ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಸವಕಲ್ಯಾಣ | ತಿಂಗಳಾದರೂ ಪರಿಹಾರವಿಲ್ಲ, ಬಿತ್ತನೆಯೂ ಆಗಿಲ್ಲ

ಖೇರ್ಡಾ (ಕೆ), ಕೊಹಿನೂರವಾಡಿ ಗ್ರಾಮಗಳ ನೂರಾರು ಎಕರೆ ಜಮೀನಿಗೆ ಹಾನಿ
Published 10 ಜುಲೈ 2024, 6:18 IST
Last Updated 10 ಜುಲೈ 2024, 6:18 IST
ಅಕ್ಷರ ಗಾತ್ರ

ಬಸವಕಲ್ಯಾಣ: ತಾಲ್ಲೂಕಿನ ಖೇರ್ಡಾ (ಕೆ) ಮತ್ತು ಕೊಹಿನೂರವಾಡಿ ಗ್ರಾಮಗಳ ಜಮೀನುಗಳಲ್ಲಿ ಅತಿವೃಷ್ಟಿ ಹಾಗೂ ಕೆರೆ ಒಡೆದಿದ್ದರಿಂದ ಆಗಿರುವ ನಷ್ಟಕ್ಕೆ ತಿಂಗಳಾದರೂ ಪರಿಹಾರ ನೀಡಿಲ್ಲ. 

ಸಮಯಕ್ಕೆ ಅರಿಯಾಗಿ ಮುಂಗಾರು ಮಳೆಯಾಗಿದೆ ಎಂದು ರೈತರು ಖುಷಿಗೊಂಡಿದ್ದರು. ಆದರೆ ಮರುದಿನವೇ ಧಾರಾಕಾರ ಮಳೆಗೆ ಕೊಹಿನೂರ ಹಾಗೂ ಅಟ್ಟೂರ್ ಕೆರೆಗಳು ಒಡೆದು ನೂರಾರು ಎಕರೆಯಲ್ಲಿನ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಯಿತು. ಕೆಲ ರೈತರು ಬಿತ್ತನೆಗಾಗಿ ಬೀಜ ಮತ್ತು ಗೊಬ್ಬರ ಮನೆಗೆ ತಂದಿಟ್ಟಿದ್ದರು. ಆದರೆ ಜಮೀನುಗಳಲ್ಲಿನ ವಾರಗಟ್ಟಲೇ ನೀರು ಸಂಗ್ರಹಗೊಂಡಿತು. ಅಲ್ಲದೆ ಎಲ್ಲೆಲ್ಲೂ ಬರೀ ಕಲ್ಲುಗಳೇ ಎದ್ದು ನಿಂತಿದ್ದರಿಂದ ಅನೇಕರು ಬಿತ್ತನೆ ಕೈಗೊಳ್ಳಲಿಲ್ಲ.

ಕೊಹಿನೂರ ಕೆರೆ ಒಡೆದಿದ್ದರಿಂದ ಗಂಡೂರಿ ನಾಲೆ ಉಕ್ಕಿ ಹರಿದ ಪರಿಣಾಮವಾಗಿ ಹೆಚ್ಚಿನ ಹಾನಿಯಾಗಿದೆ. ನೀರಿನ ರಭಸಕ್ಕೆ ಕೊಹಿನೂರವಾಡಿ ಮತ್ತು ಖೇರ್ಡಾ (ಕೆ) ಗ್ರಾಮಗಳ ಜಮೀನುಗಳ ಬದುಗಳು ಸಹ ಕಾಣದಷ್ಟು ಮಣ್ಣು ನಾಲೆಯ ಪಾಲಾಯಿತು.

‘ಮಳೆಯಿಂದ ಕೆಲ ಸೇತುವೆ ಮತ್ತು ರಸ್ತೆಗೆ ಹಾನಿ ಆಗಿತ್ತು. ಅದನ್ನು ಸರಿಪಡಿಸಲಾಗಿದೆ. ಆದರೆ ರೈತರಿಗೆ ಮಾತ್ರ ಪರಿಹಾರ ನೀಡಿಲ್ಲ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಶಾಸಕರು ಮತ್ತು ಸಂಸದರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈದುವರೆಗೆ ನ್ಯಾಯ ಸಿಕ್ಕಿಲ್’' ಎಂದು ಖೇರ್ಡಾ (ಕೆ) ಗ್ರಾಮ ಪಂಚಾಯಿತಿ ಸದಸ್ಯ ರವೀಂದ್ರ ರಾಯಾಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಕ್ಷಣದಲ್ಲಿ ಸ್ಥಳಕ್ಕೆ ಬಂದಿದ್ದರಿಂದ ಕೆಲ ದಿನಗಳಲ್ಲಿಯೇ ಪರಿಹಾರ ದೊರಕಬಹುದು. ಹೊಲಗಳ ಸುಧಾರಣೆಗೆ ಮತ್ತು ಬಿತ್ತನೆ ಕೈಗೊಳ್ಳುವುದಕ್ಕೆ ಸರ್ಕಾರದ ಹಣದಿಂದ ಅನುಕೂಲ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಭರವಸೆಗೆ ತಕ್ಕಂತೆ ಯಾರೂ ನಡೆದುಕೊಂಡಿಲ್ಲ. ಆದ್ದರಿಂದ ರೈತರು ಕಂಗಾಲಾಗಿದ್ದಾರೆ’ ಎಂದು ಕೊಹಿನೂರವಾಡಿ ರೈತ ಮಧುಕರ ಘೋಡಕೆ ಹೇಳಿದ್ದಾರೆ.

