<p><strong>ಬೆಂಗಳೂರು</strong>: ‘ಸಂಗೀತವು ವ್ಯಕ್ತಿಗಳನ್ನು ಹೆಚ್ಚು ಮನುಷ್ಯರನ್ನಾಗಿಸುತ್ತದೆ. ಮಾನವೀಯ ಸಂವೇದನೆಗಳ ಜಾಗೃತಿಗೆ ಸಂಗೀತ ಸಹಾಯಕ’ ಎಂದು ಜಾನಪದ ತಜ್ಞ ಅಪ್ಪಗೆರೆ ತಿಮ್ಮರಾಜು ತಿಳಿಸಿದರು. </p>.<p>ಉದಯಭಾನು ಕಲಾಸಂಘ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಮುಂಗಾರು ಸಂಗೀತ ರಸಗ್ರಹಣ ಸಪ್ತಾಹ’ ಸಮಾರಂಭ ಉದ್ಘಾಟಿಸಿ, ಮಾತನಾಡಿದರು.</p>.<p>‘ಆದಿಮ ಕಾಲದಿಂದ ಬಂದ ಜನಪದೀಯ ಪರಂಪರೆಯಲ್ಲಿ 650ಕ್ಕೂ ಹೆಚ್ಚು ಕಲೆಗಳು ಸಂಪ್ರದಾಯ ಪರಂಪರೆಗಳಾಗಿ ವಿಕಸಿಸಿವೆ. ವರ್ತಮಾನದಲ್ಲಿ ಅವುಗಳೇ ಜನಪದ ಪ್ರದರ್ಶನ ಕಲೆಗಳಾಗಿ ಹೊಸ ತಲೆಮಾರಿನ ಕಲಾಭಿವ್ಯಕ್ತಿಗೆ ಮಾಧ್ಯಮಗಳಾಗಿವೆ’ ಎಂದರು.</p>.<p>ಸಂಘದ ಗೌರವ ಕಾರ್ಯದರ್ಶಿ ಕೆ.ರಾಧಾಕೃಷ್ಣ, ‘ಸಂಘದ ವಜ್ರ ಮಹೋತ್ಸವದ ಸಂದರ್ಭದಲ್ಲಿ ಸಂಘವು ಹಿಂದೆಂದಿಗಿಂತಲೂ ಹೆಚ್ಚು ಅರ್ಥಪೂರ್ಣವಾದ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಮುನ್ನಡೆಯುತ್ತಿದೆ. ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಆರೋಗ್ಯ, ವೃತ್ತಿಕೌಶಲ, ಕಲಾಕೌಶಲ ತರಬೇತಿಗಳಲ್ಲಿ ಹೆಚ್ಚಿನ ಜನರಿಗೆ ನೆರವಾಗುವ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತಿದೆ’ ಎಂದು ತಿಳಿಸಿದರು.</p>.<p>ಸಂಘದ ಅಧ್ಯಕ್ಷ ಶ್ರೀರಾಮೇಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ಸಂಸ್ಥಾಪಕ ಎಲ್.ವೆಂಕಟಪ್ಪ ಉಪಸ್ಥಿತರಿದ್ದರು. ಶಿಬಿರದ ಸಂಯೋಜಕ, ಸಂಗೀತ ಕಲಾವಿದ ಹರೀಶ ನರಸಿಂಹ ಅವರು ಶಿಬಿರಾರ್ಥಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.</p>.<p>ಮೊದಲ ದಿನದ ಶಿಬಿರವನ್ನು ಅಪ್ಪಗೆರೆ ತಿಮ್ಮರಾಜು ನಡೆಸಿಕೊಟ್ಟರು. ಸ್ವರ-ಲಯ-ಧ್ವನಿ ಸಂಸ್ಕಾರ ಶಿಬಿರಕ್ಕೆ ಒಟ್ಟು 98 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಸಂಗೀತವು ವ್ಯಕ್ತಿಗಳನ್ನು ಹೆಚ್ಚು ಮನುಷ್ಯರನ್ನಾಗಿಸುತ್ತದೆ. ಮಾನವೀಯ ಸಂವೇದನೆಗಳ ಜಾಗೃತಿಗೆ ಸಂಗೀತ ಸಹಾಯಕ’ ಎಂದು ಜಾನಪದ ತಜ್ಞ ಅಪ್ಪಗೆರೆ ತಿಮ್ಮರಾಜು ತಿಳಿಸಿದರು. </p>.<p>ಉದಯಭಾನು ಕಲಾಸಂಘ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಮುಂಗಾರು ಸಂಗೀತ ರಸಗ್ರಹಣ ಸಪ್ತಾಹ’ ಸಮಾರಂಭ ಉದ್ಘಾಟಿಸಿ, ಮಾತನಾಡಿದರು.</p>.<p>‘ಆದಿಮ ಕಾಲದಿಂದ ಬಂದ ಜನಪದೀಯ ಪರಂಪರೆಯಲ್ಲಿ 650ಕ್ಕೂ ಹೆಚ್ಚು ಕಲೆಗಳು ಸಂಪ್ರದಾಯ ಪರಂಪರೆಗಳಾಗಿ ವಿಕಸಿಸಿವೆ. ವರ್ತಮಾನದಲ್ಲಿ ಅವುಗಳೇ ಜನಪದ ಪ್ರದರ್ಶನ ಕಲೆಗಳಾಗಿ ಹೊಸ ತಲೆಮಾರಿನ ಕಲಾಭಿವ್ಯಕ್ತಿಗೆ ಮಾಧ್ಯಮಗಳಾಗಿವೆ’ ಎಂದರು.</p>.<p>ಸಂಘದ ಗೌರವ ಕಾರ್ಯದರ್ಶಿ ಕೆ.ರಾಧಾಕೃಷ್ಣ, ‘ಸಂಘದ ವಜ್ರ ಮಹೋತ್ಸವದ ಸಂದರ್ಭದಲ್ಲಿ ಸಂಘವು ಹಿಂದೆಂದಿಗಿಂತಲೂ ಹೆಚ್ಚು ಅರ್ಥಪೂರ್ಣವಾದ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಮುನ್ನಡೆಯುತ್ತಿದೆ. ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಆರೋಗ್ಯ, ವೃತ್ತಿಕೌಶಲ, ಕಲಾಕೌಶಲ ತರಬೇತಿಗಳಲ್ಲಿ ಹೆಚ್ಚಿನ ಜನರಿಗೆ ನೆರವಾಗುವ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತಿದೆ’ ಎಂದು ತಿಳಿಸಿದರು.</p>.<p>ಸಂಘದ ಅಧ್ಯಕ್ಷ ಶ್ರೀರಾಮೇಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ಸಂಸ್ಥಾಪಕ ಎಲ್.ವೆಂಕಟಪ್ಪ ಉಪಸ್ಥಿತರಿದ್ದರು. ಶಿಬಿರದ ಸಂಯೋಜಕ, ಸಂಗೀತ ಕಲಾವಿದ ಹರೀಶ ನರಸಿಂಹ ಅವರು ಶಿಬಿರಾರ್ಥಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.</p>.<p>ಮೊದಲ ದಿನದ ಶಿಬಿರವನ್ನು ಅಪ್ಪಗೆರೆ ತಿಮ್ಮರಾಜು ನಡೆಸಿಕೊಟ್ಟರು. ಸ್ವರ-ಲಯ-ಧ್ವನಿ ಸಂಸ್ಕಾರ ಶಿಬಿರಕ್ಕೆ ಒಟ್ಟು 98 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>