<p><strong>ಬೆಂಗಳೂರು</strong>: ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಿಂದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಹಗರಣಕ್ಕೆ ಸಂಬಂಧಿಸಿದಂತೆ ಎರಡು ದಿನಗಳಾದರೂ ಶೋಧ ಮುಂದುವರಿಸಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು, ಶಾಸಕರಾದ ಬಿ. ನಾಗೇಂದ್ರ ಮತ್ತು ಬಸನಗೌಡ ದದ್ದಲ್ ಅವರನ್ನು ಮನೆಗಳಲ್ಲೇ ದಿಗ್ಬಂಧನದಲ್ಲಿರಿಸಿದೆ.</p>.<p>ಬುಧವಾರ ಬೆಳಿಗ್ಗೆ 20ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿಮಾಡಿದ್ದ ಇ.ಡಿ ಅಧಿಕಾರಿಗಳು, ಶೋಧ ಆರಂಭಿಸಿದ್ದರು. ಗುರುವಾರವೂ ಇಡೀ ದಿನ ಕಾರ್ಯಾಚರಣೆ ಮುಂದುವರಿಯಿತು. ನಾಗೇಂದ್ರ ಸದಾಶಿವನಗರದ ಡಾಲರ್ಸ್ ಕಾಲೊನಿಯ ಮನೆಯಲ್ಲಿದ್ದರೆ, ಬಸನಗೌಡ ದದ್ದಲ್ ಯಲಹಂಕ ಸಮೀಪದ ಶ್ರೀನಿವಾಸಪುರದ ವಿಲ್ಲಾದಲ್ಲಿದ್ದಾರೆ. ಅಲ್ಲಿಯೇ ಬೀಡುಬಿಟ್ಟಿರುವ ಇ.ಡಿ ಅಧಿಕಾರಿಗಳು ಇಬ್ಬರೂ ಮನೆಯಿಂದ ಹೊರ ಹೋಗದಂತೆ ಹಿಡಿದಿರಿಸಿಕೊಂಡಿದ್ದಾರೆ.</p>.<p>ಗುರುವಾರ ಕೂಡ ಇಬ್ಬರೂ ಶಾಸಕರ ವಿಚಾರಣೆ ನಡೆಯಿತು. ಆಪ್ತ ಸಹಾಯಕ ಹರೀಶ್ ಅವರನ್ನು ಪುನಃ ನಾಗೇಂದ್ರ ಅವರ ಮನೆಗೆ ಕರೆತಂದು ವಿಚಾರಣೆ ನಡೆಸಲಾಯಿತು. ನಾಗೇಂದ್ರ ಅವರನ್ನೂ ಮನೆಯಲ್ಲೇ ವಿಚಾರಣೆಗೊಳಪಡಿಸಲಾಯಿತು. ಬಸನಗೌಡ ಅವರ ವಿಚಾರಣೆಯೂ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.</p>.<p>ಮತ್ತೊಬ್ಬ ಪಿ.ಎ ವಶಕ್ಕೆ: ಬಸನಗೌಡ ದದ್ದಲ್ ಅವರ ಮಾಜಿ ಆಪ್ತ ಸಹಾಯಕ ಪಂಪಣ್ಣ ಅವರನ್ನು ರಾಯಚೂರಿನಲ್ಲಿ ವಶಕ್ಕೆ ಪಡೆದಿರುವ ಇ.ಡಿ ಅಧಿಕಾರಿಗಳು, ಅಲ್ಲಿನ ಶಾಸಕರ ಮನೆಗೆ ಕರೆದೊಯ್ದು ಗುರುವಾರ ವಿಚಾರಣೆ ನಡೆಸಿದರು. ಅಲ್ಲಿಂದ ಪಂಪಣ್ಣ ಅವರನ್ನು ಬೆಂಗಳೂರಿಗೆ ಕರೆತರಲಾಗಿದೆ ಎಂದು ಮೂಲಗಳು ಹೇಳಿವೆ.</p>.<p>ದದ್ದಲ್ ಅವರ ಸಂಬಂಧಿ ಕಾರ್ತಿಕ್ ಎಂಬುವವರನ್ನೂ ವಶಕ್ಕೆ ಪಡೆದಿರುವ ಇ.ಡಿ ಅಧಿಕಾರಿಗಳು, ವಿಚಾರಣೆ ತೀವ್ರಗೊಳಿಸಿದ್ದಾರೆ.</p>.<p>ನಿಗಮದಲ್ಲಿ ಶೋಧ ಅಂತ್ಯ: ವಸಂತನಗರದಲ್ಲಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಧಾನ ಕಚೇರಿಯಲ್ಲಿ ಬುಧವಾರ ಬೆಳಿಗ್ಗೆ ಆರಂಭವಾಗಿದ್ದ ಶೋಧವನ್ನು ಗುರುವಾರ ಸಂಜೆ ಅಂತ್ಯಗೊಳಿಸಲಾಗಿದೆ. ಲೆಕ್ಕಪರಿಶೋಧಕರನ್ನು ಕರೆಸಿ ಅವರಿಂದಲೂ ಮಾಹಿತಿ ಪಡೆದ ಇ.