<p><strong>ಬೆಂಗಳೂರು:</strong> ಆಸ್ತಿ ತೆರಿಗೆ ಪಾವತಿ ಮಾಡದ ಮಾಗಡಿ ರಸ್ತೆಯಲ್ಲಿರುವ ಜಿಟಿ ವರ್ಲ್ಡ್ ಮಾಲ್ ಅನ್ನು ಬಿಬಿಎಂಪಿ ಬಂದ್ ಮಾಡಿದೆ.</p>.<p>ಪಂಚೆ ಧರಿಸಿಕೊಂಡಿದ್ದ ರೈತ, ಮಾಲ್ ಪ್ರವೇಶಿಸದಂತೆ ಸಿಬ್ಬಂದಿ ತಡೆದಿದ್ದರು. ಇದು ವಿವಾದಕ್ಕೆ ಅವಕಾಶ ಮಾಡಿಕೊಟ್ಟ ಜೊತೆಗೆ, ವಿಧಾನಸಭೆಯಲ್ಲೂ ಗುರುವಾರ ಚರ್ಚೆಗೆ ಬಂದಿತ್ತು.</p>.<p>‘ಜಿಟಿ ವರ್ಲ್ಡ್ ಮಾಲ್ ₹1.78 ಕೋಟಿ ಆಸ್ತಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದೆ. ‘ಬೇಡಿಕೆಯ ನೋಟಿಸ್’ ಜಾರಿ ಮಾಡಲಾಗಿತ್ತು. ಅದನ್ನು ಪಾವತಿ ಮಾಡದ್ದರಿಂದ ಮಾಲ್ ಅನ್ನು ಬಂದ್ ಮಾಡಲಾಗಿದೆ’ ಎಂದು ಬೆಂಗಳೂರು ದಕ್ಷಿಣ ವಲಯದ ಆಯುಕ್ತೆ ವಿನೋತ್ ಪ್ರಿಯಾ ತಿಳಿಸಿದರು.</p>.<p>‘ಮಾಲ್ ಅನ್ನು ಜಪ್ತಿ ಮಾಡುವಂತೆ ವಲಯ ಕಚೇರಿಗೆ ಸೂಚಿಸಲಾಗಿದೆ’ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು ಹೇಳಿದರು.</p>.<h2>ಏಳು ದಿನ ಬಂದ್:</h2>.<p> ಪಂಚೆ ಧರಿಸಿದ್ದರು ಎಂಬ ಕಾರಣಕ್ಕಾಗಿ ರೈತರೊಬ್ಬರಿಗೆ ಒಳಕ್ಕೆ ಪ್ರವೇಶ ನೀಡದೇ ಅವಮಾನಿಸಿರುವ ನಗರದ ಜಿ.ಟಿ. ಮಾಲ್ ಏಳು ದಿನಗಳ ಕಾಲ ಬಂದ್ ಮಾಡಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿಳಿಸಿದರು.</p>.<p>ವಿಧಾನಸಭೆಯಲ್ಲಿ ಗುರುವಾರ ಸ್ವಯಂಪ್ರೇರಿತವಾಗಿ ವಿಷಯ ಪ್ರಸ್ತಾಪಿಸಿದ ಸಭಾಧ್ಯಕ್ಷ ಯು.ಟಿ. ಖಾದರ್ ಅವರು, ‘ಕನ್ನಡ ನಾಡಿನ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ರೈತರೊಬ್ಬರಿಗೆ ಜಿ.ಟಿ. ಮಾಲ್ನ ಒಳಗೆ ಪ್ರವೇಶ ನೀಡದಿರುವುದು ಖಂಡನೀಯ. ಮಾಲ್ ಆಡಳಿತದ ವಿರುದ್ಧ ಸರ್ಕಾರ ಮುಲಾಜಿಲ್ಲದೇ ಕ್ರಮ ಜರುಗಿಸಬೇಕು’ ಎಂದು ನಿರ್ದೇಶನ ನೀಡಿದರು.</p>.<p>ಆಗ ಉತ್ತರ ನೀಡಿದ ಸುರೇಶ್, ‘ಬಿಬಿಎಂಪಿ ಆಯುಕ್ತರ ಜತೆ ಮಾತನಾಡಿದ್ದೇನೆ. ಏಳು ದಿನಗಳ ಕಾಲ ಮಾಲ್ ಬಂದ್ ಮಾಡಲು ಸರ್ಕಾರಕ್ಕೆ ಅಧಿಕಾರವಿದೆ ಎಂದು ತಿಳಿಸಿದ್ದಾರೆ. ಆ ಕ್ರಮವನ್ನು ಕೈಗೊಳ್ಳುತ್ತೇವೆ’ ಎಂದರು.</p>.<p>ಕಾಂಗ್ರೆಸ್ನ ಪ್ರಕಾಶ್ ಕೋಳಿವಾಡ ಮಾತನಾಡಿ, ‘ಅವಮಾನಕ್ಕೊಳಗಾದ ರೈತ ನನ್ನ ಕ್ಷೇತ್ರದವರು. ಒಂಬತ್ತು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದ್ದಾರೆ. ಎಂಬಿಎ ಓದುತ್ತಿರುವ ಮಗನನ್ನು ನೋಡಲು ಬೆಂಗಳೂರಿಗೆ ಬಂದಿದ್ದರು. ರೈತನಿಗೆ ಅವಮಾನ ಮಾಡಿರುವ ಮಾಲ್ ಅನ್ನು ಬಂದ್ ಮಾಡಬೇಕು’ ಎಂದು ಆಗ್ರಹಿಸಿದರು.</p>.<p>‘ಮಾಲ್ಗೆ ಕನಿಷ್ಠ ಏಳು ದಿನಗಳ ಕಾಲ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಬೇಕು’ ಎಂದು ಕಾಂಗ್ರೆಸ್ನ ಲಕ್ಷ್ಮಣ ಸವದಿ ಆಗ್ರಹಿಸಿದರು.</p>.<p>‘ಇದು ವೈಯಕ್ತಿಕ ಘನತೆಗೆ ಧಕ್ಕೆ ತಂದ ಪ್ರಕರಣ. ಈ ಬಗ್ಗೆ ವರದಿ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಭರವಸೆ ನೀಡಿದರು.</p>.<h2> ಮಾಲ್ ವಿರುದ್ಧ ಎಫ್ಐಆರ್ </h2>.<p>ಪಂಚೆ ಧರಿಸಿ ಬಂದಿದ್ದ ಹಾವೇರಿ ಜಿಲ್ಲೆಯ ರೈತ ಫಕೀರಪ್ಪ ಅವರಿಗೆ ಪ್ರವೇಶ ನಿರಾಕರಿಸಿದ್ದ ಆರೋಪದಡಿ ಮಾಗಡಿ ರಸ್ತೆಯ ಜಿ.ಟಿ ವರ್ಲ್ಡ್ ಮಾಲ್ ಮಾಲೀಕರು ಹಾಗೂ ಭದ್ರತಾ ಸಿಬ್ಬಂದಿ ಅರುಣ್ ವಿರುದ್ಧ ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಗುರುವಾರ ಎಫ್ಐಆರ್ ದಾಖಲಾಗಿದೆ.</p><p> ‘ಧರ್ಮರಾಜ್ಗೌಡ ಎಂಬುವವರು ದೂರು ನೀಡಿದ್ದು ಭಾರತೀಯ ನ್ಯಾಯ ಸಂಹಿತೆ(ಬಿಎನ್ಎಸ್)ಯ 126 ಅಡಿ (ಅಕ್ರಮ ತಡೆ) ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಕಾನೂನು ಪ್ರಕಾರ ನೋಟಿಸ್ ನೀಡಿ ವಿಚಾರಣೆಗೆ ಬರುವಂತೆ ಸೂಚಿಸಲಾಗುವುದು’ ಎಂದು ಪೊಲೀಸರು ಹೇಳಿದರು.</p><p>ಪಂಚೆ ಧರಿಸಿ ಬಂದಿದ್ದ ಫಕೀರಪ್ಪ ಅವರನ್ನು ತಡೆದು ನಿಲ್ಲಿಸಿ ಅವಮಾನ ಮಾಡಲಾಗಿದೆ. ಭದ್ರತಾ ಸಿಬ್ಬಂದಿ ಹಾಗೂ ಮಾಲೀಕರು ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ. ನಾಗರಾಜ್ ಅವರು ತಮ್ಮ ತಂದೆ ಫಕೀರಪ್ಪ ಅವರಿಗೆ ಮಾಲ್ನಲ್ಲಿ ‘ಕಲ್ಕಿ’ ಸಿನಿಮಾ ತೋರಿಸಲು ಜಿ.ಟಿ ವರ್ಲ್ಡ್ ಮಾಲ್ಗೆ ಮಂಗಳವಾರ ಸಂಜೆ ಕರೆದುಕೊಂಡು ಬಂದಿದ್ದರು. ಫಕೀರಪ್ಪ ಅವರು ಪಂಚೆ ಧರಿಸಿ ತಲೆಗೆ ಟವಲ್ನಿಂದ ಪೇಟ ಸುತ್ತಿಕೊಂಡಿದ್ದರು. ಮಾಲ್ನ ಭದ್ರತಾ ಸಿಬ್ಬಂದಿ ಪ್ರವೇಶ ದ್ವಾರದಲ್ಲೇ ತಡೆದು ಪ್ರವೇಶ ನಿರಾಕರಿಸಿದ್ದರು. ಅಲ್ಲದೇ ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರವೇಶ ದ್ವಾರದಲ್ಲೇ ಕಾಯಿಸಿದ್ದರು. </p><p>ಪ್ರವೇಶ ನಿರಾಕರಣೆ ಮಾಹಿತಿ ತಿಳಿದ ಕನ್ನಡ ಸಂಘಟನೆಗಳು ಬುಧವಾರ ಬೆಳಿಗ್ಗೆ ಮಾಲ್ ಎದುರು ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಮಾಲ್ ಬಂದ್ ಮಾಡುವಂತೆಯೂ ಆಗ್ರಹಿಸಿದ್ದರು. </p><p>ನಂತರ ಫಕೀರಪ್ಪ ಅವರನ್ನು ಸ್ಥಳಕ್ಕೆ ಕರೆಸಿ ಪಂಚೆ ಧರಿಸಿಯೇ ಮಾಲ್ಗೆ ಪ್ರವೇಶ ಮಾಡುವಂತೆ ಮಾಡಿದ್ದರು. ಅಲ್ಲದೇ ಮಾಲ್ ಆಡಳಿತ ಮಂಡಳಿಯ ಉಸ್ತುವಾರಿ ಸುರೇಶ್ ಅವರು ಫಕೀರಪ್ಪ ಅವರ ಕ್ಷಮೆ ಕೋರಿ ಸನ್ಮಾನಿಸಿದ್ದರು.</p><h2>ಸಿಬ್ಬಂದಿ ಕೆಲಸದಿಂದ ವಜಾ</h2>.<p>‘ಆಗಬಾರದ ಘಟನೆಯೊಂದು ನಡೆದಿದೆ. ಅದಕ್ಕಾಗಿ ಫಕೀರಪ್ಪ ಅವರಲ್ಲಿ ಕ್ಷಮೆ ಕೇಳುತ್ತೇನೆ. ತಪ್ಪು ಮಾಡಿದ್ದ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ನಮ್ಮ ತಂದೆಯವರೂ ಸಹ ಮಾತಾಡಿ ಕ್ಷಮೆ ಕೇಳಿದ್ದಾರೆ. ಮುಂದಿನ ಸೂಚನೆ ಬರುವ ತನಕ ಮಾಲ್ ಬಂದ್ ಮಾಡುತ್ತೇವೆ’ ಎಂದು ಜಿಟಿ ಮಾಲ್ ಮಾಲೀಕ ಆನಂದ್ ಅವರ ಪುತ್ರ ಪ್ರಶಾಂತ್ ತಿಳಿಸಿದ್ಧಾರೆ. ರೈತರ ಪ್ರತಿಭಟನೆ: ಕರ್ನಾಟಕ ರಾಜ್ಯ ರೈತ ಸಂಘ (ರೈತ ಬಣ)ದ ನೇತೃತ್ವದಲ್ಲಿ ಗುರುವಾರ ಮಾಲ್ ಎದುರು ಪ್ರತಿಭಟನೆ ನಡೆಯಿತು. ‘ಹಾವೇರಿ ರೈತರಿಗೆ ಅವಮಾನ ಮಾಡಲಾಗಿದೆ. ಈ ರೀತಿ ಬೇರೆಲ್ಲೂ ನಡೆಯಬಾರದು’ ಎಂದು ರೈತರು ಆಗ್ರಹಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಆಸ್ತಿ ತೆರಿಗೆ ಪಾವತಿ ಮಾಡದ ಮಾಗಡಿ ರಸ್ತೆಯಲ್ಲಿರುವ ಜಿಟಿ ವರ್ಲ್ಡ್ ಮಾಲ್ ಅನ್ನು ಬಿಬಿಎಂಪಿ ಬಂದ್ ಮಾಡಿದೆ.</p>.<p>ಪಂಚೆ ಧರಿಸಿಕೊಂಡಿದ್ದ ರೈತ, ಮಾಲ್ ಪ್ರವೇಶಿಸದಂತೆ ಸಿಬ್ಬಂದಿ ತಡೆದಿದ್ದರು. ಇದು ವಿವಾದಕ್ಕೆ ಅವಕಾಶ ಮಾಡಿಕೊಟ್ಟ ಜೊತೆಗೆ, ವಿಧಾನಸಭೆಯಲ್ಲೂ ಗುರುವಾರ ಚರ್ಚೆಗೆ ಬಂದಿತ್ತು.</p>.<p>‘ಜಿಟಿ ವರ್ಲ್ಡ್ ಮಾಲ್ ₹1.78 ಕೋಟಿ ಆಸ್ತಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದೆ. ‘ಬೇಡಿಕೆಯ ನೋಟಿಸ್’ ಜಾರಿ ಮಾಡಲಾಗಿತ್ತು. ಅದನ್ನು ಪಾವತಿ ಮಾಡದ್ದರಿಂದ ಮಾಲ್ ಅನ್ನು ಬಂದ್ ಮಾಡಲಾಗಿದೆ’ ಎಂದು ಬೆಂಗಳೂರು ದಕ್ಷಿಣ ವಲಯದ ಆಯುಕ್ತೆ ವಿನೋತ್ ಪ್ರಿಯಾ ತಿಳಿಸಿದರು.</p>.<p>‘ಮಾಲ್ ಅನ್ನು ಜಪ್ತಿ ಮಾಡುವಂತೆ ವಲಯ ಕಚೇರಿಗೆ ಸೂಚಿಸಲಾಗಿದೆ’ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು ಹೇಳಿದರು.</p>.<h2>ಏಳು ದಿನ ಬಂದ್:</h2>.<p> ಪಂಚೆ ಧರಿಸಿದ್ದರು ಎಂಬ ಕಾರಣಕ್ಕಾಗಿ ರೈತರೊಬ್ಬರಿಗೆ ಒಳಕ್ಕೆ ಪ್ರವೇಶ ನೀಡದೇ ಅವಮಾನಿಸಿರುವ ನಗರದ ಜಿ.ಟಿ. ಮಾಲ್ ಏಳು ದಿನಗಳ ಕಾಲ ಬಂದ್ ಮಾಡಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿಳಿಸಿದರು.</p>.<p>ವಿಧಾನಸಭೆಯಲ್ಲಿ ಗುರುವಾರ ಸ್ವಯಂಪ್ರೇರಿತವಾಗಿ ವಿಷಯ ಪ್ರಸ್ತಾಪಿಸಿದ ಸಭಾಧ್ಯಕ್ಷ ಯು.ಟಿ. ಖಾದರ್ ಅವರು, ‘ಕನ್ನಡ ನಾಡಿನ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ರೈತರೊಬ್ಬರಿಗೆ ಜಿ.ಟಿ. ಮಾಲ್ನ ಒಳಗೆ ಪ್ರವೇಶ ನೀಡದಿರುವುದು ಖಂಡನೀಯ. ಮಾಲ್ ಆಡಳಿತದ ವಿರುದ್ಧ ಸರ್ಕಾರ ಮುಲಾಜಿಲ್ಲದೇ ಕ್ರಮ ಜರುಗಿಸಬೇಕು’ ಎಂದು ನಿರ್ದೇಶನ ನೀಡಿದರು.</p>.<p>ಆಗ ಉತ್ತರ ನೀಡಿದ ಸುರೇಶ್, ‘ಬಿಬಿಎಂಪಿ ಆಯುಕ್ತರ ಜತೆ ಮಾತನಾಡಿದ್ದೇನೆ. ಏಳು ದಿನಗಳ ಕಾಲ ಮಾಲ್ ಬಂದ್ ಮಾಡಲು ಸರ್ಕಾರಕ್ಕೆ ಅಧಿಕಾರವಿದೆ ಎಂದು ತಿಳಿಸಿದ್ದಾರೆ. ಆ ಕ್ರಮವನ್ನು ಕೈಗೊಳ್ಳುತ್ತೇವೆ’ ಎಂದರು.