ಸಾಹಿತ್ಯ ಪರಿಷತ್ ಸಂಪೂರ್ಣ ನಿಷ್ಕ್ರಿಯವಾಗಿದೆ. ಪದಾಧಿಕಾರಿಗಳ ಜತೆಗೆ ಸಾಹಿತ್ಯ ಪರಿಷತ್ತಿನ ಸದಸ್ಯರಿಗೂ ಜವಾಬ್ದಾರಿ ಇದೆ. ತಾಲ್ಲೂಕಿನಲ್ಲಿ ಸುಮಾರು 3 ಸಾವಿರ ಸದಸ್ಯರಿದ್ದರೂ ಯಾರು ಈ ಬಗ್ಗೆ ಚಕಾರ ಎತ್ತದಿರುವುದು ವಿಷಾದನೀಯ
ಕೆ.ಎಸ್.ನೂರುಲ್ಲಾ ಲೇಖಕ
ವೈಯಕ್ತಿಕ ಕಾರಣಗಳಿಂದ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ನಾನು ಈಗಾಗಲೇ ರಾಜೀನಾಮೆ ನೀಡಿದ್ದೇನೆ
ಎಂ.ಎ.ಪ್ರಕಾಶ್ ತಾ.ಕ.ಸಾ.ಪರಿಷತ್ ಮಾಜಿ ಅಧ್ಯಕ್ಷ
ಇಚ್ಛಾಶಕ್ತಿ ಸಂಘಟನೆ ಕೊರತೆ
ಕನ್ನಡ ಸಾಹಿತ್ಯ ಪರಿಷತ್ ಸಂಪೂರ್ಣ ನಿಷ್ಕ್ರಿಯವಾಗಿರುವುದು ನೋವು ತಂದಿದೆ. ಗಡಿಭಾಗದಲ್ಲಿ ಕನ್ನಡದ ಕಹಳೆ ಮೊಳಗಿಸುವ ಅನಿವಾರ್ಯತೆ ಇತ್ತು. ನನ್ನ ಅವಧಿಯಲ್ಲಿ ಎಲ್ಲ ತಾಲ್ಲೂಕುಗಳಲ್ಲಿ ಕಚೇರಿಗಳ ವ್ಯವಸ್ಥೆ ಮಾಡಿದ್ದೆ. ನಾಡು-ನುಡಿಯ ಬಗ್ಗೆ ಮನೆಯಂಗಳದಲ್ಲಿ ನುಡಿಸಿರಿ ಶಾಲೆಯಂಗಳದಲ್ಲಿ ನುಡಿಸಿರಿ ಕಸಾಪ ನಡೆ ಸಾಧಕರ ಕಡೆ ತತ್ವಾಮೃತ ವನಸಿರಿ-ನುಡಿಸಿರಿ ಸಿರಿ ಹುಣ್ಣಿಮೆ ಮುಂತಾದ ಕಾರ್ಯಕ್ರಮ ರೂಪಿಸಿದ್ದೆ. ಇಚ್ಛಾಶಕ್ತಿ ಮತ್ತು ಸಂಘಟನೆ ಕೊರತೆಯಿಂದ ಚಟುವಟಿಕೆ ಸ್ಥಗಿತಗೊಂಡಿವೆ. ಕನ್ನಡ ಸೇವೆ ವೃತ್ತಿಯಲ್ಲ ಪ್ರವೃತ್ತಿ ಎಂಬ ಅಧ್ಯಕ್ಷರ ಧೋರಣೆ ಕಾರಣವಾಗಿದೆ. ಕೈವಾರ ಶ್ರೀನಿವಾಸ್ ಕಸಾಪ ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ಹಲವಾರು ಕಾರ್ಯಕ್ರಮ ನನ್ನ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕುವೆಂಪು ಜಯಂತಿ ಸೇರಿದಂತೆ ಮಹನೀಯರ ಜಯಂತಿ ಕನ್ನಡ ರಾಜ್ಯೋತ್ಸವ ಮನೆಗೊಂದು ಸಂಗೀತ ಸ್ಪರ್ಧೆ ನಾಡು-ನುಡಿಯ ಕುರಿತು ನಡೆಯುತ್ತಿದ್ದವು. 2022ನೇ ಸಾಲಿನ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿದ್ದೇನೆ. ದೇವತಾದೇವರಾಜ್ ಕಸಾಪ ನಿಕಟಪೂರ್ವ ಅಧ್ಯಕ್ಷ