<p><strong>ಬೆಂಗಳೂರು</strong>: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪೆರಿಫೆರಲ್ ರಿಂಗ್ ರೋಡ್ (ಪಿಆರ್ಆರ್) ಯೋಜನೆಗೆ ಭೂ ಸ್ವಾಧೀನಕ್ಕೆ ಒಪ್ಪಿರುವ ರೈತರಿಗೆ ಪರಿಷ್ಕೃತ ಪರಿಹಾರ ನೀತಿಯನ್ನು ರಾಜ್ಯ ಸರ್ಕಾರ ಅಂತಿಮಗೊಳಿಸಿದೆ. ಭೂಮಿಯ ಮಾರ್ಗದರ್ಶಿ ಮೌಲ್ಯವನ್ನು ಅರ್ಧದಷ್ಟು ಕಡಿತಗೊಳಿಸಿದೆ.</p>.<p>ಇದು ನಗರದ ಹೊರವಲಯದಲ್ಲಿ ಭೂ ಖರೀದಿಯ ಭರಾಟೆಯನ್ನು ಹೆಚ್ಚಿಸಲಿದೆ. ಭೂಮಿ ಕಳೆದುಕೊಂಡವರಿಗೆ ನೀಡಲಾದ ಪರಿಹಾರದಲ್ಲಿ ದೊಡ್ಡಮಟ್ಟದ ಕಡಿತ ಉಂಟಾಗಲಿದೆ.</p>.<p>ಮುದ್ರಾಂಕ ಮತ್ತು ನೋಂದಣಿ ಇಲಾಖೆಯು ಹೊರಡಿಸಿರುವ ಈ ಅಧಿಸೂಚನೆಯು ಬೆಂಗಳೂರಿನ ಪೂರ್ವ, ದಕ್ಷಿಣ ಮತ್ತು ಉತ್ತರ ಭಾಗಗಳಲ್ಲಿ ಹರಡಿಕೊಂಡಿರುವ 73-ಕಿಮೀ ಪಿಆರ್ಆರ್ಗೆ ಹೊಂದಿಕೊಂಡಿರುವ ಆಸ್ತಿಗಳ ಮಾರ್ಗದರ್ಶನ ಮೌಲ್ಯವನ್ನು ಕಡಿಮೆ ಮಾಡಿದೆ.</p>.<p>ಬೆಂಗಳೂರು ಬಿಸಿನೆಸ್ ಕಾರಿಡಾರ್ (ಬಿಬಿಸಿ) ಎಂದೂ ಕರೆಯಲಾಗಿರುವ ಪಿಆರ್ಆರ್ ಯೋಜನೆಯಡಿ ಭೂ ಸ್ವಾಧೀನಕ್ಕೆ ಸೂಚಿಸಲಾದ 2,560 ಎಕರೆ ಭೂಮಿಗೆ ಐದು ತಿಂಗಳ ಹಿಂದೆ ನಿಗದಿಪಡಿಸಿದ್ದ ಮೌಲ್ಯ ಈಗ ಕಡಿಮೆಯಾಗಲಿದೆ. </p>.<p>ಮಾರ್ಗದರ್ಶಿ ಮೌಲ್ಯದ ನಾಲ್ಕು ಪಟ್ಟು (ಪೆರಿಫೆರಲ್ ಪ್ರದೇಶಗಳಲ್ಲಿ) ಪರಿಹಾರವನ್ನು ಭೂ ಮಾಲೀಕರಿಗೆ ನೀಡಬೇಕಿತ್ತು. ಇದೀಗ ಮೌಲ್ಯ ಕಡಿಮೆಗೊಳಿಸಿ ರುವುದರಿಂದ ಭೂಮಾಲೀಕರಿಗೆ ಒಂದು ಎಕರೆ ಕೃಷಿ ಭೂಮಿಗೆ ಕನಿಷ್ಠ ₹1 ಕೋಟಿ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ.</p>.<p>’ಪಿಆರ್ಆರ್ಗೆ ಹೊಂದಿಕೊಂಡಿರುವ ಭೂಮಿಯ ಮಾರ್ಗದರ್ಶಿ ಮೌಲ್ಯವನ್ನು 2023ರ ಸೆಪ್ಟೆಂಬರ್ನಲ್ಲಿ ಪರಿಷ್ಕರಿಸಲಾಗಿತ್ತು. ಆದರೆ, ಯೋಜನೆ ಇನ್ನೂ ಆರಂಭವಾಗದ ಕಾರಣ ಹಳೇಯ ದರವನ್ನೇ ಉಳಿಸಿಕೊಂಡಿದ್ದೇವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p><strong>ಖರೀದಿ ಭರಾಟೆ</strong>: ಭೂಮಿಯ ಮಾರ್ಗದರ್ಶಿ ಮೌಲ್ಯ ಕಡಿಮೆಗೊಂಡರೆ ಭೂಮಿ ಖರೀದಿಯ ಭರಾಟೆ ಹೆಚ್ಚಾಗಲಿದೆ. ರೈತರಿಗೆ ನಷ್ಟವನ್ನು ಉಂಟು ಮಾಡಲಿದೆ. ಇದು ರೈತರ ಹಿತಾಸಕ್ತಿಗೆ ಮಾರಕವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪೆರಿಫೆರಲ್ ರಿಂಗ್ ರೋಡ್ (ಪಿಆರ್ಆರ್) ಯೋಜನೆಗೆ ಭೂ ಸ್ವಾಧೀನಕ್ಕೆ ಒಪ್ಪಿರುವ ರೈತರಿಗೆ ಪರಿಷ್ಕೃತ ಪರಿಹಾರ ನೀತಿಯನ್ನು ರಾಜ್ಯ ಸರ್ಕಾರ ಅಂತಿಮಗೊಳಿಸಿದೆ. ಭೂಮಿಯ ಮಾರ್ಗದರ್ಶಿ ಮೌಲ್ಯವನ್ನು ಅರ್ಧದಷ್ಟು ಕಡಿತಗೊಳಿಸಿದೆ.</p>.<p>ಇದು ನಗರದ ಹೊರವಲಯದಲ್ಲಿ ಭೂ ಖರೀದಿಯ ಭರಾಟೆಯನ್ನು ಹೆಚ್ಚಿಸಲಿದೆ. ಭೂಮಿ ಕಳೆದುಕೊಂಡವರಿಗೆ ನೀಡಲಾದ ಪರಿಹಾರದಲ್ಲಿ ದೊಡ್ಡಮಟ್ಟದ ಕಡಿತ ಉಂಟಾಗಲಿದೆ.</p>.<p>ಮುದ್ರಾಂಕ ಮತ್ತು ನೋಂದಣಿ ಇಲಾಖೆಯು ಹೊರಡಿಸಿರುವ ಈ ಅಧಿಸೂಚನೆಯು ಬೆಂಗಳೂರಿನ ಪೂರ್ವ, ದಕ್ಷಿಣ ಮತ್ತು ಉತ್ತರ ಭಾಗಗಳಲ್ಲಿ ಹರಡಿಕೊಂಡಿರುವ 73-ಕಿಮೀ ಪಿಆರ್ಆರ್ಗೆ ಹೊಂದಿಕೊಂಡಿರುವ ಆಸ್ತಿಗಳ ಮಾರ್ಗದರ್ಶನ ಮೌಲ್ಯವನ್ನು ಕಡಿಮೆ ಮಾಡಿದೆ.</p>.<p>ಬೆಂಗಳೂರು ಬಿಸಿನೆಸ್ ಕಾರಿಡಾರ್ (ಬಿಬಿಸಿ) ಎಂದೂ ಕರೆಯಲಾಗಿರುವ ಪಿಆರ್ಆರ್ ಯೋಜನೆಯಡಿ ಭೂ ಸ್ವಾಧೀನಕ್ಕೆ ಸೂಚಿಸಲಾದ 2,560 ಎಕರೆ ಭೂಮಿಗೆ ಐದು ತಿಂಗಳ ಹಿಂದೆ ನಿಗದಿಪಡಿಸಿದ್ದ ಮೌಲ್ಯ ಈಗ ಕಡಿಮೆಯಾಗಲಿದೆ. </p>.<p>ಮಾರ್ಗದರ್ಶಿ ಮೌಲ್ಯದ ನಾಲ್ಕು ಪಟ್ಟು (ಪೆರಿಫೆರಲ್ ಪ್ರದೇಶಗಳಲ್ಲಿ) ಪರಿಹಾರವನ್ನು ಭೂ ಮಾಲೀಕರಿಗೆ ನೀಡಬೇಕಿತ್ತು. ಇದೀಗ ಮೌಲ್ಯ ಕಡಿಮೆಗೊಳಿಸಿ ರುವುದರಿಂದ ಭೂಮಾಲೀಕರಿಗೆ ಒಂದು ಎಕರೆ ಕೃಷಿ ಭೂಮಿಗೆ ಕನಿಷ್ಠ ₹1 ಕೋಟಿ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ.</p>.<p>’ಪಿಆರ್ಆರ್ಗೆ ಹೊಂದಿಕೊಂಡಿರುವ ಭೂಮಿಯ ಮಾರ್ಗದರ್ಶಿ ಮೌಲ್ಯವನ್ನು 2023ರ ಸೆಪ್ಟೆಂಬರ್ನಲ್ಲಿ ಪರಿಷ್ಕರಿಸಲಾಗಿತ್ತು. ಆದರೆ, ಯೋಜನೆ ಇನ್ನೂ ಆರಂಭವಾಗದ ಕಾರಣ ಹಳೇಯ ದರವನ್ನೇ ಉಳಿಸಿಕೊಂಡಿದ್ದೇವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p><strong>ಖರೀದಿ ಭರಾಟೆ</strong>: ಭೂಮಿಯ ಮಾರ್ಗದರ್ಶಿ ಮೌಲ್ಯ ಕಡಿಮೆಗೊಂಡರೆ ಭೂಮಿ ಖರೀದಿಯ ಭರಾಟೆ ಹೆಚ್ಚಾಗಲಿದೆ. ರೈತರಿಗೆ ನಷ್ಟವನ್ನು ಉಂಟು ಮಾಡಲಿದೆ. ಇದು ರೈತರ ಹಿತಾಸಕ್ತಿಗೆ ಮಾರಕವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>