ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವರಮಹಾಲಕ್ಷ್ಮಿ ಹಬ್ಬ | ಕನಕಾಂಬರ ಕೆ.ಜಿಗೆ ₹4 ಸಾವಿರ

ವರಮಹಾಲಕ್ಷ್ಮಿ ಹಬ್ಬದ ಖರೀದಿಗೆ ಗ್ರಾಹಕರ ದಂಡು‌, ಕೆ.ಆರ್‌. ಮಾರುಕಟ್ಟೆ ಸುತ್ತಮುತ್ತಲು ಸಂಚಾರ ದಟ್ಟಣೆ
Published 15 ಆಗಸ್ಟ್ 2024, 0:44 IST
Last Updated 15 ಆಗಸ್ಟ್ 2024, 0:44 IST
ಅಕ್ಷರ ಗಾತ್ರ

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬವನ್ನು ಶುಕ್ರವಾರ ಸಂಭ್ರಮ–ಸಡಗರದಿಂದ ಆಚರಿಸಲು ನಗರದ ಜನತೆ ಸಿದ್ಧವಾಗಿದ್ದು, ಬುಧವಾರ ಬೆಳಿಗ್ಗೆಯಿಂದಲೇ ಹೂವು ಮತ್ತು ಹಣ್ಣುಗಳ ಖರೀದಿಯಲ್ಲಿ ತೊಡಗಿದ್ದರು. ಬೆಲೆ ಏರಿಕೆ ಬಿಸಿಯ ನಡುವೆಯೂ ಖರೀದಿ ಜೋರಾಗಿತ್ತು.

ವರಮಹಾಲಕ್ಷ್ಮಿ ಹಬ್ಬದಂದು ಮನೆಗಳಲ್ಲಿ ಲಕ್ಷ್ಮಿ ಮೂರ್ತಿಗಳನ್ನು ಕೂರಿಸಿ, ಪೂಜಿಸುವುದು ವಾಡಿಕೆ. ಈ ವೇಳೆ ಅಲಂಕಾರಕ್ಕಾಗಿ ತರಹೇವಾರಿ ಹೂಗಳು ಮತ್ತು ಹಣ್ಣುಗಳನ್ನು ಬಳಸುತ್ತಾರೆ. ಹಾಗಾಗಿ, ಪ್ರತಿ ವರ್ಷದಂತೆ ಈ ಬಾರಿಯೂ ಹೂವು ಮತ್ತು ಹಣ್ಣಿನ ದರಗಳಲ್ಲಿ ಭಾರಿ ಏರಿಕೆಯಾಗಿದೆ.

ಹೂ ದರ ಗಗನಮುಖಿ: ‘ಈ ಬಾರಿ ಹೂವಿನ ಬೇಡಿಕೆ ಹೆಚ್ಚಿದ್ದು, ದರವೂ ದುಬಾರಿಯಾಗಿದೆ. ಈ ಹಬ್ಬದಲ್ಲೇ ಹೂವಿನ ಬೆಳೆಗಾರರು ಮತ್ತು ವರ್ತಕರು ಲಾಭ ಕಾಣುತ್ತಾರೆ’ ಎಂದು ಕೆ.ಆರ್.ಮಾರುಕಟ್ಟೆಯ ಹೂವಿನ ವರ್ತಕರಾದ ಮಂಜುನಾಥ್ ಮತ್ತು ಪ್ರದೀಪ್‌ ಮಾಹಿತಿ ನೀಡಿದರು.

‘ಮಲ್ಲಿಗೆ ಹೂವಿನ ದರ ಕೆ.ಜಿ.ಗೆ ₹1,600 ಮತ್ತು ಕನಕಾಂಬರದ ಗರಿಷ್ಠ ದರ ಪ್ರತಿ ಕೆ.ಜಿ.ಗೆ ₹4 ಸಾವಿರ ತಲುಪಿದೆ. ಪ್ರತಿ ಕೆ.ಜಿಗೆ ಸೇವಂತಿಗೆ ₹300, ಗುಲಾಬಿ ₹350, ಸುಗಂಧರಾಜ ₹400, ಚೆಂಡು ಹೂ ₹80ರಂತೆ ಮಾರಾಟವಾಗುತ್ತಿವೆ. ಹಿಂದಿನ ದಿನಗಳಿಗೆ ಹೋಲಿಸಿದರೆ ವರ ಮಹಾಲಕ್ಷ್ಮಿ ಹಬ್ಬ ಸಮೀಪಿಸಿದ ಬಳಿಕ ಹೂವುಗಳ ದರದಲ್ಲಿ ಭಾರಿ ಏರಿಕೆಯಾಗಿದೆ’ ಎಂದು ತಿಳಿಸಿದರು.

