<p><strong>ಪೀಣ್ಯ ದಾಸರಹಳ್ಳಿ</strong>: ‘ಚುನಾವಣೆಯಲ್ಲಿ ಯಾರಾದರೂ ಗೆಲ್ಲಲಿ. ಚುನಾವಣೆಯಿಂದ ನನಗೆ ಏನು ಆಗಬೇಕೆಂಬ ಉದಾಸೀನ ಭಾವನೆ ಬೇಡ. ಮತ ಹಾಕದೆ ನಿರ್ಲಕ್ಷ್ಯ ಮಾಡಬೇಡಿ. ಕಡ್ಡಾಯವಾಗಿ ಮತ ಹಾಕುವ ಮೂಲಕ ಒಳ್ಳೆಯ ಅಭ್ಯರ್ಥಿಯನ್ನು ಗೆಲ್ಲಿಸಿ ...’</p>.<p>– ಹೀಗೆಂದು ಮನವಿ ಮಾಡಿದವರು ಸಾಹಿತಿ ಚಿಕ್ಕ ಹೆಜ್ಜಾಜಿ ಮಹಾದೇವ್ ಅವರು.</p>.<p>ಲಗ್ಗೆರೆಯ ಮಂಜುನಾಥ ಸ್ವಾಮಿ ದೇವಸ್ಥಾನದ ಉದ್ಯಾನದಲ್ಲಿ ವಿಶ್ವ ಕನ್ನಡ ಕಲಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಮತದಾನ ಜಾಗೃತಿ ಕುರಿತ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.</p>.<p>‘ರಾಜಕಾರಣಿಗಳು ಸರಿಯಿಲ್ಲ’ ಅನ್ನುವುದಕ್ಕಿಂತ ನಮ್ಮ ಮತವನ್ನು ಒಳ್ಳೆಯ ಮತ್ತು ಸೂಕ್ತ ಅಭ್ಯರ್ಥಿಗೆ ಚಲಾಯಿಸಬೇಕು. ಆಗ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಮತದಾನ ನಮ್ಮ ಹಕ್ಕು. ಅದನ್ನು ಪ್ರತಿಯೊಬ್ಬರೂ ಚಲಾಯಿಸಬೇಕು’ ಎಂದರು.</p>.<p>‘ಮತವನ್ನು ಹಣ ಹಾಗೂ ಆಮಿಷಗಳಿಗೆ ಮಾರಿಕೊಳ್ಳದೇ ಅದು ನನ್ನ ಕರ್ತವ್ಯವೆಂದು ಭಾವಿಸಿ, ನೀವು ಮತದಾನ ಮಾಡಿ. ಅಕ್ಕಪಕ್ಕದ ಮನೆಯವರಿಗೂ ಕಡ್ಡಾಯವಾಗಿ ಮತ ಚಲಾಯಿಸಲು ತಿಳಿಸಿ’ ಎಂದರು.</p>.<p>ಸಾಹಿತಿ ವೈ.ಬಿ.ಎಚ್. ಜಯದೇವ್ ಮಾತನಾಡಿ, ‘ಬೆಂಗಳೂರಿನಂತಹ ಮಹಾನಗರಗಳಲ್ಲಿ ಶೇ 54ರಷ್ಟು ಮತದಾನವಾಗುತ್ತದೆ. ಚುನಾವಣೆ ದಿನ ಏನೇ ಕೆಲಸವಿರಲಿ, ಪ್ರತಿಯೊಬ್ಬರೂ ದೇಶದ ಹಿತದೃಷ್ಟಿಯಿಂದ ಕಡ್ಡಾಯವಾಗಿ ಮತದಾನ ಮಾಡಿ’ ಎಂದು ಸಲಹೆ ನೀಡಿದರು.</p>.<p>ಅಂಬೇಡ್ಕರ್ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. 20ಕ್ಕೂ ಹೆಚ್ಚು ಕವಿಗಳು ಮತದಾನ ಜಾಗೃತಿ ಕುರಿತ ಕವಿಗೋಷ್ಠಿಯಲ್ಲಿ ತಮ್ಮ ಕವನ ವಾಚಿಸಿದರು.</p>.<p>ಕಾದಂಬರಿಗಾರರಾದ ಮಮತಾ ವಾರನಹಳ್ಳಿ, ಸಂಸ್ಥೆಯ ಅಧ್ಯಕ್ಷ ಈ.ರವೀಶ ಹಾಗೂ ಗೀತಾ, ಭಾರತಿ ಕೋಕಲೆ, ಕಾವೇರಿ, ಲತಾ ಕುಂದರಗಿ, ಬಿ.ಎಂ. ಪ್ರಮೀಳಾ, ಚಿತ್ತು ನಾಯಕ, ಚಿ.ದೇ.ಸೌಮ್ಯ, ಕೆ.ಎಸ್.ಕಾವೇರಿ, ಪುರುಷೋತ್ತಮ್, ಮಂಜುನಾಥ ನಂದಿ, ದೇವಸ್ಥಾನದ ಟ್ರಸ್ಟಿ ನಾಗೇಂದ್ರಪ್ಪ ಇದ್ದರು. <br> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪೀಣ್ಯ ದಾಸರಹಳ್ಳಿ</strong>: ‘ಚುನಾವಣೆಯಲ್ಲಿ ಯಾರಾದರೂ ಗೆಲ್ಲಲಿ. ಚುನಾವಣೆಯಿಂದ ನನಗೆ ಏನು ಆಗಬೇಕೆಂಬ ಉದಾಸೀನ ಭಾವನೆ ಬೇಡ. ಮತ ಹಾಕದೆ ನಿರ್ಲಕ್ಷ್ಯ ಮಾಡಬೇಡಿ. ಕಡ್ಡಾಯವಾಗಿ ಮತ ಹಾಕುವ ಮೂಲಕ ಒಳ್ಳೆಯ ಅಭ್ಯರ್ಥಿಯನ್ನು ಗೆಲ್ಲಿಸಿ ...’</p>.<p>– ಹೀಗೆಂದು ಮನವಿ ಮಾಡಿದವರು ಸಾಹಿತಿ ಚಿಕ್ಕ ಹೆಜ್ಜಾಜಿ ಮಹಾದೇವ್ ಅವರು.</p>.<p>ಲಗ್ಗೆರೆಯ ಮಂಜುನಾಥ ಸ್ವಾಮಿ ದೇವಸ್ಥಾನದ ಉದ್ಯಾನದಲ್ಲಿ ವಿಶ್ವ ಕನ್ನಡ ಕಲಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಮತದಾನ ಜಾಗೃತಿ ಕುರಿತ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.</p>.<p>‘ರಾಜಕಾರಣಿಗಳು ಸರಿಯಿಲ್ಲ’ ಅನ್ನುವುದಕ್ಕಿಂತ ನಮ್ಮ ಮತವನ್ನು ಒಳ್ಳೆಯ ಮತ್ತು ಸೂಕ್ತ ಅಭ್ಯರ್ಥಿಗೆ ಚಲಾಯಿಸಬೇಕು. ಆಗ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಮತದಾನ ನಮ್ಮ ಹಕ್ಕು. ಅದನ್ನು ಪ್ರತಿಯೊಬ್ಬರೂ ಚಲಾಯಿಸಬೇಕು’ ಎಂದರು.</p>.<p>‘ಮತವನ್ನು ಹಣ ಹಾಗೂ ಆಮಿಷಗಳಿಗೆ ಮಾರಿಕೊಳ್ಳದೇ ಅದು ನನ್ನ ಕರ್ತವ್ಯವೆಂದು ಭಾವಿಸಿ, ನೀವು ಮತದಾನ ಮಾಡಿ. ಅಕ್ಕಪಕ್ಕದ ಮನೆಯವರಿಗೂ ಕಡ್ಡಾಯವಾಗಿ ಮತ ಚಲಾಯಿಸಲು ತಿಳಿಸಿ’ ಎಂದರು.</p>.<p>ಸಾಹಿತಿ ವೈ.ಬಿ.ಎಚ್. ಜಯದೇವ್ ಮಾತನಾಡಿ, ‘ಬೆಂಗಳೂರಿನಂತಹ ಮಹಾನಗರಗಳಲ್ಲಿ ಶೇ 54ರಷ್ಟು ಮತದಾನವಾಗುತ್ತದೆ. ಚುನಾವಣೆ ದಿನ ಏನೇ ಕೆಲಸವಿರಲಿ, ಪ್ರತಿಯೊಬ್ಬರೂ ದೇಶದ ಹಿತದೃಷ್ಟಿಯಿಂದ ಕಡ್ಡಾಯವಾಗಿ ಮತದಾನ ಮಾಡಿ’ ಎಂದು ಸಲಹೆ ನೀಡಿದರು.</p>.<p>ಅಂಬೇಡ್ಕರ್ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. 20ಕ್ಕೂ ಹೆಚ್ಚು ಕವಿಗಳು ಮತದಾನ ಜಾಗೃತಿ ಕುರಿತ ಕವಿಗೋಷ್ಠಿಯಲ್ಲಿ ತಮ್ಮ ಕವನ ವಾಚಿಸಿದರು.</p>.<p>ಕಾದಂಬರಿಗಾರರಾದ ಮಮತಾ ವಾರನಹಳ್ಳಿ, ಸಂಸ್ಥೆಯ ಅಧ್ಯಕ್ಷ ಈ.ರವೀಶ ಹಾಗೂ ಗೀತಾ, ಭಾರತಿ ಕೋಕಲೆ, ಕಾವೇರಿ, ಲತಾ ಕುಂದರಗಿ, ಬಿ.ಎಂ. ಪ್ರಮೀಳಾ, ಚಿತ್ತು ನಾಯಕ, ಚಿ.ದೇ.ಸೌಮ್ಯ, ಕೆ.ಎಸ್.ಕಾವೇರಿ, ಪುರುಷೋತ್ತಮ್, ಮಂಜುನಾಥ ನಂದಿ, ದೇವಸ್ಥಾನದ ಟ್ರಸ್ಟಿ ನಾಗೇಂದ್ರಪ್ಪ ಇದ್ದರು. <br> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>