<p>ಬೆಂಗಳೂರು: ನಿರೂಪಕಿ, ನಟಿ ಅಪರ್ಣಾ ಅವರಿಗೆ ಕರ್ನಾಟಕ ಸುಗಮ ಸಂಗೀತ ಪರಿಷತ್ತು ಹಾಗೂ ಕಟ್ಟೆ ಸತ್ಯ ಫೌಂಡೇಶನ್ ವತಿಯಿಂದ ಶುಕ್ರವಾರ ‘ಅಪರ್ಣಾ–ನಿಮಗಿದೋ ನಮ್ಮ ನುಡಿ ನಮನ–ಗೀತ ಗೌರವ’ ಸಲ್ಲಿಸಲಾಯಿತು.</p>.<p>‘ಅಪರ್ಣಾ ಅವರು ತನ್ನ ಆರೋಗ್ಯ ಸಮಸ್ಯೆಯನ್ನು ತೀರ ಹತ್ತಿರದವರನ್ನು ಹೊರತುಪಡಿಸಿ ಯಾರೊಂದಿಗೂ ಹಂಚಿಕೊಂಡವರಲ್ಲ. ಕೆಲವು ಸಮಯದ ಹಿಂದೆ ನಮ್ಮ ಮನೆಗೆ ಬಂದು ವಿಚಾರ ತಿಳಿಸಿದ್ದರು. ವಸ್ತಾರೆ ಅವರು ಅಪರ್ಣಾರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು’ ಎಂದು ಸುಗಮ ಸಂಗೀತ ಪರಿಷತ್ತು ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ನೆನಪು ಮಾಡಿದರು.</p>.<p>‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕನಾಗಿದ್ದಾಗ ಮತ್ತು ಸುಗಮ ಸಂಗೀತ ಪರಿಷತ್ತು ಅಧ್ಯಕ್ಷರಾದ ಮೇಲೆಯೂ ಅನೇಕ ಕಾರ್ಯಕ್ರಮಗಳಿಗೆ ಅಪರ್ಣಾ ಅವರನ್ನೇ ನಿರೂಪಕಿಯಾಗಿ ಆಹ್ವಾನಿಸುತ್ತಿದ್ದೆ’ ಎಂದರು.</p>.<p>ಕಟ್ಟೆ ಸತ್ಯ ಫೌಂಡೇಶನ್ನ ಕಟ್ಟೆ ಸತ್ಯನಾರಾಯಣ, ನಾಗರಾಜ್ ವಸ್ತಾರೆ, ಹರೀಶ್ ನಾಗರಾಜ್, ಕಲಾ ಕ್ಷೇತ್ರ ವಿವಿಧ ರಂಗದಲ್ಲಿ ಕೆಲಸ ಮಾಡಿರುವ ಸಿ. ಸೋಮಶೇಖರ್, ಶ್ರೀನಿವಾಸ್ ಜಿ. ಕಪ್ಪಣ್ಣ, ನಾ.ದಾಮೋದರ ಶೆಟ್ಟಿ, ಎಚ್.ಎನ್. ನೀಲಕಂಠ, ಕಿಕ್ಕೇರಿ ಕೃಷ್ಣಮೂರ್ತಿ, ಶಂಕರ್ ಪ್ರಕಾಶ್, ವನಮಾಲ ವಿಶ್ವನಾಥ್, ಸಂಧ್ಯಾ ಕುಮಾರ್, ಪೂರ್ಣಿಮಾ ಕೃಷ್ಣಮೂರ್ತಿ, ಎಸ್. ಸುನಿತಾ ಅವರು ಅಪರ್ಣಾ ಜೊತೆಗಿನ ಒಡನಾಟವನ್ನು ಹಂಚಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ನಿರೂಪಕಿ, ನಟಿ ಅಪರ್ಣಾ ಅವರಿಗೆ ಕರ್ನಾಟಕ ಸುಗಮ ಸಂಗೀತ ಪರಿಷತ್ತು ಹಾಗೂ ಕಟ್ಟೆ ಸತ್ಯ ಫೌಂಡೇಶನ್ ವತಿಯಿಂದ ಶುಕ್ರವಾರ ‘ಅಪರ್ಣಾ–ನಿಮಗಿದೋ ನಮ್ಮ ನುಡಿ ನಮನ–ಗೀತ ಗೌರವ’ ಸಲ್ಲಿಸಲಾಯಿತು.</p>.<p>‘ಅಪರ್ಣಾ ಅವರು ತನ್ನ ಆರೋಗ್ಯ ಸಮಸ್ಯೆಯನ್ನು ತೀರ ಹತ್ತಿರದವರನ್ನು ಹೊರತುಪಡಿಸಿ ಯಾರೊಂದಿಗೂ ಹಂಚಿಕೊಂಡವರಲ್ಲ. ಕೆಲವು ಸಮಯದ ಹಿಂದೆ ನಮ್ಮ ಮನೆಗೆ ಬಂದು ವಿಚಾರ ತಿಳಿಸಿದ್ದರು. ವಸ್ತಾರೆ ಅವರು ಅಪರ್ಣಾರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು’ ಎಂದು ಸುಗಮ ಸಂಗೀತ ಪರಿಷತ್ತು ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ನೆನಪು ಮಾಡಿದರು.</p>.<p>‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕನಾಗಿದ್ದಾಗ ಮತ್ತು ಸುಗಮ ಸಂಗೀತ ಪರಿಷತ್ತು ಅಧ್ಯಕ್ಷರಾದ ಮೇಲೆಯೂ ಅನೇಕ ಕಾರ್ಯಕ್ರಮಗಳಿಗೆ ಅಪರ್ಣಾ ಅವರನ್ನೇ ನಿರೂಪಕಿಯಾಗಿ ಆಹ್ವಾನಿಸುತ್ತಿದ್ದೆ’ ಎಂದರು.</p>.<p>ಕಟ್ಟೆ ಸತ್ಯ ಫೌಂಡೇಶನ್ನ ಕಟ್ಟೆ ಸತ್ಯನಾರಾಯಣ, ನಾಗರಾಜ್ ವಸ್ತಾರೆ, ಹರೀಶ್ ನಾಗರಾಜ್, ಕಲಾ ಕ್ಷೇತ್ರ ವಿವಿಧ ರಂಗದಲ್ಲಿ ಕೆಲಸ ಮಾಡಿರುವ ಸಿ. ಸೋಮಶೇಖರ್, ಶ್ರೀನಿವಾಸ್ ಜಿ. ಕಪ್ಪಣ್ಣ, ನಾ.ದಾಮೋದರ ಶೆಟ್ಟಿ, ಎಚ್.ಎನ್. ನೀಲಕಂಠ, ಕಿಕ್ಕೇರಿ ಕೃಷ್ಣಮೂರ್ತಿ, ಶಂಕರ್ ಪ್ರಕಾಶ್, ವನಮಾಲ ವಿಶ್ವನಾಥ್, ಸಂಧ್ಯಾ ಕುಮಾರ್, ಪೂರ್ಣಿಮಾ ಕೃಷ್ಣಮೂರ್ತಿ, ಎಸ್. ಸುನಿತಾ ಅವರು ಅಪರ್ಣಾ ಜೊತೆಗಿನ ಒಡನಾಟವನ್ನು ಹಂಚಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>