‘ಜನಪ್ರತಿನಿಧಿಗಳಲ್ಲಿ ಭಾಷಾ ಪ್ರಜ್ಞೆ ಇರಬೇಕು. ಅಸಭ್ಯವಾಗಿ ನಡೆದುಕೊಳ್ಳುವ ವ್ಯಕ್ತಿಗಳಿಗೆ ಪಕ್ಷಗಳು ಕಡಿವಾಣ ಹಾಕಬೇಕು. ಮುನಿರತ್ನರಂತಹ ವ್ಯಕ್ತಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡಬಾರದು. ರಿಯಲ್ ಎಸ್ಟೇಟ್, ಬಿಲ್ಡರ್ಗಳಿಗೆ ಟಿಕೆಟ್ ನೀಡುವುದನ್ನು ಮುಂದುವರಿಸಿದರೆ, ಅವರ ತಾಳಕ್ಕೆ ತಕ್ಕಂತೆ ಸರ್ಕಾರ ಕುಣಿಯಬೇಕಾಗುತ್ತದೆ’ ಎಂದರು.