<p><strong>ಬೆಂಗಳೂರು</strong>: ಕೆಎಸ್ಆರ್ಟಿಸಿಯ ಹಳೇ ಸಾರಿಗೆ ಬಸ್ಗಳನ್ನು ನವೀಕರಿಸಿ ಮತ್ತೆ ಬಳಸುವ ಯೋಜನೆ ವೇಗ ಪಡೆದುಕೊಂಡಿದೆ. ನವೀಕೃತ ಬಸ್ಗಳ ಸಂಖ್ಯೆ ಸಾವಿರದ ಗಡಿ ದಾಟಿದೆ. ಐರಾವತ, ಐರಾವತ ಕ್ಲಬ್ಕಾಸ್ ಬಸ್ಗಳನ್ನೂ ನವೀಕರಿಸಲು ಕೆಎಸ್ಆರ್ಟಿಸಿ ಮುಂದಾಗಿದೆ.</p>.<p>ಹೊಸ ಬಸ್ಗಳ ಖರೀದಿಯ ಹೊರೆಯನ್ನು ಕಡಿಮೆ ಮಾಡಲು ಒಂದೂವರೆ ವರ್ಷಗಳ ಹಿಂದೆ ನವೀಕರಣ ಯೋಜನೆಯನ್ನು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬು ಕುಮಾರ್ ಆರಂಭಿಸಿದ್ದರು. 15 ವರ್ಷ ಪೂರೈಸದ, ಎಂಜಿನ್ ಹಾಳಾಗದ ಬಸ್ಗಳಿಗೆ ಹೊಸ ರೂಪ ನೀಡುವ ಕಾರ್ಯಕ್ಕೆ ಚಾಲನೆ ನೀಡಿದ್ದರು. ಅಲ್ಲಿಯವರೆಗೆ ಬಸ್ ರಿಪೇರಿಗಷ್ಟೇ ಸೀಮಿತವಾಗಿದ್ದ ಕೆಎಸ್ಆರ್ಟಿಸಿ ಕಾರ್ಯಾಗಾರಗಳಲ್ಲಿ ಹೊಸ ಚಟುವಟಿಕೆ ಶುರುವಾಯಿತು. ಇಲ್ಲಿವರೆಗೆ 1,027 ಬಸ್ಗಳನ್ನು ನವೀಕರಿಸಲಾಗಿದೆ.</p>.<p>10 ಲಕ್ಷ ಕಿಲೋ ಮೀಟರ್ ಸಂಚಾರ ಮಾಡಿದ ಬಸ್ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತಿತ್ತು. ಈ ಬಸ್ಗಳು ಹೊಸ ಯೋಜನೆಯಿಂದಾಗಿ ನವೀಕರಣಗೊಂಡು ಮತ್ತೆ 3 ಲಕ್ಷ ಕಿಲೋಮೀಟರ್ ಸಂಚರಿಸಲಿವೆ. ಒಂದು ಸಾರಿಗೆ ಬಸ್ ಖರೀದಿಗೆ ಕನಿಷ್ಠ ₹ 40 ಲಕ್ಷ ಬೇಕಾಗುತ್ತದೆ. ಒಂದು ಬಸ್ ನವೀಕರಿಸಲು ₹ 3 ಲಕ್ಷದಿಂದ ₹ 4 ಲಕ್ಷ ಸಾಕಾಗುತ್ತದೆ. ಒಂದು ಹೊಸ ಬಸ್ ಖರೀದಿ ಮಾಡುವ ವೆಚ್ಚದಲ್ಲಿ 10 ಬಸ್ಗಳನ್ನು ನವೀಕರಿಸಲು ಸಾಧ್ಯವಾಗುತ್ತದೆ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.</p>.