</p>.<p>ಕಾಂಗ್ರೆಸ್ನ ಪ್ರಕಾಶ್ ಕೋಳಿವಾಡ ಮಾತನಾಡಿ, ‘ಅವಮಾನಕ್ಕೊಳಗಾದ ರೈತ ನನ್ನ ಕ್ಷೇತ್ರದವರು. ಒಂಬತ್ತು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದ್ದಾರೆ. ಎಂಬಿಎ ಓದುತ್ತಿರುವ ಮಗನನ್ನು ನೋಡಲು ಬೆಂಗಳೂರಿಗೆ ಬಂದಿದ್ದರು. ರೈತನಿಗೆ ಅವಮಾನ ಮಾಡಿರುವ ಮಾಲ್ ಅನ್ನು ಬಂದ್ ಮಾಡಬೇಕು’ ಎಂದು ಆಗ್ರಹಿಸಿದರು.</p>.<p>‘ಮಾಲ್ಗೆ ಕನಿಷ್ಠ ಏಳು ದಿನಗಳ ಕಾಲ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಬೇಕು’ ಎಂದು ಕಾಂಗ್ರೆಸ್ನ ಲಕ್ಷ್ಮಣ ಸವದಿ ಆಗ್ರಹಿಸಿದರು.</p>.<p>‘ಇದು ವೈಯಕ್ತಿಕ ಘನತೆಗೆ ಧಕ್ಕೆ ತಂದ ಪ್ರಕರಣ. ಈ ಬಗ್ಗೆ ವರದಿ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಭರವಸೆ ನೀಡಿದರು.</p>.<h2> ಮಾಲ್ ವಿರುದ್ಧ ಎಫ್ಐಆರ್ </h2>.<p>ಪಂಚೆ ಧರಿಸಿ ಬಂದಿದ್ದ ಹಾವೇರಿ ಜಿಲ್ಲೆಯ ರೈತ ಫಕೀರಪ್ಪ ಅವರಿಗೆ ಪ್ರವೇಶ ನಿರಾಕರಿಸಿದ್ದ ಆರೋಪದಡಿ ಮಾಗಡಿ ರಸ್ತೆಯ ಜಿ.ಟಿ ವರ್ಲ್ಡ್ ಮಾಲ್ ಮಾಲೀಕರು ಹಾಗೂ ಭದ್ರತಾ ಸಿಬ್ಬಂದಿ ಅರುಣ್ ವಿರುದ್ಧ ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಗುರುವಾರ ಎಫ್ಐಆರ್ ದಾಖಲಾಗಿದೆ.</p><p> ‘ಧರ್ಮರಾಜ್ಗೌಡ ಎಂಬುವವರು ದೂರು ನೀಡಿದ್ದು ಭಾರತೀಯ ನ್ಯಾಯ ಸಂಹಿತೆ(ಬಿಎನ್ಎಸ್)ಯ 126 ಅಡಿ (ಅಕ್ರಮ ತಡೆ) ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಕಾನೂನು ಪ್ರಕಾರ ನೋಟಿಸ್ ನೀಡಿ ವಿಚಾರಣೆಗೆ ಬರುವಂತೆ ಸೂಚಿಸಲಾಗುವುದು’ ಎಂದು ಪೊಲೀಸರು ಹೇಳಿದರು.</p><p>ಪಂಚೆ ಧರಿಸಿ ಬಂದಿದ್ದ ಫಕೀರಪ್ಪ ಅವರನ್ನು ತಡೆದು ನಿಲ್ಲಿಸಿ ಅವಮಾನ ಮಾಡಲಾಗಿದೆ. ಭದ್ರತಾ ಸಿಬ್ಬಂದಿ ಹಾಗೂ ಮಾಲೀಕರು ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ. ನಾಗರಾಜ್ ಅವರು ತಮ್ಮ ತಂದೆ ಫಕೀರಪ್ಪ ಅವರಿಗೆ ಮಾಲ್ನಲ್ಲಿ ‘ಕಲ್ಕಿ’ ಸಿನಿಮಾ ತೋರಿಸಲು ಜಿ.