ಸೋಮವಾರ, 23 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾಬಸ್‌ಪೇಟೆ: ಮಣಕವನ್ನು ಕೊಂದುಹಾಕಿದ ಚಿರತೆ

Published : 23 ಸೆಪ್ಟೆಂಬರ್ 2024, 20:07 IST
Last Updated : 23 ಸೆಪ್ಟೆಂಬರ್ 2024, 20:07 IST
ಫಾಲೋ ಮಾಡಿ
Comments

ದಾಬಸ್‌ಪೇಟೆ: ಸೋಂಪುರ ಹೋಬಳಿ ನರಸೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುವೆಲ್ ತಿಮ್ಮನಹಳ್ಳಿ ಗ್ರಾಮದ ರೈತ ಆನಂದ್ ಅವರಿಗೆ ಸೇರಿದ ಮಣಕದ(ಕರುವಿಗಿಂತ ದೊಡ್ಡದು) ಮೇಲೆ ಸೋಮವಾರ ಸಂಜೆ ಚಿರತೆ ದಾಳಿ ಮಾಡಿ ಕೊಂದುಹಾಕಿದೆ.

ಮನೆಯ ಹಿಂಭಾಗದಲ್ಲಿ ಹಸುಗಳನ್ನು ಕಟ್ಟಿದ್ದೆ. ಅವುಗಳನ್ನು ಕೊಟ್ಟಿಗೆಗೆ ಕಟ್ಟಲು ಹಿಡಿದುಕೊಂಡು ಬರುತ್ತಿದೆ. ಅವುಗಳ ಜೊತೆಯಲ್ಲಿದ್ದ ಒಂದು ಮಣಕ ಹಿಂದೆ ಉಳಿದಿತ್ತು. ಎಷ್ಟು ಹೊತ್ತಾದರೂ ಬರಲಿಲ್ಲ. ಕರೆದುಕೊಂಡು ಬರಲು ಹೋದಾಗ ಅದು ಸತ್ತು ಬಿದ್ದಿತ್ತು ಎಂದು ರೈತ ಆನಂದ್ ವಿವರಿಸಿದರು. ‘ಮಣಕಕ್ಕೆ ಎರಡು ವರ್ಷ ಆಗಿತ್ತು. ಗರ್ಭ ಧರಿಸುವ ಹಂತಕ್ಕೆ ಬಂದಿತ್ತು ಎಂದು ಅವರು ನೊಂದುಕೊಂಡರು. ಕಳೆದ ಮೇ ತಿಂಗಳಲ್ಲಿ ಇದೇ ಆನಂದ್ ಅವರ ತೋಟದಲ್ಲಿ ಬೆಳಿಗ್ಗೆ ವೇಳೆಯಲ್ಲೇ ಚಿರತೆ ಕಾಣಿಸಿಕೊಂಡಿತ್ತು. ಚಿರತೆಯನ್ನು ಹಿಡಿಯಲು ಪ್ರಯತ್ನಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT