<p><strong>ಚಿಂತಾಮಣಿ</strong>: ಅವಿಭಜಿತ ಕೋಲಾರ ಜಿಲ್ಲೆಯಲ್ಲಿ 50 ವರ್ಷಗಳ ಹಿಂದೆ ಪ್ರಥಮವಾಗಿ ಸ್ಥಾಪಿತವಾಗಿದ್ದ ನಗರದ ಹಾಲು ಶೀಥಲ ಕೇಂದ್ರ ನೆಲಸಮಗೊಂಡು ಈಗ ಇತಿಹಾಸದ ಪುಟ ಸೇರಿದೆ. ಸುಮಾರು ಐದು ದಶಕಗಳ ಕಾಲ ಕಾರ್ಯನಿರ್ವಹಣೆ ಮಾಡಿದ್ದು ಈಗ ನೆನಪು ಮಾತ್ರ.</p>.<p>1983-85 ಅವಧಿಯಲ್ಲಿ ಗೃಹ ಸಚಿವರಾಗಿದ್ದ ಎ.ಚೌಡರೆಡ್ಡಿ ಅವರ ಶ್ರಮ ಮತ್ತು ಆಸಕ್ತಿಯಿಂದ ಹಾಲು ಉತ್ಪಾದಕರಿಗಾಗಿ ಶೀಥಲ ಕೇಂದ್ರ ಸ್ಥಾಪನೆಗೊಂಡಿತ್ತು. ಭೌಗೋಳಿಕವಾಗಿ ಚಿಂತಾಮಣಿ ಅವಿಭಜಿತ ಕೋಲಾರ ಜಿಲ್ಲೆ ಮಧ್ಯ ಭಾಗದಲ್ಲಿರುವುದರಿಂದ ಕೋಚಿಮುಲ್ ಘಟಕವನ್ನು ಇಲ್ಲೇ ಸ್ಥಾಪನೆ ಮಾಡಬೇಕು ಎಂಬುದು ಅವರ ಕನಸಾಗಿತ್ತು. ಕೋಲಾರದಲ್ಲಿ ಮಾಡಿದರೆ ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರು ತಾಲ್ಲೂಕುಗಳಿಗೆ ತೊಂದರೆ ಆಗುತ್ತದೆ. ಚಿಂತಾಮಣಿಯಲ್ಲೇ ಕೋಚಿಮುಲ್ ಸ್ಥಾಪಿಸಬೇಕು ಎಂದು ಚಿಂತಿಸಿ ಪ್ರಥಮ ಹಂತವಾಗಿ ಹಾಲು ಶೀಥಲ ಕೇಂದ್ರವನ್ನು ಸ್ಥಾಪಿಸಿದ್ದರು.</p>.<p>ದುರದೃಷ್ಟವಶಾತ್ 1985 ಚುನಾವಣೆಯಲ್ಲಿ ಅವರು ಸೋತರು. ಅಂದು ಉನ್ನತ ಹುದ್ದೆಯಲ್ಲಿದ್ದ ಐಎಎಸ್ ಅಧಿಕಾರಿ ಮುನಿಸ್ವಾಮಿ, ಕೋಲಾರ-ಮುಳಬಾಗಿಲು ರಸ್ತೆಯಲ್ಲಿ ತಮ್ಮ ಗ್ರಾಮದ ಸಮೀಪ ಕೋಚಿಮುಲ್ ಘಟಕ ಸ್ಥಾಪನೆಗೆ ಕಾರಣರಾದರು. ಹೀಗೆ ಚಿಂತಾಮಣಿ ಕೋಚಿಮುಲ್ ಘಟಕದಿಂದ ವಂಚಿತವಾಯಿತು ಎನ್ನುತ್ತಾರೆ ಹಿರಿಯ ಸಹಕಾರಿಗಳು.</p>.<p>ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಪ್ರಥಮವಾಗಿ ಚಿಂತಾಮಣಿಯಲ್ಲಿ ಹಾಲು ಶೀಥಲ ಕೇಂದ್ರ ಆರಂಭಿಸಿ ಕಳೆದ 5 ದಶಕಗಳಿಂದ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿತ್ತು. ಬೆಳಿಗ್ಗೆ ನಸುಕಿನಿಂದ ರಾತ್ರಿ 11ರವರೆಗೂ ಸದಾ ಚಟುವಟಿಕೆಯಿಂದ ಕೂಡಿರುತ್ತಿತ್ತು. ತಾಲ್ಲೂಕಿನ ವಿವಿಧ ಹಾಲಿನ ಡೇರಿಗಳಿಂದ ಬರುತ್ತಿದ್ದ ಹಾಲಿನ ಗುಣಮಟ್ಟ ಪರೀಕ್ಷಿಸಿದ ನಂತರ ಅಳತೆ ಮಾಡಿ ತೆಗೆದುಕೊಳ್ಳುವುದು. ಸಂಗ್ರಹಣೆಯಾದ ಹಾಲು ಸಂಸ್ಕರಿಸಿ ಟ್ಯಾಂಕರ್ಗಳಿಗೆ ತುಂಬಿಸಿ ಕೋಲಾರ ಮತ್ತು ಬೆಂಗಳೂರಿನ ಮದರ್ ಡೇರಿಗೆ ಕಳುಹಿಸಲಾಗುತ್ತಿತ್ತು.</p>.<p>ಹಾಲು ಶೀಥಲ ಕೇಂದ್ರದಿಂದ ಸುಮಾರು 100 ಮಂದಿ ಬಡ ಕುಟುಂಬಗಳು ಬದುಕು ಕಟ್ಟಿಕೊಂಡಿದ್ದವು. ಘಟಕ ನೆಲಸಮ ಆಗಿರುವುದರಿಂದ ಅವರ ಬದುಕು ಬೀದಿ ಪಾಲಾಗಿದೆ. ಬಹುತೇಕ ಕಾರ್ಮಿಕರು ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದರು. ಕಾಯಂ ಸಿಬ್ಬಂದಿಯನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಕೋಚಿಮುಲ್ ಘಟಕಗಳಿಗೆ ವರ್ಗಾವಣೆಯಾದರು. ಗುತ್ತಿಗೆ ಆಧಾರಿತ ನೌಕರರು ಅತಂತ್ರರಾದರು. ಅವರಿಗೆ ಕೊಡುತ್ತಿದ್ದ ಕಡಿಮೆ ವೇತನದಿಂದ ಬೇರೊಂದು ಊರಿಗೆ ಹೋಗಿ ಕೆಲಸ ಮಾಡಿ ಜೀವನ ಕಟ್ಟಿಕೊಳ್ಳಲು ಸಾಧ್ಯವಿಲ್ಲದೆ ಹತಾಶರಾದರು.</p>.<p>ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ಹಾಲು ಶೀಥಲ ಕೇಂದ್ರವನ್ನು ಬಂದ್ ಮಾಡಿದ್ದು ಏಕೆ ಎಂದು ನೌಕರರು ಪ್ರಶ್ನಿಸುತ್ತಾರೆ. ಹಾಲಿನ ಗುಣಮಟ್ಟ ಕಾಪಾಡಿಕೊಳ್ಳಲು ಡೇರಿ ಸಮೀಪದಲ್ಲಿ ಬಿಎಂಸಿ ಕೇಂದ್ರಗಳನ್ನು ಸ್ಥಾಪಿಸಿದ್ದರಿಂದ ಶೀಥಲ ಕೇಂದ್ರಕ್ಕೆ ಹಾಲು ಬರುತ್ತಿರಲಿಲ್ಲ. ಸುಮಾರು ₹65 ಕೋಟಿ ವೆಚ್ಚದಲ್ಲಿ ಐಸ್ಕ್ರೀಂ ಘಟಕ ಸ್ಥಾಪಿಸಲಾಗುತ್ತಿದೆ ಎಂದು ಒಕ್ಕೂಟದ ಅಧಿಕಾರಿಗಳು ಹೇಳುತ್ತಾರೆ.</p>.<p>ಶೀಥಲ ಕೇಂದ್ರ ಉತ್ತಮವಾಗಿ ಕಾರ್ಯಾಚರಣೆ ನಡೆಸುತ್ತಿದ್ದರೂ ಕನಿಷ್ಠ ಸಮೀಪದ ಕೈವಾರ, ಕಸಬಾ, ಅಂಬಾಜಿದುರ್ಗ ಹೋಬಳಿಗಳಲ್ಲಿ ಬಿಎಂಸಿ ಕೇಂದ್ರಗಳನ್ನು ಏಕೆ ಸ್ಥಾಪಿಸಬೇಕಾಗಿತ್ತು. ಉತ್ಪಾದಕರ ಹಣ ಅನಗತ್ಯವಾಗಿ ವ್ಯರ್ಥ. ದೂರದಿಂದ ಬಂದರೆ ಹಾಲು ಕೆಡುತ್ತದೆ ಎನ್ನುತ್ತಾರೆ. ದೂರದ್ದು ಬೇಡ; ಸಮೀಪದ 3 ಹೋಬಳಿಗಳ ಹಾಲು ಶೀಥಲ ಕೇಂದ್ರಕ್ಕೆ ರವಾನಿಸಿದ್ದರೆ ಕೇಂದ್ರವನ್ನು ಉಳಿಸಿಕೊಳ್ಳಬಹುದಾಗಿತ್ತು ಎಂದು ನೌಕರರು ಅಭಿಪ್ರಾಯಪಡುತ್ತಾರೆ.</p>.<p>ಹಾಲು ಶೀಥಲ ಕೇಂದ್ರ ನೆಲಸಮ ಮಾಡಿ ಐಸ್ಕ್ರೀಂ ಘಟಕ ತೆರೆಯುವುದು ಹೆಚ್ಚುಗಾರಿಕೆಯಲ್ಲ. ಶೀಥಲ ಕೇಂದ್ರದ ಆವರಣದಲ್ಲಿ ಸಾಕಷ್ಟು ಸ್ಥಳಾವಕಾಶವಿದೆ. ತಾಲ್ಲೂಕಿನಲ್ಲಿ ಜಿಲ್ಲೆಯಲ್ಲೇ ಅತ್ಯಂತ ಹೆಚ್ಚಿನ ಹಾಲು ಸಂಗ್ರಹಣೆಯಾಗುತ್ತದೆ. ಕೇಂದ್ರವನ್ನು ಉಳಿಸಿಕೊಂಡು ಐಸ್ಕ್ರೀಂ ಘಟಕ ಸ್ಥಾಪನೆ ಮಾಡಿದ್ದರೆ ಇರುವ ನೌಕರರಿಗೂ ತೊಂದರೆ ಆಗುತ್ತಿರಲಿಲ್ಲ. ಇನ್ನೂ 100 ಜನಕ್ಕೆ ಉದ್ಯೋಗಾವಕಾಶ ಸಿಗುತ್ತಿತ್ತು ಎಂದು ಹಾಲು ಉತ್ಪಾದಕರು ಅಭಿಪ್ರಾಯಪಡುತ್ತಾರೆ.</p>.<p>ಕೆ.ಎಂ.ಎಫ್ ಅಡಿಯಲ್ಲಿ ಮದರ್ ಡೇರಿ ಯಲಹಂಕದಲ್ಲಿ, ಬಳ್ಳಾರಿ ಮತ್ತು ಹಾಸನ ಒಕ್ಕೂಟಗಳಲ್ಲಿ ಐಸ್ಸ್ಕ್ರೀಂ ಘಟಕಗಳಿವೆ. ಅವು ನಷ್ಟದಲ್ಲಿ ನಡೆಯುತ್ತಿವೆ. ಲಾಭ-ನಷ್ಟದ ಮಾರ್ಕೆಟಿಂಗ್ ಬಗ್ಗೆ ಚಿಂತಿಸದೆ ಮತ್ತೊಂದು ಘಟಕ ಸ್ಥಾಪಿಸಿದರೆ ಅನುಕೂಲವಾಗುತ್ತದೆಯೇ ಎಂದು ನೌಕರರು ಪ್ರಶ್ನಿಸುತ್ತಾರೆ.</p>.<p>ಸದ್ಯ ಹಾಲು ಒಕ್ಕೂಟದ ಆಡಳಿತ ಮಂಡಳಿ ಅವಧಿ ಮುಕ್ತಾಯವಾಗಿದೆ. ಚುನಾವಣೆ ನಡೆದು ಮುಂದೆ ಯಾರು ಅಧಿಕಾರಕ್ಕೆ ಬರುತ್ತಾರೆ. ಅವರ ಚಿಂತನೆ, ನಿರ್ಧಾರ ಏನು ಎಂದು ಕೆಲಸ ಕಳೆದುಕೊಂಡು ಐಸ್ ಸ್ಕ್ರೀಂ ಘಟಕದಲ್ಲಿ ಕೆಲಸಕ್ಕಾಗಿ ಕಾಯುತ್ತಿರುವ ನೌಕರರ ಅಳಲಾಗಿದೆ.</p>.<p><strong>ಕೆಲಸ ಕಾಯಂಗೆ ಕಾಯುತ್ತಿರುವ ನೌಕರರು</strong></p><p>ಹಾಲು ಶೀಥಲ ಕೇಂದ್ರದಲ್ಲಿ ಕಡಿಮೆ ವೇತನವಾದರೂ ಮುಂದೆ ಕಾಯಂ ಆಗಬಹುದು. ಪಾಳಿ ಪದ್ಧತಿಯಲ್ಲಿ ಕೆಲಸ ಮಾಡುವುದರಿಂದ ಇತರ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೆವು. ಈಗ ಬೀದಿಗೆ ಬಿದ್ದಿದ್ದೇವೆ. ಐಸ್ ಸ್ಕ್ರೀಂ ಘಟಕದಲ್ಲಿ ಕೆಲಸ ಕೊಡುವುದಾಗಿ ತಿಳಿಸಿದ್ದಾರೆ. ಗ್ಯಾರಂಟಿಯಿಲ್ಲ ಆದರೂ ಕಾಯುತ್ತಿದ್ದೇವೆ ಎಂದು ಹೆಸರು ಹೇಳಲಿಚ್ಛಿಸದ ಮಾಜಿ ನೌಕರರೊಬ್ಬರು ಹೇಳಿದರು. ಗುಣಮಟ್ಟ ಮತ್ತು ತಾಜಾತನ ಕಾಯ್ದುಕೊಳ್ಳಲು ಅಲ್ಲಲ್ಲಿ ಬಿಎಂಸಿ ಕೇಂದ್ರಗಳನ್ನು ಸ್ಥಾಪನೆ ಮಾಡಿರುವುದರಿಂದ ಹಾಲು ಶೀಥಲ ಕೇಂದ್ರಕ್ಕೆ ಹಾಲು ಬರುತ್ತಿರಲಿಲ್ಲ. ಹೀಗಾಗಿ ಕೇಂದ್ರರವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಐಸ್ ಸ್ಕ್ರೀಂ ಘಟಕ ಸ್ಥಾಪನೆ ಮಾಡಲಾಗುತ್ತಿದೆ ಎನ್ನುತ್ತಾರೆ ಒಕ್ಕೂಟದ ಅಧಿಕಾರಿಯೊಬ್ಬರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂತಾಮಣಿ</strong>: