ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹದೇಶ್ವರ ಬೆಟ್ಟ: ನಾಗಮಲೆ ಪ್ರವೇಶಕ್ಕೆ ಆನ್‌ಲೈನ್ ಟಿಕೆಟ್‌

ವ್ಯವಸ್ಥೆಗೆ ಅರಣ್ಯ ಇಲಾಖೆ ಸಿದ್ಧತೆ: ಭಕ್ತರ ಸಂತಸ; ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆಯಾಗದಿರಲಿ– ಒತ್ತಾಯ
Published : 19 ಸೆಪ್ಟೆಂಬರ್ 2024, 4:44 IST
Last Updated : 19 ಸೆಪ್ಟೆಂಬರ್ 2024, 4:44 IST
ಫಾಲೋ ಮಾಡಿ
Comments
ಮಹದೇಶ್ವರ ಬೆಟ್ಟದ ಜತೆಗೆ ನಾಗಮಲೆಯೂ ಭಕ್ತರಿಗೆ ಧಾರ್ಮಿಕ ಶ್ರದ್ದಾ ಭಕ್ತಿಯ ಕೇಂದ್ರವಾಗಿದೆ. ಅರಣ್ಯಇಲಾಖೆ ಭಕ್ತರ ಭಾವನೆಗಳಿಗೆ ಸ್ಪಂದಿಸಬೇಕು. ಭಕ್ತರು ಸಹ ಧಾರ್ಮಿಕ ಸ್ಥಳದ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು
ಕೆ.ವಿ ಮಾದೇಶ್ ಬೇಡ ಗಂಪಣ ಆರ್ಚಕರು
ನಾಗಮಲೆಗೆ ತೆರಳುವ ಭಕ್ತರು ಭಕ್ತಿಯ ಜತೆಗೆ ಪರಿಸರಕ್ಕೂ ಹಾನಿಯಾಗದಂತೆ ನಡೆದುಕೊಳ್ಳಬೇಕು. ಸ್ಥಳೀಯ ಜನರು ಹೊರಗಿನಿಂದ ಬರುವ ಭಕ್ತರಿಗೆ ಕ್ಷೇತ್ರದ ಪಾವಿತ್ರತ್ಯೆ ಬಗ್ಗೆ ಅರಿವು ಮೂಡಿಸಬೇಕು
ಶಾಂತಮಲ್ಲಿಕಾರ್ಜುನಸ್ವಾಮಿ ಸಾಲೂರು ಬೃಹನ್ಮಠ ಮಹದೇಶ್ವರ ಬೆಟ್ಟ
ನಾಗಮಲೆಗೆ ಮೋಜು ಮಸ್ತಿಗಾಗಿ ತೆರಳುವುದಿಲ್ಲ. ಅಲ್ಲಿಗೆ ತೆರಳುವ ಭಕ್ತರು ಕಾಲಿಗೆ ಪಾದರಕ್ಷೆಯನ್ನು ಹಾಕುವುದಿಲ್ಲ. ನಿಜವಾದ ಭಕ್ತರು ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ನಡೆದುಕೊಳ್ಳುತ್ತಾರೆ
ಚಿಕ್ಕಮಾದು ಮಹದೇಶ್ವರ ಬೆಟ್ಟ
ನಾಗಮಲೆಗೆ ಪ್ರವೇಶ ನೀಡಿದರೆ ಪರಿಸರಕ್ಕೆ ಹಾನಿಯಾಗುವುದಿಲ್ಲ. ಭಕ್ತರು ನಾಗಮಲೆಗೆ ತೆರಳಲು ಮುಕ್ತ ಅವಕಾಶ ನೀಡಬೇಕು. ಆದರೆ ಕ್ಷೇತ್ರದ ಪಾವಿತ್ರ್ಯತೆ ಹಾಳಾದರೆ ಕಠಿಣ ಕ್ರಮ ಜರುಗಿಸಬೇಕು
ಮಹದೇವಸ್ವಾಮಿ ತುಳಸಿಕೆರೆ
‘ಇನ್ನೆರಡು ದಿನಗಳಲ್ಲಿ ಕ್ರಮ’
ಅರಣ್ಯ ಸಚಿವರ ಆದೇಶದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಚಾರಣ ಪ್ರದೇಶಗಳ ಪ್ರವೇಶಕ್ಕೆ ಆನ್‌ಲೈನ್ ಟಿಕೆಟ್‌ ವ್ಯವಸ್ಥೆ ಜಾರಿಗೆ ಬಂದಿದ್ದು ಅದರಂತೆ ನಾಗಮಲೆ ಪ್ರವೇಶಕ್ಕೂ ಆನ್‌ಲೈನ್ ಟಿಕೆಟ್‌ ವ್ಯವಸ್ಥೆ ಮಾಡಲಾಗಿದ್ದು ಇನ್ನೆರಡು ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ. ಸ್ಥಳೀಯ ಭಕ್ತರಿಗೆ ನಾಗಮಲೆ ಪ್ರವೇಶಕ್ಕೆ ಮುಕ್ತ ಅವಕಾಶ ನೀಡುವ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ನಾಗಮಲೆಯಲ್ಲಿ ಅನೈತಿಕ ಚಟುವಟಿಕೆಗಳು ನಡೆಯದಂತೆ ಅರಣ್ಯ ಇಲಾಖೆ ಹದ್ದಿನ ಕಣ್ಣಿಡಲಿದೆ- ಹೀರಾಲಾಲ್‌ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಚಾಮರಾಜನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT