<p><strong>ನೆಲಮಂಗಲ</strong>: ಸೃಜನಶೀಲತೆಯ ಸಂಕೇತವಾದ ಕವಿ ಅಂಬರೀಷ್ ಸರ್ವರಿಗೂ ಗೆಳೆತನದ ಮಧುವ ಹಂಚಿ, ತ್ಯಾಮಗೊಂಡ್ಲುವಿನ ಸಾಂಸ್ಕೃತಿಕ ರಾಯಭಾರಿಯಾಗಿದ್ದರು ಎಂದು ಲೇಖಕಿ ಡಾ.ವಸುಂಧರಾ ಭೂಪತಿ ಅಭಿಪ್ರಾಯಪಟ್ಟರು.</p>.<p>ತಾಲ್ಲೂಕಿನ ತ್ಯಾಮಗೊಂಡ್ಲುವಿನಲ್ಲಿ ಯುಗಾದಿ ಹಬ್ಬದಂದು ಕವಿ ‘ತ್ಯಾಮಗೊಂಡ್ಲು ಅಂಬರೀಷ್ ಅಭಿಮಾನಿ ಬಳಗ’ ಆಯೋಜಿಸಿದ್ದ ‘ಅಂಬರೀಷ್ ಸ್ಮರಣೋತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಅಂಬರೀಷ್ ಅವರ ಲಲಿತ ಪ್ರಬಂಧಗಳು ಜನಮಾನಸದಲ್ಲಿ ಸದಾ ಹಸಿರಾಗಿವೆ. ಭಾವಗೀತೆಗಳು ಗುಂಗುಹಿಡಿಸುವಂತಹವು’ ಎಂದು ನೆನಪಿಸಿಕೊಂಡರು.</p>.<p>‘ಬಹುಮುಖ ಪ್ರತಿಭೆಯಾಗಿದ್ದ ಅಂಬರೀಷ್ ಅವರು ನಾಟಕ ರಚನೆ, ನಿರ್ದೇಶನ ಮತ್ತು ಅಭಿನಯದಲ್ಲೂ ಪಾರಂಗತರಾಗಿದ್ದರು. ತಂಡ ಕಟ್ಟಿಕೊಂಡು ಮೇಲಿಂದ ಮೇಲೆ ನಾಟಕ ಪ್ರದರ್ಶನಗಳನ್ನು ಆಯೋಜಿಸುತ್ತಿದ್ದರು’ ಎಂದು ಶ್ಲಾಘಿಸಿದರು.</p>.<p>ಕನ್ನಡ ಪ್ರಾಧ್ಯಾಪಕಿ ಲಕ್ಷ್ಮೀನರಸಮ್ಮ ಯುಗಾದಿ ಆಚರಣೆಯ ವಿಶೇಷತೆ ವಿವರಿಸಿದರು. ಪ್ರಾಧ್ಯಾಪಕ ರಹಮತ್ ಉಲ್ಲ ಅವರು ಅಂಬರೀಷರ ಸಾಹಿತ್ಯ ಸೇವೆಯನ್ನು ಪರಿಚಯಿಸಿದರು. ಬಳಗದ ಅಧ್ಯಕ್ಷ ಸಿ.ಆರ್.ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಮಂಜುನಾಥ್, ಕೆ.ಎಲ್.ರಘು ಇದ್ದರು.</p>.<p>ಇದೇ ವೇಳೆ ಗುರುಕುಲ ತಂಡದವರು ‘ಉಂಡೆನಾಮ.ಕಾಮ್’ ನಾಟಕ ಪ್ರದರ್ಶಿಸಿದರು. ನಂತರ ಬೇವು– ಬೆಲ್ಲ ಹಂಚಿ ಯುಗಾದಿ ಹಬ್ಬ ಆಚರಿಸಲಾಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನೆಲಮಂಗಲ</strong>: ಸೃಜನಶೀಲತೆಯ ಸಂಕೇತವಾದ ಕವಿ ಅಂಬರೀಷ್ ಸರ್ವರಿಗೂ ಗೆಳೆತನದ ಮಧುವ ಹಂಚಿ, ತ್ಯಾಮಗೊಂಡ್ಲುವಿನ ಸಾಂಸ್ಕೃತಿಕ ರಾಯಭಾರಿಯಾಗಿದ್ದರು ಎಂದು ಲೇಖಕಿ ಡಾ.ವಸುಂಧರಾ ಭೂಪತಿ ಅಭಿಪ್ರಾಯಪಟ್ಟರು.</p>.<p>ತಾಲ್ಲೂಕಿನ ತ್ಯಾಮಗೊಂಡ್ಲುವಿನಲ್ಲಿ ಯುಗಾದಿ ಹಬ್ಬದಂದು ಕವಿ ‘ತ್ಯಾಮಗೊಂಡ್ಲು ಅಂಬರೀಷ್ ಅಭಿಮಾನಿ ಬಳಗ’ ಆಯೋಜಿಸಿದ್ದ ‘ಅಂಬರೀಷ್ ಸ್ಮರಣೋತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಅಂಬರೀಷ್ ಅವರ ಲಲಿತ ಪ್ರಬಂಧಗಳು ಜನಮಾನಸದಲ್ಲಿ ಸದಾ ಹಸಿರಾಗಿವೆ. ಭಾವಗೀತೆಗಳು ಗುಂಗುಹಿಡಿಸುವಂತಹವು’ ಎಂದು ನೆನಪಿಸಿಕೊಂಡರು.</p>.<p>‘ಬಹುಮುಖ ಪ್ರತಿಭೆಯಾಗಿದ್ದ ಅಂಬರೀಷ್ ಅವರು ನಾಟಕ ರಚನೆ, ನಿರ್ದೇಶನ ಮತ್ತು ಅಭಿನಯದಲ್ಲೂ ಪಾರಂಗತರಾಗಿದ್ದರು. ತಂಡ ಕಟ್ಟಿಕೊಂಡು ಮೇಲಿಂದ ಮೇಲೆ ನಾಟಕ ಪ್ರದರ್ಶನಗಳನ್ನು ಆಯೋಜಿಸುತ್ತಿದ್ದರು’ ಎಂದು ಶ್ಲಾಘಿಸಿದರು.</p>.<p>ಕನ್ನಡ ಪ್ರಾಧ್ಯಾಪಕಿ ಲಕ್ಷ್ಮೀನರಸಮ್ಮ ಯುಗಾದಿ ಆಚರಣೆಯ ವಿಶೇಷತೆ ವಿವರಿಸಿದರು. ಪ್ರಾಧ್ಯಾಪಕ ರಹಮತ್ ಉಲ್ಲ ಅವರು ಅಂಬರೀಷರ ಸಾಹಿತ್ಯ ಸೇವೆಯನ್ನು ಪರಿಚಯಿಸಿದರು. ಬಳಗದ ಅಧ್ಯಕ್ಷ ಸಿ.ಆರ್.ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಮಂಜುನಾಥ್, ಕೆ.ಎಲ್.ರಘು ಇದ್ದರು.</p>.<p>ಇದೇ ವೇಳೆ ಗುರುಕುಲ ತಂಡದವರು ‘ಉಂಡೆನಾಮ.ಕಾಮ್’ ನಾಟಕ ಪ್ರದರ್ಶಿಸಿದರು. ನಂತರ ಬೇವು– ಬೆಲ್ಲ ಹಂಚಿ ಯುಗಾದಿ ಹಬ್ಬ ಆಚರಿಸಲಾಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>