‘ಸರ್ಕಾರಿ ಕಲಾ ಕಾಲೇಜಿನಲ್ಲಿ ಎರಡೂವರೆ ಸಾವಿರ ವಿದ್ಯಾರ್ಥಿಗಳು, ಆರ್.ಸಿ. ಕಾಲೇಜಿನಲ್ಲಿ ಮೂರು ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪಠ್ಯಕ್ರಮ, ವಿಷಯಗಳ ಸಂಯೋಜನೆ ಮತ್ತಿತರ ಶೈಕ್ಷಣಿಕ ವಿಷಯಗಳಿಗೆ ವಿಶ್ವವಿದ್ಯಾಲಯದ ಮಾರ್ಗಸೂಚಿಗಳ ಅನ್ವಯ ಕಾರ್ಯ ನಿರ್ವಹಿಸಲಾಗುತ್ತಿದೆ. ಆದರೆ, ಯಾವುದೇ ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಕಾಲೇಜಿನ ಪ್ರಾಂಶುಪಾಲರಿಗಿದೆ. ಇದರಿಂದ ಅನುಕೂಲವಾಗಿದೆ. ವಿಶ್ವವಿದ್ಯಾಲಯದ ಘಟಕ ಕಾಲೇಜಾಗಿ ಸೇರ್ಪಡೆಯಾದರೆ ಎಲ್ಲದಕ್ಕೂ ಮೇಲಿನ ಆದೇಶಕ್ಕೆ ಕಾಯಬೇಕು. ಇದು ವಿಳಂಬಕ್ಕೆ ಕಾರಣವಾಗುತ್ತದೆ’ ಎನ್ನುತ್ತಾರೆ ವಿದ್ಯಾರ್ಥಿಗಳಾದ ರೋಹನ್, ಅಶೋಕ್ ರಾಜ್, ನಿರಂಜನ ಮೂರ್ತಿ.