<p><strong>ಬೆಂಗಳೂರು: ‘</strong>ಸ್ತ್ರೀಯ ಮುಂದೆಲೆ, ಮೂಗು ಕೊಯ್ದ, ಪತ್ನಿಯನ್ನೇ ಕಾಡಿಗಟ್ಟಿದ ರಾಮ ನಮ್ಮ ರಾಮನಲ್ಲ. ಆದರೂ ಎಲ್ಲರೂ ಈ ರಾಮನ ಬೆನ್ನತ್ತಿರುವುದು ವಿಪರ್ಯಾಸ’ ಎಂದು ಚಿತ್ರದುರ್ಗದ ಹರಳಯ್ಯ ಗುರುಪೀಠದ ಬಸವ ಹರಳಯ್ಯ ಸ್ವಾಮೀಜಿ ಹೇಳಿದರು.</p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಶನಿವಾರ ನಗರದಲ್ಲಿ ಆಯೋಜಿಸಿದ್ದ ಕಾಯಕ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ನಾವು ಯಾವ ರಾಮನ ಬೆನ್ನತ್ತಿದ್ದೇವೆ ಎಂಬ ತಿಳಿವಳಿಕೆ ಇರಬೇಕು. ಸ್ತ್ರೀಯರನ್ನು ಅಗೌರವಿಸಿದ ರಾಮನ ಬದಲು, 12ನೇ ಶತಮಾನದಲ್ಲಿ ಮಾದಾರ ಚೆನ್ನಯ್ಯ ಶರಣರು ಹೇಳಿರುವ ಕುಲ, ಹೊಲೆ, ಸೂತಕವಿಲ್ಲದ ರಾಮ ನಮ್ಮವನಾಗಬೇಕು’ ಎಂದು ಪ್ರತಿಪಾದಿಸಿದರು.</p>.<p>‘ರಾಮ ಮಂದಿರ ಉದ್ಘಾಟನೆಗೆ ಹೋದ ಸುತ್ತೂರು ಶ್ರೀಗಳು, ಅಮಿತಾಬ್ ಬಚ್ಚನ್ ಎಲ್ಲ ಹೊರಗೆ ನಿಲ್ಲಬೇಕಾಯಿತು. ಕಾಯಕ ಮಾಡುವವರು ಮೋಚಿ, ಮಾದರ, ಸಮಗಾರ ಬೇರೆ ಬೇರೆ ಎಂದೆಲ್ಲ ಹೇಳುತ್ತಾ ಪ್ರತ್ಯೇಕವಾಗಿ ಉಳಿದರೆ ನಾವೂ ಹೊರಗುಳಿಯಬೇಕಾಗುತ್ತದೆ. ಎಲ್ಲ ಸಮುದಾಯಗಳು ಒಗ್ಗೂಡಬೇಕು’ ಎಂದು ಸಲಹೆ ನೀಡಿದರು.</p>.<p>‘ಕಲ್ಲಿಗೆ ಪ್ರಾಣ ಪ್ರತಿಷ್ಠೆ ಮಾಡುವವರು ತಮ್ಮ ಪತ್ನಿ, ಮಕ್ಕಳು ಸತ್ತರೆ ಯಾಕೆ ಪ್ರಾಣ ಪ್ರತಿಷ್ಠೆ ಮಾಡಿ ಬದುಕಿಸುತ್ತಿಲ್ಲ. ಪ್ರಾಣ ಪ್ರತಿಷ್ಠೆಯ ಹೆಸರಲ್ಲಿ ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.</p>.<p>ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರು, ‘ಕಾಯಕ ಶರಣರು ಎಂದು ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗಪೆದ್ದಿ ಮುಂತಾದ ಶರಣದ ಜಯಂತಿಯನ್ನು ಒಟ್ಟಿಗೆ ಮಾಡುವ ಮೂಲಕ ನಾವೆಲ್ಲ ಒಟ್ಟಿಗೆ ಇರಬೇಕು ಎಂಬ ಸಂದೇಶವನ್ನು ಸರ್ಕಾರವೇ ನೀಡಿದೆ’ ಎಂದು ಹೇಳಿದರು.</p>.<p>ಕನ್ನಡ ಸಹಾಯಕ ಪ್ರಾಧ್ಯಾಪಕ ಎಚ್.ಲಕ್ಷ್ಮೀನಾರಾಯಣ ಸ್ವಾಮಿ ಉಪನ್ಯಾಸ ನೀಡಿದರು. ಬೀದರ್ನ ಹರಳಯ್ಯ ಮಠದ ಬಸವಪ್ರಭು ಸ್ವಾಮೀಜಿ, ಆಹಾರ, ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ, ಕೇಂದ್ರ ಮಾಜಿ ಸಚಿವೆ ರತ್ನಮಾಲಾ, ಮಾಜಿ ಸಚಿವ ಎಚ್.ಆಂಜನೇಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಎನ್. ಮಂಜುಳಾ, ನಿರ್ದೇಶಕಿ ಧರಣಿದೇವಿ ಮಾಗತ್ತಿ, ಸಮಾಜದ ಮುಖಂಡರು ಭಾಗವಹಿಸಿದ್ದರು.</p>.<p><strong>ಅಧ್ಯಯನ ಪೀಠ ಸ್ಥಾಪನೆಗೆ ಕ್ರಮ:</strong></p><p>ತಂಗಡಗಿ ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಚರ್ಚಿಸಿ ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗಪೆದ್ದಿ ಅವರ ಅಧ್ಯಯನ ಪೀಠ ಸ್ಥಾಪನೆಗೆ ಕ್ರಮವಹಿಸಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್. ತಂಗಡಗಿ ತಿಳಿಸಿದರು. ‘ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತರತ್ನ’ವನ್ನು ಬಾಬು ಜಗಜೀವನ್ ರಾಮ್ ಅವರಿಗೆ ಕೇಂದ್ರ ಘೋಷಿಸಬೇಕು. ಈ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೆ ತಂದು ಕೇಂದ್ರ ಪತ್ರ ಬರೆಯಲಾಗುವುದು’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: ‘</strong>ಸ್ತ್ರೀಯ ಮುಂದೆಲೆ, ಮೂಗು ಕೊಯ್ದ, ಪತ್ನಿಯನ್ನೇ ಕಾಡಿಗಟ್ಟಿದ ರಾಮ ನಮ್ಮ ರಾಮನಲ್ಲ. ಆದರೂ ಎಲ್ಲರೂ ಈ ರಾಮನ ಬೆನ್ನತ್ತಿರುವುದು ವಿಪರ್ಯಾಸ’ ಎಂದು ಚಿತ್ರದುರ್ಗದ ಹರಳಯ್ಯ ಗುರುಪೀಠದ ಬಸವ ಹರಳಯ್ಯ ಸ್ವಾಮೀಜಿ ಹೇಳಿದರು.</p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಶನಿವಾರ ನಗರದಲ್ಲಿ ಆಯೋಜಿಸಿದ್ದ ಕಾಯಕ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ನಾವು ಯಾವ ರಾಮನ ಬೆನ್ನತ್ತಿದ್ದೇವೆ ಎಂಬ ತಿಳಿವಳಿಕೆ ಇರಬೇಕು. ಸ್ತ್ರೀಯರನ್ನು ಅಗೌರವಿಸಿದ ರಾಮನ ಬದಲು, 12ನೇ ಶತಮಾನದಲ್ಲಿ ಮಾದಾರ ಚೆನ್ನಯ್ಯ ಶರಣರು ಹೇಳಿರುವ ಕುಲ, ಹೊಲೆ, ಸೂತಕವಿಲ್ಲದ ರಾಮ ನಮ್ಮವನಾಗಬೇಕು’ ಎಂದು ಪ್ರತಿಪಾದಿಸಿದರು.</p>.<p>‘ರಾಮ ಮಂದಿರ ಉದ್ಘಾಟನೆಗೆ ಹೋದ ಸುತ್ತೂರು ಶ್ರೀಗಳು, ಅಮಿತಾಬ್ ಬಚ್ಚನ್ ಎಲ್ಲ ಹೊರಗೆ ನಿಲ್ಲಬೇಕಾಯಿತು. ಕಾಯಕ ಮಾಡುವವರು ಮೋಚಿ, ಮಾದರ, ಸಮಗಾರ ಬೇರೆ ಬೇರೆ ಎಂದೆಲ್ಲ ಹೇಳುತ್ತಾ ಪ್ರತ್ಯೇಕವಾಗಿ ಉಳಿದರೆ ನಾವೂ ಹೊರಗುಳಿಯಬೇಕಾಗುತ್ತದೆ. ಎಲ್ಲ ಸಮುದಾಯಗಳು ಒಗ್ಗೂಡಬೇಕು’ ಎಂದು ಸಲಹೆ ನೀಡಿದರು.</p>.<p>‘ಕಲ್ಲಿಗೆ ಪ್ರಾಣ ಪ್ರತಿಷ್ಠೆ ಮಾಡುವವರು ತಮ್ಮ ಪತ್ನಿ, ಮಕ್ಕಳು ಸತ್ತರೆ ಯಾಕೆ ಪ್ರಾಣ ಪ್ರತಿಷ್ಠೆ ಮಾಡಿ ಬದುಕಿಸುತ್ತಿಲ್ಲ. ಪ್ರಾಣ ಪ್ರತಿಷ್ಠೆಯ ಹೆಸರಲ್ಲಿ ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.</p>.<p>ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರು, ‘ಕಾಯಕ ಶರಣರು ಎಂದು ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗಪೆದ್ದಿ ಮುಂತಾದ ಶರಣದ ಜಯಂತಿಯನ್ನು ಒಟ್ಟಿಗೆ ಮಾಡುವ ಮೂಲಕ ನಾವೆಲ್ಲ ಒಟ್ಟಿಗೆ ಇರಬೇಕು ಎಂಬ ಸಂದೇಶವನ್ನು ಸರ್ಕಾರವೇ ನೀಡಿದೆ’ ಎಂದು ಹೇಳಿದರು.</p>.<p>ಕನ್ನಡ ಸಹಾಯಕ ಪ್ರಾಧ್ಯಾಪಕ ಎಚ್.ಲಕ್ಷ್ಮೀನಾರಾಯಣ ಸ್ವಾಮಿ ಉಪನ್ಯಾಸ ನೀಡಿದರು. ಬೀದರ್ನ ಹರಳಯ್ಯ ಮಠದ ಬಸವಪ್ರಭು ಸ್ವಾಮೀಜಿ, ಆಹಾರ, ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ, ಕೇಂದ್ರ ಮಾಜಿ ಸಚಿವೆ ರತ್ನಮಾಲಾ, ಮಾಜಿ ಸಚಿವ ಎಚ್.ಆಂಜನೇಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಎನ್. ಮಂಜುಳಾ, ನಿರ್ದೇಶಕಿ ಧರಣಿದೇವಿ ಮಾಗತ್ತಿ, ಸಮಾಜದ ಮುಖಂಡರು ಭಾಗವಹಿಸಿದ್ದರು.</p>.<p><strong>ಅಧ್ಯಯನ ಪೀಠ ಸ್ಥಾಪನೆಗೆ ಕ್ರಮ:</strong></p><p>ತಂಗಡಗಿ ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಚರ್ಚಿಸಿ ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗಪೆದ್ದಿ ಅವರ ಅಧ್ಯಯನ ಪೀಠ ಸ್ಥಾಪನೆಗೆ ಕ್ರಮವಹಿಸಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್. ತಂಗಡಗಿ ತಿಳಿಸಿದರು. ‘ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತರತ್ನ’ವನ್ನು ಬಾಬು ಜಗಜೀವನ್ ರಾಮ್ ಅವರಿಗೆ ಕೇಂದ್ರ ಘೋಷಿಸಬೇಕು. ಈ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೆ ತಂದು ಕೇಂದ್ರ ಪತ್ರ ಬರೆಯಲಾಗುವುದು’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>