<p><strong>ಬೆಂಗಳೂರು</strong>: ಮನೆ ಎದುರು ವಾಯುವಿಹಾರ ಮಾಡುತ್ತಿದ್ದ ವೃದ್ಧೆಯೊಬ್ಬರ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>‘ಸುಬ್ರಹ್ಮಣ್ಯಪುರ ನಿವಾಸಿ ಮಂಜುನಾಥ್ ಅಲಿಯಾಸ್ ಮಾಸ್ ಮಂಜ ಹಾಗೂ ಚಿಕ್ಕಮಗಳೂರಿನ ಯತೀಶ್ ಬಂಧಿತರು. ಇವರಿಬ್ಬರು ಆಗಸ್ಟ್ 13ರಂದು ಬೆಳಿಗ್ಗೆ ವೃದ್ಧೆಯ ಸರ ಕಿತ್ತೊಯ್ದಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನೂ ಬಂಧಿಸಲಾಗಿದೆ. 25 ಗ್ರಾಂ ತೂಕದ ಚಿನ್ನದ ಸರ ಹಾಗೂ ಮೂರು ಬೈಕ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.</p>.<p>‘ಮಂಜುನಾಥ್ ಹಾಗೂ ಯತೀಶ್, ಅಪರಾಧ ಹಿನ್ನೆಲೆಯುಳ್ಳವರು. ಇವರ ವಿರುದ್ಧ ರಾಜ್ಯದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ’ ಎಂದರು.</p>.<p><strong>ಜೈಲಿನಲ್ಲಿ ಪರಿಚಯ</strong></p><p>‘ಕೆಲ ಪ್ರಕರಣಗಳಲ್ಲಿ ಇಬ್ಬರನ್ನೂ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಅಲ್ಲಿಯೇ ಅವರಿಬ್ಬರು ಪರಿಚಯವಾಗಿದ್ದರು. ಜಾಮೀನು ಮೇಲೆ ಹೊರಗೆ ಹೋಗುತ್ತಿದ್ದಂತೆ ಕಳ್ಳತನ ಮಾಡೋಣವೆಂದು ಜೈಲಿನಲ್ಲೇ ಸಂಚು ರೂಪಿಸಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.</p>.<p><strong>ಕದ್ದ ಬೈಕ್ನಲ್ಲಿ ಕೃತ್ಯ</strong></p><p> ‘ಒಂದೂವರೆ ತಿಂಗಳ ಹಿಂದೆಯಷ್ಟೇ ಇಬ್ಬರೂ ಜೈಲಿನಿಂದ ಹೊರಗೆ ಬಂದಿದ್ದರು. ಸರಗಳ್ಳತನ ಮಾಡಲು ಸಜ್ಜಾಗಿದ್ದ ಇಬ್ಬರೂ ಚನ್ನಪಟ್ಟಣಕ್ಕೆ ಹೋಗಿ ಬೈಕ್ ಕದ್ದಿದ್ದರು. ಅದೇ ಬೈಕ್ನಲ್ಲಿ ನಗರಕ್ಕೆ ಬಂದಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p>.<p>‘ಯಾವ ಪ್ರದೇಶದಲ್ಲಿ ಸರಗಳ್ಳತನ ಮಾಡಬೇಕು? ಸಿ.ಸಿ.ಟಿ.ವಿ ಕ್ಯಾಮೆರಾಗಳು ಎಲ್ಲೆಲ್ಲಿವೆ? ಎಂಬಿತ್ಯಾದಿ ಮಾಹಿತಿ ಕಲೆಹಾಕಿದ್ದರು. ಮನೆಯಿಂದ ಹೋಗಿ ಕಳ್ಳತನ ಮಾಡಿದರೆ, ಪೊಲೀಸರಿಗೆ ಸುಳಿವು ಸಿಗಬಹುದೆಂದು ತಿಳಿದಿದ್ದರು. ಅದೇ ಕಾರಣಕ್ಕೆ ಆಗಸ್ಟ್ 13ರಂದು ರಾತ್ರಿ ಪಾಳು ಬಿದ್ದ ಮನೆಯೊಂದರಲ್ಲಿ ಉಳಿದುಕೊಂಡಿದ್ದರು.’</p>.<p>‘ಮರುದಿನ ಬೆಳಿಗ್ಗೆ ಅದೇ ಮನೆಯಿಂದ ಗಿರಿನಗರಕ್ಕೆ ಬಂದು ವೃದ್ಧೆಯ ಚಿನ್ನದ ಸರ ಕದ್ದೊಯ್ದಿದ್ದರು. ಬೈಕ್ ಚಲಾಯಿಸುತ್ತಿದ್ದ ಆರೋಪಿ, ಹೆಲ್ಮೆಟ್ ಧರಿಸಿದ್ದ. ಹಿಂಬದಿಯಲ್ಲಿ ಕುಳಿತಿದ್ದ ಇನ್ನೊಬ್ಬ ಆರೋಪಿ, ಮಾಸ್ಕ್ ಮಾತ್ರ ಧರಿಸಿದ್ದ’ ಎಂದು ಹೇಳಿವೆ.</p>.<p><strong>ದೇವರಿಗೆ ಮುಡಿ </strong></p><p>‘ಆರೋಪಿಗಳು ಚಿನ್ನದ ಸರವನ್ನು ಅಡವಿಟ್ಟು, ಹಣ ಪಡೆದಿದ್ದರು. ಕಳ್ಳತನ ಯಶಸ್ವಿಯಾದರೆ ಮುಡಿ ನೀಡುವುದಾಗಿ ಆರೋಪಿ ಮಂಜುನಾಥ್ ಹರಕೆ ಹೊತ್ತಿದ್ದ. ಹೀಗಾಗಿ, ಯತೀಶ್ ಹಾಗೂ ನಾಲ್ವರು ಸ್ನೇಹಿತರ ಜೊತೆ ಕಾರಿನಲ್ಲಿ ಮಲೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಹೋಗಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p>.<p>‘ಮಂಜುನಾಥ್ ಹಾಗೂ ಇತರರು, ದೇವರಿಗೆ ಮುಡಿ ನೀಡಿದ್ದರು. ನಂತರ, ನಾಗಮಲೈಗೆ ಹೋಗಿ ವಾಪಸು ಬೆಂಗಳೂರಿಗೆ ಬಂದಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಮೂಲಗಳು ಹೇಳಿವೆ.</p>.<p><strong>ಬೈಕ್ ಬಿಟ್ಟು 2 ಕಿ.ಮೀ ನಡಿಗೆ</strong></p><p>‘ಕೃತ್ಯದ ಬಗ್ಗೆ ಸುಳಿವು ಸಿಗಬಾರದೆಂದು ಆರೋಪಿಗಳು ವ್ಯವಸ್ಥಿತ ಸಂಚು ರೂಪಿಸಿದ್ದರು. ವೃದ್ಧೆ ಸರ ಕಿತ್ತುಕೊಂಡು ಹಲವೆಡೆ ಸುತ್ತಾಡಿದ್ದ ಅವರು, ರಸ್ತೆ ಪಕ್ಕದಲ್ಲಿ ಬೈಕ್ ನಿಲ್ಲಿಸಿದ್ದರು. ಅಲ್ಲಿಂದ 2 ಕಿ.ಮೀ ನಡೆದುಕೊಂಡು ನಿರ್ಜನ ಪ್ರದೇಶದ ಮೂಲಕ ಪರಾರಿಯಾಗಿದ್ದರು. ಮೊಬೈಲ್ ಸಹ ಬಳಕೆ ಮಾಡುತ್ತಿರಲಿಲ್ಲ’ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಮನೆ ಎದುರು ವಾಯುವಿಹಾರ ಮಾಡುತ್ತಿದ್ದ ವೃದ್ಧೆಯೊಬ್ಬರ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>‘ಸುಬ್ರಹ್ಮಣ್ಯಪುರ ನಿವಾಸಿ ಮಂಜುನಾಥ್ ಅಲಿಯಾಸ್ ಮಾಸ್ ಮಂಜ ಹಾಗೂ ಚಿಕ್ಕಮಗಳೂರಿನ ಯತೀಶ್ ಬಂಧಿತರು. ಇವರಿಬ್ಬರು ಆಗಸ್ಟ್ 13ರಂದು ಬೆಳಿಗ್ಗೆ ವೃದ್ಧೆಯ ಸರ ಕಿತ್ತೊಯ್ದಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನೂ ಬಂಧಿಸಲಾಗಿದೆ. 25 ಗ್ರಾಂ ತೂಕದ ಚಿನ್ನದ ಸರ ಹಾಗೂ ಮೂರು ಬೈಕ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.</p>.<p>‘ಮಂಜುನಾಥ್ ಹಾಗೂ ಯತೀಶ್, ಅಪರಾಧ ಹಿನ್ನೆಲೆಯುಳ್ಳವರು. ಇವರ ವಿರುದ್ಧ ರಾಜ್ಯದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ’ ಎಂದರು.</p>.<p><strong>ಜೈಲಿನಲ್ಲಿ ಪರಿಚಯ</strong></p><p>‘ಕೆಲ ಪ್ರಕರಣಗಳಲ್ಲಿ ಇಬ್ಬರನ್ನೂ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಅಲ್ಲಿಯೇ ಅವರಿಬ್ಬರು ಪರಿಚಯವಾಗಿದ್ದರು. ಜಾಮೀನು ಮೇಲೆ ಹೊರಗೆ ಹೋಗುತ್ತಿದ್ದಂತೆ ಕಳ್ಳತನ ಮಾಡೋಣವೆಂದು ಜೈಲಿನಲ್ಲೇ ಸಂಚು ರೂಪಿಸಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.</p>.<p><strong>ಕದ್ದ ಬೈಕ್ನಲ್ಲಿ ಕೃತ್ಯ</strong></p><p> ‘ಒಂದೂವರೆ ತಿಂಗಳ ಹಿಂದೆಯಷ್ಟೇ ಇಬ್ಬರೂ ಜೈಲಿನಿಂದ ಹೊರಗೆ ಬಂದಿದ್ದರು. ಸರಗಳ್ಳತನ ಮಾಡಲು ಸಜ್ಜಾಗಿದ್ದ ಇಬ್ಬರೂ ಚನ್ನಪಟ್ಟಣಕ್ಕೆ ಹೋಗಿ ಬೈಕ್ ಕದ್ದಿದ್ದರು. ಅದೇ ಬೈಕ್ನಲ್ಲಿ ನಗರಕ್ಕೆ ಬಂದಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p>.<p>‘ಯಾವ ಪ್ರದೇಶದಲ್ಲಿ ಸರಗಳ್ಳತನ ಮಾಡಬೇಕು? ಸಿ.ಸಿ.ಟಿ.ವಿ ಕ್ಯಾಮೆರಾಗಳು ಎಲ್ಲೆಲ್ಲಿವೆ? ಎಂಬಿತ್ಯಾದಿ ಮಾಹಿತಿ ಕಲೆಹಾಕಿದ್ದರು. ಮನೆಯಿಂದ ಹೋಗಿ ಕಳ್ಳತನ ಮಾಡಿದರೆ, ಪೊಲೀಸರಿಗೆ ಸುಳಿವು ಸಿಗಬಹುದೆಂದು ತಿಳಿದಿದ್ದರು. ಅದೇ ಕಾರಣಕ್ಕೆ ಆಗಸ್ಟ್ 13ರಂದು ರಾತ್ರಿ ಪಾಳು ಬಿದ್ದ ಮನೆಯೊಂದರಲ್ಲಿ ಉಳಿದುಕೊಂಡಿದ್ದರು.’</p>.<p>‘ಮರುದಿನ ಬೆಳಿಗ್ಗೆ ಅದೇ ಮನೆಯಿಂದ ಗಿರಿನಗರಕ್ಕೆ ಬಂದು ವೃದ್ಧೆಯ ಚಿನ್ನದ ಸರ ಕದ್ದೊಯ್ದಿದ್ದರು. ಬೈಕ್ ಚಲಾಯಿಸುತ್ತಿದ್ದ ಆರೋಪಿ, ಹೆಲ್ಮೆಟ್ ಧರಿಸಿದ್ದ. ಹಿಂಬದಿಯಲ್ಲಿ ಕುಳಿತಿದ್ದ ಇನ್ನೊಬ್ಬ ಆರೋಪಿ, ಮಾಸ್ಕ್ ಮಾತ್ರ ಧರಿಸಿದ್ದ’ ಎಂದು ಹೇಳಿವೆ.</p>.<p><strong>ದೇವರಿಗೆ ಮುಡಿ </strong></p><p>‘ಆರೋಪಿಗಳು ಚಿನ್ನದ ಸರವನ್ನು ಅಡವಿಟ್ಟು, ಹಣ ಪಡೆದಿದ್ದರು. ಕಳ್ಳತನ ಯಶಸ್ವಿಯಾದರೆ ಮುಡಿ ನೀಡುವುದಾಗಿ ಆರೋಪಿ ಮಂಜುನಾಥ್ ಹರಕೆ ಹೊತ್ತಿದ್ದ. ಹೀಗಾಗಿ, ಯತೀಶ್ ಹಾಗೂ ನಾಲ್ವರು ಸ್ನೇಹಿತರ ಜೊತೆ ಕಾರಿನಲ್ಲಿ ಮಲೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಹೋಗಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p>.<p>‘ಮಂಜುನಾಥ್ ಹಾಗೂ ಇತರರು, ದೇವರಿಗೆ ಮುಡಿ ನೀಡಿದ್ದರು. ನಂತರ, ನಾಗಮಲೈಗೆ ಹೋಗಿ ವಾಪಸು ಬೆಂಗಳೂರಿಗೆ ಬಂದಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಮೂಲಗಳು ಹೇಳಿವೆ.</p>.<p><strong>ಬೈಕ್ ಬಿಟ್ಟು 2 ಕಿ.ಮೀ ನಡಿಗೆ</strong></p><p>‘ಕೃತ್ಯದ ಬಗ್ಗೆ ಸುಳಿವು ಸಿಗಬಾರದೆಂದು ಆರೋಪಿಗಳು ವ್ಯವಸ್ಥಿತ ಸಂಚು ರೂಪಿಸಿದ್ದರು. ವೃದ್ಧೆ ಸರ ಕಿತ್ತುಕೊಂಡು ಹಲವೆಡೆ ಸುತ್ತಾಡಿದ್ದ ಅವರು, ರಸ್ತೆ ಪಕ್ಕದಲ್ಲಿ ಬೈಕ್ ನಿಲ್ಲಿಸಿದ್ದರು. ಅಲ್ಲಿಂದ 2 ಕಿ.ಮೀ ನಡೆದುಕೊಂಡು ನಿರ್ಜನ ಪ್ರದೇಶದ ಮೂಲಕ ಪರಾರಿಯಾಗಿದ್ದರು. ಮೊಬೈಲ್ ಸಹ ಬಳಕೆ ಮಾಡುತ್ತಿರಲಿಲ್ಲ’ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>