<p><strong>ಬೆಂಗಳೂರು</strong>: ತಲಘಟ್ಟಪುರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಜನರು ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.</p>.<p>ಒಂದು ತಿಂಗಳ ಹಿಂದೆ ತಲಘಟ್ಟಪುರದಲ್ಲಿ ಬೆಂಗಳೂರು ಜಲಮಂಡಳಿಯವರು ಅಲ್ಲಲ್ಲಿ ಸಿಂಟೆಕ್ಸ್ ಟ್ಯಾಂಕ್ಗಳನ್ನು ಜೋಡಿಸಿದ್ದಾರೆ. ಆದರೆ, ಆ ಟ್ಯಾಂಕ್ಗಳಿಗೆ ನೀರು ತುಂಬಿಸುವ ಕೆಲಸ ಮಾತ್ರ ಮಾಡಿಲ್ಲ. ಇದರಿಂದ ನೀರಿನ ಸಮಸ್ಯೆಗಾಗಿ ಜನರು ಪರದಾಡುವಂತಾಗಿದೆ.</p>.<p>‘ತಲಘಟ್ಟಪುರದಲ್ಲಿ ಸುಮಾರು 3 ಸಾವಿರದಿಂದ 4 ಸಾವಿರದವರೆಗೆ ಜನಸಂಖ್ಯೆ ಇದೆ. ಈ ಭಾಗಕ್ಕೆ ಕಾವೇರಿ ನೀರಿನ ಪೂರೈಕೆ ಇಲ್ಲ. ಇಲ್ಲಿನ ನಿವಾಸಿಗಳು ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನೇ ಆಶ್ರಯಿಸಿದ್ದಾರೆ. ತಲಘಟ್ಟಪುರ ಕೆರೆಯೂ ಬತ್ತಿ ಹೋಗುತ್ತಿದ್ದು, ಈ ಭಾಗದ ಕೊಳವೆಬಾವಿಗಳು ಬತ್ತಿ ಹೋಗುವ ಆತಂಕ ಎದುರಾಗಿದೆ‘ ಎಂದು ಸ್ಥಳೀಯ ನಿವಾಸಿಗಳು ಹೇಳಿದರು.</p>.<p>‘ನಾಲ್ಕು ಸಾವಿರ ಜನಸಂಖ್ಯೆ ಹೊಂದಿರುವ ತಲಘಟ್ಟಪುರದಲ್ಲಿ ಎರಡು ಸಿಂಟೆಕ್ಸ್ ಟ್ಯಾಂಕ್ಗಳನ್ನಷ್ಟೇ ಇಟ್ಟಿದ್ದಾರೆ. ಇರುವ ಟ್ಯಾಂಕ್ಗಳಿಗೆ ನೀರನ್ನು ತುಂಬಿಸುತ್ತಿಲ್ಲ. ಕೇವಲ ಪ್ರಚಾರಕ್ಕಾಗಿ ಇರಿಸಿದ್ದಾರೆನೋ ಎಂಬ ಅನುಮಾನ ಮೂಡುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನೀರಿನ ಸಮಸ್ಯೆ ಹೆಚ್ಚಾಗಿದೆ. ಜಲಮಂಡಳಿಯವರು ಇಲ್ಲಿನ ಸಿಂಟೆಕ್ಸ್ ಟ್ಯಾಂಕ್ಗಳಿಗೆ ಪ್ರತಿನಿತ್ಯ ನೀರು ತುಂಬಿಸಿ ಜನ–ಜಾನವಾರುಗಳ ಜೀವ ಉಳಿಸಬೇಕು’ ಎಂದು ತಲಘಟ್ಟಪುರದ ನಿವಾಸಿ ರಾ. ಜಯಸಿಂಹ ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ತಲಘಟ್ಟಪುರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಜನರು ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.</p>.<p>ಒಂದು ತಿಂಗಳ ಹಿಂದೆ ತಲಘಟ್ಟಪುರದಲ್ಲಿ ಬೆಂಗಳೂರು ಜಲಮಂಡಳಿಯವರು ಅಲ್ಲಲ್ಲಿ ಸಿಂಟೆಕ್ಸ್ ಟ್ಯಾಂಕ್ಗಳನ್ನು ಜೋಡಿಸಿದ್ದಾರೆ. ಆದರೆ, ಆ ಟ್ಯಾಂಕ್ಗಳಿಗೆ ನೀರು ತುಂಬಿಸುವ ಕೆಲಸ ಮಾತ್ರ ಮಾಡಿಲ್ಲ. ಇದರಿಂದ ನೀರಿನ ಸಮಸ್ಯೆಗಾಗಿ ಜನರು ಪರದಾಡುವಂತಾಗಿದೆ.</p>.<p>‘ತಲಘಟ್ಟಪುರದಲ್ಲಿ ಸುಮಾರು 3 ಸಾವಿರದಿಂದ 4 ಸಾವಿರದವರೆಗೆ ಜನಸಂಖ್ಯೆ ಇದೆ. ಈ ಭಾಗಕ್ಕೆ ಕಾವೇರಿ ನೀರಿನ ಪೂರೈಕೆ ಇಲ್ಲ. ಇಲ್ಲಿನ ನಿವಾಸಿಗಳು ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನೇ ಆಶ್ರಯಿಸಿದ್ದಾರೆ. ತಲಘಟ್ಟಪುರ ಕೆರೆಯೂ ಬತ್ತಿ ಹೋಗುತ್ತಿದ್ದು, ಈ ಭಾಗದ ಕೊಳವೆಬಾವಿಗಳು ಬತ್ತಿ ಹೋಗುವ ಆತಂಕ ಎದುರಾಗಿದೆ‘ ಎಂದು ಸ್ಥಳೀಯ ನಿವಾಸಿಗಳು ಹೇಳಿದರು.</p>.<p>‘ನಾಲ್ಕು ಸಾವಿರ ಜನಸಂಖ್ಯೆ ಹೊಂದಿರುವ ತಲಘಟ್ಟಪುರದಲ್ಲಿ ಎರಡು ಸಿಂಟೆಕ್ಸ್ ಟ್ಯಾಂಕ್ಗಳನ್ನಷ್ಟೇ ಇಟ್ಟಿದ್ದಾರೆ. ಇರುವ ಟ್ಯಾಂಕ್ಗಳಿಗೆ ನೀರನ್ನು ತುಂಬಿಸುತ್ತಿಲ್ಲ. ಕೇವಲ ಪ್ರಚಾರಕ್ಕಾಗಿ ಇರಿಸಿದ್ದಾರೆನೋ ಎಂಬ ಅನುಮಾನ ಮೂಡುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನೀರಿನ ಸಮಸ್ಯೆ ಹೆಚ್ಚಾಗಿದೆ. ಜಲಮಂಡಳಿಯವರು ಇಲ್ಲಿನ ಸಿಂಟೆಕ್ಸ್ ಟ್ಯಾಂಕ್ಗಳಿಗೆ ಪ್ರತಿನಿತ್ಯ ನೀರು ತುಂಬಿಸಿ ಜನ–ಜಾನವಾರುಗಳ ಜೀವ ಉಳಿಸಬೇಕು’ ಎಂದು ತಲಘಟ್ಟಪುರದ ನಿವಾಸಿ ರಾ. ಜಯಸಿಂಹ ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>