<p><strong>ಬೆಂಗಳೂರು</strong>: ಪ್ರವರ ಥಿಯೇಟರ್ ಮತ್ತು ಅಶ್ವಘೋಷ ಥಿಯೇಟರ್ ಟ್ರಸ್ಟ್ ಜಂಟಿಯಾಗಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಬೆಂಗಳೂರು ಕಿರುನಾಟಕೋತ್ಸವ’ದ ಅಂತಿಮ ಸ್ಪರ್ಧೆಯಲ್ಲಿ ಕಲಾ ಕದಂಬ ಆರ್ಟ್ ಸೆಂಟರ್ನ ‘ಅದು’ (ತೀರ್ಪುಗಾರರ ಆಯ್ಕೆ) ಹಾಗೂ ಕಲಾರಾಧ್ಯ ತಂಡದ ‘ಸಮಾವಸರ’ (ಪ್ರೇಕ್ಷಕರ ಆಯ್ಕೆ) ಅತ್ಯುತ್ತಮ ನಾಟಕವಾಗಿ ಹೊರಹೊಮ್ಮಿದವು. </p>.<p>ಈ ತಂಡಗಳು ತಲಾ ₹ 10 ಸಾವಿರ ನಗದು ಹಾಗೂ ಪಾರಿತೋಷಕ ಪಡೆದವು. ಅಂತಿಮ ಹಂತದ ಸ್ಪರ್ಧೆಯಲ್ಲಿ ಕಲಾ ಕದಂಬ ಆರ್ಟ್ ಸೆಂಟರ್ನ ‘ಅದು’, ಧ್ವನಿ ತಂಡದ ‘ಹತ್ತು ನಾಲ್ಕು ಮೆಟ್ಟಿಲು’, ಹೆಜ್ಜೆ ಥಿಯೇಟರ್ನ ‘ನೀವಾ ಅಥವಾ ನಾವಾ’, ವೀಕೆಂಡ್ ಥಿಯೇಟರ್ನ ‘ರಾಮ ಇಸ್ ಈಕ್ವಲ್ ಟು ರಾಮ’, ಕಲಾರಾಧ್ಯ ತಂಡದ ‘ಸಮಾವಸರ’, ಸಮತಾರಂಗ ತಂಡದ ‘ಚವರಿ’ ಹಾಗೂ ಕಾಜಾಣ ತಂಡದ ‘ಅಲೆಮಾರಿ ಭಾರತ’ ನಾಟಕ ಪ್ರದರ್ಶನ ಕಂಡವು. ಈ ನಾಟಕಗಳು ಪ್ರೇಕ್ಷಕರನ್ನು ರಂಜಿಸುವ ಜತೆಗೆ ಸಾಮಾಜಿಕ ಸಂದೇಶಗಳನ್ನು ಸಾರಿದವು. </p>.<p>ರಂಗಕರ್ಮಿ ಕಲ್ಪನಾ ನಾಗಾನಾಥ್, ಕಲಾಮಾಧ್ಯಮದ ಮುಖ್ಯಸ್ಥೆ ಕೆ. ಪರಮೇಶ್ವರ ಮತ್ತು ಬರಹಗಾರ ಎಸ್. ಗಂಗಾಧರಯ್ಯ ಅವರು ಅಂತಿಮ ಹಂತದ ಸ್ಪರ್ಧೆಯ ತೀರ್ಪುಗಾರರಾಗಿದ್ದರು.</p>.<p>ಆರ್. ನಾಗೇಶ್ ಹೆಸರಿನಲ್ಲಿ ನೀಡುವ ಅತ್ಯುತ್ತಮ ನಿರ್ದೇಶನ ಪ್ರಶಸ್ತಿಯನ್ನು ‘ಅಲೆಮಾರಿ ಭಾರತ’ ನಾಟಕಕ್ಕೆ ಬೇಲೂರು ರಘುನಂದನ್ ಪಡೆದರು. ಅತ್ಯುತ್ತಮ ಸ್ವರಚಿತ ಕಥೆ ಪ್ರಶಸ್ತಿಗೆ ಧ್ವನಿ ತಂಡ, ಸಂಚಾರಿ ವಿಜಯ್ ಹೆಸರಿನಲ್ಲಿ ನೀಡುವ ಅತ್ಯುತ್ತಮ ನಟ ಪ್ರಶಸ್ತಿಗೆ ಪ್ರಭಾಕರ್ ರಾವ್, ಉಮಾಶ್ರೀ ಹೆಸರಿನಲ್ಲಿ ನೀಡುವ ಅತ್ಯುತ್ತಮ ನಟಿ ಪ್ರಶಸ್ತಿಗೆ ಅನುಷಾ ಡಿ.