ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂತಾಮಣಿ ಕ್ಷೇತ್ರ: ನೂತನ ಶಾಸಕರಿಗೆ ನೂರೆಂಟು ಸವಾಲು

Published : 20 ಮೇ 2023, 23:30 IST
Last Updated : 20 ಮೇ 2023, 23:30 IST
ಫಾಲೋ ಮಾಡಿ
Comments
ನಗರದ ಸರ್ಕಾರಿ ಕಚೇರಿಗಳ ಆಡಳಿತಯಂತ್ರ ಕುಸಿದುಬಿದ್ದಿದೆ. ಜನರು ಅಗತ್ಯ ಕೆಲಸ ಕಾರ್ಯಗಳಿಗಾಗಿ ತಕ್ಷಣ ಅಲೆದಾಡಿ ಪರಿತಪಿಸುವಂತಾಗಿದೆ. ನೂತನ ಶಾಸಕರು ತಕ್ಷಣ ಗಮನಹರಿಸಬೇಕು. ನಿಧಾನಗತಿ ಲಂಚ ದಳ್ಳಾಳಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಸುಲಭವಾಗಿ ಜನರ ಕೆಲಸಗಳಾಗುವಂತೆ ಕ್ರಮಕೈಗೊಳ್ಳಬೇಕು. ಮಂಜುನಾಥ್. ಕೈವಾರ ತಾಲ್ಲೂಕಿನಲ್ಲಿ ಅಗತ್ಯವಿರುವ ಯೋಜನೆಗಳಿಗೆ ಡಿಪಿಆರ್ ಮಾಡಿಸಿದೆ ಟೆಂಡರ್ ಕರೆಯಲಾಗಿದೆ ಎಂದು ಸಬೂಬುಗಳನ್ನು ಹೇಳಿದರೆ ಪ್ರಯೋಜನವಿಲ್ಲ. ವಿವಿಧ ಹಂತಗಳಲ್ಲಿ ನೆನಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ನಗರಕ್ಕೆ ನೀರು ಪೂರೈಕೆಗಾಗಿ ರೂಪಿಸಿರುವ ಭಕ್ತರಹಳ್ಳಿ-ಅರಸೀಕೆರೆ ನೀರು ಹರಿಸಲು ಸಾಸಕರು ಒತ್ತುನೀಡಬೇಕು.
–ಸುರೇಶ್ ಹಿರಿಯ ನಾಗರಿಕ, ಚಿಂತಾಮಣಿ.
ನಗರದ ಹೊರವಲಯದ ಮಾಡಿಕೆರೆ ಬಳಿ ಸ್ಥಾಪಿಸಿರುವ ಮಾವು ಅಭಿವೃದ್ದಿ ಕೇಂದ್ರ ನಿರುಪಯುಕ್ತವಾಗಿದೆ. ಅಲ್ಲಿ ರೈತರಿಗೆ ವಿವಿಧ ಬೆಳೆಗಳ ಬಗ್ಗೆ ತರಬೇತಿ ನೀಡುವ ಉದ್ದೇಶದಿಂದ ಉತ್ತಮ ಕಟ್ಟಡಗಳ ನಿರ್ಮಾಣವಾಗಿದೆ. ಹಿಂದಿನ ಶಾಸಕರ ನಿರ್ಲಕ್ಷ್ಯತೆಯಿಂದ ಕೇಂದ್ರ ಯಾವುದಕ್ಕೂ ಬಳಕೆಯಾಗದೆ ಖಾಲಿಯಾಗಿದೆ. ಸಂಪನ್ಮೂಲ ವ್ಯಕ್ತಿಗಳಿಂದ ರೈತರಿಗೆ ವಿವಿಧ ಬೆಳೆಗಳ ಬಗ್ಗೆ ಸಮಗ್ರ ತರಬೇತಿ ಕೊಡಿಸಲು ನೂತನ ಶಾಸಕರು ಗಮನಹರಿಸಬೇಕು.
–ವೆಂಕಟೇಶ್. ಮಾವು ಬೆಳೆಗಾರ.
ಕ್ಷೇತ್ರದಲ್ಲಿ ಶೇ.90 ರಷ್ಟು ರಸ್ತೆಗಳು ಹಾಳಾಗಿವೆ. ರಸ್ತೆಗಳ ದುರಸ್ಥಿಗೆ ವಿಶೇಷ ಅನುದಾನವನ್ನು ತಂದು ಶೀಘ್ರವಾಗಿ ಕಾಮಗಾರಿಯನ್ನು ಅರಂಭಿಸಬೇಕು. ಅತ್ಯಧಿಕ ಮತಗಳಿಂದ ಆಯ್ಕೆ ಮಾಡಿರುವ ಜನರ ನಿರೀಕ್ಷೆಗಳನ್ನು ಪೂರೈಕೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು.
-ಶ್ರೀನಿವಾಸ್.ಮುರುಗಮಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT