<p><strong>ಬೆಂಗಳೂರು:</strong> ನೇಪಾಳದ ಬಾಲಾಜಿ ಬಹದ್ದೂರ್ (42) ಎಂಬುವರನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.</p>.<p>ಸ್ಥಳೀಯ ನಿವಾಸಿ ಹರೀಶ್ (34) ಬಂಧಿತ ಆರೋಪಿ. ದಿನಗೂಲಿ ಕೆಲಸಗಾರರಾದ ಹರೀಶ್, ಬಾಲಾಜಿ ಮತ್ತು ಮೂರ್ತಿ ಕಟ್ಟಡ ನಿರ್ಮಾಣ ಕೆಲಸದ ಬಳಿಕ ನಿತ್ಯ ಸಂಜೆ ಪಾರ್ಟಿ ಮಾಡುತ್ತಿದ್ದರು. ಬಳಿಕ ನಿರ್ಮಾಣ ಹಂತದಲ್ಲಿರುವ ಕೊತ್ತನೂರು ಸಮುದಾಯ ಭವನದ ಕಟ್ಟಡದಲ್ಲಿಯೇ ಮಲಗುತ್ತಿದ್ದರು.</p>.<p>ಅದೇ ರೀತಿ ಭಾನುವಾರ ರಾತ್ರಿ ಮೂವರು ಕಂಠ ಪೂರ್ತಿ ಮದ್ಯ ಸೇವಿಸಿ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದಾರೆ. ಆಗ ಹರೀಶ್ ಎಂಬಾತ ಮೂರ್ತಿ ಮೇಲೆ ಹಲ್ಲೆ ನಡೆಸಿದ್ದಾನೆ. ಜಗಳ ಬಿಡಿಸಲು ಬಂದ ಬಾಲಾಜಿ ಮೇಲೆಯೂ ದೊಣ್ಣೆ ಹಾಗೂ ರೇಜರ್ನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ. ಬಳಿಕ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಾಜಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. </p>.<p>ಕೊಲೆಯಾದ ಬಾಲಾಜಿ ಹಲವು ವರ್ಷಗಳ ಹಿಂದೆ ಕುಟುಂಬದ ಸದಸ್ಯರ ಜತೆಗೆ ನಗರಕ್ಕೆ ಬಂದು ನೆಲೆಸಿದ್ದರು. ತಂದೆ–ತಾಯಿ ಕೊತ್ತನೂರಿನಲ್ಲಿ ನೆಲೆಸಿದ್ದರೆ, ಪತ್ನಿ ವರ್ತೂರಿನಲ್ಲಿ ನೆಲೆಸಿದ್ದಾರೆ. ಬಾಲಾಜಿ ಅವರಿಗೆ ಮದ್ಯ ಸೇವನೆಯ ಅಭ್ಯಾಸವಿತ್ತು. ರಾತ್ರಿ ಮನೆಗೆ ಬಾರದೆ ಕೊತ್ತನೂರು ಭಾಗದಲ್ಲಿ ಎಲ್ಲೆಂದರಲ್ಲಿ ಮಲಗುತ್ತಿದ್ದರು ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನೇಪಾಳದ ಬಾಲಾಜಿ ಬಹದ್ದೂರ್ (42) ಎಂಬುವರನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.</p>.<p>ಸ್ಥಳೀಯ ನಿವಾಸಿ ಹರೀಶ್ (34) ಬಂಧಿತ ಆರೋಪಿ. ದಿನಗೂಲಿ ಕೆಲಸಗಾರರಾದ ಹರೀಶ್, ಬಾಲಾಜಿ ಮತ್ತು ಮೂರ್ತಿ ಕಟ್ಟಡ ನಿರ್ಮಾಣ ಕೆಲಸದ ಬಳಿಕ ನಿತ್ಯ ಸಂಜೆ ಪಾರ್ಟಿ ಮಾಡುತ್ತಿದ್ದರು. ಬಳಿಕ ನಿರ್ಮಾಣ ಹಂತದಲ್ಲಿರುವ ಕೊತ್ತನೂರು ಸಮುದಾಯ ಭವನದ ಕಟ್ಟಡದಲ್ಲಿಯೇ ಮಲಗುತ್ತಿದ್ದರು.</p>.<p>ಅದೇ ರೀತಿ ಭಾನುವಾರ ರಾತ್ರಿ ಮೂವರು ಕಂಠ ಪೂರ್ತಿ ಮದ್ಯ ಸೇವಿಸಿ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದಾರೆ. ಆಗ ಹರೀಶ್ ಎಂಬಾತ ಮೂರ್ತಿ ಮೇಲೆ ಹಲ್ಲೆ ನಡೆಸಿದ್ದಾನೆ. ಜಗಳ ಬಿಡಿಸಲು ಬಂದ ಬಾಲಾಜಿ ಮೇಲೆಯೂ ದೊಣ್ಣೆ ಹಾಗೂ ರೇಜರ್ನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ. ಬಳಿಕ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಾಜಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. </p>.<p>ಕೊಲೆಯಾದ ಬಾಲಾಜಿ ಹಲವು ವರ್ಷಗಳ ಹಿಂದೆ ಕುಟುಂಬದ ಸದಸ್ಯರ ಜತೆಗೆ ನಗರಕ್ಕೆ ಬಂದು ನೆಲೆಸಿದ್ದರು. ತಂದೆ–ತಾಯಿ ಕೊತ್ತನೂರಿನಲ್ಲಿ ನೆಲೆಸಿದ್ದರೆ, ಪತ್ನಿ ವರ್ತೂರಿನಲ್ಲಿ ನೆಲೆಸಿದ್ದಾರೆ. ಬಾಲಾಜಿ ಅವರಿಗೆ ಮದ್ಯ ಸೇವನೆಯ ಅಭ್ಯಾಸವಿತ್ತು. ರಾತ್ರಿ ಮನೆಗೆ ಬಾರದೆ ಕೊತ್ತನೂರು ಭಾಗದಲ್ಲಿ ಎಲ್ಲೆಂದರಲ್ಲಿ ಮಲಗುತ್ತಿದ್ದರು ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>