<p><strong>ಬೆಂಗಳೂರು:</strong> ಎಂ.ಜಿ. ರಸ್ತೆ, ಚರ್ಚ್ ಸ್ಟ್ರೀಟ್, ಬ್ರಿಗೇಡ್ ರಸ್ತೆ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿ ವೇಶ್ಯಾವಾಟಿಕೆ ಜಾಲ ಹರಡಿಕೊಂಡಿದ್ದು, ದೈಹಿಕ ಸಂಪರ್ಕದ ಆಸೆ ತೋರಿಸಿ ಜನರನ್ನು ಅಪಹರಿಸಿ ಸುಲಿಗೆ ಮಾಡಲಾಗುತ್ತಿದೆ. ಈ ಜಾಲಕ್ಕೆ ಸಿಲುಕಿ ಗುಜರಾತ್ನ ಸರ್ಕಾರಿ ಅಧಿಕಾರಿಯೊಬ್ಬರು ಹಣ ಕಳೆದುಕೊಂಡಿದ್ದು, ಈ ಸಂಬಂಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ಇತ್ತೀಚೆಗೆ ನಗರಕ್ಕೆ ಬಂದಿದ್ದ ಗುಜರಾತ್ ರಾಜ್ಯದ ಸೂರತ್ನ ಗೆಜೆಟೆಡ್ ಅಧಿಕಾರಿಯೊಬ್ಬರು ಸುಲಿಗೆ ಸಂಬಂಧ ದೂರು ನೀಡಿದ್ದಾರೆ. ಇಬ್ಬರು ಲಿಂಗತ್ವ ಅಲ್ಪಸಂಖ್ಯಾತರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳಿಬ್ಬರು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.</p>.<p>‘ಅಧಿಕಾರಿ ರೀತಿಯಲ್ಲಿ ಯಾರಾದರೂ ವೇಶ್ಯಾವಾಟಿಕೆ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದರೆ ಠಾಣೆಗೆ ದೂರು ನೀಡಬಹುದು’ ಎಂದು ತಿಳಿಸಿದರು.</p>.<p>ಪ್ರವಾಸಕ್ಕೆ ಬಂದಿದ್ದ ಅಧಿಕಾರಿ: ‘59 ವರ್ಷದ ಸರ್ಕಾರಿ ಅಧಿಕಾರಿ ಪ್ರವಾಸಕ್ಕೆಂದು ಬೆಂಗಳೂರಿಗೆ ನ. 29ರಂದು ಬಂದಿದ್ದರು. ಸ್ಥಳೀಯ ಹೋಟೆಲ್ನ ಕೊಠಡಿಯಲ್ಲಿ ಉಳಿದುಕೊಂಡಿದ್ದರು. ನ. 30ರಂದು ರಾತ್ರಿ 9 ಗಂಟೆ ಸುಮಾರಿಗೆ ಬ್ಯಾಗ್ ಖರೀದಿಸಲೆಂದು ಚರ್ಚ್ಸ್ಟ್ರೀಟ್ಗೆ ಹೋಗಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.</p>.<p>‘ಅಧಿಕಾರಿಯನ್ನು ಪರಿಚಯಿಸಿಕೊಂಡಿದ್ದ ಆರೋಪಿ, ವೇಶ್ಯಾವಾಟಿಕೆಗೆ ಆಹ್ವಾನಿಸಿದ್ದರು. ಅವರ ಜೊತೆ ಕೆಲ ನಿಮಿಷ ಮಾತನಾಡಿದ್ದ ಅಧಿಕಾರಿ, ಕೊಠಡಿಯೊಂದಕ್ಕೆ ಹೋಗಲು ಒಪ್ಪಿಕೊಂಡಿದ್ದರು. ಅವಾಗಲೇ ಅಧಿಕಾರಿ ಹಾಗೂ ಆರೋಪಿ, ಆಟೊದಲ್ಲಿ ಇಂದಿರಾನಗರದಲ್ಲಿರುವ ಕೊಠಡಿಗೆ ಹೋಗಿದ್ದರು. ಅಲ್ಲಿ ಮತ್ತೊಬ್ಬ ಆರೋಪಿ ಇದ್ದರು’ ಎಂದು ತಿಳಿಸಿವೆ.</p>.<p>‘ದೂರುದಾರ ಅಧಿಕಾರಿ, ಇಬ್ಬರನ್ನು ಮಹಿಳೆಯರು ಎಂದು ತಿಳಿದಿದ್ದರು. ಆದರೆ, ಅವರಿಬ್ಬರು ಲಿಂಗತ್ವ ಅಲ್ಪಸಂಖ್ಯಾತರು ಎಂಬುದು ಕೊಠಡಿಯಲ್ಲಿ ಗೊತ್ತಾಗಿತ್ತು. ಅಧಿಕಾರಿ, ಕೊಠಡಿಯಿಂದ ಹೊರಡಲು ಮುಂದಾಗಿದ್ದರು. ಅದೇ ಸಂದರ್ಭದಲ್ಲಿ ಅವರನ್ನು ಒತ್ತಾಯದಿಂದ ಕೊಠಡಿಯಲ್ಲಿ ಕೂರಿಸಿದ್ದ ಆರೋಪಿಗಳು, ಜೀವ ಬೆದರಿಕೆಯೊಡ್ಡಿದ್ದರು.’</p>.<p>‘ಅಧಿಕಾರಿ ಬಳಿಯ ₹ 20 ಸಾವಿರ ಹಣವನ್ನು ಆರೋಪಿಗಳು ಕಿತ್ತುಕೊಂಡಿದ್ದರು. ನಂತರ, ಮೊಬೈಲ್ ಕಸಿದುಕೊಂಡಿದ್ದರು. ಅಧಿಕಾರಿಯನ್ನು ಬೆದರಿಸಿ ಪೇಟಿಎಂ ಮೂಲಕ ₹ 30 ಸಾವಿರವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದರು. ‘ಸುಲಿಗೆ ಸಂಗತಿಯನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುತ್ತೇವೆ’ ಎಂದು ಬೆದರಿಸಿ ಆರೋಪಿಗಳು ಪರಾರಿಯಾಗಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.</p>.<p>‘ಘಟನೆಯಿಂದ ಹೆದರಿದ್ದ ಅಧಿಕಾರಿ, ಸಹೋದ್ಯೋಗಿಗಳು ಹಾಗೂ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದರು. ಮರುದಿನ ಪುನಃ ಚರ್ಚ್ಸ್ಟ್ರೀಟ್ಗೆ ಹೋಗಿದ್ದ ಅವರು, ಆರೋಪಿಗಳಿಗಾಗಿ ಹುಡುಕಾಡಿದ್ದರು. ಆದರೆ, ಅವರು ಸಿಕ್ಕಿರಲಿಲ್ಲ. ಬಳಿಕವೇ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದು ತಿಳಿಸಿವೆ.</p>.<p>‘ಜೀವ ಬೆದರಿಕೆ (ಐಪಿಸಿ 506), ಅಪರಾಧ ಸಂಚು (ಐಪಿಸಿ 34), ಶಾಂತಿ ಭಂಗವನ್ನುಂಟು ಮಾಡಲು ಪ್ರಚೋದನೆ (ಐಪಿಸಿ 504) ಹಾಗೂ ಸುಲಿಗೆ (ಐಪಿಸಿ 384) ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ತನಿಖೆ ಮುಂದುವರಿಸಿದೆ’ ಎಂದು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಎಂ.ಜಿ. ರಸ್ತೆ, ಚರ್ಚ್ ಸ್ಟ್ರೀಟ್, ಬ್ರಿಗೇಡ್ ರಸ್ತೆ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿ ವೇಶ್ಯಾವಾಟಿಕೆ ಜಾಲ ಹರಡಿಕೊಂಡಿದ್ದು, ದೈಹಿಕ ಸಂಪರ್ಕದ ಆಸೆ ತೋರಿಸಿ ಜನರನ್ನು ಅಪಹರಿಸಿ ಸುಲಿಗೆ ಮಾಡಲಾಗುತ್ತಿದೆ. ಈ ಜಾಲಕ್ಕೆ ಸಿಲುಕಿ ಗುಜರಾತ್ನ ಸರ್ಕಾರಿ ಅಧಿಕಾರಿಯೊಬ್ಬರು ಹಣ ಕಳೆದುಕೊಂಡಿದ್ದು, ಈ ಸಂಬಂಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ಇತ್ತೀಚೆಗೆ ನಗರಕ್ಕೆ ಬಂದಿದ್ದ ಗುಜರಾತ್ ರಾಜ್ಯದ ಸೂರತ್ನ ಗೆಜೆಟೆಡ್ ಅಧಿಕಾರಿಯೊಬ್ಬರು ಸುಲಿಗೆ ಸಂಬಂಧ ದೂರು ನೀಡಿದ್ದಾರೆ. ಇಬ್ಬರು ಲಿಂಗತ್ವ ಅಲ್ಪಸಂಖ್ಯಾತರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳಿಬ್ಬರು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.</p>.<p>‘ಅಧಿಕಾರಿ ರೀತಿಯಲ್ಲಿ ಯಾರಾದರೂ ವೇಶ್ಯಾವಾಟಿಕೆ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದರೆ ಠಾಣೆಗೆ ದೂರು ನೀಡಬಹುದು’ ಎಂದು ತಿಳಿಸಿದರು.</p>.<p>ಪ್ರವಾಸಕ್ಕೆ ಬಂದಿದ್ದ ಅಧಿಕಾರಿ: ‘59 ವರ್ಷದ ಸರ್ಕಾರಿ ಅಧಿಕಾರಿ ಪ್ರವಾಸಕ್ಕೆಂದು ಬೆಂಗಳೂರಿಗೆ ನ. 29ರಂದು ಬಂದಿದ್ದರು. ಸ್ಥಳೀಯ ಹೋಟೆಲ್ನ ಕೊಠಡಿಯಲ್ಲಿ ಉಳಿದುಕೊಂಡಿದ್ದರು. ನ. 30ರಂದು ರಾತ್ರಿ 9 ಗಂಟೆ ಸುಮಾರಿಗೆ ಬ್ಯಾಗ್ ಖರೀದಿಸಲೆಂದು ಚರ್ಚ್ಸ್ಟ್ರೀಟ್ಗೆ ಹೋಗಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.</p>.<p>‘ಅಧಿಕಾರಿಯನ್ನು ಪರಿಚಯಿಸಿಕೊಂಡಿದ್ದ ಆರೋಪಿ, ವೇಶ್ಯಾವಾಟಿಕೆಗೆ ಆಹ್ವಾನಿಸಿದ್ದರು. ಅವರ ಜೊತೆ ಕೆಲ ನಿಮಿಷ ಮಾತನಾಡಿದ್ದ ಅಧಿಕಾರಿ, ಕೊಠಡಿಯೊಂದಕ್ಕೆ ಹೋಗಲು ಒಪ್ಪಿಕೊಂಡಿದ್ದರು. ಅವಾಗಲೇ ಅಧಿಕಾರಿ ಹಾಗೂ ಆರೋಪಿ, ಆಟೊದಲ್ಲಿ ಇಂದಿರಾನಗರದಲ್ಲಿರುವ ಕೊಠಡಿಗೆ ಹೋಗಿದ್ದರು. ಅಲ್ಲಿ ಮತ್ತೊಬ್ಬ ಆರೋಪಿ ಇದ್ದರು’ ಎಂದು ತಿಳಿಸಿವೆ.</p>.<p>‘ದೂರುದಾರ ಅಧಿಕಾರಿ, ಇಬ್ಬರನ್ನು ಮಹಿಳೆಯರು ಎಂದು ತಿಳಿದಿದ್ದರು. ಆದರೆ, ಅವರಿಬ್ಬರು ಲಿಂಗತ್ವ ಅಲ್ಪಸಂಖ್ಯಾತರು ಎಂಬುದು ಕೊಠಡಿಯಲ್ಲಿ ಗೊತ್ತಾಗಿತ್ತು. ಅಧಿಕಾರಿ, ಕೊಠಡಿಯಿಂದ ಹೊರಡಲು ಮುಂದಾಗಿದ್ದರು. ಅದೇ ಸಂದರ್ಭದಲ್ಲಿ ಅವರನ್ನು ಒತ್ತಾಯದಿಂದ ಕೊಠಡಿಯಲ್ಲಿ ಕೂರಿಸಿದ್ದ ಆರೋಪಿಗಳು, ಜೀವ ಬೆದರಿಕೆಯೊಡ್ಡಿದ್ದರು.’</p>.<p>‘ಅಧಿಕಾರಿ ಬಳಿಯ ₹ 20 ಸಾವಿರ ಹಣವನ್ನು ಆರೋಪಿಗಳು ಕಿತ್ತುಕೊಂಡಿದ್ದರು. ನಂತರ, ಮೊಬೈಲ್ ಕಸಿದುಕೊಂಡಿದ್ದರು. ಅಧಿಕಾರಿಯನ್ನು ಬೆದರಿಸಿ ಪೇಟಿಎಂ ಮೂಲಕ ₹ 30 ಸಾವಿರವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದರು. ‘ಸುಲಿಗೆ ಸಂಗತಿಯನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುತ್ತೇವೆ’ ಎಂದು ಬೆದರಿಸಿ ಆರೋಪಿಗಳು ಪರಾರಿಯಾಗಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.</p>.<p>‘ಘಟನೆಯಿಂದ ಹೆದರಿದ್ದ ಅಧಿಕಾರಿ, ಸಹೋದ್ಯೋಗಿಗಳು ಹಾಗೂ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದರು. ಮರುದಿನ ಪುನಃ ಚರ್ಚ್ಸ್ಟ್ರೀಟ್ಗೆ ಹೋಗಿದ್ದ ಅವರು, ಆರೋಪಿಗಳಿಗಾಗಿ ಹುಡುಕಾಡಿದ್ದರು. ಆದರೆ, ಅವರು ಸಿಕ್ಕಿರಲಿಲ್ಲ. ಬಳಿಕವೇ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದು ತಿಳಿಸಿವೆ.</p>.<p>‘ಜೀವ ಬೆದರಿಕೆ (ಐಪಿಸಿ 506), ಅಪರಾಧ ಸಂಚು (ಐಪಿಸಿ 34), ಶಾಂತಿ ಭಂಗವನ್ನುಂಟು ಮಾಡಲು ಪ್ರಚೋದನೆ (ಐಪಿಸಿ 504) ಹಾಗೂ ಸುಲಿಗೆ (ಐಪಿಸಿ 384) ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ತನಿಖೆ ಮುಂದುವರಿಸಿದೆ’ ಎಂದು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>