ಟಿ ವರ್ಲ್ಡ್ ಮಾಲ್ಗೆ ಮಂಗಳವಾರ ಸಂಜೆ ಕರೆದುಕೊಂಡು ಬಂದಿದ್ದರು. ಫಕೀರಪ್ಪ ಅವರು ಪಂಚೆ ಧರಿಸಿ ತಲೆಗೆ ಟವಲ್ನಿಂದ ಪೇಟ ಸುತ್ತಿಕೊಂಡಿದ್ದರು. ಮಾಲ್ನ ಭದ್ರತಾ ಸಿಬ್ಬಂದಿ ಪ್ರವೇಶ ದ್ವಾರದಲ್ಲೇ ತಡೆದು ಪ್ರವೇಶ ನಿರಾಕರಿಸಿದ್ದರು. ಅಲ್ಲದೇ ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರವೇಶ ದ್ವಾರದಲ್ಲೇ ಕಾಯಿಸಿದ್ದರು. </p><p>ಪ್ರವೇಶ ನಿರಾಕರಣೆ ಮಾಹಿತಿ ತಿಳಿದ ಕನ್ನಡ ಸಂಘಟನೆಗಳು ಬುಧವಾರ ಬೆಳಿಗ್ಗೆ ಮಾಲ್ ಎದುರು ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಮಾಲ್ ಬಂದ್ ಮಾಡುವಂತೆಯೂ ಆಗ್ರಹಿಸಿದ್ದರು. </p><p>ನಂತರ ಫಕೀರಪ್ಪ ಅವರನ್ನು ಸ್ಥಳಕ್ಕೆ ಕರೆಸಿ ಪಂಚೆ ಧರಿಸಿಯೇ ಮಾಲ್ಗೆ ಪ್ರವೇಶ ಮಾಡುವಂತೆ ಮಾಡಿದ್ದರು. ಅಲ್ಲದೇ ಮಾಲ್ ಆಡಳಿತ ಮಂಡಳಿಯ ಉಸ್ತುವಾರಿ ಸುರೇಶ್ ಅವರು ಫಕೀರಪ್ಪ ಅವರ ಕ್ಷಮೆ ಕೋರಿ ಸನ್ಮಾನಿಸಿದ್ದರು.</p><h2>ಸಿಬ್ಬಂದಿ ಕೆಲಸದಿಂದ ವಜಾ</h2>.<p>‘ಆಗಬಾರದ ಘಟನೆಯೊಂದು ನಡೆದಿದೆ. ಅದಕ್ಕಾಗಿ ಫಕೀರಪ್ಪ ಅವರಲ್ಲಿ ಕ್ಷಮೆ ಕೇಳುತ್ತೇನೆ. ತಪ್ಪು ಮಾಡಿದ್ದ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ನಮ್ಮ ತಂದೆಯವರೂ ಸಹ ಮಾತಾಡಿ ಕ್ಷಮೆ ಕೇಳಿದ್ದಾರೆ. ಮುಂದಿನ ಸೂಚನೆ ಬರುವ ತನಕ ಮಾಲ್ ಬಂದ್ ಮಾಡುತ್ತೇವೆ’ ಎಂದು ಜಿಟಿ ಮಾಲ್ ಮಾಲೀಕ ಆನಂದ್ ಅವರ ಪುತ್ರ ಪ್ರಶಾಂತ್ ತಿಳಿಸಿದ್ಧಾರೆ. ರೈತರ ಪ್ರತಿಭಟನೆ: ಕರ್ನಾಟಕ ರಾಜ್ಯ ರೈತ ಸಂಘ (ರೈತ ಬಣ)ದ ನೇತೃತ್ವದಲ್ಲಿ ಗುರುವಾರ ಮಾಲ್ ಎದುರು ಪ್ರತಿಭಟನೆ ನಡೆಯಿತು. ‘ಹಾವೇರಿ ರೈತರಿಗೆ ಅವಮಾನ ಮಾಡಲಾಗಿದೆ. ಈ ರೀತಿ ಬೇರೆಲ್ಲೂ ನಡೆಯಬಾರದು’ ಎಂದು ರೈತರು ಆಗ್ರಹಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>