<p><strong>ಬೆಂಗಳೂರು</strong>: ‘12ನೇ ಶತಮಾನದಲ್ಲಿ ಬಸವಣ್ಣನವರಿಗೆ ಸಕಾಲಿಕ ಮಾಹಿತಿಗಳನ್ನು ನೀಡಿ ಅಂತಿಮಕ್ಷಣದವರೆಗೆ ಅವರ ಜೊತೆಗಿದ್ದ ಶರಣ ಹಡಪದ ಅಪ್ಪಣ್ಣನವರಂತಹ ಆಪ್ತ ಸಹಾಯಕರ ಸಂಖ್ಯೆ ಇಂದು ಹೆಚ್ಚಾಗಬೇಕಿದೆ’ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್. ಪಿನಾಕಪಾಣಿ ಹೇಳಿದರು.</p>.<p>ವಚನ ಜ್ಯೋತಿ ಬಳಗ ಶನಿವಾರ ಆಯೋಜಿಸಿದ್ದ ‘ಹಡಪದ ಅಪ್ಪಣ್ಣ ಲಿಂಗಮ್ಮನವರ’ ಜಯಂತಿಯಲ್ಲಿ ಅವರು ಮಾತನಾಡಿದರು.</p>.<p>‘900 ವರ್ಷಗಳ ಹಿಂದೆಯೇ ಬಸವಣ್ಣನವರು ಹಡಪದ ಸಮಾಜದ ಅಪ್ಪಣ್ಣ ಅವರನ್ನು ಆಪ್ತ ಕಾರ್ಯದರ್ಶಿಯಾಗಿ ಮಾಡಿಕೊಂಡಿದ್ದರು. ಮೊದಲು ಹಡಪದ ಅಪ್ಪಣ್ಣ ಅವರನ್ನು ಭೇಟಿಯಾಗಿ, ಸಮಯ ನಿಗದಿಪಡಿಸಿಕೊಂಡು ನನ್ನನ್ನು ಭೇಟಿಯಾಗಬೇಕು ಎಂಬ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಹಡಪದ ಅಪ್ಪಣ್ಣನವರು ಬಸವಣ್ಣ ಅವರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಕೆಲಸ ಮಾಡಿದ್ದರು’ ಎಂದು ಹೇಳಿದರು.</p>.<p>ಕಾರ್ಮಿಕ ಇಲಾಖೆ ಜಂಟಿ ಕಾರ್ಯದರ್ಶಿ ಸಂಗಮೇಶ ಉಪಾಸೆ, ‘ಬಸವಣ್ಣನವರ ನೇತೃತ್ವದ ವಚನ ಚಳವಳಿಯಲ್ಲಿ 25 ಸಾವಿರಕ್ಕೂ ಹೆಚ್ಚು ವಚನಗಳು ಸಿಕ್ಕಿವೆ. ವಚನ ಪಿತಾಮಹ ಫ.ಗು. ಹಳಕಟ್ಟಿ ಅವರ ಶ್ರಮದ ಫಲವಾಗಿ ಇವು ಲಭ್ಯವಾಗಿವೆ’ ಎಂದು ಸ್ಮರಿಸಿದರು.</p>.<p>ವಿದ್ಯಾರ್ಥಿಗಳು ಹಡಪದ ಅಪ್ಪಣ್ಣ ಅವರ ವಚನಗಳ ಗಾಯನ ಪ್ರಸ್ತುತಪಡಿಸಿದರು.</p>.<p>ಗಾಯಕಿ ಟಿ.ಎಂ.