<p><strong>ಬೆಂಗಳೂರು</strong>: ರಾಮೇಶ್ವರ, ಕನ್ಯಾಕುಮಾರಿ, ಮದುರೈ, ತಿರುವನಂತಪುರಕ್ಕೆ ಕರ್ನಾಟಕ ಭಾರತ್ ಗೌರವ್ ದಕ್ಷಿಣ ಯಾತ್ರೆಯು ಜ.18ರಂದು ಆರಂಭಗೊಳ್ಳಲಿದೆ.</p>.<p>ದಕ್ಷಿಣ ಯಾತ್ರಾ ವಿಶೇಷ ರೈಲು ಜ.18ರಂದು ಹೊರಡಲಿದ್ದು, ಜ.23ರಂದು ವಾಪಸ್ಸಾಗಲಿದೆ. ಜ.30ಕ್ಕೆ ಹೊರಡುವ ರೈಲು ಫೆ.4ಕ್ಕೆ ವಾಪಸ್ಸಾಗಲಿದೆ. ಪ್ರವಾಸ ಬಯಸುವವರು ಐಆರ್ಸಿಟಿಸಿ/ಐಟಿಎಂಎಸ್ ವೆಬ್ಸೈಟ್ ಮೂಲಕ ಬುಕ್ಕಿಂಗ್ ಮಾಡಿಕೊಳ್ಳಬಹುದು ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.</p>.<p>ಅತಿ ಕಡಿಮೆ ವೆಚ್ಚದ ಒಂದು ವಾರದ ಯಾತ್ರೆಯು ಇದಾಗಿದ್ದು, ರಾಮೇಶ್ವರ ದೇವಾಲಯ, ಭಗವತಿ ದೇವಾಲಯ, ಮೀನಾಕ್ಷಿ ದೇವಾಲಯ, ಅನಂತಪದ್ಮನಾಭ ದೇವಾಲಯಗಳ ದರ್ಶನ ಪಡೆಯಬಹುದು. ಯಾತ್ರೆಯ ಪ್ಯಾಕೇಜ್ ಮೊತ್ತ ₹ 15,000 ಆಗಿದ್ದು, ಕರ್ನಾಟಕ ಸರ್ಕಾರವು ₹ 5,000 ಸಹಾಯಧನ ನೀಡಲಿದೆ. ಯಾತ್ರಿಗಳು ₹ 10,000 ಪಾವತಿಸಬೇಕು. ಯಾತ್ರೆಯ ವಿಶೇಷ ರೈಲು ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ತುಮಕೂರು, ಯಶವಂತಪುರದಲ್ಲಿ ನಿಲುಗಡೆ ನೀಡಲಿದೆ. ಅಲ್ಲಿ ಯಾತ್ರಿಗಳಿಗೆ ಹತ್ತಲು ಮತ್ತು ಇಳಿಯಲು ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ರಾಮೇಶ್ವರ, ಕನ್ಯಾಕುಮಾರಿ, ಮದುರೈ, ತಿರುವನಂತಪುರಕ್ಕೆ ಕರ್ನಾಟಕ ಭಾರತ್ ಗೌರವ್ ದಕ್ಷಿಣ ಯಾತ್ರೆಯು ಜ.18ರಂದು ಆರಂಭಗೊಳ್ಳಲಿದೆ.</p>.<p>ದಕ್ಷಿಣ ಯಾತ್ರಾ ವಿಶೇಷ ರೈಲು ಜ.18ರಂದು ಹೊರಡಲಿದ್ದು, ಜ.23ರಂದು ವಾಪಸ್ಸಾಗಲಿದೆ. ಜ.30ಕ್ಕೆ ಹೊರಡುವ ರೈಲು ಫೆ.4ಕ್ಕೆ ವಾಪಸ್ಸಾಗಲಿದೆ. ಪ್ರವಾಸ ಬಯಸುವವರು ಐಆರ್ಸಿಟಿಸಿ/ಐಟಿಎಂಎಸ್ ವೆಬ್ಸೈಟ್ ಮೂಲಕ ಬುಕ್ಕಿಂಗ್ ಮಾಡಿಕೊಳ್ಳಬಹುದು ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.</p>.<p>ಅತಿ ಕಡಿಮೆ ವೆಚ್ಚದ ಒಂದು ವಾರದ ಯಾತ್ರೆಯು ಇದಾಗಿದ್ದು, ರಾಮೇಶ್ವರ ದೇವಾಲಯ, ಭಗವತಿ ದೇವಾಲಯ, ಮೀನಾಕ್ಷಿ ದೇವಾಲಯ, ಅನಂತಪದ್ಮನಾಭ ದೇವಾಲಯಗಳ ದರ್ಶನ ಪಡೆಯಬಹುದು. ಯಾತ್ರೆಯ ಪ್ಯಾಕೇಜ್ ಮೊತ್ತ ₹ 15,000 ಆಗಿದ್ದು, ಕರ್ನಾಟಕ ಸರ್ಕಾರವು ₹ 5,000 ಸಹಾಯಧನ ನೀಡಲಿದೆ. ಯಾತ್ರಿಗಳು ₹ 10,000 ಪಾವತಿಸಬೇಕು. ಯಾತ್ರೆಯ ವಿಶೇಷ ರೈಲು ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ತುಮಕೂರು, ಯಶವಂತಪುರದಲ್ಲಿ ನಿಲುಗಡೆ ನೀಡಲಿದೆ. ಅಲ್ಲಿ ಯಾತ್ರಿಗಳಿಗೆ ಹತ್ತಲು ಮತ್ತು ಇಳಿಯಲು ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>