<p><strong>ಬೆಂಗಳೂರು:</strong> ಪ್ರಯಾಣಿಕರೊಬ್ಬರಿಂದ ₹ 914 ಬದಲು ₹ 5,194 ಪಡೆದು ಪರಾರಿಯಾಗಿರುವ ಕ್ಯಾಬ್ ಚಾಲಕನ ವಿರುದ್ಧ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ತಾವರೆಕೆರೆ ನಿವಾಸಿಯಾಗಿರುವ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ಹೆಚ್ಚುವರಿ ಪ್ರಯಾಣ ದರ ವಸೂಲಿ ಮಾಡಿರುವ ಚಾಲಕನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ದೂರುದಾರ ಜ. 5ರಂದು ಸ್ನೇಹಿತರನ್ನು ವಿಮಾನ ನಿಲ್ದಾಣಕ್ಕೆ ಬಿಡಲು ಹೋಗಿದ್ದರು. ಸ್ನೇಹಿತರು ಹೊರಟ ನಂತರ ತಾವರೆಕೆರೆಯ ಮನೆಗೆ ವಾಪಸು ಹೋಗಲು ದೂರುದಾರ, ಉಬರ್ ಆ್ಯಪ್ ಮೂಲಕ ಕ್ಯಾಬ್ ಕಾಯ್ದಿರಿಸಿದ್ದರು. ಆ್ಯಪ್ನಲ್ಲಿ ₹ 914 ಪ್ರಯಾಣ ದರ ತೋರಿಸಿತ್ತು.’</p>.<p>‘ಉಬರ್ ಕ್ಯಾಬ್ ಚಾಲಕನೆಂದು ಹೇಳಿಕೊಂಡು ಸ್ಥಳಕ್ಕೆ ಬಂದಿದ್ದ ಆರೋಪಿ, ದೂರುದಾರನನ್ನು ಹತ್ತಿಸಿಕೊಂಡು ಸ್ಥಳದಿಂದ ಹೊರಟಿದ್ದರು. ತಾವರೆಕೆರೆಯಲ್ಲಿ ದೂರುದಾರರನ್ನು ಇಳಿಸಿದ್ದ ಆರೋಪಿ, ₹ 5,194 ನೀಡುವಂತೆ ಒತ್ತಾಯಿಸಿದ್ದ. ತಮ್ಮ ಮೊಬೈಲ್ನಲ್ಲಿ ₹ 914 ಇರುವುದಾಗಿ ದೂರುದಾರ ಹೇಳಿದ್ದರು. ತನ್ನ ಮೊಬೈಲ್ನಲ್ಲಿ ₹ 5,194 ಇರುವುದಾಗಿ ಹೇಳಿ ಜಗಳ ಮಾಡಿ ಹಣ ಪಡೆದು ಆರೋಪಿ ಸ್ಥಳದಿಂದ ಹೊರಟು ಹೋಗಿದ್ದಾನೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಪ್ರಯಾಣಿಕರೊಬ್ಬರಿಂದ ₹ 914 ಬದಲು ₹ 5,194 ಪಡೆದು ಪರಾರಿಯಾಗಿರುವ ಕ್ಯಾಬ್ ಚಾಲಕನ ವಿರುದ್ಧ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ತಾವರೆಕೆರೆ ನಿವಾಸಿಯಾಗಿರುವ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ಹೆಚ್ಚುವರಿ ಪ್ರಯಾಣ ದರ ವಸೂಲಿ ಮಾಡಿರುವ ಚಾಲಕನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ದೂರುದಾರ ಜ. 5ರಂದು ಸ್ನೇಹಿತರನ್ನು ವಿಮಾನ ನಿಲ್ದಾಣಕ್ಕೆ ಬಿಡಲು ಹೋಗಿದ್ದರು. ಸ್ನೇಹಿತರು ಹೊರಟ ನಂತರ ತಾವರೆಕೆರೆಯ ಮನೆಗೆ ವಾಪಸು ಹೋಗಲು ದೂರುದಾರ, ಉಬರ್ ಆ್ಯಪ್ ಮೂಲಕ ಕ್ಯಾಬ್ ಕಾಯ್ದಿರಿಸಿದ್ದರು. ಆ್ಯಪ್ನಲ್ಲಿ ₹ 914 ಪ್ರಯಾಣ ದರ ತೋರಿಸಿತ್ತು.’</p>.<p>‘ಉಬರ್ ಕ್ಯಾಬ್ ಚಾಲಕನೆಂದು ಹೇಳಿಕೊಂಡು ಸ್ಥಳಕ್ಕೆ ಬಂದಿದ್ದ ಆರೋಪಿ, ದೂರುದಾರನನ್ನು ಹತ್ತಿಸಿಕೊಂಡು ಸ್ಥಳದಿಂದ ಹೊರಟಿದ್ದರು. ತಾವರೆಕೆರೆಯಲ್ಲಿ ದೂರುದಾರರನ್ನು ಇಳಿಸಿದ್ದ ಆರೋಪಿ, ₹ 5,194 ನೀಡುವಂತೆ ಒತ್ತಾಯಿಸಿದ್ದ. ತಮ್ಮ ಮೊಬೈಲ್ನಲ್ಲಿ ₹ 914 ಇರುವುದಾಗಿ ದೂರುದಾರ ಹೇಳಿದ್ದರು. ತನ್ನ ಮೊಬೈಲ್ನಲ್ಲಿ ₹ 5,194 ಇರುವುದಾಗಿ ಹೇಳಿ ಜಗಳ ಮಾಡಿ ಹಣ ಪಡೆದು ಆರೋಪಿ ಸ್ಥಳದಿಂದ ಹೊರಟು ಹೋಗಿದ್ದಾನೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>