<p><strong>ಬೆಂಗಳೂರು:</strong> ನಾರಾಯಣ ನೇತ್ರಾಲಯವು ಮಯೋಪಿಯಾ (ಸಮೀಪದೃಷ್ಟಿ) ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸಲು ಜುಲೈ 28ರಂದು ಬೆಳಿಗ್ಗೆ 7.30ರಿಂದ ‘ಮಯೋಪಿಯಾ ಓಟ’ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಎಂ.ಜಿ ರಸ್ತೆಯಲ್ಲಿರುವ ರಾಜೇಂದ್ರ ಸಿಂಗ್ಜಿ ಸೇನಾ ಅಧಿಕಾರಿಗಳ ಸಂಸ್ಥೆಯಲ್ಲಿ ಹಮ್ಮಿಕೊಂಡಿದೆ. </p>.<p>ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ. ರೋಹಿತ್ ಶೆಟ್ಟಿ, ‘ಇದು ಮೋಜಿನಿಂದ ಕೂಡಿದ ಕಾರ್ಯಕ್ರಮವಾಗಿದೆ. ‘1.5 ಕೆ ಕುಟುಂಬದ ಓಟ’ದ ಜತೆಗೆ ಮ್ಯಾಜಿಕ್ ಶೋ, ಫೇಸ್ ಪೇಂಟಿಂಗ್ ಸೇರಿ ವಿವಿಧ ವಿನೋದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಮಕ್ಕಳಿಗಾಗಿ ವಿವಿಧ ಆಟಗಳು, ಜಾನಪದ ಕಲಾ ಪ್ರದರ್ಶನ, ಆರೋಗ್ಯಕರ ತಿನಿಸುಗಳು ಸೇರಿ ಹಲವು ವೈಶಿಷ್ಟ್ಯತೆ ಇರಲಿದೆ. ಮಯೋಪಿಯಾದ ಗಂಭೀರತೆ ಬಗ್ಗೆ ತಿಳಿಸುವ ಜತೆಗೆ ಅದನ್ನು ತಡೆಗಟ್ಟುವಿಕೆಯ ಬಗ್ಗೆ ಅರಿವು ಮೂಡಿಸಲಾಗುತ್ತದೆ’ ಎಂದು ತಿಳಿಸಿದರು. </p>.<p>‘ಮಯೋಪಿಯಾ ಸಮಸ್ಯೆಯು ಆನುವಂಶಿಕ ಹಾಗೂ ಚಟುವಟಿಕೆ ರಹಿತ ಜೀವನಶೈಲಿಯಿಂದ ಬರುವಂತಹ ಅಪಾಯಕಾರಿ ದೃಷ್ಟಿ ಸಮಸ್ಯೆಯಾಗಿದೆ. ಇದು ಜಾಗತಿಕ ಸಾಂಕ್ರಾಮಿಕ ಕಾಯಿಲೆಯಾಗಿದ್ದು, 2050ರ ವೇಳೆಗೆ ಜಗತ್ತಿನ ಶೇ 50 ರಷ್ಟು ಜನರ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳ ಬಗ್ಗೆ ವರದಿಗಳು ತಿಳಿಸಿವೆ. ಸದ್ಯ ಪ್ರತಿ ನಾಲ್ಕು ಮಕ್ಕಳಲ್ಲಿ ಒಂದು ಮಗುವಿಗೆ ಈ ಸಮಸ್ಯೆ ಬಾಧಿಸುತ್ತಿದೆ. ವಯಸ್ಸು ಹೆಚ್ಚಾದಂತೆ ಸಮಸ್ಯೆ ಉಲ್ಬಣಿಸುತ್ತದೆ. ಇದರಿಂದ ಕಣ್ಣಿನ ಪೊರೆ, ರೆಟಿನಾ ಬೇರ್ಪಡಲಿದ್ದು, ‘ಮ್ಯಾಕ್ಯುಲೋಪತಿ’ ಹಾಗೂ ‘ಗ್ಲೊಕೊಮಾ’ದಂತಹ ಅಪಾಯಗಳಿಗೆ ಕಾರಣವಾಗಲಿದೆ’ ಎಂದು ವಿವರಿಸಿದರು.</p>.<p>ಆಸ್ಪತ್ರೆಯ ಮಕ್ಕಳ ನೇತ್ರ ತಜ್ಞೆ ಡಾ.ಬಿ.ಎ.ಮೈತ್ರಿ, ‘ಮಕ್ಕಳಲ್ಲಿನ ಈ ಸಮಸ್ಯೆಯನ್ನು ಆರಂಭದಲ್ಲಿಯೇ ಗುರುತಿಸಿ, ಚಿಕಿತ್ಸೆ ಕೊಡಿಸದಿದ್ದರೆ ಮಕ್ಕಳ ಶೈಕ್ಷಣಿಕ ಹಾಗೂ ಸಾಮಾಜಿಕ ಬೆಳವಣಿಗೆ ಕುಂಟಿತವಾಗುತ್ತದೆ. ಹಾಗಾಗಿ, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮಕ್ಕಳು ಹೆಚ್ಚಾಗಿ ಗ್ಯಾಜೆಟ್ಗಳನ್ನು ಅವಲಂಬಿಸದೆ, ಹೊರಾಂಗಣ ಆಟ ಹಾಗೂ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಾರಾಯಣ ನೇತ್ರಾಲಯವು ಮಯೋಪಿಯಾ (ಸಮೀಪದೃಷ್ಟಿ) ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸಲು ಜುಲೈ 28ರಂದು ಬೆಳಿಗ್ಗೆ 7.30ರಿಂದ ‘ಮಯೋಪಿಯಾ ಓಟ’ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಎಂ.ಜಿ ರಸ್ತೆಯಲ್ಲಿರುವ ರಾಜೇಂದ್ರ ಸಿಂಗ್ಜಿ ಸೇನಾ ಅಧಿಕಾರಿಗಳ ಸಂಸ್ಥೆಯಲ್ಲಿ ಹಮ್ಮಿಕೊಂಡಿದೆ. </p>.<p>ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ. ರೋಹಿತ್ ಶೆಟ್ಟಿ, ‘ಇದು ಮೋಜಿನಿಂದ ಕೂಡಿದ ಕಾರ್ಯಕ್ರಮವಾಗಿದೆ. ‘1.5 ಕೆ ಕುಟುಂಬದ ಓಟ’ದ ಜತೆಗೆ ಮ್ಯಾಜಿಕ್ ಶೋ, ಫೇಸ್ ಪೇಂಟಿಂಗ್ ಸೇರಿ ವಿವಿಧ ವಿನೋದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಮಕ್ಕಳಿಗಾಗಿ ವಿವಿಧ ಆಟಗಳು, ಜಾನಪದ ಕಲಾ ಪ್ರದರ್ಶನ, ಆರೋಗ್ಯಕರ ತಿನಿಸುಗಳು ಸೇರಿ ಹಲವು ವೈಶಿಷ್ಟ್ಯತೆ ಇರಲಿದೆ. ಮಯೋಪಿಯಾದ ಗಂಭೀರತೆ ಬಗ್ಗೆ ತಿಳಿಸುವ ಜತೆಗೆ ಅದನ್ನು ತಡೆಗಟ್ಟುವಿಕೆಯ ಬಗ್ಗೆ ಅರಿವು ಮೂಡಿಸಲಾಗುತ್ತದೆ’ ಎಂದು ತಿಳಿಸಿದರು. </p>.<p>‘ಮಯೋಪಿಯಾ ಸಮಸ್ಯೆಯು ಆನುವಂಶಿಕ ಹಾಗೂ ಚಟುವಟಿಕೆ ರಹಿತ ಜೀವನಶೈಲಿಯಿಂದ ಬರುವಂತಹ ಅಪಾಯಕಾರಿ ದೃಷ್ಟಿ ಸಮಸ್ಯೆಯಾಗಿದೆ. ಇದು ಜಾಗತಿಕ ಸಾಂಕ್ರಾಮಿಕ ಕಾಯಿಲೆಯಾಗಿದ್ದು, 2050ರ ವೇಳೆಗೆ ಜಗತ್ತಿನ ಶೇ 50 ರಷ್ಟು ಜನರ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳ ಬಗ್ಗೆ ವರದಿಗಳು ತಿಳಿಸಿವೆ. ಸದ್ಯ ಪ್ರತಿ ನಾಲ್ಕು ಮಕ್ಕಳಲ್ಲಿ ಒಂದು ಮಗುವಿಗೆ ಈ ಸಮಸ್ಯೆ ಬಾಧಿಸುತ್ತಿದೆ. ವಯಸ್ಸು ಹೆಚ್ಚಾದಂತೆ ಸಮಸ್ಯೆ ಉಲ್ಬಣಿಸುತ್ತದೆ. ಇದರಿಂದ ಕಣ್ಣಿನ ಪೊರೆ, ರೆಟಿನಾ ಬೇರ್ಪಡಲಿದ್ದು, ‘ಮ್ಯಾಕ್ಯುಲೋಪತಿ’ ಹಾಗೂ ‘ಗ್ಲೊಕೊಮಾ’ದಂತಹ ಅಪಾಯಗಳಿಗೆ ಕಾರಣವಾಗಲಿದೆ’ ಎಂದು ವಿವರಿಸಿದರು.</p>.<p>ಆಸ್ಪತ್ರೆಯ ಮಕ್ಕಳ ನೇತ್ರ ತಜ್ಞೆ ಡಾ.ಬಿ.ಎ.ಮೈತ್ರಿ, ‘ಮಕ್ಕಳಲ್ಲಿನ ಈ ಸಮಸ್ಯೆಯನ್ನು ಆರಂಭದಲ್ಲಿಯೇ ಗುರುತಿಸಿ, ಚಿಕಿತ್ಸೆ ಕೊಡಿಸದಿದ್ದರೆ ಮಕ್ಕಳ ಶೈಕ್ಷಣಿಕ ಹಾಗೂ ಸಾಮಾಜಿಕ ಬೆಳವಣಿಗೆ ಕುಂಟಿತವಾಗುತ್ತದೆ. ಹಾಗಾಗಿ, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮಕ್ಕಳು ಹೆಚ್ಚಾಗಿ ಗ್ಯಾಜೆಟ್ಗಳನ್ನು ಅವಲಂಬಿಸದೆ, ಹೊರಾಂಗಣ ಆಟ ಹಾಗೂ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>