಾಜು, ‘ನನ್ನ ಸ್ನೇಹಿತನನ್ನು ಕೊಂದಿದ್ದೇನೆ. ಬಂಧಿಸಿ’ ಎಂದಿದ್ದ. ಸ್ಥಳಕ್ಕೆ ಹೋದ ಸಿಬ್ಬಂದಿ, ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದರು. ನಂತರ, ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಆರೋಪಿಯನ್ನು ಬಂಧಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>