ದಶಕಗಳ ಹಿಂದೆ ಕೆ.ಹೊಸಹಳ್ಳಿ, ಅಂದೇನಹಳ್ಳಿ, ಮೂರ್ತಿಹಾಳು, ಚಿಕ್ಕಂಗಳ, ಶ್ರೀರಾಂಪುರ ಮುಂತಾದ ಗ್ರಾಮಗಳ ವಿದ್ಯಾರ್ಥಿಗಳ ಪಾಲಿಗೆ ಈ ಶಾಲೆ ವಿದ್ಯಾದೇಗುಲವಾಗಿತ್ತು. ಆದರೆ, ನಂತರದ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಶಾಲೆಯನ್ನು 2014ರಲ್ಲಿ ಮುಚ್ಚಲಾಯಿತು. ಬೀರೂರು ಶೈಕ್ಷಣಿಕ ವಲಯಕ್ಕೆ ಸೇರಿದ ಈ ಶಾಲೆಯನ್ನು ಪುನಶ್ಚೇತನಗೊಳಿಸುವ ಯಾವ ಪ್ರಯತ್ನವೂ ನಡೆಯಲಿಲ್ಲ. ಸ್ಥಳೀಯ ಜನಪ್ರತಿನಿಧಿಗಳೂ ಆಸಕ್ತಿ ತೋರಲಿಲ್ಲ.