ಅತಿವೃಷ್ಟಿಯಿಂದ ಹಾನಿಯಾದ ಕೊಹಿನೂರ, ಮುಡಬಿ ಮತ್ತು ಮಂಠಾಳ ಹೋಬಳಿಯ 22 ಗ್ರಾಮಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಪರಿಹಾರದ ಹಣ ಶೀಘ್ರ ರೈತರ ಕೈಗೆ ಸಿಗುವುದಕ್ಕಾಗಿ ಪ್ರಯತ್ನ ನಡೆದಿದೆ’ ಎಂದು ಕೃಷಿ ಸಹಾಯಕ ನಿರ್ದೇಶಕ ಮಾರ್ತಂಡ ಮಚಕೂರಿ ತಿಳಿಸಿದ್ದಾರೆ.

ಮಳೆಯಿಂದ ಹಾನಿಯಾದ ಪ್ರದೇಶ

ಹಾನಿಗೊಳಗಾದ ಜಮೀನು - 890

ಎಕರೆ ನೀಡಬೇಕಾಗಿರುವ ಪರಿಹಾರ - ₹64 ಲಕ್ಷ

ಹಾನಿಗೊಳಗಾದ ಗ್ರಾಮಗಳು - 22

ಕೊಹಿನೂರ ಹೋಬಳಿ ಗ್ರಾಮಗಳು - 18

ಮುಡಬಿ ಹೋಬಳಿ ಗ್ರಾಮಗಳು - 2

ಮಂಠಾಳ ಹೋಬಳಿ ಗ್ರಾಮಗಳು - 2

ಮಳೆ ಹಾನಿಯಿಂದ ರೈತರಿಗೆ ಅಪಾರ ನಷ್ಟವಾಗಿದ್ದು ಯಾವುದೇ ಬೆಳೆ ಬೆಳೆಯದಂತೆ ಜಮೀನು ಹಾಳಾಗಿದೆ. ಶಾಶ್ವತ ಪರಿಹಾರ ದೊರಕಿಸಬೇಕು.
ಮಧುಕರ ಘೋಡಕೆ, ರೈತ, ಕೊಹಿನೂರ ವಾಡಿ
ಈಗಾಗಲೇ ಸಮೀಕ್ಷೆ ನಡೆದಿದೆ. ಪರಿಹಾರದ ಹಣ ಬಿಡುಗಡೆಯಾದರೆ ಜಮೀನಿನಲ್ಲಿ ಸುಧಾರಣಾ ಕಾರ್ಯ ಕೈಗೊಂಡು ಬಿತ್ತನೆ ನಡೆಸಲು ಅನುಕೂಲ ಆಗುತ್ತದೆ.
ರವೀಂದ್ರ ರಾಯಾಜಿ, ಖೇರ್ಡಾ(ಕೆ) ಗ್ರಾ.ಪಂ ಸದಸ್ಯ
ಕೆಲ ರೈತರ ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಇತರೆ ದಾಖಲೆಗಳನ್ನು ಪಡೆಯುವುದು ಬಾಕಿ ಇದ್ದು ಅದಾದಮೇಲೆ ಶೀಘ್ರದಲ್ಲೇ ಹಣ ಪಾವತಿಸಲಾಗುತ್ತದೆ.
ಮಾರ್ತಂಡ ಮಚಕೂರಿ, ಕೃಷಿ ಸಹಾಯಕ ನಿರ್ದೇಶಕ
ಬಸವಕಲ್ಯಾಣ ತಾಲ್ಲೂಕಿನ ಖೇರ್ಡಾ (ಕೆ)  ಗ್ರಾಮದ ಜಮೀನಿನಲ್ಲಿ ನೀರು ನುಗ್ಗಿದ್ದರಿಂದ ಮಣ್ಣು ಕೊಚ್ಚಿಕೊಂಡು ಹೋಗಿ ಹಾನಿ ಆಗಿರುವುದು
ಬಸವಕಲ್ಯಾಣ ತಾಲ್ಲೂಕಿನ ಖೇರ್ಡಾ (ಕೆ)  ಗ್ರಾಮದ ಜಮೀನಿನಲ್ಲಿ ನೀರು ನುಗ್ಗಿದ್ದರಿಂದ ಮಣ್ಣು ಕೊಚ್ಚಿಕೊಂಡು ಹೋಗಿ ಹಾನಿ ಆಗಿರುವುದು
ಬಸವಕಲ್ಯಾಣ ತಾಲ್ಲೂಕಿನ ಖೇರ್ಡಾ (ಕೆ)  ಗ್ರಾಮದ ಜಮೀನಿನಲ್ಲಿ ನೀರು ನುಗ್ಗಿದ್ದರಿಂದ ಮಣ್ಣು ಕೊಚ್ಚಿಕೊಂಡು ಹೋಗಿ ಹಾನಿ ಆಗಿರುವುದು
ಬಸವಕಲ್ಯಾಣ ತಾಲ್ಲೂಕಿನ ಖೇರ್ಡಾ (ಕೆ)  ಗ್ರಾಮದ ಜಮೀನಿನಲ್ಲಿ ನೀರು ನುಗ್ಗಿದ್ದರಿಂದ ಮಣ್ಣು ಕೊಚ್ಚಿಕೊಂಡು ಹೋಗಿ ಹಾನಿ ಆಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT