<p><strong>ಕೆ.ಆರ್.ಪುರ:</strong> ಬೆಂಗಳೂರು ಪೂರ್ವ ತಾಲ್ಲೂಕು ವರ್ತೂರು ಹೋಬಳಿ ಭೋಗನಹಳ್ಳಿ ಗ್ರಾಮದಲ್ಲಿ ಸ್ಮಶಾನ ಹಾಗೂ ದೇವಾಲಯವನ್ನು ನೆಲಸಮ ಮಾಡಿ ಆ ಜಾಗವನ್ನು ಆದರ್ಶ ಡೆವಲಪರ್ಸ್ನವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ನೂರಾರು ಕಾರ್ಯಕರ್ತರು ಬಿಬಿಎಂಪಿ ಮಹದೇವಪುರ ವಲಯ ಕಚೇರಿ ಎದುರು ಪ್ರತಿಭಟನೆ ನಡೆಸಿದರು.</p>.<p>ವರ್ತೂರು ಹೋಬಳಿ ಭೋಗನಹಳ್ಳಿ ಗ್ರಾಮದ ಸರ್ವೇ 33/1 ರಲ್ಲಿ 1 ಎಕರೆ 39 ಗುಂಟೆ ಜಾಗದಲ್ಲಿ ಸ್ಮಶಾನ ಇದ್ದು ಅಲ್ಲಿ ಚಿಕ್ಕದಾದ ಶ್ರೀಅಂಗಳ ಪರಮೇಶ್ವರಿ ದೇವಾಲಯ ಇತ್ತು. ಗ್ರಾಮಸ್ಥರು ಶವ ಸಂಸ್ಕಾರದ ಸಂದರ್ಭದಲ್ಲಿ ಈ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅಂತ್ಯಕ್ರಿಯೆ ವಿಧಿ ವಿಧಾನಗಳು ನಡೆಸುವ ಪದ್ದತಿ ರೂಢಿಯಲ್ಲಿದೆ. ಈಗ ಆದರ್ಶ ಡೆವಲಪರ್ಸ್ನವರು ಇದೇ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಕಾರ್ಯಕರ್ತರು ದೂರಿದರು.</p>.<p>ಸ್ಮಶಾನ ಮತ್ತು ದೇವಾಲಯ ನೆಲಸಮ ಮಾಡಿರುವ ಕುರಿತು ತಹಶೀಲ್ದಾರ್ಗೆ ದೂರು ಸಲ್ಲಿಸಿದ್ದೆವು. ತಹಶೀಲ್ದಾರ್ ಅವರು ಸ್ಥಳದ ಸರ್ವೆ ನಡೆಸಲು ಆದೇಶಿಸಿದ್ದರು. ನಂತರ ಸರ್ವೆ ಪ್ರಕಾರ ಈ ಜಾಗ ಸ್ಮಶಾನಕ್ಕೆ ಸೇರಿದೆ ಎಂದು ನಾಮಫಲಕ ಹಾಕಿಸಿದ್ದರು. ಆದರ್ಶ ಡೆವಲಪರ್ಸ್ನವರು ನಾಮಫಲಕವನ್ನು ಕಿತ್ತು ಎಸೆದು ಸ್ಮಶಾನ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಒತ್ತುವರಿಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಜಾಗವನ್ನು ಸ್ಮಶಾನಕ್ಕೆ ಮೀಸಲಿಟ್ಟು ಕಾಂಪೌಂಡ್ ನಿರ್ಮಿಸಬೇಕು’ ಎಂದು ರಾಜ್ಯಾಧ್ಯಕ್ಷ ಸೋರಹುಣುಸೆ ಎನ್.ವೆಂಕಟೇಶ್ ಒತ್ತಾಯಿಸಿದರು. </p>.<p>ಈ ಸಂದರ್ಭದಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಉಪಾಧ್ಯಕ್ಷರಾದ ರಾಮಕೃಷ್ಣ, ಜಯಕುಮಾರ್, ರಾಜ್ಯ ಯುವ ಘಟಕ ಅಧ್ಯಕ್ಷ ಎನ್.ವಿಜಯಕುಮಾರ್, ಮಹಿಳಾ ಘಟಕ ಅಧ್ಯಕ್ಷೆ ಸತ್ಯವತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆ.ಆರ್.ಪುರ:</strong> ಬೆಂಗಳೂರು ಪೂರ್ವ ತಾಲ್ಲೂಕು ವರ್ತೂರು ಹೋಬಳಿ ಭೋಗನಹಳ್ಳಿ ಗ್ರಾಮದಲ್ಲಿ ಸ್ಮಶಾನ ಹಾಗೂ ದೇವಾಲಯವನ್ನು ನೆಲಸಮ ಮಾಡಿ ಆ ಜಾಗವನ್ನು ಆದರ್ಶ ಡೆವಲಪರ್ಸ್ನವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ನೂರಾರು ಕಾರ್ಯಕರ್ತರು ಬಿಬಿಎಂಪಿ ಮಹದೇವಪುರ ವಲಯ ಕಚೇರಿ ಎದುರು ಪ್ರತಿಭಟನೆ ನಡೆಸಿದರು.</p>.<p>ವರ್ತೂರು ಹೋಬಳಿ ಭೋಗನಹಳ್ಳಿ ಗ್ರಾಮದ ಸರ್ವೇ 33/1 ರಲ್ಲಿ 1 ಎಕರೆ 39 ಗುಂಟೆ ಜಾಗದಲ್ಲಿ ಸ್ಮಶಾನ ಇದ್ದು ಅಲ್ಲಿ ಚಿಕ್ಕದಾದ ಶ್ರೀಅಂಗಳ ಪರಮೇಶ್ವರಿ ದೇವಾಲಯ ಇತ್ತು. ಗ್ರಾಮಸ್ಥರು ಶವ ಸಂಸ್ಕಾರದ ಸಂದರ್ಭದಲ್ಲಿ ಈ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅಂತ್ಯಕ್ರಿಯೆ ವಿಧಿ ವಿಧಾನಗಳು ನಡೆಸುವ ಪದ್ದತಿ ರೂಢಿಯಲ್ಲಿದೆ. ಈಗ ಆದರ್ಶ ಡೆವಲಪರ್ಸ್ನವರು ಇದೇ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಕಾರ್ಯಕರ್ತರು ದೂರಿದರು.</p>.<p>ಸ್ಮಶಾನ ಮತ್ತು ದೇವಾಲಯ ನೆಲಸಮ ಮಾಡಿರುವ ಕುರಿತು ತಹಶೀಲ್ದಾರ್ಗೆ ದೂರು ಸಲ್ಲಿಸಿದ್ದೆವು. ತಹಶೀಲ್ದಾರ್ ಅವರು ಸ್ಥಳದ ಸರ್ವೆ ನಡೆಸಲು ಆದೇಶಿಸಿದ್ದರು. ನಂತರ ಸರ್ವೆ ಪ್ರಕಾರ ಈ ಜಾಗ ಸ್ಮಶಾನಕ್ಕೆ ಸೇರಿದೆ ಎಂದು ನಾಮಫಲಕ ಹಾಕಿಸಿದ್ದರು. ಆದರ್ಶ ಡೆವಲಪರ್ಸ್ನವರು ನಾಮಫಲಕವನ್ನು ಕಿತ್ತು ಎಸೆದು ಸ್ಮಶಾನ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಒತ್ತುವರಿಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಜಾಗವನ್ನು ಸ್ಮಶಾನಕ್ಕೆ ಮೀಸಲಿಟ್ಟು ಕಾಂಪೌಂಡ್ ನಿರ್ಮಿಸಬೇಕು’ ಎಂದು ರಾಜ್ಯಾಧ್ಯಕ್ಷ ಸೋರಹುಣುಸೆ ಎನ್.ವೆಂಕಟೇಶ್ ಒತ್ತಾಯಿಸಿದರು. </p>.<p>ಈ ಸಂದರ್ಭದಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಉಪಾಧ್ಯಕ್ಷರಾದ ರಾಮಕೃಷ್ಣ, ಜಯಕುಮಾರ್, ರಾಜ್ಯ ಯುವ ಘಟಕ ಅಧ್ಯಕ್ಷ ಎನ್.ವಿಜಯಕುಮಾರ್, ಮಹಿಳಾ ಘಟಕ ಅಧ್ಯಕ್ಷೆ ಸತ್ಯವತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>