<p><strong>ಬೆಂಗಳೂರು</strong>: ರಾಜಕಾರಣಿಗಳೂ ಸೇರಿದಂತೆ ಸಾರ್ವಜನಿಕ ರಂಗದಲ್ಲಿ ಇರುವವರ ಜೀವನ ಹೇಗಿರಬೇಕು ಎಂಬುದಕ್ಕೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಬದುಕೇ ಪಾಠ ಎಂದು ಮಾಜಿ ಶಾಸಕ ಡಿ.ಆರ್. ಪಾಟೀಲ ತಿಳಿಸಿದರು.</p>.<p>ಎಂ.ಕೆ. ಕೆಂಪೇಗೌಡ ಅವರು ಕನ್ನಡಕ್ಕೆ ಭಾಷಾಂತರಿಸಿದ ಡಿ.ಆರ್. ಮಾಂಕೇಕರ್ ಅವರ ‘ಲಾಲ್ ಬಹದ್ದೂರ್ ಶಾಸ್ತ್ರಿ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಗುರುವಾರ ಅವರು ಮಾತನಾಡಿದರು.</p>.<p>ಮನುಷ್ಯನಿಗೆ ಶಕ್ತಿ ಬರುವುದು ವ್ಯಕ್ತಿತ್ವ, ಚಾರಿತ್ರ್ಯಗಳಿಂದ ಹೊರತು ಬುದ್ಧಿವಂತಿಕೆಯಿಂದಲ್ಲ. ಜನರು ಹೃದಯವಂತರನ್ನು ಗೌರವಿಸುತ್ತಾರೆ. ಗಾಂಧೀಜಿ, ಶಾಸ್ತ್ರಿ ಇಂಥ ಗೌರವಕ್ಕೆ ಪಾತ್ರರಾದವರು. ಗ್ರಾಮೀಣ ಜನರ ಬದುಕಿನಲ್ಲಿ ಈ ವ್ಯಕ್ತಿತ್ವ ಉಳಿದಿದೆ ಎಂದು ತಿಳಿಸಿದರು.</p>.<p>ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳು ಈಗಿರುವುದಕ್ಕಿಂತ ಕೆಳಗೆ ಹೋಗಲು ಸಾಧ್ಯವಿಲ್ಲ. ಅಷ್ಟು ಕೆಟ್ಟು ಹೋಗಿದೆ. ಇನ್ನೇನಿದ್ದರೂ ಇದರಿಂದ ಹೊರಬರುವ ದಾರಿ ಕಂಡುಕೊಳ್ಳುವುದು ಮಾತ್ರ ಉಳಿದಿರುವುದು. ಗಾಂಧೀಜಿಯ ಗ್ರಾಮಸ್ವರಾಜ್ಯದ ಕಲ್ಪನೆಯನ್ನು ಮತ್ತೆ ಅನುಷ್ಠಾನಕ್ಕೆ ತರುವುದೇ ಪರ್ಯಾಯ ಮಾರ್ಗ. ಸಂಪತ್ತು ಕೆಲವೇ ಜನರ ಕೈಯಲ್ಲಿರಬಾರದು. ಮಾಧ್ಯಮಗಳು ಕೂಡ ಶ್ರೀಮಂತರನ್ನು ವೈಭವೀಕರಿಸುವುದನ್ನು ಬಿಡಬೇಕು ಎಂದು ಸಲಹೆ ನೀಡಿದರು.</p>.<p>ಪ್ರಾಧ್ಯಾಪಕ ಎಂ.ಕೃಷ್ಣೇಗೌಡ ಅವರು ಕೃತಿ ಪರಿಚಯ ಮಾಡಿ, ‘ಕಾನೂನುಗಳನ್ನು ಯಾರೇ ಮಾಡಲಿ. ಅದನ್ನು ಪಾಲಿಸಬೇಕು ಎಂಬುದು ಶಾಸ್ತ್ರಿಯವರ ನಿಲುವು. ಈ ಕೃತಿಯಲ್ಲಿ ಆರಂಭದಿಂದ ಅಂತ್ಯದವರೆಗೂ ದಾಖಲಾಗಿರುವ ವಿವಿಧ ಘಟನೆಗಳು ಅದನ್ನು ಹೇಳುತ್ತಿವೆ. ಪ್ರಾಮಾಣಿಕತೆ, ಅಗತ್ಯಕ್ಕಿಂತ ಅಧಿಕ ಸಂಪತ್ತು ಇರಬಾರದು ಎಂಬ ಅವರ ತಿಳಿವಳಿಕೆ ಎಂದಿಗೂ ಬೇಕಾದ ಮೌಲ್ಯ’ ಎಂದರು.</p>.<p>ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ. ಕೃಷ್ಣ ಕೃತಿ ಬಿಡುಗಡೆ ಮಾಡಿದರು. ರಾಜ್ಯದ 5ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ. ನಾರಯಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ವಿಕೇಂದ್ರೀಕರಣ ಹಾಗೂ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ವಿಸ್ಮಯ ಬುಕ್ ಹೌಸ್ ಮುಖ್ಯಸ್ಥ ಪ್ರಕಾಶ್ ಚಿಕ್ಕಪಾಳ್ಯ, ಗಾಂಧಿ ಸ್ಮಾರಕ ನಿಧಿ ಕಾರ್ಯದರ್ಶಿ ಜಿ.ಬಿ. ಶಿವರಾಜ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ರಾಜಕಾರಣಿಗಳೂ ಸೇರಿದಂತೆ ಸಾರ್ವಜನಿಕ ರಂಗದಲ್ಲಿ ಇರುವವರ ಜೀವನ ಹೇಗಿರಬೇಕು ಎಂಬುದಕ್ಕೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಬದುಕೇ ಪಾಠ ಎಂದು ಮಾಜಿ ಶಾಸಕ ಡಿ.ಆರ್. ಪಾಟೀಲ ತಿಳಿಸಿದರು.</p>.<p>ಎಂ.ಕೆ. ಕೆಂಪೇಗೌಡ ಅವರು ಕನ್ನಡಕ್ಕೆ ಭಾಷಾಂತರಿಸಿದ ಡಿ.ಆರ್. ಮಾಂಕೇಕರ್ ಅವರ ‘ಲಾಲ್ ಬಹದ್ದೂರ್ ಶಾಸ್ತ್ರಿ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಗುರುವಾರ ಅವರು ಮಾತನಾಡಿದರು.</p>.<p>ಮನುಷ್ಯನಿಗೆ ಶಕ್ತಿ ಬರುವುದು ವ್ಯಕ್ತಿತ್ವ, ಚಾರಿತ್ರ್ಯಗಳಿಂದ ಹೊರತು ಬುದ್ಧಿವಂತಿಕೆಯಿಂದಲ್ಲ. ಜನರು ಹೃದಯವಂತರನ್ನು ಗೌರವಿಸುತ್ತಾರೆ. ಗಾಂಧೀಜಿ, ಶಾಸ್ತ್ರಿ ಇಂಥ ಗೌರವಕ್ಕೆ ಪಾತ್ರರಾದವರು. ಗ್ರಾಮೀಣ ಜನರ ಬದುಕಿನಲ್ಲಿ ಈ ವ್ಯಕ್ತಿತ್ವ ಉಳಿದಿದೆ ಎಂದು ತಿಳಿಸಿದರು.</p>.<p>ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳು ಈಗಿರುವುದಕ್ಕಿಂತ ಕೆಳಗೆ ಹೋಗಲು ಸಾಧ್ಯವಿಲ್ಲ. ಅಷ್ಟು ಕೆಟ್ಟು ಹೋಗಿದೆ. ಇನ್ನೇನಿದ್ದರೂ ಇದರಿಂದ ಹೊರಬರುವ ದಾರಿ ಕಂಡುಕೊಳ್ಳುವುದು ಮಾತ್ರ ಉಳಿದಿರುವುದು. ಗಾಂಧೀಜಿಯ ಗ್ರಾಮಸ್ವರಾಜ್ಯದ ಕಲ್ಪನೆಯನ್ನು ಮತ್ತೆ ಅನುಷ್ಠಾನಕ್ಕೆ ತರುವುದೇ ಪರ್ಯಾಯ ಮಾರ್ಗ. ಸಂಪತ್ತು ಕೆಲವೇ ಜನರ ಕೈಯಲ್ಲಿರಬಾರದು. ಮಾಧ್ಯಮಗಳು ಕೂಡ ಶ್ರೀಮಂತರನ್ನು ವೈಭವೀಕರಿಸುವುದನ್ನು ಬಿಡಬೇಕು ಎಂದು ಸಲಹೆ ನೀಡಿದರು.</p>.<p>ಪ್ರಾಧ್ಯಾಪಕ ಎಂ.ಕೃಷ್ಣೇಗೌಡ ಅವರು ಕೃತಿ ಪರಿಚಯ ಮಾಡಿ, ‘ಕಾನೂನುಗಳನ್ನು ಯಾರೇ ಮಾಡಲಿ. ಅದನ್ನು ಪಾಲಿಸಬೇಕು ಎಂಬುದು ಶಾಸ್ತ್ರಿಯವರ ನಿಲುವು. ಈ ಕೃತಿಯಲ್ಲಿ ಆರಂಭದಿಂದ ಅಂತ್ಯದವರೆಗೂ ದಾಖಲಾಗಿರುವ ವಿವಿಧ ಘಟನೆಗಳು ಅದನ್ನು ಹೇಳುತ್ತಿವೆ. ಪ್ರಾಮಾಣಿಕತೆ, ಅಗತ್ಯಕ್ಕಿಂತ ಅಧಿಕ ಸಂಪತ್ತು ಇರಬಾರದು ಎಂಬ ಅವರ ತಿಳಿವಳಿಕೆ ಎಂದಿಗೂ ಬೇಕಾದ ಮೌಲ್ಯ’ ಎಂದರು.</p>.<p>ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ. ಕೃಷ್ಣ ಕೃತಿ ಬಿಡುಗಡೆ ಮಾಡಿದರು. ರಾಜ್ಯದ 5ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ. ನಾರಯಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ವಿಕೇಂದ್ರೀಕರಣ ಹಾಗೂ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ವಿಸ್ಮಯ ಬುಕ್ ಹೌಸ್ ಮುಖ್ಯಸ್ಥ ಪ್ರಕಾಶ್ ಚಿಕ್ಕಪಾಳ್ಯ, ಗಾಂಧಿ ಸ್ಮಾರಕ ನಿಧಿ ಕಾರ್ಯದರ್ಶಿ ಜಿ.ಬಿ. ಶಿವರಾಜ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>