ಅವಿಭಜಿತ ಕೋಲಾರ ಜಿಲ್ಲೆಯಲ್ಲಿ 50 ವರ್ಷಗಳ ಹಿಂದೆ ಪ್ರಥಮವಾಗಿ ಸ್ಥಾಪಿತವಾಗಿದ್ದ ನಗರದ ಹಾಲು ಶೀಥಲ ಕೇಂದ್ರ ನೆಲಸಮಗೊಂಡು ಈಗ ಇತಿಹಾಸದ ಪುಟ ಸೇರಿದೆ. ಸುಮಾರು ಐದು ದಶಕಗಳ ಕಾಲ ಕಾರ್ಯನಿರ್ವಹಣೆ ಮಾಡಿದ್ದು ಈಗ ನೆನಪು ಮಾತ್ರ.</p>.<p>1983-85 ಅವಧಿಯಲ್ಲಿ ಗೃಹ ಸಚಿವರಾಗಿದ್ದ ಎ.ಚೌಡರೆಡ್ಡಿ ಅವರ ಶ್ರಮ ಮತ್ತು ಆಸಕ್ತಿಯಿಂದ ಹಾಲು ಉತ್ಪಾದಕರಿಗಾಗಿ ಶೀಥಲ ಕೇಂದ್ರ ಸ್ಥಾಪನೆಗೊಂಡಿತ್ತು. ಭೌಗೋಳಿಕವಾಗಿ ಚಿಂತಾಮಣಿ ಅವಿಭಜಿತ ಕೋಲಾರ ಜಿಲ್ಲೆ ಮಧ್ಯ ಭಾಗದಲ್ಲಿರುವುದರಿಂದ ಕೋಚಿಮುಲ್ ಘಟಕವನ್ನು ಇಲ್ಲೇ ಸ್ಥಾಪನೆ ಮಾಡಬೇಕು ಎಂಬುದು ಅವರ ಕನಸಾಗಿತ್ತು. ಕೋಲಾರದಲ್ಲಿ ಮಾಡಿದರೆ ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರು ತಾಲ್ಲೂಕುಗಳಿಗೆ ತೊಂದರೆ ಆಗುತ್ತದೆ. ಚಿಂತಾಮಣಿಯಲ್ಲೇ ಕೋಚಿಮುಲ್ ಸ್ಥಾಪಿಸಬೇಕು ಎಂದು ಚಿಂತಿಸಿ ಪ್ರಥಮ ಹಂತವಾಗಿ ಹಾಲು ಶೀಥಲ ಕೇಂದ್ರವನ್ನು ಸ್ಥಾಪಿಸಿದ್ದರು.</p>.<p>ದುರದೃಷ್ಟವಶಾತ್ 1985 ಚುನಾವಣೆಯಲ್ಲಿ ಅವರು ಸೋತರು. ಅಂದು ಉನ್ನತ ಹುದ್ದೆಯಲ್ಲಿದ್ದ ಐಎಎಸ್ ಅಧಿಕಾರಿ ಮುನಿಸ್ವಾಮಿ, ಕೋಲಾರ-ಮುಳಬಾಗಿಲು ರಸ್ತೆಯಲ್ಲಿ ತಮ್ಮ ಗ್ರಾಮದ ಸಮೀಪ ಕೋಚಿಮುಲ್ ಘಟಕ ಸ್ಥಾಪನೆಗೆ ಕಾರಣರಾದರು. ಹೀಗೆ ಚಿಂತಾಮಣಿ ಕೋಚಿಮುಲ್ ಘಟಕದಿಂದ ವಂಚಿತವಾಯಿತು ಎನ್ನುತ್ತಾರೆ ಹಿರಿಯ ಸಹಕಾರಿಗಳು.</p>.