ಬೇಡಿಕೆ ಹೆಚ್ಚಾದಂತೆ ಹಣ್ಣುಗಳ ದರದಲ್ಲೂ ಸ್ವಲ್ಪ ಏರಿಕೆಯಾಗಿದೆ. ತರಕಾರಿ ದರಗಳು ಸ್ಥಿರವಾಗಿವೆ. ಸೊಪ್ಪಿನ ಬೆಲೆಯೂ ಕಡಿಮೆಯಾಗಿದೆ.

‘ಬೆಂಗಳೂರು ಗ್ರಾಮಾಂತರ, ತುಮಕೂರು, ಕುಣಿಗಲ್, ಗೌರಿಬಿದನೂರು, ಶಿವಮೊಗ್ಗ, ಮೈಸೂರು ಮುಂತಾದ ಕಡೆಗಳಿಂದ ನಗರದ ಮಾರುಕಟ್ಟೆಗಳಿಗೆ ಹೂವು ಪೂರೈಕೆಯಾಗುತ್ತದೆ. ತಮಿಳುನಾಡಿನ ವಿವಿಧೆಡೆಯಿಂದಲೂ ಹೂವು ಪೂರೈಕೆಯಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಮಳೆ ಇಳಿಮುಖವಾಗಿರುವುದರಿಂದ ಹೂವುಗಳ ಆವಕ ಹೆಚ್ಚಿದೆ. ಜೊತೆಗೆ ತಾಜಾ ಹೂವಿನ ಪೂರೈಕೆ ಆಗುತ್ತಿದೆ’ ಎಂದು ಕೆ.ಆರ್. ಮಾರುಕಟ್ಟೆಯ ಹೂವಿನ ವ್ಯಾಪಾರಿಗಳು ತಿಳಿಸಿದರು.

