<p><strong>ಬೆಂಗಳೂರು</strong>: ಕರ್ನಾಟಕ ಜಾನಪದ ಪರಿಷತ್ತು ಮತ್ತು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಜುಲೈ 27ರಂದು 34ನೇ ವರ್ಷದ ರಾಜ್ಯ ಮಟ್ಟದ ಗಾಳಿಪಟ ಉತ್ಸವ ಮತ್ತು ಸ್ಪರ್ಧೆಯನ್ನು ಜಿಕೆವಿಕೆ ಆವರಣದ ಕೃಷಿ ಮೇಳ ಮೈದಾನದಲ್ಲಿ ಆಯೋಜಿಸಲಾಗಿದೆ.</p>.<p>ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳ ಸ್ಪರ್ಧಿಗಳು ಭಾಗವಹಿಸುವರು. ಜತೆಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ತಂಡಗಳಿಗೂ ಆಹ್ವಾನ ನೀಡಲಾಗಿದೆ. ಗ್ರಾಮೀಣ ಮೂಲದ ಬೋರಂಟಿ, ಗುಂಡು ಚಕ್ರದಂತಹ ಪಟಗಳು, ಸರಮಾಲೆ ಪಟ, ಎರಡು ದಾರಗಳ ಪಟಗಳು ಮನರಂಜಿಸಲಿವೆ. ಎಲ್ಲರಿಗೂ ಪ್ರವೇಶ ಉಚಿತ ಎಂದು ಪರಿಷತ್ ಅಧ್ಯಕ್ಷ ಪ್ರೊ. ಹಿ.ಚಿ.ಬೋರಲಿಂಗಯ್ಯ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>14 ವರ್ಷದೊಳಗಿನ (ಬಾಲಕರು ಮತ್ತು ಬಾಲಕಿಯರು) ಹಾಗೂ 15ರಿಂದ 22 ವರ್ಷದೊಳಗಿನವರಿಗೆ (ಯುವಕ, ಯುವತಿಯರು) ಪ್ರತ್ಯೇಕ ಸ್ಪರ್ಧೆ ಆಯೋಜಿಸಲಾಗಿದೆ. ಪ್ರತಿ ವಿಭಾಗಕ್ಕೂ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಗುವುದು. ಅತ್ಯುತ್ತಮ ಸಂದೇಶ ಮತ್ತು ಸುಂದರ ಗಾಳಿಪಟ ಪ್ರದರ್ಶನಕ್ಕೆ (22 ವರ್ಷ ಮೇಲ್ಪಟ್ಟವರಿಗೆ) ‘ನಾಡೋಜ ಎಚ್.ಎಲ್.ನಾಗೇಗೌಡ’ ಹೆಸರಿನಲ್ಲಿ ಪಾರಿತೋಷಕ ನೀಡಲಾಗುವುದು ಎಂದು ವಿವರಿಸಿದರು.</p>.<p>ಸ್ಪರ್ಧೆಯಲ್ಲಿ ಭಾಗವಹಿಸುವವರು ಅಂದು ಬೆಳಿಗ್ಗೆ 9 ಗಂಟೆಗೆ ಸ್ಥಳದಲ್ಲಿಯೇ ಹೆಸರು ನೋಂದಾಯಿಸಿಕೊಳ್ಳಬೇಕು. ಸ್ಪರ್ಧಿಗಳು ಮತ್ತೊಬ್ಬರ ದಾರಗಳನ್ನು ಕತ್ತರಿಸುವ ‘ಮಾಂಜ’ಗಳನ್ನು ಬಳಸುವಂತಿಲ್ಲ. ವಯಸ್ಸಿನ ದಾಖಲಾತಿಗೆ ಆಧಾರ್ ಕಾರ್ಡ್ ತರಬೇಕು ಎಂದು ತಿಳಿಸಿದರು.</p>.<p><strong>ಡಿಪ್ಲೊಮಾ ಕೋರ್ಸ್</strong>: ಜಾನಪದ ಲೋಕದಲ್ಲಿ ಜಾನಪದ ಕಲೆಗಳ ಕುರಿತು ಒಂದು ವರ್ಷದ ಡಿಪ್ಲೊಮಾ ಕೋರ್ಸ್ ಮಾಡಬಹುದು. ಪ್ರಸಕ್ತ ವರ್ಷದಿಂದ 12 ಮಂದಿಗೆ ಪಿಎಚ್.ಡಿ ಮಾಡಲು ಅವಕಾಶ ಇದೆ. ಇದಕ್ಕೆ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಮಾನ್ಯತೆ ಪಡೆಯಲಾಗಿದೆ ಎಂದರು.</p>.<p><strong>ಕೃಷಿ ಸಂತೆ</strong>: ಕೃಷಿ ವಿಶ್ವವಿದ್ಯಾಲಯದ ಉತ್ಪನ್ನಗಳ ಕುರಿತು ರೈತರಲ್ಲಿ ಅರಿವು ಮೂಡಿಸಲು ಜುಲೈ 27ರಂದು ಬೆಳಿಗ್ಗೆ 6.30ರಿಂದ ಸಂಜೆ 4ರವರೆಗೆ ಜೆ.ಕೆ.ವಿ.ಕೆ ಆವರಣದ ಗಣೇಶ ದೇವಸ್ಥಾನದ ಹತ್ತಿರ ‘ಕೃಷಿ ಸಂತೆ‘ಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಎ.ಎಲ್.ಮಧುಪ್ರಸಾದ್ ಹೇಳಿದರು.</p>.<p>ವಿವಿಧ ತಳಿಗಳ ಬಿತ್ತನೆ ಬೀಜಗಳು, ತೋಟಗಾರಿಕೆ, ಸುಗಂಧ ಮತ್ತು ಔಷಧೀಯ ಸಸ್ಯಗಳು, ಜೈವಿಕ ಕೀಟನಾಶಕಗಳು, ಜೈವಿಕ ಗೊಬ್ಬರಗಳು, ಕೃಷಿ ಯಂತ್ರೋಪಕರಣಗಳು, ಎರೆ ಗೊಬ್ಬರ, ಜೇನುತುಪ್ಪ, ರೇಷ್ಮೆಗೂಡಿನ ಕರಕುಶಲ ಉತ್ಪನ್ನಗಳು, ಸಾಬೂನು, ಮುಖಕ್ಕೆ ಹಚ್ಚುವ ಕ್ರೀಮ್, ತರಕಾರಿ ಬೀಜಗಳ ಪ್ಯಾಕೆಟ್, ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳು, ಪೌಷ್ಟಿಕ ಲಡ್ಡು, ಬೇಕರಿ ಉತ್ಪನ್ನಗಳು, ತಿಂಡಿ–ತಿನಿಸುಗಳ ಮಿಶ್ರಣ, ಅರಿಶಿಣ, ಹುಣಸೆ, ತೆಂಗಿನ ಕಾಯಿ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇದೆ ಎಂದರು.</p>.<p>ಗೋಷ್ಠಿಯಲ್ಲಿ ಕರ್ನಾಟಕ ಜಾನಪದ ಪರಿಷತ್ನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್, ಜಿ.ಕೆ.ವಿ.ಕೆಯ ಶಿಕ್ಷಣ ನಿರ್ದೇಶಕ ಕೆ.ಸಿ.ನಾರಾಯಣಸ್ವಾಮಿ, ಡಾ.ಶಿವರಾಂ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕರ್ನಾಟಕ ಜಾನಪದ ಪರಿಷತ್ತು ಮತ್ತು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಜುಲೈ 27ರಂದು 34ನೇ ವರ್ಷದ ರಾಜ್ಯ ಮಟ್ಟದ ಗಾಳಿಪಟ ಉತ್ಸವ ಮತ್ತು ಸ್ಪರ್ಧೆಯನ್ನು ಜಿಕೆವಿಕೆ ಆವರಣದ ಕೃಷಿ ಮೇಳ ಮೈದಾನದಲ್ಲಿ ಆಯೋಜಿಸಲಾಗಿದೆ.</p>.<p>ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳ ಸ್ಪರ್ಧಿಗಳು ಭಾಗವಹಿಸುವರು. ಜತೆಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ತಂಡಗಳಿಗೂ ಆಹ್ವಾನ ನೀಡಲಾಗಿದೆ. ಗ್ರಾಮೀಣ ಮೂಲದ ಬೋರಂಟಿ, ಗುಂಡು ಚಕ್ರದಂತಹ ಪಟಗಳು, ಸರಮಾಲೆ ಪಟ, ಎರಡು ದಾರಗಳ ಪಟಗಳು ಮನರಂಜಿಸಲಿವೆ. ಎಲ್ಲರಿಗೂ ಪ್ರವೇಶ ಉಚಿತ ಎಂದು ಪರಿಷತ್ ಅಧ್ಯಕ್ಷ ಪ್ರೊ. ಹಿ.ಚಿ.ಬೋರಲಿಂಗಯ್ಯ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>14 ವರ್ಷದೊಳಗಿನ (ಬಾಲಕರು ಮತ್ತು ಬಾಲಕಿಯರು) ಹಾಗೂ 15ರಿಂದ 22 ವರ್ಷದೊಳಗಿನವರಿಗೆ (ಯುವಕ, ಯುವತಿಯರು) ಪ್ರತ್ಯೇಕ ಸ್ಪರ್ಧೆ ಆಯೋಜಿಸಲಾಗಿದೆ. ಪ್ರತಿ ವಿಭಾಗಕ್ಕೂ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಗುವುದು. ಅತ್ಯುತ್ತಮ ಸಂದೇಶ ಮತ್ತು ಸುಂದರ ಗಾಳಿಪಟ ಪ್ರದರ್ಶನಕ್ಕೆ (22 ವರ್ಷ ಮೇಲ್ಪಟ್ಟವರಿಗೆ) ‘ನಾಡೋಜ ಎಚ್.ಎಲ್.ನಾಗೇಗೌಡ’ ಹೆಸರಿನಲ್ಲಿ ಪಾರಿತೋಷಕ ನೀಡಲಾಗುವುದು ಎಂದು ವಿವರಿಸಿದರು.</p>.<p>ಸ್ಪರ್ಧೆಯಲ್ಲಿ ಭಾಗವಹಿಸುವವರು ಅಂದು ಬೆಳಿಗ್ಗೆ 9 ಗಂಟೆಗೆ ಸ್ಥಳದಲ್ಲಿಯೇ ಹೆಸರು ನೋಂದಾಯಿಸಿಕೊಳ್ಳಬೇಕು. ಸ್ಪರ್ಧಿಗಳು ಮತ್ತೊಬ್ಬರ ದಾರಗಳನ್ನು ಕತ್ತರಿಸುವ ‘ಮಾಂಜ’ಗಳನ್ನು ಬಳಸುವಂತಿಲ್ಲ. ವಯಸ್ಸಿನ ದಾಖಲಾತಿಗೆ ಆಧಾರ್ ಕಾರ್ಡ್ ತರಬೇಕು ಎಂದು ತಿಳಿಸಿದರು.</p>.<p><strong>ಡಿಪ್ಲೊಮಾ ಕೋರ್ಸ್</strong>: ಜಾನಪದ ಲೋಕದಲ್ಲಿ ಜಾನಪದ ಕಲೆಗಳ ಕುರಿತು ಒಂದು ವರ್ಷದ ಡಿಪ್ಲೊಮಾ ಕೋರ್ಸ್ ಮಾಡಬಹುದು. ಪ್ರಸಕ್ತ ವರ್ಷದಿಂದ 12 ಮಂದಿಗೆ ಪಿಎಚ್.ಡಿ ಮಾಡಲು ಅವಕಾಶ ಇದೆ. ಇದಕ್ಕೆ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಮಾನ್ಯತೆ ಪಡೆಯಲಾಗಿದೆ ಎಂದರು.</p>.<p><strong>ಕೃಷಿ ಸಂತೆ</strong>: ಕೃಷಿ ವಿಶ್ವವಿದ್ಯಾಲಯದ ಉತ್ಪನ್ನಗಳ ಕುರಿತು ರೈತರಲ್ಲಿ ಅರಿವು ಮೂಡಿಸಲು ಜುಲೈ 27ರಂದು ಬೆಳಿಗ್ಗೆ 6.30ರಿಂದ ಸಂಜೆ 4ರವರೆಗೆ ಜೆ.ಕೆ.ವಿ.ಕೆ ಆವರಣದ ಗಣೇಶ ದೇವಸ್ಥಾನದ ಹತ್ತಿರ ‘ಕೃಷಿ ಸಂತೆ‘ಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಎ.ಎಲ್.ಮಧುಪ್ರಸಾದ್ ಹೇಳಿದರು.</p>.<p>ವಿವಿಧ ತಳಿಗಳ ಬಿತ್ತನೆ ಬೀಜಗಳು, ತೋಟಗಾರಿಕೆ, ಸುಗಂಧ ಮತ್ತು ಔಷಧೀಯ ಸಸ್ಯಗಳು, ಜೈವಿಕ ಕೀಟನಾಶಕಗಳು, ಜೈವಿಕ ಗೊಬ್ಬರಗಳು, ಕೃಷಿ ಯಂತ್ರೋಪಕರಣಗಳು, ಎರೆ ಗೊಬ್ಬರ, ಜೇನುತುಪ್ಪ, ರೇಷ್ಮೆಗೂಡಿನ ಕರಕುಶಲ ಉತ್ಪನ್ನಗಳು, ಸಾಬೂನು, ಮುಖಕ್ಕೆ ಹಚ್ಚುವ ಕ್ರೀಮ್, ತರಕಾರಿ ಬೀಜಗಳ ಪ್ಯಾಕೆಟ್, ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳು, ಪೌಷ್ಟಿಕ ಲಡ್ಡು, ಬೇಕರಿ ಉತ್ಪನ್ನಗಳು, ತಿಂಡಿ–ತಿನಿಸುಗಳ ಮಿಶ್ರಣ, ಅರಿಶಿಣ, ಹುಣಸೆ, ತೆಂಗಿನ ಕಾಯಿ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇದೆ ಎಂದರು.</p>.<p>ಗೋಷ್ಠಿಯಲ್ಲಿ ಕರ್ನಾಟಕ ಜಾನಪದ ಪರಿಷತ್ನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್, ಜಿ.ಕೆ.ವಿ.ಕೆಯ ಶಿಕ್ಷಣ ನಿರ್ದೇಶಕ ಕೆ.ಸಿ.ನಾರಾಯಣಸ್ವಾಮಿ, ಡಾ.ಶಿವರಾಂ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>