‘ಪ್ರತಿ ಎಕರೆ ಈರುಳ್ಳಿಗೆ ಈವರೆಗೆ ಬೇಸಾಯಕ್ಕೆ ₹ 3,000, ಬಿತ್ತನೆ ಬೀಜಕ್ಕೆ ₹ 8,000, ಗೊಬ್ಬರಕ್ಕೆ ₹ 3,000, ಕಳೆನಾಶಕಕ್ಕೆ ₹ 1,000 ಹಾಗೂ ಕಳೆ ತೆಗೆಸಲು ₹ 2,000 ವೆಚ್ಚ ಮಾಡಿದ್ದೇವೆ. ಮಳೆಯಾಗದೆ ಬೆಳೆ ಒಣಗುತ್ತಿದ್ದು, ಬೆಳೆಗಾಗಿ ಹಾಕಿದ ಬಂಡವಾಳ ವಾಪಸ್ ಸಿಗುವುದೋ, ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ’ ಎನ್ನುತ್ತಾರೆ ಗಡೀಹಳ್ಳಿಯ ರೈತ ಉಮೇಶಣ್ಣ.