<p><strong>ಬೆಂಗಳೂರು:</strong> ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಬಳಗ ಪ್ರಸ್ತುತಪಡಿಸುವ ಕರ್ನಾಟಕದ ಪ್ರತಿಷ್ಠಿತ ಶೈಕ್ಷಣಿಕ ಮೇಳ ‘ಎಡ್ಯುವರ್ಸ್’ ಏಪ್ರಿಲ್ 6 ಮತ್ತು 7ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಸಿಇಟಿ ಹಾಗೂ ಕಾಮೆಡ್–ಕೆ ಕುರಿತು ವಿಶೇಷ ಗೋಷ್ಠಿಗಳು ನಡೆಯಲಿವೆ. ಏಪ್ರಿಲ್ 13 ಮತ್ತು 14ರಂದು ಹುಬ್ಬಳ್ಳಿಯಲ್ಲಿಯೂ ಆಯೋಜಿಸಲಾಗಿದೆ.</p>.<p>ಹದಿಮೂರು ವರ್ಷಗಳಿಂದ ಈ ಶೈಕ್ಷಣಿಕ ಮೇಳವನ್ನು ಹಮ್ಮಿಕೊಳ್ಳಲಾಗುತ್ತಿದೆ. ಪಿಯುಸಿ ನಂತರ ಮುಂದೇನು ಎಂಬ ಪ್ರಶ್ನೆಗೆ ಒಂದೇ ಸೂರಿನಡಿ ಹಲವಾರು ಪರಿಹಾರಗಳನ್ನು ಇಲ್ಲಿ ಪಡೆಯಬಹುದಾಗಿದೆ. ಎರಡು ದಿನಗಳ ಈ ಮೇಳದಲ್ಲಿ ಪರಿಣತರು, ತಜ್ಞರು ಪಾಲ್ಗೊಳ್ಳುತ್ತಿದ್ದಾರೆ. ಪರಿಣತರೊಂದಿಗೆ ಸಂವಾದ, ಉಪನ್ಯಾಸ ಮತ್ತು ಚರ್ಚೆಗಳನ್ನು ಆಯೋಜಿಸಲಾಗುತ್ತದೆ. ಪಾಲಕರ ಅನುಮಾನಗಳಿಗೆ, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ತಜ್ಞರು ಉತ್ತರಿಸಲಿದ್ದಾರೆ.</p>.<p>50ಕ್ಕೂ ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಈ ಮೇಳದಲ್ಲಿ ಪಾಲ್ಗೊಳ್ಳಲಿವೆ. ಮಳಿಗೆ ಹಾಕುವುದಷ್ಟೇ ಅಲ್ಲ, ವಿದ್ಯಾರ್ಥಿಗಳಿಗೆ ಅವರ ಅಭಿರುಚಿಗೆ ತಕ್ಕುದಾದ ಆಯ್ಕೆ ಮಾಡಿಕೊಳ್ಳಲು ಸಮಾಲೋಚನೆ, ಸಲಹೆ ನೀಡಲು ತಜ್ಞರು ಇರಲಿದ್ದಾರೆ.</p>.<p>ಪಿಯುಸಿ ಅಥವಾ ತತ್ಸಮಾನ ವಿದ್ಯಾಭ್ಯಾಸ ಮುಗಿಸಿದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸುಗಳಿಗೆ ಸಂಬಂಧಿಸಿದಂತೆ ವಿವರವಾದ ಮಾಹಿತಿ ದೊರೆಯಲಿದೆ. ರಾಜ್ಯದಲ್ಲಿರುವ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಸಿಬ್ಬಂದಿ ತಮ್ಮಲ್ಲಿರುವ ವಿಶೇಷ ಕೋರ್ಸ್ಗಳ, ಪದವಿಗಳ ಮಾಹಿತಿ ನೀಡಲಿದ್ದಾರೆ.</p>.<p>ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಪಾಲಕರಿಗೂ ಸಹ ಮಾರ್ಗದರ್ಶಿಯಾಗಿರಲಿದೆ. ಯಾವ ಕೋರ್ಸು ಮಾಡಿದರೆ ಉದ್ಯೋಗಾವಕಾಶಗಳು ಹೇಗಿವೆ? ಉದ್ಯೋಗಾರ್ಹತೆ ಹೇಗೆ ಪಡೆಯಬಹುದು? ಯಾವ ಶೈಕ್ಷಣಿಕ ಸಂಸ್ಥೆಗಳು ಏನೆಲ್ಲ ಅನುಕೂಲಗಳನ್ನು ನೀಡುತ್ತಿವೆ ಎಂಬುದಲ್ಲದೆ, ಶಿಕ್ಷಣ ಸಾಲದ ಕುರಿತೂ ಮಾಹಿತಿ ಪಡೆಯಬಹುದಾಗಿದೆ.</p>.<p>ಪರೀಕ್ಷೆಯ ಒತ್ತಡದಲ್ಲಿರುವ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ವಿಶೇಷ ಉಪನ್ಯಾಸಗಳು, ಅವರ ಅನುಮಾನಗಳನ್ನು ಪರಿಹರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಸಿಇಟಿ ಮತ್ತು ಕಾಮೆಡ್–ಕೆಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನೂ ಸಮಗ್ರವಾಗಿ ನೀಡಲಾಗುತ್ತದೆ.</p>.<p>Ad6 Advertising ಬೆಂಬಲಿಸುತ್ತಿರುವ ಈ ಮೇಳಕ್ಕೆ ‘ನ್ಯೂಸ್ ಫಸ್ಟ್’ ಕನ್ನಡ ಟೆಲಿವಿಷನ್ ಸಹಭಾಗಿತ್ವವಿದೆ.</p>.<p>ಮಾಕ್ ಟೆಸ್ಟ್: ಸಿಇಟಿ ಮತ್ತು ಕಾಮೆಡ್–ಕೆಗೆ ಪರೀಕ್ಷಾರ್ಥಿಗಳಿಗೆ ಎರಡೂ ದಿನ ಮಾಕ್ ಟೆಸ್ಟ್ (ಅಣಕು ಪರೀಕ್ಷೆ) ಅನ್ನು ಹಮ್ಮಿಕೊಳ್ಳಲಾಗುವುದು. ಆಸಕ್ತ ವಿದ್ಯಾರ್ಥಿಗಳು www.deccanherald.com/eduverse ಜಾಲತಾಣಕ್ಕೆ ಲಾಗಿನ್ ಆಗಿ, ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ, ನಿಮ್ಮ ಸ್ಥಳವನ್ನು ಕಾಯ್ದಿರಿಸಿಕೊಳ್ಳಿ. ಈ–ಮಾಕ್ ಟೆಸ್ಟ್ನಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಒಂದು ಲಕ್ಷ ಮೌಲ್ಯದ ಬಹುಮಾನಗಳನ್ನು ಗೆಲ್ಲುವ ಅವಕಾಶಗಳಿವೆ.</p>.<p>ಬೆಂಗಳೂರಿನಲ್ಲಿ ಗೇಟ್ 2/3 ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ಮೇಳಕ್ಕೆ ಮುಕ್ತ ಅವಕಾಶವಿದೆ.</p>.<p><strong>ವಿಶೇಷ ಉಪನ್ಯಾಸಗಳು:</strong></p>.<p>ಏಪ್ರಿಲ್ 6ರಂದು ಬೆಳಿಗ್ಗೆ 10ಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿವೃತ್ತ ಪಿಆರ್ಒ ಎ.ಎಸ್.ರವಿ ಅವರು ಸಿಇಟಿ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸಿ.ಇ.