<p><strong>ಬೆಂಗಳೂರು</strong>: ಅನಾರೋಗ್ಯ ಕಾರಣ 'ರೂಪಾವತಿ' ಆನೆಯನ್ನು ತೆಲಂಗಾಣಕ್ಕೆ ಸ್ಥಳಾಂತರ ಮಾಡುವುದನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಕರ್ನಾಟಕಕ್ಕೆ ಸೂಚಿಸಿದೆ.</p>.<p>ಈ ಹಿನ್ನೆಲೆಯಲ್ಲಿ ‘ಪೆಟಾ’ (ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಫಾರ್ ಅನಿಮಲ್ಸ್) ಮುಂಬರುವ ಮೊಹರಂ ಮತ್ತು ಬೋನಾಲು ಮೆರವಣಿಗೆಗೆ ಯಾಂತ್ರಿಕ ಆನೆಯನ್ನು ನೀಡಲು ಮುಂದಾಗಿದೆ.</p>.<p>ನೈಜ ಆನೆಯಷ್ಟೇ ಗಾತ್ರದ ಯಾಂತ್ರಿಕ ಆನೆ ಬಳಸುವುದರಿಂದ ಜೀವಹಾನಿ ಮತ್ತು ಅಪಾಯ ತಗ್ಗಿಸಬಹುದು. ವನ್ಯಜೀವಿಧಾಮದಲ್ಲಿ ರೂಪಾವತಿಗೆ ಶಾಶ್ವತವಾಗಿ ಪುನರ್ವಸತಿ ಕಲ್ಪಿಸಬೇಕು. ಇತರೆ ಆನೆಗಳೊಂದಿಗೆ ಮುಕ್ತವಾಗಿ ಬೆರೆಯಲು ಅವಕಾಶ ಕಲ್ಪಿಸಬೇಕು. ಬೇರೆ ರಾಜ್ಯಕ್ಕೆ ಕರೆದೊಯ್ಯಲು ಆನೆಯ ಆರೋಗ್ಯ ಸ್ಥಿತಿ ಉತ್ತಮವಾಗಿಲ್ಲ. ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಸಮರ್ಥವಾಗಿದೆ ಎಂದು ಪಶು ತಜ್ಞರು ಪೆಟಾಗೆ ತಿಳಿಸಿದ್ದಾರೆ. </p>.<p>ಕಳೆದ ತಿಂಗಳು ಪೆಟಾ, ತೆಲಂಗಾಣದ ಅರಣ್ಯ ಮತ್ತು ಪರಿಸರ ಸಚಿವ, ಅರಣ್ಯ ಪ್ರಧಾನ ಕಾರ್ಯದರ್ಶಿ, ತೆಲಂಗಾಣ ವಕ್ಫ್ ಮಂಡಳಿ ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿ ಈ ವಿಷಯವಾಗಿ ಚರ್ಚಿಸಿತು ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಅನಾರೋಗ್ಯ ಕಾರಣ 'ರೂಪಾವತಿ' ಆನೆಯನ್ನು ತೆಲಂಗಾಣಕ್ಕೆ ಸ್ಥಳಾಂತರ ಮಾಡುವುದನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಕರ್ನಾಟಕಕ್ಕೆ ಸೂಚಿಸಿದೆ.</p>.<p>ಈ ಹಿನ್ನೆಲೆಯಲ್ಲಿ ‘ಪೆಟಾ’ (ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಫಾರ್ ಅನಿಮಲ್ಸ್) ಮುಂಬರುವ ಮೊಹರಂ ಮತ್ತು ಬೋನಾಲು ಮೆರವಣಿಗೆಗೆ ಯಾಂತ್ರಿಕ ಆನೆಯನ್ನು ನೀಡಲು ಮುಂದಾಗಿದೆ.</p>.<p>ನೈಜ ಆನೆಯಷ್ಟೇ ಗಾತ್ರದ ಯಾಂತ್ರಿಕ ಆನೆ ಬಳಸುವುದರಿಂದ ಜೀವಹಾನಿ ಮತ್ತು ಅಪಾಯ ತಗ್ಗಿಸಬಹುದು. ವನ್ಯಜೀವಿಧಾಮದಲ್ಲಿ ರೂಪಾವತಿಗೆ ಶಾಶ್ವತವಾಗಿ ಪುನರ್ವಸತಿ ಕಲ್ಪಿಸಬೇಕು. ಇತರೆ ಆನೆಗಳೊಂದಿಗೆ ಮುಕ್ತವಾಗಿ ಬೆರೆಯಲು ಅವಕಾಶ ಕಲ್ಪಿಸಬೇಕು. ಬೇರೆ ರಾಜ್ಯಕ್ಕೆ ಕರೆದೊಯ್ಯಲು ಆನೆಯ ಆರೋಗ್ಯ ಸ್ಥಿತಿ ಉತ್ತಮವಾಗಿಲ್ಲ. ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಸಮರ್ಥವಾಗಿದೆ ಎಂದು ಪಶು ತಜ್ಞರು ಪೆಟಾಗೆ ತಿಳಿಸಿದ್ದಾರೆ. </p>.<p>ಕಳೆದ ತಿಂಗಳು ಪೆಟಾ, ತೆಲಂಗಾಣದ ಅರಣ್ಯ ಮತ್ತು ಪರಿಸರ ಸಚಿವ, ಅರಣ್ಯ ಪ್ರಧಾನ ಕಾರ್ಯದರ್ಶಿ, ತೆಲಂಗಾಣ ವಕ್ಫ್ ಮಂಡಳಿ ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿ ಈ ವಿಷಯವಾಗಿ ಚರ್ಚಿಸಿತು ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>