<p>ಬೆಂಗಳೂರು: ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್ ಮೆಮೊರಿಯಲ್ ಫೌಂಡೇಷನ್ ಟ್ರಸ್ಟ್ ವತಿಯಿಂದ ‘ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್’ ಸಂಗೀತೋತ್ಸವ ಜಯನಗರದಲ್ಲಿರುವ ಯುವಪಥದ ವಿವೇಕ ಸಭಾಂಗಣದಲ್ಲಿ ಶನಿವಾರ ನಡೆಯಿತು.</p>.<p>ಟ್ರಸ್ಟ್ ವತಿಯಿಂದ 2022ನೇ ಸಾಲಿನ ‘ಇನ್ಫೊಸಿಸ್– ಸಿತಾರ್ ನವಾಜ್ ಬಾಲೇಖಾನ್ ಸ್ಮರಣಾರ್ಥ ಪ್ರಶಸ್ತಿ’ಯನ್ನು ಸರೋದ್ ವಾದಕ ಉಸ್ತಾದ್ ಆಶೀಶ್ ಖಾನ್ ಅವರಿಗೆ ನೀಡಿ ಗೌರವಿಸಲಾಯಿತು. ‘ಸಿತಾರ್ ನವಾಜ್ ಉಸ್ತಾದ ಬಾಲೇಖಾನ್ ಸ್ಮರಣಾರ್ಥ ಸಹ ಕಲಾವಿದ ಪ್ರಶಸ್ತಿ’ಯನ್ನು ತಬಲಾ ವಾದಕ ಸತೀಶ್ ಹಂಪಿಹೊಳಿ ಅವರಿಗೆ ನೀಡಿ ಸನ್ಮಾನಿಸಲಾಯಿತು. </p>.<p>ಕಿರಣ–ಘರಣ ಗಾಯಕ ಪಂಡಿತ್ ವಿನಾಯಕ ತೊರ್ವಿ ಪ್ರಶಸ್ತಿ ಪ್ರದಾನ ಮಾಡಿದರು. ಕಲಾವಿದ ರಫೀಕ್ ಖಾನ್ , ಶಫಿಕ್ ಖಾನ್, ರಾಯೀಸ್ ಖಾನ್, ಉಸ್ತಾದ್ ಹಫೀಜ್ ಬಾಲೇಖಾನ್ ಹಾಜರಿದ್ದರು.</p>.<p>ಪ್ರವೀಣ್ ಜೆ. ಶೈಖ್, ಅನೀಸ ಖಾನ್ ಸೌದಾಗರ್, ದತ್ತಾತ್ರೇಯ ಜೋಶಿ, ಶಿವಕುಮಾರ್ ಮಹಾಂತ್ರಿಂದ ಸಂಗೀತ ಕಚೇರಿ ನಡೆಯಿತು. ಶ್ರೇಯಾ ವಿ. ಮೂರ್ತಿ, ಸತೀಶ್ ಹಂಪಿಹೊಳಿ, ಗೌರವ್ ಗಡಿಯಾರ್ ತಂಡದಿಂದ ಹಿಂದುಸ್ಥಾನಿ ಸಂಗೀತ ಕಾರ್ಯಕ್ರಮ ನಡೆಯಿತು. ಉಸ್ತಾದ್ ಆಶೀಸ್ಖಾನ್ ಅವರ ಸರೋದ್ ಕಾರ್ಯಕ್ರಮಕ್ಕೆ ರಾಜೇಂದ್ರ ನಾಕೋಡ್ ತಬಲದಲ್ಲಿ ಸಾಥ್ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್ ಮೆಮೊರಿಯಲ್ ಫೌಂಡೇಷನ್ ಟ್ರಸ್ಟ್ ವತಿಯಿಂದ ‘ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್’ ಸಂಗೀತೋತ್ಸವ ಜಯನಗರದಲ್ಲಿರುವ ಯುವಪಥದ ವಿವೇಕ ಸಭಾಂಗಣದಲ್ಲಿ ಶನಿವಾರ ನಡೆಯಿತು.</p>.<p>ಟ್ರಸ್ಟ್ ವತಿಯಿಂದ 2022ನೇ ಸಾಲಿನ ‘ಇನ್ಫೊಸಿಸ್– ಸಿತಾರ್ ನವಾಜ್ ಬಾಲೇಖಾನ್ ಸ್ಮರಣಾರ್ಥ ಪ್ರಶಸ್ತಿ’ಯನ್ನು ಸರೋದ್ ವಾದಕ ಉಸ್ತಾದ್ ಆಶೀಶ್ ಖಾನ್ ಅವರಿಗೆ ನೀಡಿ ಗೌರವಿಸಲಾಯಿತು. ‘ಸಿತಾರ್ ನವಾಜ್ ಉಸ್ತಾದ ಬಾಲೇಖಾನ್ ಸ್ಮರಣಾರ್ಥ ಸಹ ಕಲಾವಿದ ಪ್ರಶಸ್ತಿ’ಯನ್ನು ತಬಲಾ ವಾದಕ ಸತೀಶ್ ಹಂಪಿಹೊಳಿ ಅವರಿಗೆ ನೀಡಿ ಸನ್ಮಾನಿಸಲಾಯಿತು. </p>.<p>ಕಿರಣ–ಘರಣ ಗಾಯಕ ಪಂಡಿತ್ ವಿನಾಯಕ ತೊರ್ವಿ ಪ್ರಶಸ್ತಿ ಪ್ರದಾನ ಮಾಡಿದರು. ಕಲಾವಿದ ರಫೀಕ್ ಖಾನ್ , ಶಫಿಕ್ ಖಾನ್, ರಾಯೀಸ್ ಖಾನ್, ಉಸ್ತಾದ್ ಹಫೀಜ್ ಬಾಲೇಖಾನ್ ಹಾಜರಿದ್ದರು.</p>.<p>ಪ್ರವೀಣ್ ಜೆ. ಶೈಖ್, ಅನೀಸ ಖಾನ್ ಸೌದಾಗರ್, ದತ್ತಾತ್ರೇಯ ಜೋಶಿ, ಶಿವಕುಮಾರ್ ಮಹಾಂತ್ರಿಂದ ಸಂಗೀತ ಕಚೇರಿ ನಡೆಯಿತು. ಶ್ರೇಯಾ ವಿ. ಮೂರ್ತಿ, ಸತೀಶ್ ಹಂಪಿಹೊಳಿ, ಗೌರವ್ ಗಡಿಯಾರ್ ತಂಡದಿಂದ ಹಿಂದುಸ್ಥಾನಿ ಸಂಗೀತ ಕಾರ್ಯಕ್ರಮ ನಡೆಯಿತು. ಉಸ್ತಾದ್ ಆಶೀಸ್ಖಾನ್ ಅವರ ಸರೋದ್ ಕಾರ್ಯಕ್ರಮಕ್ಕೆ ರಾಜೇಂದ್ರ ನಾಕೋಡ್ ತಬಲದಲ್ಲಿ ಸಾಥ್ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>