ಮನೆಯಿಂದ ನಾಪತ್ತೆಯಾಗಿದ್ದ ಬಾಲಕಿಯನ್ನು ರಕ್ಷಿಸಿ ಪೋಷಕರಿಗೆ ಒಪ್ಪಿಸಿದ್ದ ದಾವಣಗೆರೆಯ ಕಾನ್ಸ್ಟೆಬಲ್ಗಳಾದ ಚನ್ನಮ್ಮ ಬಿ. ಹಾಗೂ ಸವಿತಾ ಎಚ್.ಬಿ, ಬಂಗಾರಪೇಟೆ ನಿಲ್ದಾಣದಲ್ಲಿ ರೈಲಿನಿಂದ ಆಯತಪ್ಪಿ ಬೀಳುತ್ತಿದ್ದ ವೃದ್ಧರೊಬ್ಬರನ್ನು ಕಾಪಾಡಿದ್ದ ಹೆಡ್ ಕಾನ್ಸ್ಟೆಬಲ್ ಬಿ.ವಿ. ಅಶೋಕ ಹಾಗೂ ಮಂಡ್ಯ ರೈಲು ನಿಲ್ದಾಣದಲ್ಲಿ ತಮ್ಮ ಮೇಲೆ ಹಲ್ಲೆಯಾದರೂ ಕಿಡಿಗೇಡಿಗಳನ್ನು ಬೆನ್ನಟ್ಟಿ ಹಿಡಿದಿದ್ದ ಕಾನ್ಸ್ಟೆಬಲ್ ಸತೀಶ್ ಚಂದ್ರ ಅವರಿಗೆ ರೈಲ್ವೆ ಪೊಲೀಸ್ ವತಿಯಿಂದ ‘ಮಾರ್ಚ್ ತಿಂಗಳ ಮಾದರಿ ವ್ಯಕ್ತಿ’ ಪ್ರಶಂಸನಾ ಪತ್ರ ನೀಡಿ ಎಸ್ಪಿ ಎಸ್.ಕೆ. ಸೌಮ್ಯಲತಾ ಅವರು ಗೌರವಿಸಿದರು – ಪ್ರಜಾವಾಣಿ ಚಿತ್ರ