ಟಿ ಕೌನ್ಸೆಲಿಂಗ್ಗೆ ಸಿದ್ಧತೆ ಹೇಗೆ? ಬೇಕಾಗುವ ದಾಖಲೆಗಳು ಯಾವು? ಎಂಜಿನಿಯರಿಂಗ್ ಕಾಲೇಜು ಆಯ್ಕೆ ಹೇಗೆ? ಎಂಬ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಈ ಗೋಷ್ಠಿಯಲ್ಲಿ ಉತ್ತರ ಸಿಗಲಿದೆ.</p>.<p>ಏಪ್ರಿಲ್ 7ರಂದು ಕಾಮೆಡ್–ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಎಸ್.ಕುಮಾರ್ ಅವರು ಕಾಮೆಡ್ –ಕೆ ಕುರಿತು ಮಾಹಿತಿ ನೀಡಲಿದ್ದಾರೆ. ಈ ಗೋಷ್ಠಿಯಲ್ಲಿ ಕೋರ್ಸ್ಗಳ ಆಯ್ಕೆ, ಉದ್ಯೋಗಾವಕಾಶ, ಕಾಲೇಜಿನಲ್ಲಿರುವ ಶೈಕ್ಷಣಿಕ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ.</p>.<p>ಇದರೊಂದಿಗೆ ‘ರೆಡಿಯೊ ಸಿಟಿ’ ಎಫ್ಎಂನ ಆರ್ಜೆ ರಜಸ್ ಅವರು ರೆಡಿಯೊ ಹಾಗೂ ವಾಯ್ಸ್ ಇಂಡಸ್ಟ್ರಿಯಲ್ಲಿರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಅಪೊಲೊ ನ್ಯಾಷನಲ್ ಸ್ಕೂಲ್ನ ಉಪಾಧ್ಯಕ್ಷೆ ಐಶ್ವರ್ಯಾ ಡಿ.ಕೆ.ಎಸ್ ಹೆಗ್ಡೆ ಅವರು ‘ಕಲಿಕೆ ಹಾಗೂ ಬೆಳವಣಿಗೆ’ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಬಳಗ ಪ್ರಸ್ತುತಪಡಿಸುವ ಕರ್ನಾಟಕದ ಪ್ರತಿಷ್ಠಿತ ಶೈಕ್ಷಣಿಕ ಮೇಳ ‘ಎಡ್ಯುವರ್ಸ್’ ಏಪ್ರಿಲ್ 6 ಮತ್ತು 7ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಸಿಇಟಿ ಹಾಗೂ ಕಾಮೆಡ್–ಕೆ ಕುರಿತು ವಿಶೇಷ ಗೋಷ್ಠಿಗಳು ನಡೆಯಲಿವೆ. ಏಪ್ರಿಲ್ 13 ಮತ್ತು 14ರಂದು ಹುಬ್ಬಳ್ಳಿಯಲ್ಲಿಯೂ ಆಯೋಜಿಸಲಾಗಿದೆ.</p>.<p>ಹದಿಮೂರು ವರ್ಷಗಳಿಂದ ಈ ಶೈಕ್ಷಣಿಕ ಮೇಳವನ್ನು ಹಮ್ಮಿಕೊಳ್ಳಲಾಗುತ್ತಿದೆ. ಪಿಯುಸಿ ನಂತರ ಮುಂದೇನು ಎಂಬ ಪ್ರಶ್ನೆಗೆ ಒಂದೇ ಸೂರಿನಡಿ ಹಲವಾರು ಪರಿಹಾರಗಳನ್ನು ಇಲ್ಲಿ ಪಡೆಯಬಹುದಾಗಿದೆ. ಎರಡು ದಿನಗಳ ಈ ಮೇಳದಲ್ಲಿ ಪರಿಣತರು, ತಜ್ಞರು ಪಾಲ್ಗೊಳ್ಳುತ್ತಿದ್ದಾರೆ. ಪರಿಣತರೊಂದಿಗೆ ಸಂವಾದ, ಉಪನ್ಯಾಸ ಮತ್ತು ಚರ್ಚೆಗಳನ್ನು ಆಯೋಜಿಸಲಾಗುತ್ತದೆ. ಪಾಲಕರ ಅನುಮಾನಗಳಿಗೆ, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ತಜ್ಞರು ಉತ್ತರಿಸಲಿದ್ದಾರೆ.</p>.<p>50ಕ್ಕೂ ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಈ ಮೇಳದಲ್ಲಿ ಪಾಲ್ಗೊಳ್ಳಲಿವೆ. ಮಳಿಗೆ ಹಾಕುವುದಷ್ಟೇ ಅಲ್ಲ, ವಿದ್ಯಾರ್ಥಿಗಳಿಗೆ ಅವರ ಅಭಿರುಚಿಗೆ ತಕ್ಕುದಾದ ಆಯ್ಕೆ ಮಾಡಿಕೊಳ್ಳಲು ಸಮಾಲೋಚನೆ, ಸಲಹೆ ನೀಡಲು ತಜ್ಞರು ಇರಲಿದ್ದಾರೆ.</p>.<p>ಪಿಯುಸಿ ಅಥವಾ ತತ್ಸಮಾನ ವಿದ್ಯಾಭ್ಯಾಸ ಮುಗಿಸಿದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸುಗಳಿಗೆ ಸಂಬಂಧಿಸಿದಂತೆ ವಿವರವಾದ ಮಾಹಿತಿ ದೊರೆಯಲಿದೆ. ರಾಜ್ಯದಲ್ಲಿರುವ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಸಿಬ್ಬಂದಿ ತಮ್ಮಲ್ಲಿರುವ ವಿಶೇಷ ಕೋರ್ಸ್ಗಳ, ಪದವಿಗಳ ಮಾಹಿತಿ ನೀಡಲಿದ್ದಾರೆ.</p>.<p>ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಪಾಲಕರಿಗೂ ಸಹ ಮಾರ್ಗದರ್ಶಿಯಾಗಿರಲಿದೆ. ಯಾವ ಕೋರ್ಸು ಮಾಡಿದರೆ ಉದ್ಯೋಗಾವಕಾಶಗಳು ಹೇಗಿವೆ? ಉದ್ಯೋಗಾರ್ಹತೆ ಹೇಗೆ ಪಡೆಯಬಹುದು? ಯಾವ ಶೈಕ್ಷಣಿಕ ಸಂಸ್ಥೆಗಳು ಏನೆಲ್ಲ ಅನುಕೂಲಗಳನ್ನು ನೀಡುತ್ತಿವೆ ಎಂಬುದಲ್ಲದೆ, ಶಿಕ್ಷಣ ಸಾಲದ ಕುರಿತೂ ಮಾಹಿತಿ ಪಡೆಯಬಹುದಾಗಿದೆ.</p>.<p>ಪರೀಕ್ಷೆಯ ಒತ್ತಡದಲ್ಲಿರುವ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ವಿಶೇಷ ಉಪನ್ಯಾಸಗಳು, ಅವರ ಅನುಮಾನಗಳನ್ನು ಪರಿಹರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಸಿಇಟಿ ಮತ್ತು ಕಾಮೆಡ್–ಕೆಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನೂ ಸಮಗ್ರವಾಗಿ ನೀಡಲಾಗುತ್ತದೆ.</p>.<p>Ad6 Advertising ಬೆಂಬಲಿಸುತ್ತಿರುವ ಈ ಮೇಳಕ್ಕೆ ‘ನ್ಯೂಸ್ ಫಸ್ಟ್’ ಕನ್ನಡ ಟೆಲಿವಿಷನ್ ಸಹಭಾಗಿತ್ವವಿದೆ.</p>.<p>ಮಾಕ್ ಟೆಸ್ಟ್: ಸಿಇಟಿ ಮತ್ತು ಕಾಮೆಡ್–ಕೆಗೆ ಪರೀಕ್ಷಾರ್ಥಿಗಳಿಗೆ ಎರಡೂ ದಿನ ಮಾಕ್ ಟೆಸ್ಟ್ (ಅಣಕು ಪರೀಕ್ಷೆ) ಅನ್ನು ಹಮ್ಮಿಕೊಳ್ಳಲಾಗುವುದು. ಆಸಕ್ತ ವಿದ್ಯಾರ್ಥಿಗಳು www.deccanherald.com/eduverse ಜಾಲತಾಣಕ್ಕೆ ಲಾಗಿನ್ ಆಗಿ, ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ, ನಿಮ್ಮ ಸ್ಥಳವನ್ನು ಕಾಯ್ದಿರಿಸಿಕೊಳ್ಳಿ. ಈ–ಮಾಕ್ ಟೆಸ್ಟ್ನಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಒಂದು ಲಕ್ಷ ಮೌಲ್ಯದ ಬಹುಮಾನಗಳನ್ನು ಗೆಲ್ಲುವ ಅವಕಾಶಗಳಿವೆ.</p>.<p>ಬೆಂಗಳೂರಿನಲ್ಲಿ ಗೇಟ್ 2/3 ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ಮೇಳಕ್ಕೆ ಮುಕ್ತ ಅವಕಾಶವಿದೆ.</p>.<p><strong>ವಿಶೇಷ ಉಪನ್ಯಾಸಗಳು:</strong></p>.<p>ಏಪ್ರಿಲ್ 6ರಂದು ಬೆಳಿಗ್ಗೆ 10ಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿವೃತ್ತ ಪಿಆರ್ಒ ಎ.ಎಸ್.ರವಿ ಅವರು ಸಿಇಟಿ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸಿ.ಇ.ಟಿ ಕೌನ್ಸೆಲಿಂಗ್ಗೆ ಸಿದ್ಧತೆ ಹೇಗೆ? ಬೇಕಾಗುವ ದಾಖಲೆಗಳು ಯಾವು? ಎಂಜಿನಿಯರಿಂಗ್ ಕಾಲೇಜು ಆಯ್ಕೆ ಹೇಗೆ? ಎಂಬ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಈ ಗೋಷ್ಠಿಯಲ್ಲಿ ಉತ್ತರ ಸಿಗಲಿದೆ.</p>.<p>ಏಪ್ರಿಲ್ 7ರಂದು ಕಾಮೆಡ್–ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಎಸ್.ಕುಮಾರ್ ಅವರು ಕಾಮೆಡ್ –ಕೆ ಕುರಿತು ಮಾಹಿತಿ ನೀಡಲಿದ್ದಾರೆ. ಈ ಗೋಷ್ಠಿಯಲ್ಲಿ ಕೋರ್ಸ್ಗಳ ಆಯ್ಕೆ, ಉದ್ಯೋಗಾವಕಾಶ, ಕಾಲೇಜಿನಲ್ಲಿರುವ ಶೈಕ್ಷಣಿಕ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ.</p>.<p>ಇದರೊಂದಿಗೆ ‘ರೆಡಿಯೊ ಸಿಟಿ’ ಎಫ್ಎಂನ ಆರ್ಜೆ ರಜಸ್ ಅವರು ರೆಡಿಯೊ ಹಾಗೂ ವಾಯ್ಸ್ ಇಂಡಸ್ಟ್ರಿಯಲ್ಲಿರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಅಪೊಲೊ ನ್ಯಾಷನಲ್ ಸ್ಕೂಲ್ನ ಉಪಾಧ್ಯಕ್ಷೆ ಐಶ್ವರ್ಯಾ ಡಿ.ಕೆ.ಎಸ್ ಹೆಗ್ಡೆ ಅವರು ‘ಕಲಿಕೆ ಹಾಗೂ ಬೆಳವಣಿಗೆ’ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>