ಎನ್., ಅತ್ಯುತ್ತಮ ನಾಟಕ ವಿನ್ಯಾಸ ಪ್ರಶಸ್ತಿಗೆ ಕಲಾರಾಧ್ಯ ತಂಡದ ಚಂದನ ವಶಿಷ್ಠ ಹಾಗೂ ಅತ್ಯುತ್ತಮ ಭಿತ್ತಿಪತ್ರ ವಿನ್ಯಾಸ ಪ್ರಶಸ್ತಿಗೆ ವೀಕೆಂಡ್ ಥಿಯೇಟರ್ನ ಮಿಥುನ್ ರಾಹುಲ್ ಭಾಜನರಾದರು. ಈ ಪ್ರಶಸ್ತಿಗಳು ತಲಾ ₹ 2,500 ನಗದು ಹಾಗೂ ಪಾರಿತೋಷಕ ಒಳಗೊಂಡಿದೆ. </p>.<p>ಪ್ರಕಾಶಕ ವೀರಕಪುತ್ರ ಶ್ರೀನಿವಾಸ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಜಿಪಿಒ ಚಂದ್ರು, ಕಲಾತ್ಮಕ ನಿರ್ದೇಶಕ ಹನು ರಾಮಸಂಜೀವ, ನಂದೀಶ್ ದೇವ್, ತಾಂತ್ರಿಕ ನಿರ್ದೇಶಕ ಮಂಜು ನಾರಾಯಣ್ ಉಪಸ್ಥಿತರಿದ್ದರು.</p>.<p> <strong>‘ರಂಗಭೂಮಿ ಬೆಳವಣಿಗೆ ಪ್ರಾರಂಭ’</strong></p><p> ‘ಕೋವಿಡ್ ಕಾಣಿಸಿಕೊಂಡ ಸಂದರ್ಭದಲ್ಲಿ ಹಲವಾರು ಕಲಾವಿದರು ಜೀವನವೇ ಮುಗಿದು ಹೋಯಿತೆಂದು ಕೈಚೆಲ್ಲಿದ್ದರು. ಆ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಾ ಪ್ರದರ್ಶನ ಮಾಡಿದ್ದರು. ಕಿರು ನಾಟಕ ಸೇರಿ ವಿವಿಧ ರಂಗ ಚಟುವಟಿಕೆಗಳಿಂದ ಈಗ ಮತ್ತೆ ರಂಗಭೂಮಿ ಬೆಳವಣಿಗೆ ಹೊಂದಲು ಪ್ರಾರಂಭಿಸಿದೆ’ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ತಿಳಿಸಿದರು. ‘ಎರಡು ಗಂಟೆಯ ನಾಟಕಗಳನ್ನು ಮಾಡಲು ಕೆಲ ಕಲಾವಿದರು ಹಿಂಜರಿಯುತ್ತಾರೆ. ಆದರೆ ಕಿರು ನಾಟಕಗಳಲ್ಲಿ ಅದ್ಭುತವಾಗಿ ಅಭಿನಯಿಸುತ್ತಿದ್ದಾರೆ. ಸಣ್ಣ ನಾಟಕದಲ್ಲಿ ದೊಡ್ಡ ವಿಚಾರ ಪ್ರಸ್ತುತಪಡಿಸುವುದು ಕಷ್ಟದ ಕೆಲಸ’ ಎಂದು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಪ್ರವರ ಥಿಯೇಟರ್ ಮತ್ತು ಅಶ್ವಘೋಷ ಥಿಯೇಟರ್ ಟ್ರಸ್ಟ್ ಜಂಟಿಯಾಗಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಬೆಂಗಳೂರು ಕಿರುನಾಟಕೋತ್ಸವ’ದ ಅಂತಿಮ ಸ್ಪರ್ಧೆಯಲ್ಲಿ ಕಲಾ ಕದಂಬ ಆರ್ಟ್ ಸೆಂಟರ್ನ ‘ಅದು’ (ತೀರ್ಪುಗಾರರ ಆಯ್ಕೆ) ಹಾಗೂ ಕಲಾರಾಧ್ಯ ತಂಡದ ‘ಸಮಾವಸರ’ (ಪ್ರೇಕ್ಷಕರ ಆಯ್ಕೆ) ಅತ್ಯುತ್ತಮ ನಾಟಕವಾಗಿ ಹೊರಹೊಮ್ಮಿದವು. </p>.<p>ಈ ತಂಡಗಳು ತಲಾ ₹ 10 ಸಾವಿರ ನಗದು ಹಾಗೂ ಪಾರಿತೋಷಕ ಪಡೆದವು. ಅಂತಿಮ ಹಂತದ ಸ್ಪರ್ಧೆಯಲ್ಲಿ ಕಲಾ ಕದಂಬ ಆರ್ಟ್ ಸೆಂಟರ್ನ ‘ಅದು’, ಧ್ವನಿ ತಂಡದ ‘ಹತ್ತು ನಾಲ್ಕು ಮೆಟ್ಟಿಲು’, ಹೆಜ್ಜೆ ಥಿಯೇಟರ್ನ ‘ನೀವಾ ಅಥವಾ ನಾವಾ’, ವೀಕೆಂಡ್ ಥಿಯೇಟರ್ನ ‘ರಾಮ ಇಸ್ ಈಕ್ವಲ್ ಟು ರಾಮ’, ಕಲಾರಾಧ್ಯ ತಂಡದ ‘ಸಮಾವಸರ’, ಸಮತಾರಂಗ ತಂಡದ ‘ಚವರಿ’ ಹಾಗೂ ಕಾಜಾಣ ತಂಡದ ‘ಅಲೆಮಾರಿ ಭಾರತ’ ನಾಟಕ ಪ್ರದರ್ಶನ ಕಂಡವು. ಈ ನಾಟಕಗಳು ಪ್ರೇಕ್ಷಕರನ್ನು ರಂಜಿಸುವ ಜತೆಗೆ ಸಾಮಾಜಿಕ ಸಂದೇಶಗಳನ್ನು ಸಾರಿದವು. </p>.<p>ರಂಗಕರ್ಮಿ ಕಲ್ಪನಾ ನಾಗಾನಾಥ್, ಕಲಾಮಾಧ್ಯಮದ ಮುಖ್ಯಸ್ಥೆ ಕೆ. ಪರಮೇಶ್ವರ ಮತ್ತು ಬರಹಗಾರ ಎಸ್. ಗಂಗಾಧರಯ್ಯ ಅವರು ಅಂತಿಮ ಹಂತದ ಸ್ಪರ್ಧೆಯ ತೀರ್ಪುಗಾರರಾಗಿದ್ದರು.</p>.<p>ಆರ್. ನಾಗೇಶ್ ಹೆಸರಿನಲ್ಲಿ ನೀಡುವ ಅತ್ಯುತ್ತಮ ನಿರ್ದೇಶನ ಪ್ರಶಸ್ತಿಯನ್ನು ‘ಅಲೆಮಾರಿ ಭಾರತ’ ನಾಟಕಕ್ಕೆ ಬೇಲೂರು ರಘುನಂದನ್ ಪಡೆದರು. ಅತ್ಯುತ್ತಮ ಸ್ವರಚಿತ ಕಥೆ ಪ್ರಶಸ್ತಿಗೆ ಧ್ವನಿ ತಂಡ, ಸಂಚಾರಿ ವಿಜಯ್ ಹೆಸರಿನಲ್ಲಿ ನೀಡುವ ಅತ್ಯುತ್ತಮ ನಟ ಪ್ರಶಸ್ತಿಗೆ ಪ್ರಭಾಕರ್ ರಾವ್, ಉಮಾಶ್ರೀ ಹೆಸರಿನಲ್ಲಿ ನೀಡುವ ಅತ್ಯುತ್ತಮ ನಟಿ ಪ್ರಶಸ್ತಿಗೆ ಅನುಷಾ ಡಿ.