ಜಾನಕಿ, ಬಳಗದ ರಾಜಾ ಗುರುಪ್ರಸಾದ್, ಪ್ರಸನ್ನ, ಮಧು ಶಿವಕುಮಾರ್, ಗಂಗಾಧರ್, ರುದ್ರೇಶ್ ಇಸುವನಹಳ್ಳಿ, ಅನುಭಾವಿ ಬಜ್ಜಿ ವೀರಣ್ಣ, ಕಾಂಗ್ರೆಸ್ ಮುಖಂಡ ಎಂ. ನಂಜಪ್ಪ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘12ನೇ ಶತಮಾನದಲ್ಲಿ ಬಸವಣ್ಣನವರಿಗೆ ಸಕಾಲಿಕ ಮಾಹಿತಿಗಳನ್ನು ನೀಡಿ ಅಂತಿಮಕ್ಷಣದವರೆಗೆ ಅವರ ಜೊತೆಗಿದ್ದ ಶರಣ ಹಡಪದ ಅಪ್ಪಣ್ಣನವರಂತಹ ಆಪ್ತ ಸಹಾಯಕರ ಸಂಖ್ಯೆ ಇಂದು ಹೆಚ್ಚಾಗಬೇಕಿದೆ’ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್. ಪಿನಾಕಪಾಣಿ ಹೇಳಿದರು.</p>.<p>ವಚನ ಜ್ಯೋತಿ ಬಳಗ ಶನಿವಾರ ಆಯೋಜಿಸಿದ್ದ ‘ಹಡಪದ ಅಪ್ಪಣ್ಣ ಲಿಂಗಮ್ಮನವರ’ ಜಯಂತಿಯಲ್ಲಿ ಅವರು ಮಾತನಾಡಿದರು.</p>.<p>‘900 ವರ್ಷಗಳ ಹಿಂದೆಯೇ ಬಸವಣ್ಣನವರು ಹಡಪದ ಸಮಾಜದ ಅಪ್ಪಣ್ಣ ಅವರನ್ನು ಆಪ್ತ ಕಾರ್ಯದರ್ಶಿಯಾಗಿ ಮಾಡಿಕೊಂಡಿದ್ದರು. ಮೊದಲು ಹಡಪದ ಅಪ್ಪಣ್ಣ ಅವರನ್ನು ಭೇಟಿಯಾಗಿ, ಸಮಯ ನಿಗದಿಪಡಿಸಿಕೊಂಡು ನನ್ನನ್ನು ಭೇಟಿಯಾಗಬೇಕು ಎಂಬ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಹಡಪದ ಅಪ್ಪಣ್ಣನವರು ಬಸವಣ್ಣ ಅವರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಕೆಲಸ ಮಾಡಿದ್ದರು’ ಎಂದು ಹೇಳಿದರು.</p>.<p>ಕಾರ್ಮಿಕ ಇಲಾಖೆ ಜಂಟಿ ಕಾರ್ಯದರ್ಶಿ ಸಂಗಮೇಶ ಉಪಾಸೆ, ‘ಬಸವಣ್ಣನವರ ನೇತೃತ್ವದ ವಚನ ಚಳವಳಿಯಲ್ಲಿ 25 ಸಾವಿರಕ್ಕೂ ಹೆಚ್ಚು ವಚನಗಳು ಸಿಕ್ಕಿವೆ. ವಚನ ಪಿತಾಮಹ ಫ.ಗು. ಹಳಕಟ್ಟಿ ಅವರ ಶ್ರಮದ ಫಲವಾಗಿ ಇವು ಲಭ್ಯವಾಗಿವೆ’ ಎಂದು ಸ್ಮರಿಸಿದರು.</p>.<p>ವಿದ್ಯಾರ್ಥಿಗಳು ಹಡಪದ ಅಪ್ಪಣ್ಣ ಅವರ ವಚನಗಳ ಗಾಯನ ಪ್ರಸ್ತುತಪಡಿಸಿದರು.</p>.<p>ಗಾಯಕಿ ಟಿ.ಎಂ.ಜಾನಕಿ, ಬಳಗದ ರಾಜಾ ಗುರುಪ್ರಸಾದ್, ಪ್ರಸನ್ನ, ಮಧು ಶಿವಕುಮಾರ್, ಗಂಗಾಧರ್, ರುದ್ರೇಶ್ ಇಸುವನಹಳ್ಳಿ, ಅನುಭಾವಿ ಬಜ್ಜಿ ವೀರಣ್ಣ, ಕಾಂಗ್ರೆಸ್ ಮುಖಂಡ ಎಂ. ನಂಜಪ್ಪ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>