<p>‘ಬಸ್ಗಳ ತುಕ್ಕು ಹಿಡಿದ ಮತ್ತು ಹಾನಿಗೊಳಗಾದ ಎಲ್ಲ ಭಾಗಗಳನ್ನು ಹೊರ ತೆಗೆಯುತ್ತೇವೆ. ಪೂರ್ತಿ ಬಸ್ ಬಿಚ್ಚಿ ಶುರುವಿಂದ ರಚನೆ ಕಾರ್ಯ ಮಾಡುತ್ತೇವೆ. ಪ್ಯಾನೆಲಿಂಗ್ ಮುಗಿದ ಮೇಲೆ ಬಸ್ನ ಹೊರಭಾಗಕ್ಕೆ ಕಬ್ಬಿಣದ ಹೊಸ ಶೀಟ್ ಅಳವಡಿಸಲಾಗುತ್ತದೆ. ಕಿಟಕಿ, ಅದರ ಗ್ಲಾಸ್, ಸೀಟ್ ಕುಶನ್ ಸಹಿತ ಎಲ್ಲವನ್ನೂ ಬದಲಾಯಿಸುತ್ತೇವೆ’ ಎಂದು ಕೆಎಸ್ಆರ್ಟಿಸಿ ಕಾರ್ಯಾಗಾರದ ಮೆಕ್ಯಾನಿಕಲ್ ಎಂಜಿನಿಯರ್ಗಳು ಮಾಹಿತಿ ನೀಡಿದರು.</p>.<p>‘ಚಾಸಿ ಮತ್ತು ಎಂಜಿನ್ ಮಾತ್ರ ಅದೇ ಇರುತ್ತದೆ. ಎಂಜಿನ್ ಸ್ವಲ್ಪ ಹದಗೆಟ್ಟಿದ್ದರೆ ಸರಿಪಡಿಸುವ ತಜ್ಞ ಮೆಕ್ಯಾನಿಕ್ಗಳು ನಮ್ಮಲ್ಲಿದ್ದಾರೆ. ಪೂರ್ತಿ ಎಂಜಿನ್ ಹಾಳಾಗಿದ್ದರೆ ಅವುಗಳನ್ನು ನವೀಕರಣಕ್ಕೆ ಬಳಸುವುದಿಲ್ಲ. ಹೊಸ ಬಸ್ಗಳಂತೆ ರೂಪಿಸುವುದರ ಜೊತೆಗೆ ಇಂಧನ ಬಳಕೆ, ಗುಣಮಟ್ಟ ಕೂಡ ಅದೇ ರೀತಿ ಇರುವಂತೆ ಮಾಡುತ್ತೇವೆ’ ಎಂದು ವಿವರಿಸಿದರು.</p>.<p>ಕ್ಲಬ್ ಕ್ಲಾಸ್:</p>.<p>‘ಇಲ್ಲಿಯವರೆಗೆ ಸಾರಿಗೆ ಬಸ್ಗಳನ್ನಷ್ಟೇ ನವೀಕರಿಸಲಾಗುತ್ತಿತ್ತು. ಈ ಬಾರಿ ಐರಾವತ ಬಸ್ ಮತ್ತು ಐರಾವತ ಕ್ಲಬ್ ಕ್ಲಾಸ್ ಬಸ್ಗಳನ್ನು ನವೀಕರಿಸುತ್ತಿದ್ದೇವೆ. ಸದ್ಯ ಈ ರೀತಿಯ ನಾಲ್ಕು ಬಸ್ಗಳ ನವೀಕರಣ ನಡೆಯುತ್ತಿದೆ’ ಎಂದು ಮೆಕ್ಯಾನಿಕಲ್ ಎಂಜಿನಿಯರ್ ತಿಳಿಸಿದರು.</p>.<p><strong>ಕಾನೂನು ಪ್ರಕಾರವೇ ನವೀಕರಣ</strong> </p><p>‘ಕಾನೂನು ಪ್ರಕಾರ ಒಂದು ವಾಹನ 15 ವರ್ಷ ಸಂಚಾರ ನಡೆಸಬಹುದಾದರೂ 10–11 ವರ್ಷಕ್ಕೆ ಬಸ್ಗಳು ನಿಲುಗಡೆಗೊಳ್ಳುತ್ತಿದ್ದವು. ಖಾಸಗಿ ವಾಹನಗಳನ್ನು 20 ಲಕ್ಷ ಕಿಲೋಮೀಟರ್ ಓಡಿಸುತ್ತಾರೆ. ನಮ್ಮ ಬಸ್ಗಳನ್ನು 10 ಲಕ್ಷ ಕಿ.ಮೀ.ಗೆ ನಿಲುಗಡೆಗೊಳಿಸಲಾಗುತ್ತಿತ್ತು. ನವೀಕರಣದಿಂದಾಗಿ ಬಸ್ಗಳು ಒಟ್ಟು 15 ವರ್ಷ ಸಂಚರಿಸುವಂತಾಗಿದೆ. ಇದರಿಂದ ನಿಗಮಕ್ಕೆ ಖರ್ಚು ಕಡಿಮೆಯಾಗಿದೆ. ಜೊತೆಗೆ ಬಸ್ಗಳ ಕೊರತೆಯೂ ಕಡಿಮೆಯಾಗುತ್ತಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಕೆಎಸ್ಆರ್ಟಿಸಿಯ ಎರಡು ಪ್ರಾದೇಶಿಕ ಕಾರ್ಯಾಗಾರಗಳಲ್ಲಿ ಮಾತ್ರ ಬಸ್ ಪರಿವರ್ತನೆ ನಡೆಯುತ್ತಿತ್ತು. ಈಗ ಎಲ್ಲ 15 ವಿಭಾಗಗಳ ಕಾರ್ಯಾಗಾರಗಳಲ್ಲಿಯೂ ಬಸ್ಗಳ ನವೀಕರಣ ಮಾಡಲಾಗುತ್ತಿದೆ. ಸಾಮಾನ್ಯ ಬಸ್ಗಳಿಗೆ ಸೀಮಿತಗೊಳಿಸದೇ ಎಲ್ಲ ಬಸ್ಗಳನ್ನು ಇದೇ ಮಾದರಿಯಲ್ಲಿ ನವೀಕರಿಸಲಾಗುವುದು ಎಂದು ಹೇಳಿದರು.</p><p>‘ಇಲ್ಲಿಯವರೆಗೆ ಸಾಮಾನ್ಯ ಸಾರಿಗೆ ಬಸ್ಗಳನ್ನಷ್ಟೇ ನವೀಕರಿಸಲಾಗುತ್ತಿತ್ತು. ಈ ಬಾರಿ ಐರಾವತ ಬಸ್ ಮತ್ತು ಐರಾವತ ಕ್ಲಬ್ ಕ್ಲಾಸ್ ಬಸ್ಗಳ ನವೀಕರಣ ಕಾರ್ಯಕ್ಕೆ ಇಳಿದಿದ್ದೇವೆ. ಸದ್ಯ ಈ ರೀತಿಯ ನಾಲ್ಕು ಬಸ್ಗಳ ನವೀಕರಣ ನಡೆಯುತ್ತಿದೆ. ಇದು ಯಶಸ್ವಿಯಾದ ಮೇಲೆ ಇತರ ಪ್ರೀಮಿಯಂ ಬಸ್ಗಳನ್ನು ನವೀಕರಿಸುವ ಪ್ರಯತ್ನ ಮಾಡಲಾಗುವುದು’ ಎಂದು ಕೆಎಸ್ಆರ್ಟಿಸಿ ಮೆಕ್ಯಾನಿಕಲ್ ಎಂಜಿನಿಯರ್ ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕೆಎಸ್ಆರ್ಟಿಸಿಯ ಹಳೇ ಸಾರಿಗೆ ಬಸ್ಗಳನ್ನು ನವೀಕರಿಸಿ ಮತ್ತೆ ಬಳಸುವ ಯೋಜನೆ ವೇಗ ಪಡೆದುಕೊಂಡಿದೆ. ನವೀಕೃತ ಬಸ್ಗಳ ಸಂಖ್ಯೆ ಸಾವಿರದ ಗಡಿ ದಾಟಿದೆ. ಐರಾವತ, ಐರಾವತ ಕ್ಲಬ್ಕಾಸ್ ಬಸ್ಗಳನ್ನೂ ನವೀಕರಿಸಲು ಕೆಎಸ್ಆರ್ಟಿಸಿ ಮುಂದಾಗಿದೆ.</p>.<p>ಹೊಸ ಬಸ್ಗಳ ಖರೀದಿಯ ಹೊರೆಯನ್ನು ಕಡಿಮೆ ಮಾಡಲು ಒಂದೂವರೆ ವರ್ಷಗಳ ಹಿಂದೆ ನವೀಕರಣ ಯೋಜನೆಯನ್ನು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬು ಕುಮಾರ್ ಆರಂಭಿಸಿದ್ದರು. 15 ವರ್ಷ ಪೂರೈಸದ, ಎಂಜಿನ್ ಹಾಳಾಗದ ಬಸ್ಗಳಿಗೆ ಹೊಸ ರೂಪ ನೀಡುವ ಕಾರ್ಯಕ್ಕೆ ಚಾಲನೆ ನೀಡಿದ್ದರು. ಅಲ್ಲಿಯವರೆಗೆ ಬಸ್ ರಿಪೇರಿಗಷ್ಟೇ ಸೀಮಿತವಾಗಿದ್ದ ಕೆಎಸ್ಆರ್ಟಿಸಿ ಕಾರ್ಯಾಗಾರಗಳಲ್ಲಿ ಹೊಸ ಚಟುವಟಿಕೆ ಶುರುವಾಯಿತು. ಇಲ್ಲಿವರೆಗೆ 1,027 ಬಸ್ಗಳನ್ನು ನವೀಕರಿಸಲಾಗಿದೆ.</p>.<p>10 ಲಕ್ಷ ಕಿಲೋ ಮೀಟರ್ ಸಂಚಾರ ಮಾಡಿದ ಬಸ್ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತಿತ್ತು. ಈ ಬಸ್ಗಳು ಹೊಸ ಯೋಜನೆಯಿಂದಾಗಿ ನವೀಕರಣಗೊಂಡು ಮತ್ತೆ 3 ಲಕ್ಷ ಕಿಲೋಮೀಟರ್ ಸಂಚರಿಸಲಿವೆ. ಒಂದು ಸಾರಿಗೆ ಬಸ್ ಖರೀದಿಗೆ ಕನಿಷ್ಠ ₹ 40 ಲಕ್ಷ ಬೇಕಾಗುತ್ತದೆ. ಒಂದು ಬಸ್ ನವೀಕರಿಸಲು ₹ 3 ಲಕ್ಷದಿಂದ ₹ 4 ಲಕ್ಷ ಸಾಕಾಗುತ್ತದೆ. ಒಂದು ಹೊಸ ಬಸ್ ಖರೀದಿ ಮಾಡುವ ವೆಚ್ಚದಲ್ಲಿ 10 ಬಸ್ಗಳನ್ನು ನವೀಕರಿಸಲು ಸಾಧ್ಯವಾಗುತ್ತದೆ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.</p>.<p>‘ಬಸ್ಗಳ ತುಕ್ಕು ಹಿಡಿದ ಮತ್ತು ಹಾನಿಗೊಳಗಾದ ಎಲ್ಲ ಭಾಗಗಳನ್ನು ಹೊರ ತೆಗೆಯುತ್ತೇವೆ. ಪೂರ್ತಿ ಬಸ್ ಬಿಚ್ಚಿ ಶುರುವಿಂದ ರಚನೆ ಕಾರ್ಯ ಮಾಡುತ್ತೇವೆ. ಪ್ಯಾನೆಲಿಂಗ್ ಮುಗಿದ ಮೇಲೆ ಬಸ್ನ ಹೊರಭಾಗಕ್ಕೆ ಕಬ್ಬಿಣದ ಹೊಸ ಶೀಟ್ ಅಳವಡಿಸಲಾಗುತ್ತದೆ. ಕಿಟಕಿ, ಅದರ ಗ್ಲಾಸ್, ಸೀಟ್ ಕುಶನ್ ಸಹಿತ ಎಲ್ಲವನ್ನೂ ಬದಲಾಯಿಸುತ್ತೇವೆ’ ಎಂದು ಕೆಎಸ್ಆರ್ಟಿಸಿ ಕಾರ್ಯಾಗಾರದ ಮೆಕ್ಯಾನಿಕಲ್ ಎಂಜಿನಿಯರ್ಗಳು ಮಾಹಿತಿ ನೀಡಿದರು.</p>.<p>‘ಚಾಸಿ ಮತ್ತು ಎಂಜಿನ್ ಮಾತ್ರ ಅದೇ ಇರುತ್ತದೆ. ಎಂಜಿನ್ ಸ್ವಲ್ಪ ಹದಗೆಟ್ಟಿದ್ದರೆ ಸರಿಪಡಿಸುವ ತಜ್ಞ ಮೆಕ್ಯಾನಿಕ್ಗಳು ನಮ್ಮಲ್ಲಿದ್ದಾರೆ. ಪೂರ್ತಿ ಎಂಜಿನ್ ಹಾಳಾಗಿದ್ದರೆ ಅವುಗಳನ್ನು ನವೀಕರಣಕ್ಕೆ ಬಳಸುವುದಿಲ್ಲ. ಹೊಸ ಬಸ್ಗಳಂತೆ ರೂಪಿಸುವುದರ ಜೊತೆಗೆ ಇಂಧನ ಬಳಕೆ, ಗುಣಮಟ್ಟ ಕೂಡ ಅದೇ ರೀತಿ ಇರುವಂತೆ ಮಾಡುತ್ತೇವೆ’ ಎಂದು ವಿವರಿಸಿದರು.</p>.<p>ಕ್ಲಬ್ ಕ್ಲಾಸ್:</p>.<p>‘ಇಲ್ಲಿಯವರೆಗೆ ಸಾರಿಗೆ ಬಸ್ಗಳನ್ನಷ್ಟೇ ನವೀಕರಿಸಲಾಗುತ್ತಿತ್ತು. ಈ ಬಾರಿ ಐರಾವತ ಬಸ್ ಮತ್ತು ಐರಾವತ ಕ್ಲಬ್ ಕ್ಲಾಸ್ ಬಸ್ಗಳನ್ನು ನವೀಕರಿಸುತ್ತಿದ್ದೇವೆ. ಸದ್ಯ ಈ ರೀತಿಯ ನಾಲ್ಕು ಬಸ್ಗಳ ನವೀಕರಣ ನಡೆಯುತ್ತಿದೆ’ ಎಂದು ಮೆಕ್ಯಾನಿಕಲ್ ಎಂಜಿನಿಯರ್ ತಿಳಿಸಿದರು.</p>.<p><strong>ಕಾನೂನು ಪ್ರಕಾರವೇ ನವೀಕರಣ</strong> </p><p>‘ಕಾನೂನು ಪ್ರಕಾರ ಒಂದು ವಾಹನ 15 ವರ್ಷ ಸಂಚಾರ ನಡೆಸಬಹುದಾದರೂ 10–11 ವರ್ಷಕ್ಕೆ ಬಸ್ಗಳು ನಿಲುಗಡೆಗೊಳ್ಳುತ್ತಿದ್ದವು. ಖಾಸಗಿ ವಾಹನಗಳನ್ನು 20 ಲಕ್ಷ ಕಿಲೋಮೀಟರ್ ಓಡಿಸುತ್ತಾರೆ. ನಮ್ಮ ಬಸ್ಗಳನ್ನು 10 ಲಕ್ಷ ಕಿ.ಮೀ.ಗೆ ನಿಲುಗಡೆಗೊಳಿಸಲಾಗುತ್ತಿತ್ತು. ನವೀಕರಣದಿಂದಾಗಿ ಬಸ್ಗಳು ಒಟ್ಟು 15 ವರ್ಷ ಸಂಚರಿಸುವಂತಾಗಿದೆ. ಇದರಿಂದ ನಿಗಮಕ್ಕೆ ಖರ್ಚು ಕಡಿಮೆಯಾಗಿದೆ. ಜೊತೆಗೆ ಬಸ್ಗಳ ಕೊರತೆಯೂ ಕಡಿಮೆಯಾಗುತ್ತಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಕೆಎಸ್ಆರ್ಟಿಸಿಯ ಎರಡು ಪ್ರಾದೇಶಿಕ ಕಾರ್ಯಾಗಾರಗಳಲ್ಲಿ ಮಾತ್ರ ಬಸ್ ಪರಿವರ್ತನೆ ನಡೆಯುತ್ತಿತ್ತು. ಈಗ ಎಲ್ಲ 15 ವಿಭಾಗಗಳ ಕಾರ್ಯಾಗಾರಗಳಲ್ಲಿಯೂ ಬಸ್ಗಳ ನವೀಕರಣ ಮಾಡಲಾಗುತ್ತಿದೆ. ಸಾಮಾನ್ಯ ಬಸ್ಗಳಿಗೆ ಸೀಮಿತಗೊಳಿಸದೇ ಎಲ್ಲ ಬಸ್ಗಳನ್ನು ಇದೇ ಮಾದರಿಯಲ್ಲಿ ನವೀಕರಿಸಲಾಗುವುದು ಎಂದು ಹೇಳಿದರು.</p><p>‘ಇಲ್ಲಿಯವರೆಗೆ ಸಾಮಾನ್ಯ ಸಾರಿಗೆ ಬಸ್ಗಳನ್ನಷ್ಟೇ ನವೀಕರಿಸಲಾಗುತ್ತಿತ್ತು. ಈ ಬಾರಿ ಐರಾವತ ಬಸ್ ಮತ್ತು ಐರಾವತ ಕ್ಲಬ್ ಕ್ಲಾಸ್ ಬಸ್ಗಳ ನವೀಕರಣ ಕಾರ್ಯಕ್ಕೆ ಇಳಿದಿದ್ದೇವೆ. ಸದ್ಯ ಈ ರೀತಿಯ ನಾಲ್ಕು ಬಸ್ಗಳ ನವೀಕರಣ ನಡೆಯುತ್ತಿದೆ. ಇದು ಯಶಸ್ವಿಯಾದ ಮೇಲೆ ಇತರ ಪ್ರೀಮಿಯಂ ಬಸ್ಗಳನ್ನು ನವೀಕರಿಸುವ ಪ್ರಯತ್ನ ಮಾಡಲಾಗುವುದು’ ಎಂದು ಕೆಎಸ್ಆರ್ಟಿಸಿ ಮೆಕ್ಯಾನಿಕಲ್ ಎಂಜಿನಿಯರ್ ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>