ಎನ್., ಅತ್ಯುತ್ತಮ ನಾಟಕ ವಿನ್ಯಾಸ ಪ್ರಶಸ್ತಿಗೆ ಕಲಾರಾಧ್ಯ ತಂಡದ ಚಂದನ ವಶಿಷ್ಠ ಹಾಗೂ ಅತ್ಯುತ್ತಮ ಭಿತ್ತಿಪತ್ರ ವಿನ್ಯಾಸ ಪ್ರಶಸ್ತಿಗೆ ವೀಕೆಂಡ್ ಥಿಯೇಟರ್ನ ಮಿಥುನ್ ರಾಹುಲ್ ಭಾಜನರಾದರು. ಈ ಪ್ರಶಸ್ತಿಗಳು ತಲಾ ₹ 2,500 ನಗದು ಹಾಗೂ ಪಾರಿತೋಷಕ ಒಳಗೊಂಡಿದೆ. </p>.<p>ಪ್ರಕಾಶಕ ವೀರಕಪುತ್ರ ಶ್ರೀನಿವಾಸ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಜಿಪಿಒ ಚಂದ್ರು, ಕಲಾತ್ಮಕ ನಿರ್ದೇಶಕ ಹನು ರಾಮಸಂಜೀವ, ನಂದೀಶ್ ದೇವ್, ತಾಂತ್ರಿಕ ನಿರ್ದೇಶಕ ಮಂಜು ನಾರಾಯಣ್ ಉಪಸ್ಥಿತರಿದ್ದರು.</p>.<p> <strong>‘ರಂಗಭೂಮಿ ಬೆಳವಣಿಗೆ ಪ್ರಾರಂಭ’</strong></p><p> ‘ಕೋವಿಡ್ ಕಾಣಿಸಿಕೊಂಡ ಸಂದರ್ಭದಲ್ಲಿ ಹಲವಾರು ಕಲಾವಿದರು ಜೀವನವೇ ಮುಗಿದು ಹೋಯಿತೆಂದು ಕೈಚೆಲ್ಲಿದ್ದರು. ಆ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಾ ಪ್ರದರ್ಶನ ಮಾಡಿದ್ದರು. ಕಿರು ನಾಟಕ ಸೇರಿ ವಿವಿಧ ರಂಗ ಚಟುವಟಿಕೆಗಳಿಂದ ಈಗ ಮತ್ತೆ ರಂಗಭೂಮಿ ಬೆಳವಣಿಗೆ ಹೊಂದಲು ಪ್ರಾರಂಭಿಸಿದೆ’ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ತಿಳಿಸಿದರು. ‘ಎರಡು ಗಂಟೆಯ ನಾಟಕಗಳನ್ನು ಮಾಡಲು ಕೆಲ ಕಲಾವಿದರು ಹಿಂಜರಿಯುತ್ತಾರೆ. ಆದರೆ ಕಿರು ನಾಟಕಗಳಲ್ಲಿ ಅದ್ಭುತವಾಗಿ ಅಭಿನಯಿಸುತ್ತಿದ್ದಾರೆ. ಸಣ್ಣ ನಾಟಕದಲ್ಲಿ ದೊಡ್ಡ ವಿಚಾರ ಪ್ರಸ್ತುತಪಡಿಸುವುದು ಕಷ್ಟದ ಕೆಲಸ’ ಎಂದು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>