<p>ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಪ್ರಥಮವಾಗಿ ಚಿಂತಾಮಣಿಯಲ್ಲಿ ಹಾಲು ಶೀಥಲ ಕೇಂದ್ರ ಆರಂಭಿಸಿ ಕಳೆದ 5 ದಶಕಗಳಿಂದ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿತ್ತು. ಬೆಳಿಗ್ಗೆ ನಸುಕಿನಿಂದ ರಾತ್ರಿ 11ರವರೆಗೂ ಸದಾ ಚಟುವಟಿಕೆಯಿಂದ ಕೂಡಿರುತ್ತಿತ್ತು. ತಾಲ್ಲೂಕಿನ ವಿವಿಧ ಹಾಲಿನ ಡೇರಿಗಳಿಂದ ಬರುತ್ತಿದ್ದ ಹಾಲಿನ ಗುಣಮಟ್ಟ ಪರೀಕ್ಷಿಸಿದ ನಂತರ ಅಳತೆ ಮಾಡಿ ತೆಗೆದುಕೊಳ್ಳುವುದು. ಸಂಗ್ರಹಣೆಯಾದ ಹಾಲು ಸಂಸ್ಕರಿಸಿ ಟ್ಯಾಂಕರ್ಗಳಿಗೆ ತುಂಬಿಸಿ ಕೋಲಾರ ಮತ್ತು ಬೆಂಗಳೂರಿನ ಮದರ್ ಡೇರಿಗೆ ಕಳುಹಿಸಲಾಗುತ್ತಿತ್ತು.</p>.<p>ಹಾಲು ಶೀಥಲ ಕೇಂದ್ರದಿಂದ ಸುಮಾರು 100 ಮಂದಿ ಬಡ ಕುಟುಂಬಗಳು ಬದುಕು ಕಟ್ಟಿಕೊಂಡಿದ್ದವು. ಘಟಕ ನೆಲಸಮ ಆಗಿರುವುದರಿಂದ ಅವರ ಬದುಕು ಬೀದಿ ಪಾಲಾಗಿದೆ. ಬಹುತೇಕ ಕಾರ್ಮಿಕರು ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದರು. ಕಾಯಂ ಸಿಬ್ಬಂದಿಯನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಕೋಚಿಮುಲ್ ಘಟಕಗಳಿಗೆ ವರ್ಗಾವಣೆಯಾದರು. ಗುತ್ತಿಗೆ ಆಧಾರಿತ ನೌಕರರು ಅತಂತ್ರರಾದರು. ಅವರಿಗೆ ಕೊಡುತ್ತಿದ್ದ ಕಡಿಮೆ ವೇತನದಿಂದ ಬೇರೊಂದು ಊರಿಗೆ ಹೋಗಿ ಕೆಲಸ ಮಾಡಿ ಜೀವನ ಕಟ್ಟಿಕೊಳ್ಳಲು ಸಾಧ್ಯವಿಲ್ಲದೆ ಹತಾಶರಾದರು.</p>.<p>ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ಹಾಲು ಶೀಥಲ ಕೇಂದ್ರವನ್ನು ಬಂದ್ ಮಾಡಿದ್ದು ಏಕೆ ಎಂದು ನೌಕರರು ಪ್ರಶ್ನಿಸುತ್ತಾರೆ. ಹಾಲಿನ ಗುಣಮಟ್ಟ ಕಾಪಾಡಿಕೊಳ್ಳಲು ಡೇರಿ ಸಮೀಪದಲ್ಲಿ ಬಿಎಂಸಿ ಕೇಂದ್ರಗಳನ್ನು ಸ್ಥಾಪಿಸಿದ್ದರಿಂದ ಶೀಥಲ ಕೇಂದ್ರಕ್ಕೆ ಹಾಲು ಬರುತ್ತಿರಲಿಲ್ಲ. ಸುಮಾರು ₹65 ಕೋಟಿ ವೆಚ್ಚದಲ್ಲಿ ಐಸ್ಕ್ರೀಂ ಘಟಕ ಸ್ಥಾಪಿಸಲಾಗುತ್ತಿದೆ ಎಂದು ಒಕ್ಕೂಟದ ಅಧಿಕಾರಿಗಳು ಹೇಳುತ್ತಾರೆ.</p>.<p>ಶೀಥಲ ಕೇಂದ್ರ ಉತ್ತಮವಾಗಿ ಕಾರ್ಯಾಚರಣೆ ನಡೆಸುತ್ತಿದ್ದರೂ ಕನಿಷ್ಠ ಸಮೀಪದ ಕೈವಾರ, ಕಸಬಾ, ಅಂಬಾಜಿದುರ್ಗ ಹೋಬಳಿಗಳಲ್ಲಿ ಬಿಎಂಸಿ ಕೇಂದ್ರಗಳನ್ನು ಏಕೆ ಸ್ಥಾಪಿಸಬೇಕಾಗಿತ್ತು. ಉತ್ಪಾದಕರ ಹಣ ಅನಗತ್ಯವಾಗಿ ವ್ಯರ್ಥ. ದೂರದಿಂದ ಬಂದರೆ ಹಾಲು ಕೆಡುತ್ತದೆ ಎನ್ನುತ್ತಾರೆ. ದೂರದ್ದು ಬೇಡ; ಸಮೀಪದ 3 ಹೋಬಳಿಗಳ ಹಾಲು ಶೀಥಲ ಕೇಂದ್ರಕ್ಕೆ ರವಾನಿಸಿದ್ದರೆ ಕೇಂದ್ರವನ್ನು ಉಳಿಸಿಕೊಳ್ಳಬಹುದಾಗಿತ್ತು ಎಂದು ನೌಕರರು ಅಭಿಪ್ರಾಯಪಡುತ್ತಾರೆ.</p>.<p>ಹಾಲು ಶೀಥಲ ಕೇಂದ್ರ ನೆಲಸಮ ಮಾಡಿ ಐಸ್ಕ್ರೀಂ ಘಟಕ ತೆರೆಯುವುದು ಹೆಚ್ಚುಗಾರಿಕೆಯಲ್ಲ. ಶೀಥಲ ಕೇಂದ್ರದ ಆವರಣದಲ್ಲಿ ಸಾಕಷ್ಟು ಸ್ಥಳಾವಕಾಶವಿದೆ. ತಾಲ್ಲೂಕಿನಲ್ಲಿ ಜಿಲ್ಲೆಯಲ್ಲೇ ಅತ್ಯಂತ ಹೆಚ್ಚಿನ ಹಾಲು ಸಂಗ್ರಹಣೆಯಾಗುತ್ತದೆ. ಕೇಂದ್ರವನ್ನು ಉಳಿಸಿಕೊಂಡು ಐಸ್ಕ್ರೀಂ ಘಟಕ ಸ್ಥಾಪನೆ ಮಾಡಿದ್ದರೆ ಇರುವ ನೌಕರರಿಗೂ ತೊಂದರೆ ಆಗುತ್ತಿರಲಿಲ್ಲ. ಇನ್ನೂ 100 ಜನಕ್ಕೆ ಉದ್ಯೋಗಾವಕಾಶ ಸಿಗುತ್ತಿತ್ತು ಎಂದು ಹಾಲು ಉತ್ಪಾದಕರು ಅಭಿಪ್ರಾಯಪಡುತ್ತಾರೆ.</p>.<p>ಕೆ.ಎಂ.ಎಫ್ ಅಡಿಯಲ್ಲಿ ಮದರ್ ಡೇರಿ ಯಲಹಂಕದಲ್ಲಿ, ಬಳ್ಳಾರಿ ಮತ್ತು ಹಾಸನ ಒಕ್ಕೂಟಗಳಲ್ಲಿ ಐಸ್ಸ್ಕ್ರೀಂ ಘಟಕಗಳಿವೆ. ಅವು ನಷ್ಟದಲ್ಲಿ ನಡೆಯುತ್ತಿವೆ. ಲಾಭ-ನಷ್ಟದ ಮಾರ್ಕೆಟಿಂಗ್ ಬಗ್ಗೆ ಚಿಂತಿಸದೆ ಮತ್ತೊಂದು ಘಟಕ ಸ್ಥಾಪಿಸಿದರೆ ಅನುಕೂಲವಾಗುತ್ತದೆಯೇ ಎಂದು ನೌಕರರು ಪ್ರಶ್ನಿಸುತ್ತಾರೆ.</p>.<p>ಸದ್ಯ ಹಾಲು ಒಕ್ಕೂಟದ ಆಡಳಿತ ಮಂಡಳಿ ಅವಧಿ ಮುಕ್ತಾಯವಾಗಿದೆ. ಚುನಾವಣೆ ನಡೆದು ಮುಂದೆ ಯಾರು ಅಧಿಕಾರಕ್ಕೆ ಬರುತ್ತಾರೆ. ಅವರ ಚಿಂತನೆ, ನಿರ್ಧಾರ ಏನು ಎಂದು ಕೆಲಸ ಕಳೆದುಕೊಂಡು ಐಸ್ ಸ್ಕ್ರೀಂ ಘಟಕದಲ್ಲಿ ಕೆಲಸಕ್ಕಾಗಿ ಕಾಯುತ್ತಿರುವ ನೌಕರರ ಅಳಲಾಗಿದೆ.</p>.<p><strong>ಕೆಲಸ ಕಾಯಂಗೆ ಕಾಯುತ್ತಿರುವ ನೌಕರರು</strong></p><p>ಹಾಲು ಶೀಥಲ ಕೇಂದ್ರದಲ್ಲಿ ಕಡಿಮೆ ವೇತನವಾದರೂ ಮುಂದೆ ಕಾಯಂ ಆಗಬಹುದು. ಪಾಳಿ ಪದ್ಧತಿಯಲ್ಲಿ ಕೆಲಸ ಮಾಡುವುದರಿಂದ ಇತರ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೆವು. ಈಗ ಬೀದಿಗೆ ಬಿದ್ದಿದ್ದೇವೆ. ಐಸ್ ಸ್ಕ್ರೀಂ ಘಟಕದಲ್ಲಿ ಕೆಲಸ ಕೊಡುವುದಾಗಿ ತಿಳಿಸಿದ್ದಾರೆ. ಗ್ಯಾರಂಟಿಯಿಲ್ಲ ಆದರೂ ಕಾಯುತ್ತಿದ್ದೇವೆ ಎಂದು ಹೆಸರು ಹೇಳಲಿಚ್ಛಿಸದ ಮಾಜಿ ನೌಕರರೊಬ್ಬರು ಹೇಳಿದರು. ಗುಣಮಟ್ಟ ಮತ್ತು ತಾಜಾತನ ಕಾಯ್ದುಕೊಳ್ಳಲು ಅಲ್ಲಲ್ಲಿ ಬಿಎಂಸಿ ಕೇಂದ್ರಗಳನ್ನು ಸ್ಥಾಪನೆ ಮಾಡಿರುವುದರಿಂದ ಹಾಲು ಶೀಥಲ ಕೇಂದ್ರಕ್ಕೆ ಹಾಲು ಬರುತ್ತಿರಲಿಲ್ಲ. ಹೀಗಾಗಿ ಕೇಂದ್ರರವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಐಸ್ ಸ್ಕ್ರೀಂ ಘಟಕ ಸ್ಥಾಪನೆ ಮಾಡಲಾಗುತ್ತಿದೆ ಎನ್ನುತ್ತಾರೆ ಒಕ್ಕೂಟದ ಅಧಿಕಾರಿಯೊಬ್ಬರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>