<p><strong>ಬೆಂಗಳೂರು:</strong> ಎರಡು ವಾರಗಳಿಂದ ಬಿಲ್ ಪಾವತಿ ಮಾಡದ್ದರಿಂದ ನಗರದಲ್ಲಿರುವ 11 ಇಂದಿರಾ ಕ್ಯಾಂಟೀನ್ಗಳು ಸ್ಥಗಿತಗೊಂಡಿವೆ.</p>.<p>ಬಿಬಿಎಂಪಿಯ ದಕ್ಷಿಣ ವಲಯದ ಬಸವನಗುಡಿ, ಬೈರಸಂದ್ರ, ವಿವಿ ಪುರ, ಜಯನಗರ, ಆಡುಗೋಡಿ, ಈಜಿಪುರ ಮತ್ತು ಸಿದ್ದಾಪುರದಲ್ಲಿರುವ ಇಂದಿರಾ ಕ್ಯಾಂಟೀನ್ಗಳು ಬಂದ್ ಆಗಿವೆ.</p>.<p>ಇಂದಿರಾ ಕ್ಯಾಂಟೀನ್ಗಳಲ್ಲಿ ಉಪಾಹಾರ, ಊಟ ಮತ್ತು ರಾತ್ರಿ ಊಟವನ್ನು ರಿಯಾಯಿತಿ ದರದಲ್ಲಿ ಒದಗಿಸುತ್ತಿದ್ದ ಏಜೆನ್ಸಿಗಳಿಗೆ ₹40 ಕೋಟಿ ಬಿಲ್ ಅನ್ನು ಬಿಬಿಎಂಪಿ ಪಾವತಿಸದ ಕಾರಣ ಕಾರ್ಯಾಚರಣೆ ನಿಲ್ಲಿಸಿದ್ದಾರೆ ಎಂದು ಹೇಳಲಾಗಿದೆ.</p>.<p>‘ನಗರದ ಇತರೆ ಭಾಗದಲ್ಲಿ ಇಂದಿರಾ ಕ್ಯಾಂಟೀನ್ ನಡೆಸುತ್ತಿರುವ ಎಲ್ಲ ಏಜೆನ್ಸಿಗಳ ಬಿಲ್ಗಳನ್ನು ನಾವು ಪಾವತಿಸಿದ್ದೇವೆ. ದಕ್ಷಿಣ ವಲಯದ ಏಜೆನ್ಸಿ ನಾಗರಿಕರಿಗೆ ಒದಗಿಸಿದ ಆಹಾರಕ್ಕಿಂತ ಹೆಚ್ಚಿನ ಮೊತ್ತದ ಬಿಲ್ ಸಲ್ಲಿಸಿರುವುದರಿಂದ ಹಣ ಪಾವತಿ ಮಾಡಿಲ್ಲ. ಈ ಪ್ರದೇಶಗಳಲ್ಲಿ ನಾವು ಪರ್ಯಾಯ ವ್ಯವಸ್ಥೆ ಮಾಡಲಿದ್ದೇವೆ’ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಶ್ ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಎರಡು ವಾರಗಳಿಂದ ಬಿಲ್ ಪಾವತಿ ಮಾಡದ್ದರಿಂದ ನಗರದಲ್ಲಿರುವ 11 ಇಂದಿರಾ ಕ್ಯಾಂಟೀನ್ಗಳು ಸ್ಥಗಿತಗೊಂಡಿವೆ.</p>.<p>ಬಿಬಿಎಂಪಿಯ ದಕ್ಷಿಣ ವಲಯದ ಬಸವನಗುಡಿ, ಬೈರಸಂದ್ರ, ವಿವಿ ಪುರ, ಜಯನಗರ, ಆಡುಗೋಡಿ, ಈಜಿಪುರ ಮತ್ತು ಸಿದ್ದಾಪುರದಲ್ಲಿರುವ ಇಂದಿರಾ ಕ್ಯಾಂಟೀನ್ಗಳು ಬಂದ್ ಆಗಿವೆ.</p>.<p>ಇಂದಿರಾ ಕ್ಯಾಂಟೀನ್ಗಳಲ್ಲಿ ಉಪಾಹಾರ, ಊಟ ಮತ್ತು ರಾತ್ರಿ ಊಟವನ್ನು ರಿಯಾಯಿತಿ ದರದಲ್ಲಿ ಒದಗಿಸುತ್ತಿದ್ದ ಏಜೆನ್ಸಿಗಳಿಗೆ ₹40 ಕೋಟಿ ಬಿಲ್ ಅನ್ನು ಬಿಬಿಎಂಪಿ ಪಾವತಿಸದ ಕಾರಣ ಕಾರ್ಯಾಚರಣೆ ನಿಲ್ಲಿಸಿದ್ದಾರೆ ಎಂದು ಹೇಳಲಾಗಿದೆ.</p>.<p>‘ನಗರದ ಇತರೆ ಭಾಗದಲ್ಲಿ ಇಂದಿರಾ ಕ್ಯಾಂಟೀನ್ ನಡೆಸುತ್ತಿರುವ ಎಲ್ಲ ಏಜೆನ್ಸಿಗಳ ಬಿಲ್ಗಳನ್ನು ನಾವು ಪಾವತಿಸಿದ್ದೇವೆ. ದಕ್ಷಿಣ ವಲಯದ ಏಜೆನ್ಸಿ ನಾಗರಿಕರಿಗೆ ಒದಗಿಸಿದ ಆಹಾರಕ್ಕಿಂತ ಹೆಚ್ಚಿನ ಮೊತ್ತದ ಬಿಲ್ ಸಲ್ಲಿಸಿರುವುದರಿಂದ ಹಣ ಪಾವತಿ ಮಾಡಿಲ್ಲ. ಈ ಪ್ರದೇಶಗಳಲ್ಲಿ ನಾವು ಪರ್ಯಾಯ ವ್ಯವಸ್ಥೆ ಮಾಡಲಿದ್ದೇವೆ’ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಶ್ ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>