ಡಿ ಅಧಿಕಾರಿಗಳು, ನಿಗಮದ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ರಾಜ್ಕುಮಾರ್ ಅವರ ಹೇಳಿಕೆಯನ್ನೂ ದಾಖಲಿಸಿಕೊಂಡರು. ಬಳಿಕ ಶೋಧ ಅಂತ್ಯಗೊಳಿಸಿ, ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿದರು ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಿಂದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಹಗರಣಕ್ಕೆ ಸಂಬಂಧಿಸಿದಂತೆ ಎರಡು ದಿನಗಳಾದರೂ ಶೋಧ ಮುಂದುವರಿಸಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು, ಶಾಸಕರಾದ ಬಿ. ನಾಗೇಂದ್ರ ಮತ್ತು ಬಸನಗೌಡ ದದ್ದಲ್ ಅವರನ್ನು ಮನೆಗಳಲ್ಲೇ ದಿಗ್ಬಂಧನದಲ್ಲಿರಿಸಿದೆ.</p>.<p>ಬುಧವಾರ ಬೆಳಿಗ್ಗೆ 20ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿಮಾಡಿದ್ದ ಇ.ಡಿ ಅಧಿಕಾರಿಗಳು, ಶೋಧ ಆರಂಭಿಸಿದ್ದರು. ಗುರುವಾರವೂ ಇಡೀ ದಿನ ಕಾರ್ಯಾಚರಣೆ ಮುಂದುವರಿಯಿತು. ನಾಗೇಂದ್ರ ಸದಾಶಿವನಗರದ ಡಾಲರ್ಸ್ ಕಾಲೊನಿಯ ಮನೆಯಲ್ಲಿದ್ದರೆ, ಬಸನಗೌಡ ದದ್ದಲ್ ಯಲಹಂಕ ಸಮೀಪದ ಶ್ರೀನಿವಾಸಪುರದ ವಿಲ್ಲಾದಲ್ಲಿದ್ದಾರೆ. ಅಲ್ಲಿಯೇ ಬೀಡುಬಿಟ್ಟಿರುವ ಇ.ಡಿ ಅಧಿಕಾರಿಗಳು ಇಬ್ಬರೂ ಮನೆಯಿಂದ ಹೊರ ಹೋಗದಂತೆ ಹಿಡಿದಿರಿಸಿಕೊಂಡಿದ್ದಾರೆ.</p>.<p>ಗುರುವಾರ ಕೂಡ ಇಬ್ಬರೂ ಶಾಸಕರ ವಿಚಾರಣೆ ನಡೆಯಿತು. ಆಪ್ತ ಸಹಾಯಕ ಹರೀಶ್ ಅವರನ್ನು ಪುನಃ ನಾಗೇಂದ್ರ ಅವರ ಮನೆಗೆ ಕರೆತಂದು ವಿಚಾರಣೆ ನಡೆಸಲಾಯಿತು. ನಾಗೇಂದ್ರ ಅವರನ್ನೂ ಮನೆಯಲ್ಲೇ ವಿಚಾರಣೆಗೊಳಪಡಿಸಲಾಯಿತು. ಬಸನಗೌಡ ಅವರ ವಿಚಾರಣೆಯೂ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.</p>.<p>ಮತ್ತೊಬ್ಬ ಪಿ.ಎ ವಶಕ್ಕೆ: ಬಸನಗೌಡ ದದ್ದಲ್ ಅವರ ಮಾಜಿ ಆಪ್ತ ಸಹಾಯಕ ಪಂಪಣ್ಣ ಅವರನ್ನು ರಾಯಚೂರಿನಲ್ಲಿ ವಶಕ್ಕೆ ಪಡೆದಿರುವ ಇ.ಡಿ ಅಧಿಕಾರಿಗಳು, ಅಲ್ಲಿನ ಶಾಸಕರ ಮನೆಗೆ ಕರೆದೊಯ್ದು ಗುರುವಾರ ವಿಚಾರಣೆ ನಡೆಸಿದರು. ಅಲ್ಲಿಂದ ಪಂಪಣ್ಣ ಅವರನ್ನು ಬೆಂಗಳೂರಿಗೆ ಕರೆತರಲಾಗಿದೆ ಎಂದು ಮೂಲಗಳು ಹೇಳಿವೆ.</p>.<p>ದದ್ದಲ್ ಅವರ ಸಂಬಂಧಿ ಕಾರ್ತಿಕ್ ಎಂಬುವವರನ್ನೂ ವಶಕ್ಕೆ ಪಡೆದಿರುವ ಇ.ಡಿ ಅಧಿಕಾರಿಗಳು, ವಿಚಾರಣೆ ತೀವ್ರಗೊಳಿಸಿದ್ದಾರೆ.</p>.<p>ನಿಗಮದಲ್ಲಿ ಶೋಧ ಅಂತ್ಯ: ವಸಂತನಗರದಲ್ಲಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಧಾನ ಕಚೇರಿಯಲ್ಲಿ ಬುಧವಾರ ಬೆಳಿಗ್ಗೆ ಆರಂಭವಾಗಿದ್ದ ಶೋಧವನ್ನು ಗುರುವಾರ ಸಂಜೆ ಅಂತ್ಯಗೊಳಿಸಲಾಗಿದೆ. ಲೆಕ್ಕಪರಿಶೋಧಕರನ್ನು ಕರೆಸಿ ಅವರಿಂದಲೂ ಮಾಹಿತಿ ಪಡೆದ ಇ.ಡಿ ಅಧಿಕಾರಿಗಳು, ನಿಗಮದ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ರಾಜ್ಕುಮಾರ್ ಅವರ ಹೇಳಿಕೆಯನ್ನೂ ದಾಖಲಿಸಿಕೊಂಡರು. ಬಳಿಕ ಶೋಧ ಅಂತ್ಯಗೊಳಿಸಿ, ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿದರು ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>