<p><strong>ಬೆಂಗಳೂರು:</strong> ಸುಬ್ರಹ್ಮಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ದರ್ಶನ್ ಕೊಲೆ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.</p>.<p>‘ಸ್ಥಳೀಯ ನಿವಾಸಿಗಳಾದ ಚಂದ್ರಶೇಖರ್ ಅಲಿಯಾಸ್ ಪ್ರೀತಂ, ಯಶವಂತ್, ವೆಂಕಟೇಶ್, ಪ್ರಶಾಂತ್ ಮತ್ತು ದರ್ಶನ್ ಅಲಿಯಾಸ್ ಗುಂಡ ಬಂಧಿತರು. ಐವರು ಸೇರಿಕೊಂಡು ಜ. 24ರಂದು ತಡರಾತ್ರಿ ದರ್ಶನ್ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ದರ್ಶನ್ ಹಾಗೂ ಆರೋಪಿಗಳು, ಹಲವು ವರ್ಷಗಳ ಸ್ನೇಹಿತರೆಂಬುದು ಗೊತ್ತಾಗಿದೆ. ಆಗಾಗ ಪರಸ್ಪರ ಭೇಟಿಯಾಗುತ್ತಿದ್ದರು. ಆರೋಪಿ ಯಶವಂತ್, ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದ. ಚಂದ್ರಶೇಖರ್ ಹಾಗೂ ವೆಂಕಟೇಶ್ ಆಟೊ ಚಾಲಕರು. ಪ್ರಶಾಂತ್ ಹಾಗೂ ಗುಂಡ, ಫ್ಲಂಬರ್ ಕೆಲಸಗಾರರು’ ಎಂದು ತಿಳಿಸಿದರು.</p>.<p>‘ಮನೆಯ ಖರ್ಚಿಗಾಗಿ ತಾಯಿಗೆ ನೀಡಲೆಂದು ದರ್ಶನ್ ಅವರಿಗೆ ದೊಡ್ಡಮ್ಮ ₹ 3 ಸಾವಿರ ನೀಡಿದ್ದರು. ಹಣ ಪಡೆದಿದ್ದ ದರ್ಶನ್, ಸ್ನೇಹಿತರಾದ ರಮೇಶ್ ಹಾಗೂ ನಿತಿನ್ ಜೊತೆ ಬಾರ್ಗೆ ಹೋಗಿದ್ದರು. ಅದೇ ಬಾರ್ಗೆ ಆರೋಪಿ ಪ್ರೀತಂ ಮತ್ತು ಇತರರು ಬಂದಿದ್ದರು.’</p>.<p>‘ನಿತಿನ್ ಹಾಗೂ ಪ್ರೀತಂ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ಶುರುವಾಗಿತ್ತು. ಇಬ್ಬರ ನಡುವೆ ಮಾರಾಮಾರಿಯೂ ನಡೆದಿತ್ತು. ಬಾರ್ ಸಿಬ್ಬಂದಿಯೇ ಜಗಳ ಬಿಡಿಸಿ ಎಲ್ಲರನ್ನೂ ಸ್ಥಳದಿಂದ ಕಳುಹಿಸಿದ್ದರು’ ಎಂದು ಪೊಲೀಸರು ಹೇಳಿದರು.</p>.<h3>ಸ್ನೇಹಿತನ ಮನೆ ಬಳಿ ಕೃತ್ಯ: </h3><p>‘ಬಾರ್ನಿಂದ ಹೊರಬಂದಿದ್ದ ನಿತಿನ್ ಹಾಗೂ ದರ್ಶನ್, ಸ್ನೇಹಿತ ರಮೇಶ್ ಮನೆ ಬಳಿ ಹೋಗಿದ್ದರು. ಅದೇ ಸ್ಥಳಕ್ಕೆ ಹೋಗಿದ್ದ ಪ್ರೀತಂ ಹಾಗೂ ಇತರರು, ಪುನಃ ಜಗಳ ತೆಗೆದಿದ್ದರು. ದರ್ಶನ್ ಜಗಳ ಬಿಡಿಸಲು ಪ್ರಯತ್ನಿಸಿದ್ದರು’ ಎಂದು ಪೊಲೀಸರು ತಿಳಿಸಿದರು.</p>.<p>‘ದರ್ಶನ್ ಮೇಲೆಯೇ ಸಿಟ್ಟಾಗಿದ್ದ ಆರೋಪಿಗಳು, ಸಿಮೆಂಟ್ ಇಟ್ಟಿಗೆಯಿಂದ ತಲೆಗೆ ಹೊಡೆದಿದ್ದರು. ತೀವ್ರ ಗಾಯಗೊಂಡು ದರ್ಶನ್ ಸ್ಥಳದಲ್ಲೇ ಮೃತಪಟ್ಟಿದ್ದರು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಸುಬ್ರಹ್ಮಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ದರ್ಶನ್ ಕೊಲೆ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.</p>.<p>‘ಸ್ಥಳೀಯ ನಿವಾಸಿಗಳಾದ ಚಂದ್ರಶೇಖರ್ ಅಲಿಯಾಸ್ ಪ್ರೀತಂ, ಯಶವಂತ್, ವೆಂಕಟೇಶ್, ಪ್ರಶಾಂತ್ ಮತ್ತು ದರ್ಶನ್ ಅಲಿಯಾಸ್ ಗುಂಡ ಬಂಧಿತರು. ಐವರು ಸೇರಿಕೊಂಡು ಜ. 24ರಂದು ತಡರಾತ್ರಿ ದರ್ಶನ್ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ದರ್ಶನ್ ಹಾಗೂ ಆರೋಪಿಗಳು, ಹಲವು ವರ್ಷಗಳ ಸ್ನೇಹಿತರೆಂಬುದು ಗೊತ್ತಾಗಿದೆ. ಆಗಾಗ ಪರಸ್ಪರ ಭೇಟಿಯಾಗುತ್ತಿದ್ದರು. ಆರೋಪಿ ಯಶವಂತ್, ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದ. ಚಂದ್ರಶೇಖರ್ ಹಾಗೂ ವೆಂಕಟೇಶ್ ಆಟೊ ಚಾಲಕರು. ಪ್ರಶಾಂತ್ ಹಾಗೂ ಗುಂಡ, ಫ್ಲಂಬರ್ ಕೆಲಸಗಾರರು’ ಎಂದು ತಿಳಿಸಿದರು.</p>.<p>‘ಮನೆಯ ಖರ್ಚಿಗಾಗಿ ತಾಯಿಗೆ ನೀಡಲೆಂದು ದರ್ಶನ್ ಅವರಿಗೆ ದೊಡ್ಡಮ್ಮ ₹ 3 ಸಾವಿರ ನೀಡಿದ್ದರು. ಹಣ ಪಡೆದಿದ್ದ ದರ್ಶನ್, ಸ್ನೇಹಿತರಾದ ರಮೇಶ್ ಹಾಗೂ ನಿತಿನ್ ಜೊತೆ ಬಾರ್ಗೆ ಹೋಗಿದ್ದರು. ಅದೇ ಬಾರ್ಗೆ ಆರೋಪಿ ಪ್ರೀತಂ ಮತ್ತು ಇತರರು ಬಂದಿದ್ದರು.’</p>.<p>‘ನಿತಿನ್ ಹಾಗೂ ಪ್ರೀತಂ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ಶುರುವಾಗಿತ್ತು. ಇಬ್ಬರ ನಡುವೆ ಮಾರಾಮಾರಿಯೂ ನಡೆದಿತ್ತು. ಬಾರ್ ಸಿಬ್ಬಂದಿಯೇ ಜಗಳ ಬಿಡಿಸಿ ಎಲ್ಲರನ್ನೂ ಸ್ಥಳದಿಂದ ಕಳುಹಿಸಿದ್ದರು’ ಎಂದು ಪೊಲೀಸರು ಹೇಳಿದರು.</p>.<h3>ಸ್ನೇಹಿತನ ಮನೆ ಬಳಿ ಕೃತ್ಯ: </h3><p>‘ಬಾರ್ನಿಂದ ಹೊರಬಂದಿದ್ದ ನಿತಿನ್ ಹಾಗೂ ದರ್ಶನ್, ಸ್ನೇಹಿತ ರಮೇಶ್ ಮನೆ ಬಳಿ ಹೋಗಿದ್ದರು. ಅದೇ ಸ್ಥಳಕ್ಕೆ ಹೋಗಿದ್ದ ಪ್ರೀತಂ ಹಾಗೂ ಇತರರು, ಪುನಃ ಜಗಳ ತೆಗೆದಿದ್ದರು. ದರ್ಶನ್ ಜಗಳ ಬಿಡಿಸಲು ಪ್ರಯತ್ನಿಸಿದ್ದರು’ ಎಂದು ಪೊಲೀಸರು ತಿಳಿಸಿದರು.</p>.<p>‘ದರ್ಶನ್ ಮೇಲೆಯೇ ಸಿಟ್ಟಾಗಿದ್ದ ಆರೋಪಿಗಳು, ಸಿಮೆಂಟ್ ಇಟ್ಟಿಗೆಯಿಂದ ತಲೆಗೆ ಹೊಡೆದಿದ್ದರು. ತೀವ್ರ ಗಾಯಗೊಂಡು ದರ್ಶನ್ ಸ್ಥಳದಲ್ಲೇ ಮೃತಪಟ್ಟಿದ್ದರು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>