<p><strong>ಗೌರಿಬಿದನೂರು</strong>: ನಗರದ ಉಡಮಲೋಡು ಗ್ರಾಮದ ಫ್ಲಾರೆನ್ಸ್ ( ಸವಿತ ನರಸಿಂಹಮೂರ್ತಿ) ನಿವಾಸದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬುಧವಾರ ಸಂಜೆ ಮನೆಯಂಗಳದಲ್ಲಿ ಕನ್ನಡ ಕಂಪು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.</p>.<p>ಲೇಖಕಿ ಆಶಾ ಜಗದೀಶ್ ಮಾತನಾಡಿ, ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯವನ್ನು ಅನೇಕ ಮಂದಿ ಸಾಹಿತಿಗಳು, ಚಿಂತಕರು ಕಟ್ಟಿ ಬೆಳೆಸಿರುವುದನ್ನು ಇಂದಿನ ಯುವ ಸಮುದಾಯ ಮುಂದುವರೆಸಿಕೊಂಡು ಹೋಗಬೇಕಾಗಿದೆ. ಕನ್ನಡಿಗರಾದ ನಾವು ನಾಡು ನುಡಿಗಾಗಿ ಶ್ರಮಿಸಬೇಕಾಗಿದೆ ಎಂದರು.</p>.<p>ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಂಜುಂಡಪ್ಪ ಟಿ.ಮಾತನಾಡಿ, ಕರ್ನಾಟಕದಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಿದ್ದಾರೆ. ಉದ್ಯೋಗದ ಭೀತಿ ಆತಂಕದಲ್ಲಿದ್ದಾರೆ. ಕನ್ನಡ ಭಾಷೆ ಅನ್ನ ನೀಡುವ ಭಾಷೆಯಾಗಬೇಕು. ಒಂದು ಭಾಷೆ ನಶಿಸಿಹೋಗುವುದೆಂದರೆ ಒಂದು ಜನಾಂಗ ನಶಿಸಿ ಹೋದಂತೆ. ಆದ್ದರಿಂದ ಭಾಷೆ ಉಳಿಸಿ ಬೆಳೆಸಬೇಕಾಗಿದೆ ಎಂದರು.</p>.<p>ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಎನ್.ಬಾಲಪ್ಪ, ರಾಣಾ ಪ್ರತಾಪ್, ಡಾ.ಕೆ.ವಿ.ಪ್ರಕಾಶ್, ನಿವೃತ್ತ ಪ್ರಾಂಶುಪಾಲರಾದ ಡಾ.ನಾಗರತ್ನಮ್ಮ, ಗುಂಡಾಪುರ ಪದ್ಮಗೋವಿಂದಪ್ಪ, ನಜೀರ್ ಅಹಮದ್, ಶಿಕ್ಷಕ ಉಮಾಶಂಕರ್, ಸಿದ್ದಯ್ಯ, ಲಕ್ಷ್ಮಿನಾರಾಯಣಪ್ಪ, ಪೆದ್ದಗಂಗಪ್ಪ, ಕಲಾವಿದ ರಾಮಕೃಷ್ಣ, ಸಾಹಿತಿ ಸರ್ವಮಂಗಳ, ಸವಿತ, ನರಸಮ್ಮ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೌರಿಬಿದನೂರು</strong>: ನಗರದ ಉಡಮಲೋಡು ಗ್ರಾಮದ ಫ್ಲಾರೆನ್ಸ್ ( ಸವಿತ ನರಸಿಂಹಮೂರ್ತಿ) ನಿವಾಸದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬುಧವಾರ ಸಂಜೆ ಮನೆಯಂಗಳದಲ್ಲಿ ಕನ್ನಡ ಕಂಪು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.</p>.<p>ಲೇಖಕಿ ಆಶಾ ಜಗದೀಶ್ ಮಾತನಾಡಿ, ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯವನ್ನು ಅನೇಕ ಮಂದಿ ಸಾಹಿತಿಗಳು, ಚಿಂತಕರು ಕಟ್ಟಿ ಬೆಳೆಸಿರುವುದನ್ನು ಇಂದಿನ ಯುವ ಸಮುದಾಯ ಮುಂದುವರೆಸಿಕೊಂಡು ಹೋಗಬೇಕಾಗಿದೆ. ಕನ್ನಡಿಗರಾದ ನಾವು ನಾಡು ನುಡಿಗಾಗಿ ಶ್ರಮಿಸಬೇಕಾಗಿದೆ ಎಂದರು.</p>.<p>ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಂಜುಂಡಪ್ಪ ಟಿ.ಮಾತನಾಡಿ, ಕರ್ನಾಟಕದಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಿದ್ದಾರೆ. ಉದ್ಯೋಗದ ಭೀತಿ ಆತಂಕದಲ್ಲಿದ್ದಾರೆ. ಕನ್ನಡ ಭಾಷೆ ಅನ್ನ ನೀಡುವ ಭಾಷೆಯಾಗಬೇಕು. ಒಂದು ಭಾಷೆ ನಶಿಸಿಹೋಗುವುದೆಂದರೆ ಒಂದು ಜನಾಂಗ ನಶಿಸಿ ಹೋದಂತೆ. ಆದ್ದರಿಂದ ಭಾಷೆ ಉಳಿಸಿ ಬೆಳೆಸಬೇಕಾಗಿದೆ ಎಂದರು.</p>.<p>ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಎನ್.ಬಾಲಪ್ಪ, ರಾಣಾ ಪ್ರತಾಪ್, ಡಾ.ಕೆ.ವಿ.ಪ್ರಕಾಶ್, ನಿವೃತ್ತ ಪ್ರಾಂಶುಪಾಲರಾದ ಡಾ.ನಾಗರತ್ನಮ್ಮ, ಗುಂಡಾಪುರ ಪದ್ಮಗೋವಿಂದಪ್ಪ, ನಜೀರ್ ಅಹಮದ್, ಶಿಕ್ಷಕ ಉಮಾಶಂಕರ್, ಸಿದ್ದಯ್ಯ, ಲಕ್ಷ್ಮಿನಾರಾಯಣಪ್ಪ, ಪೆದ್ದಗಂಗಪ್ಪ, ಕಲಾವಿದ ರಾಮಕೃಷ್ಣ, ಸಾಹಿತಿ ಸರ್ವಮಂಗಳ, ಸವಿತ, ನರಸಮ್ಮ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>