<p><strong>ಬೆಂಗಳೂರು:</strong> ‘ಜೇಡರದಾಸಿಮಯ್ಯ ಅವರು ಬದುಕನ್ನು ಕಾಯಕದೊಂದಿಗೆ ಆಧ್ಯಾತ್ಮಿಕತೆಯ ನೆಲೆಗಟ್ಟಿನಲ್ಲಿ ಕಟ್ಟಿಕೊಟ್ಟಿದ್ದರು’ ಎಂದು ಕನ್ನಡ ಸಂಘರ್ಷ ಸಮಿತಿ ಅಧ್ಯಕ್ಷ ನಾಗರಾಜಸ್ವಾಮಿ ಹೇಳಿದರು.</p>.<p>ವಚನಜ್ಯೋತಿ ಬಳಗ, ಆಯೋಜಿಸಿದ್ದ ಜೇಡರದಾಸಿಮಯ್ಯ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ‘ಜೇಡರದಾಸಿಮಯ್ಯ ಅವರು ಮೌಲ್ಯಯುತ ಬದುಕಿನ ಬಗ್ಗೆ ತಿಳಿಸಿ ಮಾದರಿ ಆಗಿದ್ದರು’ ಎಂದು ಬಣ್ಣಿಸಿದರು.</p>.<p>ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಮಾತನಾಡಿ, ಆದ್ಯ ವಚನಕಾರ ಎಂದು ಬಣ್ಣಿತರಾಗಿರುವ ಜೇಡರದಾಸಿಮಯ್ಯ ಅವರು ಅತ್ಯಂತ ಆದರ್ಶವಾಗಿ ಬದುಕಿದ್ದರು ಎಂದು ತಿಳಿಸಿದರು.</p>.<p>‘ಜೇಡರದಾಸಿಮಯ್ಯನವರು ಕನ್ನಡಕ್ಕೆ ನೀಡಿದ ಕೊಡುಗೆ’ ವಿಚಾರ ಸಂಕಿರಣದಲ್ಲಿ ಬನಹಟ್ಟಿಯ ಶಕುಂತಲ ಬಾಗಲಕೋಟ ಅವರು ನೇಕಾರರ ಶಿವ ಜೇಡರದಾಸಿಮಯ್ಯ ಕುರಿತು, ಅಂಕಣಗಾರ ಪ್ರಭು ಇಸುವನಹಳ್ಳಿಯವರು ಸೂಳ್ನೂಡಿಕಾರ ಜೇಡರದಾಸಿಮಯ್ಯ ಕುರಿತು, ಕವಿ ಗುಂಡೀಗೆರೆ ವಿಶ್ವನಾಥ್ ರೂಪಕ ಚಕ್ರವರ್ತಿ ಜೇಡರದಾಸಿಮಯ್ಯ ಕುರಿತು ವಿಚಾರಗಳನ್ನು ಮಂಡಿಸಿದರು.</p>.<p>ಬನಹಟ್ಟಿಯ ಶಕುಂತಲ ಬಾಗಲಕೋಟ್, ಪ್ರಭು ಇಸುವನಹಳ್ಳಿ, ಗುಂಡೀಗೆರೆ ವಿಶ್ವನಾಥ್ ಅವರು ವಿಚಾರ ಮಂಡಿಸಿದರು. ಮೀನಾಕ್ಷಿ ಮೇಟಿ, ಟಿ.ಎಂ. ಜಾನಕಿ, ಚಿ. ದಿಶಾ ಹಾಗೂ ವಚನ ಕಲಿಕೆಯ ವಿದ್ಯಾರ್ಥಿಗಳು ಜೇಡರದಾಸಿಮಯ್ಯ ಅವರ ವಚನಗಳ ಗಾಯನ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಜೇಡರದಾಸಿಮಯ್ಯ ಅವರು ಬದುಕನ್ನು ಕಾಯಕದೊಂದಿಗೆ ಆಧ್ಯಾತ್ಮಿಕತೆಯ ನೆಲೆಗಟ್ಟಿನಲ್ಲಿ ಕಟ್ಟಿಕೊಟ್ಟಿದ್ದರು’ ಎಂದು ಕನ್ನಡ ಸಂಘರ್ಷ ಸಮಿತಿ ಅಧ್ಯಕ್ಷ ನಾಗರಾಜಸ್ವಾಮಿ ಹೇಳಿದರು.</p>.<p>ವಚನಜ್ಯೋತಿ ಬಳಗ, ಆಯೋಜಿಸಿದ್ದ ಜೇಡರದಾಸಿಮಯ್ಯ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ‘ಜೇಡರದಾಸಿಮಯ್ಯ ಅವರು ಮೌಲ್ಯಯುತ ಬದುಕಿನ ಬಗ್ಗೆ ತಿಳಿಸಿ ಮಾದರಿ ಆಗಿದ್ದರು’ ಎಂದು ಬಣ್ಣಿಸಿದರು.</p>.<p>ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಮಾತನಾಡಿ, ಆದ್ಯ ವಚನಕಾರ ಎಂದು ಬಣ್ಣಿತರಾಗಿರುವ ಜೇಡರದಾಸಿಮಯ್ಯ ಅವರು ಅತ್ಯಂತ ಆದರ್ಶವಾಗಿ ಬದುಕಿದ್ದರು ಎಂದು ತಿಳಿಸಿದರು.</p>.<p>‘ಜೇಡರದಾಸಿಮಯ್ಯನವರು ಕನ್ನಡಕ್ಕೆ ನೀಡಿದ ಕೊಡುಗೆ’ ವಿಚಾರ ಸಂಕಿರಣದಲ್ಲಿ ಬನಹಟ್ಟಿಯ ಶಕುಂತಲ ಬಾಗಲಕೋಟ ಅವರು ನೇಕಾರರ ಶಿವ ಜೇಡರದಾಸಿಮಯ್ಯ ಕುರಿತು, ಅಂಕಣಗಾರ ಪ್ರಭು ಇಸುವನಹಳ್ಳಿಯವರು ಸೂಳ್ನೂಡಿಕಾರ ಜೇಡರದಾಸಿಮಯ್ಯ ಕುರಿತು, ಕವಿ ಗುಂಡೀಗೆರೆ ವಿಶ್ವನಾಥ್ ರೂಪಕ ಚಕ್ರವರ್ತಿ ಜೇಡರದಾಸಿಮಯ್ಯ ಕುರಿತು ವಿಚಾರಗಳನ್ನು ಮಂಡಿಸಿದರು.</p>.<p>ಬನಹಟ್ಟಿಯ ಶಕುಂತಲ ಬಾಗಲಕೋಟ್, ಪ್ರಭು ಇಸುವನಹಳ್ಳಿ, ಗುಂಡೀಗೆರೆ ವಿಶ್ವನಾಥ್ ಅವರು ವಿಚಾರ ಮಂಡಿಸಿದರು. ಮೀನಾಕ್ಷಿ ಮೇಟಿ, ಟಿ.ಎಂ. ಜಾನಕಿ, ಚಿ. ದಿಶಾ ಹಾಗೂ ವಚನ ಕಲಿಕೆಯ ವಿದ್ಯಾರ್ಥಿಗಳು ಜೇಡರದಾಸಿಮಯ್ಯ ಅವರ ವಚನಗಳ ಗಾಯನ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>