ನಗರದ ಕೆ.ಆರ್ ಮಾರುಕಟ್ಟೆಯಲ್ಲಿ ಬುಧವಾರ ಹೂವು ಹಾಗೂ ಹಣ್ಣು ಖರೀದಿಗೆ ಬಂದಿದ್ದ ಜನ –ಪ್ರಜಾವಾಣಿ ಚಿತ್ರಗಳು/ ರಂಜು ಪಿ
ನಗರದ ಕೆ.ಆರ್ ಮಾರುಕಟ್ಟೆಯಲ್ಲಿ ಬುಧವಾರ ಹೂವು ಹಾಗೂ ಹಣ್ಣು ಖರೀದಿಗೆ ಬಂದಿದ್ದ ಜನ –ಪ್ರಜಾವಾಣಿ ಚಿತ್ರಗಳು/ ರಂಜು ಪಿ
ನಗರದ ಕೆ.ಆರ್ ಮಾರುಕಟ್ಟೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಬುಧವಾರ ಹೂವು ಹಾಗೂ ಹಣ್ಣು ಖರೀದಿಗೆ ಹರಿದು ಬಂದ ಜನಸಾಗರ –ಪ್ರಜಾವಾಣಿ ಚಿತ್ರಗಳು/ ರಂಜು ಪಿ
ನಗರದ ಕೆ.ಆರ್ ಮಾರುಕಟ್ಟೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಬುಧವಾರ ಹೂವು ಹಾಗೂ ಹಣ್ಣು ಖರೀದಿಗೆ ಹರಿದು ಬಂದ ಜನಸಾಗರ –ಪ್ರಜಾವಾಣಿ ಚಿತ್ರಗಳು/ ರಂಜು ಪಿ
ನಗರದ ಕೆ.ಆರ್ ಮಾರುಕಟ್ಟೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಬುಧವಾರ ಹೂವು ಹಾಗೂ ಹಣ್ಣು ಖರೀದಿಗೆ ಹರಿದು ಬಂದ ಜನಸಾಗರ –ಪ್ರಜಾವಾಣಿ ಚಿತ್ರಗಳು/ ರಂಜು ಪಿ
ನಗರದ ಕೆ.ಆರ್ ಮಾರುಕಟ್ಟೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಬುಧವಾರ ಹೂವು ಹಾಗೂ ಹಣ್ಣು ಖರೀದಿಗೆ ಹರಿದು ಬಂದ ಜನಸಾಗರ –ಪ್ರಜಾವಾಣಿ ಚಿತ್ರಗಳು/ ರಂಜು ಪಿ
ಹೂವುಗಳ ದರ ಪ್ರತಿ ಕೆ.ಜಿ.ಗೆ (₹ಗಳಲ್ಲಿ)
ಕಳೆದ ವಾರ;ಈ ವಾರ ಕನಕಾಂಬರ;600;4000 ಮಲ್ಲಿಗೆ;400;1600 ಗುಲಾಬಿ;150;300 ಸೇವಂತಿಗೆ;100;250 ಸುಗಂಧರಾಜ;100;400 –– ಹಣ್ಣುಗಳ ದರ ಪ್ರತಿ ಕೆ.ಜಿಗೆ ಸೇಬು;150;200 ದಾಳಿಂಬೆ 80;100 ಏಲಕ್ಕಿ ಬಾಳೆ;70;120 ಸೀತಾಫಲ;80;100 ಸಪೋಟ;80;100 ಅನಾನಸ್‌;80ಕ್ಕೆ ಎರಡು –– ತರಕಾರಿ ದರಗಳು ಪ್ರತಿ ಕೆಜಿಗೆ ಕ್ಯಾರೆಟ್‌;60;50 ಕ್ಯಾಪ್ಸಿಕಮ್;40;60 ಈರುಳ್ಳಿ;40;50 ಬೀನ್ಸ್;50;60 ಟೊಮೆಟೊ;40;20 ಆಲೂಗಡ್ಡೆ;25;30 ಹಿರೇಕಾಯಿ;50;60 ಚವಳಿಕಾಯಿ;40;50 ಮೆಣಸಿನಕಾಯಿ;100;80 –– ಬಾಳೆಕಂಬ ಜೋಡಿಗೆ;80 ಮಾವಿನ ತೋರಣ;20 100 ವೀಳ್ಯೆದೆಲೆಗೆ;100 5 ತೆಂಗಿನಕಾಯಿಗೆ;100
ಕಿರು ಮಾರುಕಟ್ಟೆಗಳ ನಿರ್ಮಾಣ
ನಗರದ ವಿವಿಧ ಭಾಗಗಳಲ್ಲಿ ಹೂವು ಹಾಗೂ ಆಲಂಕಾರಿಕ ವಸ್ತುಗಳನ್ನು ಮಾರಾಟದ ಭರಾಟೆಯೂ ಜೋರಾಗಿದೆ. ಪ್ರಮುಖ ರಸ್ತೆಗಳು ವೃತ್ತಗಳಲ್ಲಿ ಕಿರು ಮಾರುಕಟ್ಟೆಗಳು ದಿಢೀರ್‌ ತಲೆಎತ್ತಿವೆ. ಮಲ್ಲೇಶ್ವರ ಯಶವಂತಪುರ ಜಯನಗರ ಶಿವಾಜಿನಗರದ ಮಾರುಕಟ್ಟೆ ಪ್ರದೇಶಗಳಲ್ಲಿನ ರಸ್ತೆ ಇಕ್ಕೆಲಗಳಲ್ಲಿ ನಡೆದಾಡಲು ಕಷ್ಟವಾಗುವಷ್ಟು ಗ್ರಾಹಕರು ಜಮಾಯಿಸಿದ್ದರು. ಇದರಿಂದ ಸಂಚಾರ ದಟ್ಟಣೆಯುಂಟಾಗಿ ವಾಹನ ಸವಾರರು ಪರದಾಡಬೇಕಾಯಿತು. ಕೆ.ಆರ್. ಮಾರುಕಟ್ಟೆಗೆ ಸಂಪರ್ಕಿಸುವ ರಸ್ತೆಗಳಲ್ಲಿ ಸಂಚಾರ ದಟ್ಟಣೆ ತೀವ್ರವಾಗಿತ್ತು. ಮುಂಜಾನೆ 4ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಕೆ.ಆರ್. ಮಾರುಕಟ್ಟೆ ಬಸ್‌ ನಿಲ್ದಾಣ ಅವೆನ್ಯೂ ರಸ್ತೆಯಲ್ಲಿ ಜನದಟ್ಟಣೆ ಹೆಚ್ಚಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT